<p><strong>ಅಂತಃಕರಣದ ನುಡಿ<br /> </strong>`ಪ್ರಜಾವಾಣಿ~ ತನ್ನ ಸಾಮಾಜಿಕ ಕಳಕಳಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಯಾವ ಪತ್ರಿಕೆಗೂ ಇಲ್ಲದ ದಲಿತ ಪರ ಧೋರಣೆಯನ್ನು ಆಗಾಗ ಪ್ರಕಟಿಸುತ್ತಲೇ ಬಂದಿದೆ. ಪ್ರಜ್ಞಾಪೂರ್ವಕವಾಗಿ ಈ ಬಗೆಯ ವಿಶೇಷ ಸಂಚಿಕೆ ಹೊರತಂದಿರುವುದು ಮೆಚ್ಚುವಂತಹದ್ದು. <br /> <strong>ಡಾ.ಸಿ.ಜಿ. ಲಕ್ಷ್ಮೀಪತಿ </strong><br /> ಸಮಾಜ ಶಾಸ್ತ್ರಜ್ಞರು, ಬೆಂಗಳೂರು<br /> <br /> <strong>ಪ್ರಯೋಗಶೀಲತೆ... </strong><br /> `ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಪತ್ರಿಕೆಯು ಇಂತಹ ಪ್ರಯೋಗಶೀಲತೆಯನ್ನು ಮುಂದುವರಿಸಿಕೊಂಡು ಹೋಗಲಿ~.<br /> <strong>ಎ.ಆರ್.ಇನ್ಫಂಟ್ </strong><br /> ರಾಜ್ಯ ಪೊಲೀಸ್ಮಹಾ ನಿರ್ದೇಶಕರು<br /> <br /> <strong>ಹೃದಯ ತಂಪಾಗಿಸಿತು..<br /> </strong>ಕನ್ನಡ ಪತ್ರಿಕೋದ್ಯಮದಲ್ಲಿಸಾಂಸ್ಕೃತಿಕ ಅಗತ್ಯಗಳನ್ನು ಹೆಚ್ಚಾಗಿ ಗ್ರಹಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ `ಪ್ರಜಾವಾಣಿ~. ಬೆಳ್ಳಂಬೆಳಗ್ಗೆ ಕೈಗೆ ಸಿಕ್ಕ ಸಂಚಿಕೆ ಹೃದಯವನ್ನು ತೇವಗೊಳಿಸಿ, ತಂಪಾಗಿಸಿತು. ಪತ್ರಿಕೆಯ ಈ ಕಾಳಜಿ ಮತ್ತು ಪ್ರಯತ್ನಕ್ಕೆ ನಮ್ಮ ಹೃದಯದಲ್ಲೊಂದು ಧನ್ಯತಾ ಭಾವ ಹುಟ್ಟಿಕೊಂಡಿದೆ.<br /> <strong>ಕೆ.ಗಿರೀಶ್<br /> </strong> ಬರಹಗಾರ, ಬೆಂಗಳೂರು <br /> <br /> <strong>`ಪ್ರಜಾವಾಣಿ~ಯೇ ಸಾಟಿ</strong><br /> ಕಳೆದ 20 ವರ್ಷಗಳಿಂದ ನಿರಂತರವಾಗಿ `ಪ್ರಜಾವಾಣಿ~ ಓದುತ್ತಿದ್ದೇನೆ. ದಲಿತರ ಬಗ್ಗೆ ವಿಶೇಷ ಸಂಚಿಕೆ ಪ್ರಕಟಿಸುವ ಮೂಲಕ ನಿಜಕ್ಕೂ ಶೋಷಿತರ ಕಣ್ಣು ತೆರೆಸಿದೆ. `ಪ್ರಜಾವಾಣಿ~ಗೆ `ಪ್ರಜಾವಾಣಿ~ಯೇ ಸಾಟಿ. <br /> <strong>ಡಾ.