<p>ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ನಂತರ 607 ವಿದ್ಯಾರ್ಥಿಗಳ ಅಂಕಗಳು ಮೊದಲಿಗಿಂತಲೂ ಕಡಿಮೆಯಾಗಿವೆ.<br /> <br /> 12,913 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲಾಗಿದೆ. ಈ ಪೈಕಿ 1,499 ವಿದ್ಯಾರ್ಥಿಗಳು ಮರು ಮೌಲ್ಯಮಾಪನ ನಂತರ ಆರು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> 12,913 ವಿದ್ಯಾರ್ಥಿಗಳ ಪೈಕಿ 11,414 ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮರು ಮೌಲ್ಯಮಾಪನದ ನಂತರ ಐದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದಕ್ಕಿಂತ ಕಡಿಮೆ ವ್ಯತ್ಯಾಸವಾದರೆ ಆ ಅಂಕಗಳನ್ನು ಮಾನ್ಯ ಮಾಡುವುದಿಲ್ಲ.<br /> <br /> ಮೊದಲು ಗಣಿತದಲ್ಲಿ 36 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದ ಎನ್.ಅಮಿತ್ಗೆ ಮರು ಮೌಲ್ಯಮಾಪನದ ನಂತರ 9 ಅಂಕಗಳು ಕಡಿಮೆಯಾಗಿವೆ. ಇದರಿಂದಾಗಿ ಅವರು ಅನುತ್ತೀರ್ಣಗೊಂಡಿದ್ದಾರೆ. ಇದೇ ವಿಷಯದಲ್ಲಿ ಸೈಯದ್ ಅಬ್ದುಲ್ 13, ಮಹಮದ್ ಕಮಿಲ್ಗೆ 15, ಜಿ.ದಿವ್ಯಾಗೆ 10 ಅಂಕಗಳು ಕಡಿಮೆಯಾಗಿವೆ.<br /> <br /> ಜೀವವಿಜ್ಞಾನ ವಿಷಯದಲ್ಲಿ ಪ್ರೀತಿ ಬಸನಗೌಡ ಪಾಟೀಲ ಅವರು ಮೊದಲು 60 ಅಂಕಗಳನ್ನು ಪಡೆದಿದ್ದರೆ, ಮರು ಮೌಲ್ಯಮಾಪನ ನಂತರ 30 ಅಂಕಗಳನ್ನು ಕಳೆದುಕೊಂಡಿದ್ದಾರೆ. ವಿಕ್ರಮ್ಗೌಡ ಮತ್ತು ಆರ್.ರಮ್ಯಾ ಅವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ತಲಾ 20 ಅಂಕಗಳು ಕಡಿಮೆಯಾಗಿವೆ.<br /> <br /> ನಗರದ ದೀಕ್ಷಾ ಕಾಲೇಜಿನ ಎಂ.ಡಿ.ಭರತ್, ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂಗ್ಲಿಷ್, ಭೌತವಿಜ್ಞಾನ ವಿಷಯದ ಅಂಕಗಳಲ್ಲಿ ವ್ಯತ್ಯಾಸವಾಗಿಲ್ಲ. ಆದರೆ ರಸಾಯನ ವಿಜ್ಞಾನದಲ್ಲಿ 14 ಮತ್ತು ಗಣಿತದಲ್ಲಿ ಎಂಟು ಅಂಕಗಳು ಕಡಿಮೆಯಾಗಿವೆ.<br /> <br /> `ಪ್ರತಿ ವಿಷಯದಲ್ಲಿ ಕನಿಷ್ಠ ಐದು ಅಂಕಗಳು ಹೆಚ್ಚಿಗೆ ಬರಲಿವೆ ಎಂದು ನಿರೀಕ್ಷೆ ಮಾಡಿದ್ದೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ~ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು. ಇವರಿಗೆ ಅಂಕಗಳು ಕಡಿಮೆಯಾಗಿರುವುದರಿಂದ ಸಿಇಟಿ ರ್ಯಾಂಕಿಂಗ್ನಲ್ಲೂ ಬದಲಾವಣೆಯಾಗಿದೆ. <br /> <br /> ಈ ಮುಂಚೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಮತ್ತು ಗಣಿತದಲ್ಲಿ 300ಕ್ಕೆ 250 ಅಂಕಗಳನ್ನು ಗಳಿಸಿದ್ದರು. ಆದರೆ ಮರು ಮೌಲ್ಯಮಾಪನ ನಂತರ 228 ಅಂಕಗಳನ್ನು ಪಡೆದಿರುವುದರಿಂದ ಎಂಜಿನಿಯರಿಂಗ್ನಲ್ಲಿ 13,000 ರ್ಯಾಂಕ್ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ನಂತರ 607 ವಿದ್ಯಾರ್ಥಿಗಳ ಅಂಕಗಳು ಮೊದಲಿಗಿಂತಲೂ ಕಡಿಮೆಯಾಗಿವೆ.