<p><strong>ನವದೆಹಲಿ (ಪಿಟಿಐ): </strong> ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ಪ್ರಕರಣಗಳ ಕುರಿತು ಸೋಮವಾರ ಬಿಜೆಪಿ, ಬಿಜೆಡಿ ಹಾಗೂ ಸಮಾಜವಾದಿ ಪಕ್ಷಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಈ ಸಂಬಂಧ ಸಂಸತ್ತು ಖಂಡನಾ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.<br /> <br /> ನಿರಂತರ ಕಿರುಕುಳದಿಂದಾಗಿ ಪಾಕ್ನ ಸಿಂಧ್ ಪ್ರಾಂತದ 150ಕ್ಕೂ ಹೆಚ್ಚು ಹಿಂದೂಗಳು ಭಾನುವಾರ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆ ಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಸರ್ಕಾರ ಈ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.<br /> <br /> ಈ ವಿಚಾರದ ಕುರಿತು ಕೇಂದ್ರ ಸರ್ಕಾರ, ಪಾಕ್ ಸರ್ಕಾರದ ಜತೆ ಚರ್ಚಿಸಬೇಕು. ಆ ದೇಶದ ರಾಯಭಾರಿ ಯನ್ನು ಕರೆಯಿಸಿ ನಮ್ಮ ಖಂಡನೆಯನ್ನು ತಿಳಿಸಬೇಕು ಎಂದೂ ಸದಸ್ಯರು ಪಟ್ಟು ಹಿಡಿದರು. <br /> <br /> ಬಿಜೆಪಿ ನಾಯಕ ರಾಜನಾಥ ಸಿಂಗ್ ಮಾತನಾಡಿ, ಪಾಕ್ನ ಅಲ್ಪಸಂಖ್ಯಾತರು ಅದರಲ್ಲೂ ಹಿಂದೂಗಳು ಹಾಗೂ ಸಿಖ್ಖರು ಈಗ ಭಯದ ನೆರಳಲ್ಲಿ ಬದುಕುವಂತಾಗಿದ್ದು ಸುಮಾರು 20 ಹಿಂದೂ ಕುಟುಂಬಗಳು ಭಾರತದಲ್ಲಿ ನೆಲೆಸಲು ಇಲ್ಲಿಯ ಪೌರತ್ವದ ಬೇಡಿಕೆ ಇಟ್ಟಿದ್ದಾರೆ ಎಂದರು.<br /> <br /> ಭಾರತದ ಯಾತ್ರಾಸ್ಥಳಗಳಿಗೆ ಆಗಮಿಸಿದ ಸುಮಾರು 250 ಹಿಂದೂಗಳಿಂದ ಅಲ್ಲಿಯ ಸರ್ಕಾರ ಮುಚ್ಚಳಿಕೆ ಪಡೆದಿದ್ದು, ಪಾಕ್ ವಿರುದ್ಧ ಒಂದು ಶಬ್ದವನ್ನೂ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದರು.<br /> ಹಿಂದೂ ಯುವಕ, ಯುವತಿ ಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾ ಗುತ್ತಿದ್ದು ತಮಗೆ ರಕ್ಷಣೆ ನೀಡಲು ಒತ್ತಾಯಿಸಿ ಅಲ್ಲಿಯ ಹಿಂದೂಗಳು ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ ಎಂದರು.<br /> <br /> ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾತನಾಡಿ, `ಘಟನೆಗಳ ಕುರಿತು ಈ ಕೂಡಲೆ ಸರ್ಕಾರ ಪಾಕ್ ರಾಯಭಾರಿಯನ್ನು ಸದನಕ್ಕೆ ಕರೆಯಿಸಿ ಖಂಡನಾ ನಿರ್ಣಯ ತಿಳಿಸಬೇಕು. ಪಾಕ್ನ ವಿದ್ಯಮಾನಗಳ ಕುರಿತು ಭಾರತದಲ್ಲಿ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಸೋಜಿಗ ತಂದಿದೆ~ ಎಂದು ಅವರು ಹೇಳಿದರು.<br /> <br /> ಪಾಕ್ನ ಶಾಲಾ ಬಾಲಕಿ ಇಫ್ರಾ ಸಿದ್ದಿಕಿ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಬಿಜು ಜನತಾ ದಳದ ಬಿ. ಮೆಹತಾಬ್ ಅವರು, `ಧಾರ್ಮಿಕ ಅಲ್ಪ ಸಂಖ್ಯಾತರ ಅಪಹರಣ, ಬಲವಂತದ ಮತಾಂತರ, ಅಪ್ರಾಪ್ತ ಬಾಲಕಿಯರ ಮದುವೆಯಂತಹ ಅಹಿತಕರವಾದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅಲ್ಲಿಯ ಆಡಳಿತ ಮೂಕ ಪ್ರೇಕ್ಷಕನಂತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong> ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ಪ್ರಕರಣಗಳ ಕುರಿತು ಸೋಮವಾರ ಬಿಜೆಪಿ, ಬಿಜೆಡಿ ಹಾಗೂ ಸಮಾಜವಾದಿ ಪಕ್ಷಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು ಈ ಸಂಬಂಧ ಸಂಸತ್ತು ಖಂಡನಾ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.