ರವಿಕುಮಾರ್, ಬಸವನಗುಡಿ<br /> <br /> ಅಂತರಾಳ ತಟ್ಟಿತು</strong><br /> `ಪ್ರಜಾವಾಣಿ~ ಇತಿಹಾಸದಲ್ಲಿ ನೆನಪಿಡಬೇಕಾದಂತಹ ಸಂಚಿಕೆ. ನಾಡಿನ ಚಿಂತಕರು ದಲಿತರ ಸಮಸ್ಯೆಗಳು ಕುರಿತು ಬರೆದ ಲೇಖನಗಳು ಅಂತರಾಳವನ್ನು ತಟ್ಟಿತ್ತು. ಈ ಪ್ರಯತ್ನ ಂದುವರೆಯಲಿ.<br /> <strong>ಎನ್.ಎಂ. ಮಂಜುನಾಥ್ ಜರಗನಹಳ್ಳಿ <br /> </strong><br /> <strong>ಗಂಭೀರ ನಿರ್ವಚನ...</strong><br /> ದಿನ ನಿತ್ಯದ `ಪ್ರಜಾವಾಣಿ~ ಇಂದು ವಿಶೇಷ ಸಂಚಿಕೆ ಆಗಿತ್ತು. ಎಂದಿನಿಂತೆ ತಿರುವಿ ಹಾಕುವ ಪತ್ರಿಕೆ ಆಗಿರಲಿಲ್ಲ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹತ್ತು ಹಲವು ಚಿಂತನೆಗಳನ್ನು ಗಂಭೀರವಾಗಿ ಕುಳಿತು ನಿರ್ವಚಿಸುವ ರೀತಿಯಲ್ಲಿ ಇತ್ತು.<br /> ಸಮಗ್ರ ಜನತೆಯ ಏಳಿಗೆ ಬಯಸುವ `ಪ್ರಜಾವಾಣಿ~ ಮತ್ತು ಸಂಪಾದಕರು ದಿನದ ಸಂಚಿಕೆಯನ್ನು ವಿಶೇಷ ಸಂಚಿಕೆಯಾಗಿ ರೂಪಿಸಿ ಅಭಿನಂದನೆಗೆ ಪಾತ್ರವಾಗಿದ್ದಾರೆ.<br /> -<strong>ಡಾ.ಎಂ.ಜಿ. ಈಶ್ವರಪ್ಪ</strong> <br /> ನಿವೃತ್ತ ಪ್ರಾಂಶುಪಾಲರು,ಜಾನಪದ ತಜ್ಞರು<br /> <br /> <strong>ರೈತರ ಸಂಚಿಕೆ ಬರಲಿ... <br /> </strong>ಅತ್ಯುತ್ತಮ ಸ್ತುತ್ಯರ್ಹ ಹಾಗೂ ಪತ್ರಿಕಾ ರಂಗದಲ್ಲಿ ಅದ್ಭುತವಾದ ಒಂದು ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಪತ್ರಿಕೆ ಮೇಲಿನ ಓದುಗರ ಪ್ರೀತಿ ಇಮ್ಮಡಿಸಿದೆ. `ಪ್ರಜಾವಾಣಿ~ ನಿತ್ಯವೂ ಮಾಧ್ಯಮ ಕ್ಷೇತ್ರದಲ್ಲಿ ಅನುಕರಣೀಯವಾಗಿದ್ದು, ನನ್ನಂತಹ ಲಕ್ಷಾಂತರ ಜನರಲ್ಲಿ ವೈಚಾರಿಕ ಹಾಗೂ ಜಾತ್ಯತೀತ ಮನೋಭಾವ ಬೆಳೆಸುವಂತಾಗಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗೆ ಕನ್ನಡಿ ಹಿಡಿಯಲಿ. <br /> <strong>ಎಲ್.