<p><strong>ಕಲಘಟಗಿ; </strong>ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರು ಮತ್ತು ಮಹಿಳೆಯರು ತಹಸೀಲ್ದಾರ ಕಚೇರಿಗೆ ಮಾಜಿ ಸಚಿವ ಪಿ.ಸಿ.ಸಿದ್ಧನಗೌಡ್ರ ನೇತೃತ್ವದಲ್ಲಿ ತೆರಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.<br /> <br /> ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧ, ವಿಧವಾ ವೇತನ ಪಡೆಯುವ ಸಾವಿರಾರು ಪಿಂಚಣಿದಾರರು, ಕಳೆದ ಆರು ತಿಂಗಳಿನಿಂದ ಪಿಂಚಣಿ ಪಡೆಯದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ಗುರುತು ಪತ್ರ ವಿತರಣೆಗೆ ಯೋಜನೆಯನ್ನು ಸರಕಾರ ರೂಪಿಸಿದೆ. ಆದರೆ ಗುರುತುಪತ್ರ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ಖಾಸಗಿ ಕಂಪೆನಿಯು ನಾಗರಿಕರ ಹಿತ ಕಾಯುತ್ತಿಲ್ಲ. ಆದುದರಿಂದ ಗ್ರಾಮಪಂಚಾಯತಿ ಮಟ್ಟದಲ್ಲಿ ಗುರುತುಪತ್ರ ದಾಖಲೀಕರಣಕ್ಕೆ ಕಂಪನಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು. <br /> <br /> ಈಗಾಗಲೇ ಗುರುತುಪತ್ರ ದಾಖಲೀಕರಣಕ್ಕೆ ಹೋಬಳಿ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಕಡಿಮೆ ಸಿಬ್ಬಂದಿ ಸೌಕರ್ಯಗಳ ಕೊರತೆಯ ಕಾರಣದಿಂದ ಗುರುತುಪತ್ರ ದಾಖಲೀಕರಣ ಅತ್ಯಂತ ವಿಳಂಬವಾಗುತ್ತಿದೆ. ಇದರಿಂದ ಅಸಹಾಯಕರು ಅಲೆದಾಡುವಂತಾಗಿದೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.<br /> <br /> ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ ಮಾತನಾಡಿ, ಸರಕಾರ ವ್ಯವಸ್ಥೆಯನ್ನು ಸುಧಾರಿಸಲು ಹೋಗಿ, ಅವ್ಯವಸ್ಥೆಯನ್ನು ಸೃಷ್ಠಿಸುತ್ತಿದೆ. ಈ ಅಸಹಾಯಕರ ಸಂಕಟವನ್ನು ಅಧಿಕಾರಿಗಳಲ್ಲದೇ, ಸರಕಾರ ನಡೆಸುವ ಪ್ರತಿನಿಧಿಗಳು ಗಮನಿಸಿ, ಸೂಕ್ತ ಬದಲಾವಣೆಯನ್ನು ತಕ್ಷಣ ತರಬೇಕು ಎಂದರು. <br /> <br /> ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ತಾಲ್ಲೂಕಿಗೆ ಬಿಡುಗಡೆಯಾದ ರೂ. 2.75ಕೋಟಿ ಮೊತ್ತದ ವಿತರಣೆಯಲ್ಲಿಯೂ ಲೋಪವಾಗಿರುವ ಕುರಿತು ದೂರುಗಳು ಬರುತ್ತಿದ್ದು, ಕೆಲವರಿಗೆ ಪ್ರತಿ ಎಕರೆಗೆ ರೂ.800 ವಿತರಿಸಲಾಗಿದೆ. ಉಳಿದವರಿಗೆ ಕಡಿಮೆ ಮೊತ್ತ ವಿತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಗುತ್ತಿರುವ ಲೋಪ ಗಮನಿಸಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. <br /> <br /> ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಂಕರಗಿರಿ ಬಾವಾನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಮಂಜುನಾಥ ರೊಟ್ಟಿಗವಾಡ, ಗುರುಸಿದ್ಧ ಟೊಂಗಳೆ, ದ್ಯಾಮಣ್ಣ ಬಾಬರಿ ಮೊದಲಾದವರು ಉಪಸ್ಥಿತರಿದ್ದರು. ತಾಲ್ಲೂಕು ದಂಡಾಧಿಕಾರಿಗಳ ಪರವಾಗಿ ಎಸ್.ಐ.