<br /> <br /> 12,913 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲಾಗಿದೆ. ಈ ಪೈಕಿ 1,499 ವಿದ್ಯಾರ್ಥಿಗಳು ಮರು ಮೌಲ್ಯಮಾಪನ ನಂತರ ಆರು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.<br /> <br /> 12,913 ವಿದ್ಯಾರ್ಥಿಗಳ ಪೈಕಿ 11,414 ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮರು ಮೌಲ್ಯಮಾಪನದ ನಂತರ ಐದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೆ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದಕ್ಕಿಂತ ಕಡಿಮೆ ವ್ಯತ್ಯಾಸವಾದರೆ ಆ ಅಂಕಗಳನ್ನು ಮಾನ್ಯ ಮಾಡುವುದಿಲ್ಲ.<br /> <br /> ಮೊದಲು ಗಣಿತದಲ್ಲಿ 36 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದ ಎನ್.ಅಮಿತ್ಗೆ ಮರು ಮೌಲ್ಯಮಾಪನದ ನಂತರ 9 ಅಂಕಗಳು ಕಡಿಮೆಯಾಗಿವೆ. ಇದರಿಂದಾಗಿ ಅವರು ಅನುತ್ತೀರ್ಣಗೊಂಡಿದ್ದಾರೆ. ಇದೇ ವಿಷಯದಲ್ಲಿ ಸೈಯದ್ ಅಬ್ದುಲ್ 13, ಮಹಮದ್ ಕಮಿಲ್ಗೆ 15, ಜಿ.ದಿವ್ಯಾಗೆ 10 ಅಂಕಗಳು ಕಡಿಮೆಯಾಗಿವೆ.<br /> <br /> ಜೀವವಿಜ್ಞಾನ ವಿಷಯದಲ್ಲಿ ಪ್ರೀತಿ ಬಸನಗೌಡ ಪಾಟೀಲ ಅವರು ಮೊದಲು 60 ಅಂಕಗಳನ್ನು ಪಡೆದಿದ್ದರೆ, ಮರು ಮೌಲ್ಯಮಾಪನ ನಂತರ 30 ಅಂಕಗಳನ್ನು ಕಳೆದುಕೊಂಡಿದ್ದಾರೆ. ವಿಕ್ರಮ್ಗೌಡ ಮತ್ತು ಆರ್.ರಮ್ಯಾ ಅವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ತಲಾ 20 ಅಂಕಗಳು ಕಡಿಮೆಯಾಗಿವೆ.<br /> <br /> ನಗರದ ದೀಕ್ಷಾ ಕಾಲೇಜಿನ ಎಂ.ಡಿ.ಭರತ್, ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂಗ್ಲಿಷ್, ಭೌತವಿಜ್ಞಾನ ವಿಷಯದ ಅಂಕಗಳಲ್ಲಿ ವ್ಯತ್ಯಾಸವಾಗಿಲ್ಲ. ಆದರೆ ರಸಾಯನ ವಿಜ್ಞಾನದಲ್ಲಿ 14 ಮತ್ತು ಗಣಿತದಲ್ಲಿ ಎಂಟು ಅಂಕಗಳು ಕಡಿಮೆಯಾಗಿವೆ.<br /> <br /> `ಪ್ರತಿ ವಿಷಯದಲ್ಲಿ ಕನಿಷ್ಠ ಐದು ಅಂಕಗಳು ಹೆಚ್ಚಿಗೆ ಬರಲಿವೆ ಎಂದು ನಿರೀಕ್ಷೆ ಮಾಡಿದ್ದೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ~ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು. ಇವರಿಗೆ ಅಂಕಗಳು ಕಡಿಮೆಯಾಗಿರುವುದರಿಂದ ಸಿಇಟಿ ರ್ಯಾಂಕಿಂಗ್ನಲ್ಲೂ ಬದಲಾವಣೆಯಾಗಿದೆ. <br /> <br /> ಈ ಮುಂಚೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ ಮತ್ತು ಗಣಿತದಲ್ಲಿ 300ಕ್ಕೆ 250 ಅಂಕಗಳನ್ನು ಗಳಿಸಿದ್ದರು. ಆದರೆ ಮರು ಮೌಲ್ಯಮಾಪನ ನಂತರ 228 ಅಂಕಗಳನ್ನು ಪಡೆದಿರುವುದರಿಂದ ಎಂಜಿನಿಯರಿಂಗ್ನಲ್ಲಿ 13,000 ರ್ಯಾಂಕ್ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>