ಎಚ್. ಅರುಣ್ಕುಮಾರ್ <br /> <br /> ಸರಳ ಸುಂದರ</strong><br /> ಅಪರೂಪದ ವಿಚಾರವಂತರಾದ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಬಂದಿರುವ `ಪ್ರಜಾವಾಣಿ~ ಸಂಚಿಕೆ ಸರಳ ಮತ್ತು ಸುಂದರ. ಸಾಮಾಜಿಕ ಸಮಾನತೆಯ ಆಶಯವನ್ನು ಇಷ್ಟು ಆಳವಾದ, ತೀವ್ರವಾದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಕಟಿಸುವುದು `ಪ್ರಜಾವಾಣಿ~ಯಿಂದ ಮಾತ್ರ ಸಾಧ್ಯ ಎಂದು ಮತ್ತೆ ಮತ್ತೆ ಅನಿಸುವುದು ಇದೇ ಕಾರಣಕ್ಕೆ.<br /> <strong>ಡಾ.ಬಿ.ಸಿ. ದಾದಾಪೀರ್ ದಾವಣಗೆರೆ<br /> </strong><br /> <strong>ಅತ್ಯುತ್ತಮ ಪ್ರಯತ್ನ</strong><br /> ಪತ್ರಿಕೆ ಬಗ್ಗೆ ಕಾಲೇಜಿನಲ್ಲಿ ಚರ್ಚೆ ಮಾಡಿದೆವು. ಇದು ಬಹಳ ಅತ್ಯುತ್ತಮವಾದ ಪ್ರಯತ್ನ. ತಳಸಮುದಾಯಗಳ ಬಗ್ಗೆ ಪತ್ರಿಕೆಯ ಬದ್ಧತೆ, ಕಾಳಜಿಯನ್ನು ತೋರಿಸುತ್ತದೆ. ಇದು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲ ದಲಿತಪರ ಚಿಂತಕರು ಶಾಶ್ವತವಾಗಿ ಇಟ್ಟುಕೊಳ್ಳಬೇಕಾದ ಸಂಗ್ರಹಯೋಗ್ಯ ಸಂಚಿಕೆ. <br /> <strong>ಡಾ.ಮಲ್ಲಿಕಾರ್ಜುನಕಲಮರಹಳ್ಳಿ, ದಾವಣಗೆರೆ <br /> <br /> ಹೊಸ ಮೈಲಿಗಲ್ಲು</strong> <br /> ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿ ಬಂದಿದೆ. `ಪ್ರಜಾವಾಣಿ~ ಮೈಲಿಗಲ್ಲು ಸ್ಥಾಪಿಸಿದೆ. <br /> <strong>ಚಂದ್ರಶೇಖರ್ ತಾಳ್ಯ, ಸಾಹಿತಿ<br /> <br /> ನೋವು ತೆರೆದಿಟ್ಟಿದ್ದಾರೆ</strong><br /> ಸಂಚಿಕೆ ತುಂಬಾ ಚೆನ್ನಾಗಿ ಬಂದಿದೆ. ಶೋಷಿತ ವರ್ಗ ಶತಮಾನಗಳಿಂದ ಅನುಭವಿಸುವ ನೋವುಗಳನ್ನು ದೇವನೂರು ಮಹಾದೇವ ಅವರು ತೆರೆದಿಟ್ಟಿದ್ದಾರೆ. <br /> <strong>ಪ್ರೊ.ಬಿ.ಪಿ. ವೀರಭದ್ರಪ್ಪ ಶಿವಗಂಗೋತ್ರಿ<br /> <br /> ಚರಿತ್ರೆ ಬರೆದ ಪತ್ರಿಕೆ <br /> </strong>ಶನಿವಾರದ `ಪ್ರಜಾವಾಣಿ~ ಕೇವಲ ಸಂಚಿಕೆಯಲ್ಲ. ದಲಿತರ ನೋವು-ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಮೂಲಕ ಚರಿತ್ರೆ ಸೃಷ್ಟಿಸಿದೆ.