ಪತ್ತಾರ ಮನವಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ; </strong>ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರು ಮತ್ತು ಮಹಿಳೆಯರು ತಹಸೀಲ್ದಾರ ಕಚೇರಿಗೆ ಮಾಜಿ ಸಚಿವ ಪಿ.ಸಿ.ಸಿದ್ಧನಗೌಡ್ರ ನೇತೃತ್ವದಲ್ಲಿ ತೆರಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.<br /> <br /> ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧ, ವಿಧವಾ ವೇತನ ಪಡೆಯುವ ಸಾವಿರಾರು ಪಿಂಚಣಿದಾರರು, ಕಳೆದ ಆರು ತಿಂಗಳಿನಿಂದ ಪಿಂಚಣಿ ಪಡೆಯದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು, ಗುರುತು ಪತ್ರ ವಿತರಣೆಗೆ ಯೋಜನೆಯನ್ನು ಸರಕಾರ ರೂಪಿಸಿದೆ. ಆದರೆ ಗುರುತುಪತ್ರ ವಿತರಣೆಯ ಜವಾಬ್ದಾರಿ ವಹಿಸಿಕೊಂಡ ಖಾಸಗಿ ಕಂಪೆನಿಯು ನಾಗರಿಕರ ಹಿತ ಕಾಯುತ್ತಿಲ್ಲ. ಆದುದರಿಂದ ಗ್ರಾಮಪಂಚಾಯತಿ ಮಟ್ಟದಲ್ಲಿ ಗುರುತುಪತ್ರ ದಾಖಲೀಕರಣಕ್ಕೆ ಕಂಪನಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು. <br /> <br /> ಈಗಾಗಲೇ ಗುರುತುಪತ್ರ ದಾಖಲೀಕರಣಕ್ಕೆ ಹೋಬಳಿ ಮಟ್ಟದಲ್ಲಿ ನಿರ್ವಹಿಸಲಾಗುತ್ತಿದೆ. ಆದರೆ ಕಡಿಮೆ ಸಿಬ್ಬಂದಿ ಸೌಕರ್ಯಗಳ ಕೊರತೆಯ ಕಾರಣದಿಂದ ಗುರುತುಪತ್ರ ದಾಖಲೀಕರಣ ಅತ್ಯಂತ ವಿಳಂಬವಾಗುತ್ತಿದೆ. ಇದರಿಂದ ಅಸಹಾಯಕರು ಅಲೆದಾಡುವಂತಾಗಿದೆ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.<br /> <br /> ಮಾಜಿ ಸಚಿವ ಪಿ.ಸಿ.ಸಿದ್ದನಗೌಡ್ರ ಮಾತನಾಡಿ, ಸರಕಾರ ವ್ಯವಸ್ಥೆಯನ್ನು ಸುಧಾರಿಸಲು ಹೋಗಿ, ಅವ್ಯವಸ್ಥೆಯನ್ನು ಸೃಷ್ಠಿಸುತ್ತಿದೆ. ಈ ಅಸಹಾಯಕರ ಸಂಕಟವನ್ನು ಅಧಿಕಾರಿಗಳಲ್ಲದೇ, ಸರಕಾರ ನಡೆಸುವ ಪ್ರತಿನಿಧಿಗಳು ಗಮನಿಸಿ, ಸೂಕ್ತ ಬದಲಾವಣೆಯನ್ನು ತಕ್ಷಣ ತರಬೇಕು ಎಂದರು. <br /> <br /> ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ತಾಲ್ಲೂಕಿಗೆ ಬಿಡುಗಡೆಯಾದ ರೂ. 2.75ಕೋಟಿ ಮೊತ್ತದ ವಿತರಣೆಯಲ್ಲಿಯೂ ಲೋಪವಾಗಿರುವ ಕುರಿತು ದೂರುಗಳು ಬರುತ್ತಿದ್ದು, ಕೆಲವರಿಗೆ ಪ್ರತಿ ಎಕರೆಗೆ ರೂ.800 ವಿತರಿಸಲಾಗಿದೆ. ಉಳಿದವರಿಗೆ ಕಡಿಮೆ ಮೊತ್ತ ವಿತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಗುತ್ತಿರುವ ಲೋಪ ಗಮನಿಸಿ, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. <br /> <br /> ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಂಕರಗಿರಿ ಬಾವಾನವರ, ವೃಷಭೇಂದ್ರ ಪಟ್ಟಣಶೆಟ್ಟಿ, ಮಂಜುನಾಥ ರೊಟ್ಟಿಗವಾಡ, ಗುರುಸಿದ್ಧ ಟೊಂಗಳೆ, ದ್ಯಾಮಣ್ಣ ಬಾಬರಿ ಮೊದಲಾದವರು ಉಪಸ್ಥಿತರಿದ್ದರು. ತಾಲ್ಲೂಕು ದಂಡಾಧಿಕಾರಿಗಳ ಪರವಾಗಿ ಎಸ್.ಐ.ಪತ್ತಾರ ಮನವಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>