<br /> <br /> ನಿರಂತರ ಕಿರುಕುಳದಿಂದಾಗಿ ಪಾಕ್ನ ಸಿಂಧ್ ಪ್ರಾಂತದ 150ಕ್ಕೂ ಹೆಚ್ಚು ಹಿಂದೂಗಳು ಭಾನುವಾರ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆ ಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಸರ್ಕಾರ ಈ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.<br /> <br /> ಈ ವಿಚಾರದ ಕುರಿತು ಕೇಂದ್ರ ಸರ್ಕಾರ, ಪಾಕ್ ಸರ್ಕಾರದ ಜತೆ ಚರ್ಚಿಸಬೇಕು. ಆ ದೇಶದ ರಾಯಭಾರಿ ಯನ್ನು ಕರೆಯಿಸಿ ನಮ್ಮ ಖಂಡನೆಯನ್ನು ತಿಳಿಸಬೇಕು ಎಂದೂ ಸದಸ್ಯರು ಪಟ್ಟು ಹಿಡಿದರು. <br /> <br /> ಬಿಜೆಪಿ ನಾಯಕ ರಾಜನಾಥ ಸಿಂಗ್ ಮಾತನಾಡಿ, ಪಾಕ್ನ ಅಲ್ಪಸಂಖ್ಯಾತರು ಅದರಲ್ಲೂ ಹಿಂದೂಗಳು ಹಾಗೂ ಸಿಖ್ಖರು ಈಗ ಭಯದ ನೆರಳಲ್ಲಿ ಬದುಕುವಂತಾಗಿದ್ದು ಸುಮಾರು 20 ಹಿಂದೂ ಕುಟುಂಬಗಳು ಭಾರತದಲ್ಲಿ ನೆಲೆಸಲು ಇಲ್ಲಿಯ ಪೌರತ್ವದ ಬೇಡಿಕೆ ಇಟ್ಟಿದ್ದಾರೆ ಎಂದರು.<br /> <br /> ಭಾರತದ ಯಾತ್ರಾಸ್ಥಳಗಳಿಗೆ ಆಗಮಿಸಿದ ಸುಮಾರು 250 ಹಿಂದೂಗಳಿಂದ ಅಲ್ಲಿಯ ಸರ್ಕಾರ ಮುಚ್ಚಳಿಕೆ ಪಡೆದಿದ್ದು, ಪಾಕ್ ವಿರುದ್ಧ ಒಂದು ಶಬ್ದವನ್ನೂ ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದರು.<br /> ಹಿಂದೂ ಯುವಕ, ಯುವತಿ ಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾ ಗುತ್ತಿದ್ದು ತಮಗೆ ರಕ್ಷಣೆ ನೀಡಲು ಒತ್ತಾಯಿಸಿ ಅಲ್ಲಿಯ ಹಿಂದೂಗಳು ಭಾರತೀಯ ರಾಯಭಾರಿ ಕಚೇರಿಗೆ ಪತ್ರ ಬರೆದಿದ್ದಾರೆ ಎಂದರು.<br /> <br /> ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾತನಾಡಿ, `ಘಟನೆಗಳ ಕುರಿತು ಈ ಕೂಡಲೆ ಸರ್ಕಾರ ಪಾಕ್ ರಾಯಭಾರಿಯನ್ನು ಸದನಕ್ಕೆ ಕರೆಯಿಸಿ ಖಂಡನಾ ನಿರ್ಣಯ ತಿಳಿಸಬೇಕು. ಪಾಕ್ನ ವಿದ್ಯಮಾನಗಳ ಕುರಿತು ಭಾರತದಲ್ಲಿ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಸೋಜಿಗ ತಂದಿದೆ~ ಎಂದು ಅವರು ಹೇಳಿದರು.<br /> <br /> ಪಾಕ್ನ ಶಾಲಾ ಬಾಲಕಿ ಇಫ್ರಾ ಸಿದ್ದಿಕಿ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಬಿಜು ಜನತಾ ದಳದ ಬಿ. ಮೆಹತಾಬ್ ಅವರು, `ಧಾರ್ಮಿಕ ಅಲ್ಪ ಸಂಖ್ಯಾತರ ಅಪಹರಣ, ಬಲವಂತದ ಮತಾಂತರ, ಅಪ್ರಾಪ್ತ ಬಾಲಕಿಯರ ಮದುವೆಯಂತಹ ಅಹಿತಕರವಾದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಅಲ್ಲಿಯ ಆಡಳಿತ ಮೂಕ ಪ್ರೇಕ್ಷಕನಂತಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>