<p>ಕಲಬುರ್ಗಿ: ವಿದ್ಯಾರ್ಥಿ ಜೀವನದಲ್ಲಿ ಓದುವುದರ ಜೊತೆಗೆ ದೈಹಿಕ ಕಸರತ್ತು ಮಾಡುವುದರಿಂದ ಮಾನಸಿಕ ಸಮತೋಲನ ಕಾಪಾಡಿಕೊಂಡು ಹೋಗಬಹುದು ಎಂದು ಮಹಾ ದಾಸೋಹ ಪೀಠದ ಪೀಠಾಧಿಪತಿ ಡಾ. ಶರಣಬಸವಪ್ಪ ಹೇಳಿದರು.<br /> <br /> ನಗರದ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಜಾನಕಿ ಹೊಸುರ ಬರೆದ ಹೈದ್ರಾಬಾದ್ ಕರ್ನಾಟಕದ ದೇಶಿಯ ಕ್ರೀಡೆಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.<br /> <br /> ‘ಬುದ್ಧಿಗೆ ಕಸರತ್ತು ಕೊಡುವ ಆಟಗಳನ್ನು ಆಡಿ ನಮ್ಮ ಮನ ಮನಸ್ಸುಗಳಿಗೆ ಕೆಲಸ ಕೊಡಬೇಕು. ಇದರಿಂದ ಮನುಷ್ಯ ಭೌತಿಕವಾಗಿ ವಿಕಾಸವಾಗುತ್ತಾನೆ. ಜೀವನದಲ್ಲಿ ಆಟವು ಪಾಠದಷ್ಟೆ ಮಹತ್ವದ ಸ್ಥಾನ ಪಡೆದಿದೆ’ ಎಂದು ಹೇಳಿದರು.<br /> <br /> ದೇಶಿಯ ಕ್ರೀಡೆಗಳು ಅವಸಾನದ ಅಂಚಿನಲ್ಲಿವೆ. ಅಪ್ಪಟ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಅವು ಗಳನ್ನು ಮಕ್ಕಳಿಗೆ ಕಲಿಸಿ ಅವರಿಂದ ಆಡಿಸುವುದರ ಮೂಲಕ ಉಳಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು<br /> <br /> ಗ್ರಾಮೀಣ ಕ್ರೀಡೆಗಳಿಗೆ ಪುನರು ಜ್ಜೀವನ ಕೊಡುವ ಪ್ರಯತ್ನ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಅದರ ಪರಿಣಾಮದಿಂದಲೆ ಇಂದು ಪ್ರೊ ಕಬಡ್ಡಿ, ಪ್ರೊ ಟೆನಿಸ್, ಪ್ರೊ ಕೊಕ್ಕೊ ಕಾಣುತ್ತಿದ್ದೇವೆ. ದೇಶಿಯ ಆಟಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.<br /> <br /> ಡಾ. ನೀಲಾಂಬಿಕಾ ಶೇರಿಕಾರ್, ಡಾ. ಎಸ್ ಜಿ ಡೊಳ್ಳೆಗೌಡ್ರು, ಡಾ. ಸೀಮಾ ಪಾಟೀಲ್, ಪ್ರೊ. ಜಾನಕಿ ಹೊಸುರ, ಪ್ರೊ. ದಯಾನಂದ ಹೊಡಲ್, ಪ್ರೊ. ಮಹೇಶ ನೀಲೆಗಾರ, ಪ್ರೊ. ಎಸ್. ಎಸ್. ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರ್ಗಿ: ವಿದ್ಯಾರ್ಥಿ ಜೀವನದಲ್ಲಿ ಓದುವುದರ ಜೊತೆಗೆ ದೈಹಿಕ ಕಸರತ್ತು ಮಾಡುವುದರಿಂದ ಮಾನಸಿಕ ಸಮತೋಲನ ಕಾಪಾಡಿಕೊಂಡು ಹೋಗಬಹುದು ಎಂದು ಮಹಾ ದಾಸೋಹ ಪೀಠದ ಪೀಠಾಧಿಪತಿ ಡಾ. ಶರಣಬಸವಪ್ಪ ಹೇಳಿದರು.<br /> <br /> ನಗರದ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರೊ.ಜಾನಕಿ ಹೊಸುರ ಬರೆದ ಹೈದ್ರಾಬಾದ್ ಕರ್ನಾಟಕದ ದೇಶಿಯ ಕ್ರೀಡೆಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.<br /> <br /> ‘ಬುದ್ಧಿಗೆ ಕಸರತ್ತು ಕೊಡುವ ಆಟಗಳನ್ನು ಆಡಿ ನಮ್ಮ ಮನ ಮನಸ್ಸುಗಳಿಗೆ ಕೆಲಸ ಕೊಡಬೇಕು. ಇದರಿಂದ ಮನುಷ್ಯ ಭೌತಿಕವಾಗಿ ವಿಕಾಸವಾಗುತ್ತಾನೆ. ಜೀವನದಲ್ಲಿ ಆಟವು ಪಾಠದಷ್ಟೆ ಮಹತ್ವದ ಸ್ಥಾನ ಪಡೆದಿದೆ’ ಎಂದು ಹೇಳಿದರು.<br /> <br /> ದೇಶಿಯ ಕ್ರೀಡೆಗಳು ಅವಸಾನದ ಅಂಚಿನಲ್ಲಿವೆ. ಅಪ್ಪಟ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಅವು ಗಳನ್ನು ಮಕ್ಕಳಿಗೆ ಕಲಿಸಿ ಅವರಿಂದ ಆಡಿಸುವುದರ ಮೂಲಕ ಉಳಿಸಿ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು<br /> <br /> ಗ್ರಾಮೀಣ ಕ್ರೀಡೆಗಳಿಗೆ ಪುನರು ಜ್ಜೀವನ ಕೊಡುವ ಪ್ರಯತ್ನ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಅದರ ಪರಿಣಾಮದಿಂದಲೆ ಇಂದು ಪ್ರೊ ಕಬಡ್ಡಿ, ಪ್ರೊ ಟೆನಿಸ್, ಪ್ರೊ ಕೊಕ್ಕೊ ಕಾಣುತ್ತಿದ್ದೇವೆ. ದೇಶಿಯ ಆಟಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.<br /> <br /> ಡಾ. ನೀಲಾಂಬಿಕಾ ಶೇರಿಕಾರ್, ಡಾ. ಎಸ್ ಜಿ ಡೊಳ್ಳೆಗೌಡ್ರು, ಡಾ. ಸೀಮಾ ಪಾಟೀಲ್, ಪ್ರೊ. ಜಾನಕಿ ಹೊಸುರ, ಪ್ರೊ. ದಯಾನಂದ ಹೊಡಲ್, ಪ್ರೊ. ಮಹೇಶ ನೀಲೆಗಾರ, ಪ್ರೊ. ಎಸ್. ಎಸ್. ಹೂಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>