<br /> <strong>ಆಲೂರು ನಿಂಗರಾಜ್ </strong><br /> ದಸಂಸ ರಾಜ್ಯ ಸಂಘಟನಾಸಂಚಾಲಕ<br /> <br /> <strong>ಸೂಕ್ತ ಸಂಚಿಕೆ <br /> </strong> `ಪ್ರಜಾವಾಣಿ~ `ದಲಿತ ಸಂಚಿಕೆ~ ಹೊರತಂದಿರುವುದು ಉತ್ತಮ ಪ್ರಯೋಗವಾಗಿದೆ. `ಪ್ರಜಾವಾಣಿ~ಗೆ ಅತಿಥಿ ಸಂಪಾದಕರಾಗುವುದಕ್ಕೆ ಚಿಂತಕ ದೇವನೂರ ಮಹಾದೇವ ಅವರು ಸೂಕ್ತ ವ್ಯಕ್ತಿ. ಸಂಗ್ರಹ ಯೋಗ್ಯವಾಗಿದೆ.<br /> <strong>ಟಿ. ಗಿರಿಜಾ, ಲೇಖಕಿ, ದಾವಣಗೆರೆ<br /> <br /> ಕಾಳಜಿಗಳ ಮರುಶೋಧ</strong><br /> ಸೌರಮಾನ ಯುಗಾದಿ, ಅಂಬೇಡ್ಕರ್ ಜಯಂತಿಗಳ ಜತೆಗೆ`ಪ್ರಜಾವಾಣಿ~ ಹೊಸತನ ನೀಡಿದೆ.ನಿಜವಾದ ಅರ್ಥದಲ್ಲಿ ಪತ್ರಿಕೆ ಇಂದು ಕಾಳಜಿಗಳ ಮರುಶೋಧಮಾಡಿಬಿಟ್ಟಿದೆ.<br /> `ಪ್ರಜಾವಾಣಿ~ಯ ಪುಟ ಪುಟಗಳಲ್ಲಿ ಹಾಗೂ ಪುರವಣಿಯಲ್ಲಿ ಮಿಂಚಿನ ಸೆಳೆತ ಇತ್ತು. ಇಂತಹ ಪ್ರಯೋಗ ಮುಂದುವರಿಯಲಿ.<br /> <strong>ವಾಮನ ನಂದಾವರ ಜಾನಪದ ವಿದ್ವಾಂಸ<br /> <br /> ಸಂಗ್ರಹಯೋಗ್ಯ ಸಂಚಿಕೆ</strong><br /> ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಡಿ ಹೊರಬಂದಿರುವ ಶನಿವಾರದ `ಪ್ರಜಾವಾಣಿ~ ಸಂಚಿಕೆ ಉತ್ತಮವಾಗಿದ್ದು, ಸಂಗ್ರಹಯೋಗ್ಯವಾಗಿದೆ. ನಾಡಿನ ಎಲ್ಲಾ ರೀತಿಯ ಶೋಷಿತ ವರ್ಗದ ಜನತೆಯನ್ನು ಸ್ಮರಿಸಿ, ಪರಿಹಾರ ಸೂಚಿಸುವ ಸಂಚಿಕೆಯಾಗಿ ಹೊರಬಂದಿದೆ. ಮಹಾನ್ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಹೇಗೆ ಸ್ಮರಿಸಬಹುದೆಂಬುದನ್ನು ತೋರಿಸಿದ್ದಾರೆ.<br /> -<strong>ಸಚಿವ ಎಸ್.ಸುರೇಶ್ ಕುಮಾರ್ ಚಿಕ್ಕಮಗಳೂರಿನಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ...<br /> <br /> ಹೊಸ ಚಿಂತನೆಗೆ ದಾರಿ<br /> </strong>ದೇವನೂರ ಮಹಾದೇವ ಅವರನ್ನು ಅತಿಥಿ ಸಂಪಾದಕರನ್ನಾಗಿಸುವ ಮೂಲಕ ಈ ನಾಡಿನ ನತದೃಷ್ಟ ಜನಾಂಗದ ಆತ್ಮಬಲವನ್ನು ಹೆಚ್ಚಿಸುವಲ್ಲಿ `ಪ್ರಜಾವಾಣಿ~ ಪ್ರಜ್ಞೆ ನಿಜಕ್ಕೂ ಮೆಚ್ಚುಗೆ ಆಗಿದೆ.