<p>ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರನಾಯಕ್ ಅವರು, ಪಿಯು ಉಪನ್ಯಾಸಕರ ಹುದ್ದೆಗೆ ಬಿ.ಇಡಿ ಕಡ್ಡಾಯ ಅರ್ಹತೆಯನ್ನಾಗಿ ಮಾಡಿರುವ ಬಗೆಗೆ ಪ್ರತಿಕ್ರಯಿಸಿರುವುದು ವೈಜ್ಞಾನಿಕವಾಗಿ ಸ್ಪಷ್ಟವಾಗಿರುತ್ತದೆ (ಪ್ರವಾ ಸೆ. 18).<br /> <br /> ರಾಷ್ಟ್ರೀಯ ಶಾಲಾ ಶಿಕ್ಷಣ ನೀತಿ ಅನುಮೋದಿಸಿರುವ 12 ವರ್ಷಗಳ ಶಾಲಾ ತರಗತಿಗಳ ಏಣಿ ಕ್ರಮ ರಚನೆಯ ಸ್ವರೂಪ 5+3+2+2 ಇದ್ದು, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ. ಪದವಿ ನಿಗದಿಪಡಿಸಿರುವುದು ಸೂಕ್ತವಾದ ಕ್ರಮ. ಕೇವಲ ಸ್ನಾತಕೋತ್ತರ ಪದವಿ ಪಡೆದ ಮಾತ್ರಕ್ಕೆ ಬೋಧನೆಗೆ ಸಂಬಂಧಿಸಿದ ಕೌಶಲಗಳು ಕರಗತವಾಗಿರುವುದಿಲ್ಲ.<br /> <br /> ನಾವು ಪಿ.ಯು ಫಲಿತಾಂಶವನ್ನು ಗಮನಿಸಿದರೆ ಕೇವಲ ಶೇ 40 ರಿಂದ 50ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಅನುತ್ತೀರ್ಣಗೊಂಡ ಕೆಲವು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ.<br /> <br /> ಉಪನ್ಯಾಸಕರ ಹುದ್ದೆಗೆ ಈಗ ಇರುವ ವಿದ್ಯಾರ್ಹತೆ ಅವೈಜ್ಞಾನಿಕ ಕ್ರಮ ಎಂದು ಹಲವರು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಪ್ರೌಢ ಶಾಲಾ ಶಿಕ್ಷಕರಿಗೂ ಪದವಿ ಕಾಲೇಜು ಉಪನ್ಯಾಸಕರ ಮಧ್ಯೆ ತಾರತಮ್ಯ ವ್ಯಕ್ತಪಡಿಸುತ್ತಿದ್ದಾರೆ. <br /> <br /> ಸ್ನಾತಕೋತ್ತರ ಪದವಿ ಜೊತೆಗೆ M.Phil., Phd., NET ಅಥವಾ SLET ಪಾಸಾದವರಿಗೆ ಆದ್ಯತೆ ನೀಡಬೇಕು ಎಂದಿರುವ ಇವರು ಬೋಧನಾ ವಿಧಾನ ಹಾಗೂ ಮಕ್ಕಳ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವವರ ಅಗತ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರನಾಯಕ್ ಅವರು, ಪಿಯು ಉಪನ್ಯಾಸಕರ ಹುದ್ದೆಗೆ ಬಿ.ಇಡಿ ಕಡ್ಡಾಯ ಅರ್ಹತೆಯನ್ನಾಗಿ ಮಾಡಿರುವ ಬಗೆಗೆ ಪ್ರತಿಕ್ರಯಿಸಿರುವುದು ವೈಜ್ಞಾನಿಕವಾಗಿ ಸ್ಪಷ್ಟವಾಗಿರುತ್ತದೆ (ಪ್ರವಾ ಸೆ. 18).<br /> <br /> ರಾಷ್ಟ್ರೀಯ ಶಾಲಾ ಶಿಕ್ಷಣ ನೀತಿ ಅನುಮೋದಿಸಿರುವ 12 ವರ್ಷಗಳ ಶಾಲಾ ತರಗತಿಗಳ ಏಣಿ ಕ್ರಮ ರಚನೆಯ ಸ್ವರೂಪ 5+3+2+2 ಇದ್ದು, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ. ಪದವಿ ನಿಗದಿಪಡಿಸಿರುವುದು ಸೂಕ್ತವಾದ ಕ್ರಮ. ಕೇವಲ ಸ್ನಾತಕೋತ್ತರ ಪದವಿ ಪಡೆದ ಮಾತ್ರಕ್ಕೆ ಬೋಧನೆಗೆ ಸಂಬಂಧಿಸಿದ ಕೌಶಲಗಳು ಕರಗತವಾಗಿರುವುದಿಲ್ಲ.<br /> <br /> ನಾವು ಪಿ.ಯು ಫಲಿತಾಂಶವನ್ನು ಗಮನಿಸಿದರೆ ಕೇವಲ ಶೇ 40 ರಿಂದ 50ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಅನುತ್ತೀರ್ಣಗೊಂಡ ಕೆಲವು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ.<br /> <br /> ಉಪನ್ಯಾಸಕರ ಹುದ್ದೆಗೆ ಈಗ ಇರುವ ವಿದ್ಯಾರ್ಹತೆ ಅವೈಜ್ಞಾನಿಕ ಕ್ರಮ ಎಂದು ಹಲವರು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಪ್ರೌಢ ಶಾಲಾ ಶಿಕ್ಷಕರಿಗೂ ಪದವಿ ಕಾಲೇಜು ಉಪನ್ಯಾಸಕರ ಮಧ್ಯೆ ತಾರತಮ್ಯ ವ್ಯಕ್ತಪಡಿಸುತ್ತಿದ್ದಾರೆ. <br /> <br /> ಸ್ನಾತಕೋತ್ತರ ಪದವಿ ಜೊತೆಗೆ M.Phil., Phd., NET ಅಥವಾ SLET ಪಾಸಾದವರಿಗೆ ಆದ್ಯತೆ ನೀಡಬೇಕು ಎಂದಿರುವ ಇವರು ಬೋಧನಾ ವಿಧಾನ ಹಾಗೂ ಮಕ್ಕಳ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವವರ ಅಗತ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>