<p><strong>ಶನಿವಾರಸಂತೆ: </strong>ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ಜನ ಕುಡಿಯುವ ನೀರಿಗೂ ಪರದಾಡುವಂತಾಗಿದೆ.<br /> ಈ ಕಾಲೋನಿಯಲ್ಲಿ ಒಟ್ಟು 80 ಕುಟುಂಬಗಳಿವೆ. <br /> <br /> ಜಿಲ್ಲಾ ಪಂಚಾಯಿತಿ ವತಿಯಿಂದ 1985-86ರಲ್ಲಿ ಕುಡಿಯುವ ನೀರಿಗಾಗಿ ಮೇಲಿನ ಗ್ರಾಮದ ಟ್ಯಾಂಕ್ಗೆ ಪೈಪ್ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 3 ವರ್ಷಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದೆ!<br /> <br /> ಪೈಪ್ಲೈನ್ನಲ್ಲಿ ಬರುವ ನೀರನ್ನು ಗ್ರಾಮದ ಕೆಲವೇ ಜನರು ಅಕ್ರಮವಾಗಿ ಪೈಪ್ಗಳನ್ನು ಅಳವಡಿಸಿಕೊಂಡು ತಮ್ಮ ಮನೆಗಳ ಹಿತ್ತಲಿನ ತರಕಾರಿ ಹಾಗೂ ಹೂವಿನ ಗಿಡಗಳಿಗೆ ಬಳಸುತ್ತಿದ್ದರೆ, ಇತ್ತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರೂ ದೂರದಿಂದ ನೀರು ಹೊತ್ತು ತರುವ ದುಸ್ಥಿತಿ ಉಂಟಾಗಿದೆ.<br /> <br /> ಈ ಕಾಲೋನಿಯ ನಿವಾಸಿಗಳು ಮೊದಲು ಕೊಳವೆ ಬಾವಿಯಿಂದ ನೀರು ಉಪಯೋಗಿಸುತ್ತಿದ್ದರು. ಕೆಲ ದಿನಗಳಿಂದ ಈ ಕೊಳವೆ ಬಾವಿಯ ನೀರು ದುರ್ವಾಸನೆಯಿಂದ ಕೂಡಿದ್ದು ಕುಡಿಯಲು ಅಯೋಗ್ಯವಾಗಿದೆ. ಇದರಿಂದಾಗಿ ಕುಡಿಯುವ ನೀರಿಗಾಗಿ ದೂರದ ಹಳ್ಳಕೊಳ್ಳಗಳನ್ನು ಅವಲಂಬಿಸಬೇಕಾಗಿದೆ. <br /> <br /> ಪೈಪ್ಲೈನ್ ನೀರು ಪೋಲಾಗುತ್ತಿರುವ ವಿಚಾರ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ, ಮನವಿ ಸಲ್ಲಿಸಿದರೂ ಆಡಳಿತದಲ್ಲಿರುವವರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ಹಾಗೂ ಕಾಲೋನಿ ನಿವಾಸಿಗಳು ದೂರಿದ್ದಾರೆ. <br /> <br /> 2007-08ರಲ್ಲಿ ಕಾಲೋನಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕಿರು ನೀರು ಯೋಜನೆಯಡಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಅಳವಡಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಈ ನೀರಿನ ಟ್ಯಾಂಕ್ಗೆ ಹನಿ ನೀರೂ ಸರಬರಾಜಾಗಿಲ್ಲ. <br /> <br /> ಗುತ್ತಿಗೆದಾರರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪೂರ್ಣ ಹಣ ಸಂದಾಯವಾಗಿದೆ. ಕಾಲೋನಿಗೆ ಬಿಡುವ ನೀರನ್ನು ಗ್ರಾಮದ ಮೇಲಿನ ನೀರಿನ ಟ್ಯಾಂಕ್ಗೆ ಪೈಪ್ ಅಳವಡಿಸಿ ಬಿಡಲಾಗುತ್ತಿದೆ. ಈ ನೀರಿನ ಪೈಪ್ಲೈನ್ ದಾರಿಯಲ್ಲೇ ಒಡೆದುಹೋಗಿ ರಸ್ತೆಯಲ್ಲಿ ನೀರು ಹರಿದು ಪೋಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗೆ ಮಾತ್ರ ನೀರು ಲಭಿಸುತ್ತಿಲ್ಲ.<br /> <br /> ಸೋಮವಾರಪೇಟೆಯಲ್ಲಿರುವ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅವರ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಎಂಜಿನಿಯರ್ ಕಚೇರಿ ಎದುರು ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಯವರು, ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜಮ್ಮರುದ್ರಯ್ಯ ಎಚ್ಚರಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ: </strong>ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ಜನ ಕುಡಿಯುವ ನೀರಿಗೂ ಪರದಾಡುವಂತಾಗಿದೆ.<br /> ಈ ಕಾಲೋನಿಯಲ್ಲಿ ಒಟ್ಟು 80 ಕುಟುಂಬಗಳಿವೆ. <br /> <br /> ಜಿಲ್ಲಾ ಪಂಚಾಯಿತಿ ವತಿಯಿಂದ 1985-86ರಲ್ಲಿ ಕುಡಿಯುವ ನೀರಿಗಾಗಿ ಮೇಲಿನ ಗ್ರಾಮದ ಟ್ಯಾಂಕ್ಗೆ ಪೈಪ್ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 3 ವರ್ಷಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದೆ!<br /> <br /> ಪೈಪ್ಲೈನ್ನಲ್ಲಿ ಬರುವ ನೀರನ್ನು ಗ್ರಾಮದ ಕೆಲವೇ ಜನರು ಅಕ್ರಮವಾಗಿ ಪೈಪ್ಗಳನ್ನು ಅಳವಡಿಸಿಕೊಂಡು ತಮ್ಮ ಮನೆಗಳ ಹಿತ್ತಲಿನ ತರಕಾರಿ ಹಾಗೂ ಹೂವಿನ ಗಿಡಗಳಿಗೆ ಬಳಸುತ್ತಿದ್ದರೆ, ಇತ್ತ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರೂ ದೂರದಿಂದ ನೀರು ಹೊತ್ತು ತರುವ ದುಸ್ಥಿತಿ ಉಂಟಾಗಿದೆ.<br /> <br /> ಈ ಕಾಲೋನಿಯ ನಿವಾಸಿಗಳು ಮೊದಲು ಕೊಳವೆ ಬಾವಿಯಿಂದ ನೀರು ಉಪಯೋಗಿಸುತ್ತಿದ್ದರು. ಕೆಲ ದಿನಗಳಿಂದ ಈ ಕೊಳವೆ ಬಾವಿಯ ನೀರು ದುರ್ವಾಸನೆಯಿಂದ ಕೂಡಿದ್ದು ಕುಡಿಯಲು ಅಯೋಗ್ಯವಾಗಿದೆ. ಇದರಿಂದಾಗಿ ಕುಡಿಯುವ ನೀರಿಗಾಗಿ ದೂರದ ಹಳ್ಳಕೊಳ್ಳಗಳನ್ನು ಅವಲಂಬಿಸಬೇಕಾಗಿದೆ. <br /> <br /> ಪೈಪ್ಲೈನ್ ನೀರು ಪೋಲಾಗುತ್ತಿರುವ ವಿಚಾರ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ, ಮನವಿ ಸಲ್ಲಿಸಿದರೂ ಆಡಳಿತದಲ್ಲಿರುವವರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮೌನವಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ಹಾಗೂ ಕಾಲೋನಿ ನಿವಾಸಿಗಳು ದೂರಿದ್ದಾರೆ. <br /> <br /> 2007-08ರಲ್ಲಿ ಕಾಲೋನಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಕಿರು ನೀರು ಯೋಜನೆಯಡಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಅಳವಡಿಸಲಾಗಿತ್ತು. ಆದರೆ, ಇಲ್ಲಿಯವರೆಗೂ ಈ ನೀರಿನ ಟ್ಯಾಂಕ್ಗೆ ಹನಿ ನೀರೂ ಸರಬರಾಜಾಗಿಲ್ಲ. <br /> <br /> ಗುತ್ತಿಗೆದಾರರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪೂರ್ಣ ಹಣ ಸಂದಾಯವಾಗಿದೆ. ಕಾಲೋನಿಗೆ ಬಿಡುವ ನೀರನ್ನು ಗ್ರಾಮದ ಮೇಲಿನ ನೀರಿನ ಟ್ಯಾಂಕ್ಗೆ ಪೈಪ್ ಅಳವಡಿಸಿ ಬಿಡಲಾಗುತ್ತಿದೆ. ಈ ನೀರಿನ ಪೈಪ್ಲೈನ್ ದಾರಿಯಲ್ಲೇ ಒಡೆದುಹೋಗಿ ರಸ್ತೆಯಲ್ಲಿ ನೀರು ಹರಿದು ಪೋಲಾಗುತ್ತಿದೆ. ಆದರೆ ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗೆ ಮಾತ್ರ ನೀರು ಲಭಿಸುತ್ತಿಲ್ಲ.<br /> <br /> ಸೋಮವಾರಪೇಟೆಯಲ್ಲಿರುವ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಅವರ ನಿರ್ಲಕ್ಷ್ಯವೇ ಈ ಸಮಸ್ಯೆಗೆ ಕಾರಣ ಎಂದು ನಿವಾಸಿಗಳು ದೂರಿದ್ದಾರೆ.ಒಂದು ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಎಂಜಿನಿಯರ್ ಕಚೇರಿ ಎದುರು ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಯವರು, ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜಮ್ಮರುದ್ರಯ್ಯ ಎಚ್ಚರಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>