<br /> <strong>ಜಯನ್ ಮಲ್ಪೆ<br /> </strong> ದಲಿತ ಸಂಘರ್ಷ ಸಮಿತಿ, ಉಡುಪಿ<br /> <br /> <strong>ಪ್ರಯತ್ನ ಶ್ಲಾಘನೀಯ<br /> </strong> ದೇವನೂರ ನಿಜಕ್ಕೂ ಸಂಪಾದಕರಾಗುವ ಅರ್ಹತೆ ಹೊಂದಿರುವವರು. ಅವರನ್ನು ಅತಿಥಿ ಸಂಪಾದಕರನ್ನಾಗಿಸಿ `ಪ್ರಜಾವಾಣಿ~ ಹೊರತಂದ ಸಂಚಿಕೆ ಉತ್ತಮವಾಗಿತ್ತು. <br /> ಆದರೆ ಅಂಬೇಡ್ಕರ್ ಜನ್ಮದಿನದಂದೇ ದೇವನೂರರನ್ನು ಸಂಪಾದಕರನ್ನಾಗಿಸಿದ್ದು ಮತ್ತೆ ದಲಿತರಿಗೆ, ಅಂಬೇಡ್ಕರರಿಗೆ ಕೇವಲ ಈ ದಿನ ಮಾತ್ರ ಬೇಕಿತ್ತಾ ಎಂಬ ಸಂದೇಹ ನನ್ನಲ್ಲಿ ಉಳಿಯಿತು<br /> <strong>ದಿನಕರ ಬೆಂಗ್ರೆ<br /> <br /> ತಿಂಗಳಿಗೆ ಒಂದು ಪುಟ</strong><br /> ರಾಜಕಾರಣಿಗಳಲ್ಲಿ ಕೇವಲ ಮತ ಬ್ಯಾಂಕ್ ಹಿನ್ನೆಲೆಯ ದಲಿತರ ಕಾಳಜಿ ಇರುವ ಇಂದಿನ ದಿನದಲ್ಲಿ ಪತ್ರಿಕೆಯೊಂದು ದಲಿತರ ಬಗ್ಗೆ ಅಂಬೇಡ್ಕರ್ ಜನ್ಮದಿನಾಚರಣೆ ಸಂದರ್ಭ ಕಾಳಜಿ ವಹಿಸಿರುವುದು ಸ್ತುತ್ಯರ್ಹ. `ಪ್ರಜಾವಾಣಿ~ಯ ಇಂದಿನ ಪ್ರಯೋಗ ಉತ್ತಮ ಬೆಳವಣಿಗೆ. ಅಸಮಾನತೆಯಿಂದ ಕಾಣುವ ಜನಾಂಗದ ಕುರಿತು ತಿಂಗಳಿಗೆ ಒಂದು ಬಾರಿಯಾದರೂ ಒಂದು ಪುಟವನ್ನು ಮೀಸಲಿರಿಸಿದರೆ ಉತ್ತಮ.<br /> <strong>ಎಂ.ಎ.ಖಾದರ್ ಪುತ್ತೂರು<br /> </strong> ವರ್ತಕರ ಸಂಘದ ಮಾಜಿಕಾರ್ಯದರ್ಶಿ<br /> <br /> <strong>ಸಕಾಲದ ಸಂಚಿಕೆ<br /> </strong>ಸಕಾಲಕ್ಕೆ ವಿಶೇಷ ಸಂಚಿಕೆ ಮೂಡಿ ಬಂದಿದೆ. ದೇವನೂರು ಮಹಾದೇವ ಅವರ ಎತ್ತಿರುವ ಪ್ರಶ್ನೆಗಳು ಪ್ರಸ್ತುತವಾಗಿವೆ. <br /> <strong>-ತಾರಿಣಿ ಶುಭದಾಯಿನಿ <br /> </strong><br /> <strong>ಇತಿಹಾಸದಲ್ಲಿ ದಾಖಲಾರ್ಹ <br /> </strong>`ಪ್ರಜಾವಾಣಿ~ ದಿನಪತ್ರಿಕೆಯು ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ದಾಖಲಾರ್ಹವಾದಂತಹ, ಶ್ಲಾಘನೀಯವಾದ ಕಾರ್ಯವನ್ನು ನಿರ್ವಹಿಸಿದೆ. <br /> ಈ ಮೂಲಕ ಕಟ್ಟಕಡೆಯ ಮನುಷ್ಯನಿಗೂ ತಲುಪುವ ಪತ್ರಿಕೆ `ಪ್ರಜಾವಾಣಿ~ ಎಂಬುದನ್ನು ಈ ಸಂಚಿಕೆಯ ಮೂಲಕ ಸಾಬೀತು ಮಾಡಿದ್ದೀರಿ. <br /> <strong>ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಶಂಕರಘಟ್ಟ<br /> <br /> ಜಾಗೃತಿಗೆ ಪೂರಕ<br /> </strong>`ಸಂಚಿಕೆ ಬಹಳ ಚೆನ್ನಾಗಿತ್ತು. ಈ ಸಂಚಿಕೆ ರೂಪಿಸಿದ್ದಕ್ಕೆ ಪತ್ರಿಕೆಗೆ ವಿಶೇಷ ಗೌರವ ವ್ಯಕ್ತಪಡಿಸುತ್ತೇನೆ. ದಲಿತರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಲು ಈ ಸಂಚಿಕೆ ಪೂರಕ ಆಗಲಿದೆ~. <br /> <strong>ಕೋಡಿಹಳ್ಳಿ ಚಂದ್ರಶೇಖರ್ </strong><br /> ರಾಜ್ಯ ರೈತ ಸಂಘದ ಅಧ್ಯಕ್ಷ <br /> <br /> <strong>ಬಸವ ಜಯಂತಿಗೂ ಬರಲಿ</strong><br /> ಡಾ.ಅಂಬೇಡ್ಕರ್ ರವರ 121 ನೇ ಜಯಂತಿ ಅಂಗವಾಗಿ ದೇವನೂರ ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರಬಂದ `ಪ್ರಜಾವಾಣಿ~ ದಿನಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದೆ. ಇದಕ್ಕಾಗಿ ಸಂಪಾದಕ ಕೆ.ಎನ್. ಶಾಂತಕುಮಾರ್ ಅವರಿಗೆ ಅಭಿನಂದನೆಗಳು.<br /> 12 ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿ ಮಾಡಿದ ಮಹಾಪುರುಷ ಜಗಜ್ಯೋತಿ ಬಸವೇಶ್ವರರ ಜಯಂತಿ ಸಂದರ್ಭದಲ್ಲಿ (24.4.2012) ಇದೇ ರೀತಿಯ ಸಂಚಿಕೆ ಬರಬಹುದೆಂದು ನಾವು ನಿರೀಕ್ಷಿಸಬಹುದೇ?<br /> -<strong>ಎಸ್.ಎಂ.ಜಂಬುಕೇಶ್ವರ</strong> ಛಾಯಾಚಿತ್ರ ಕಲಾವಿದ. ಮೈಸೂರು<br /> <br /> <strong>ವಿಚಾರ ಪ್ರಚೋದಕ</strong><br /> ಅಂಬೇಡ್ಕರ್ ಜಯಂತಿ ದಿನ`ಪ್ರಜಾವಾಣಿ~ ಸಾಹಿತಿ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರತಂದ ವಿಶೇಷ ಸಂಚಿಕೆ ತುಂಬಾ ವಿಚಾರಪ್ರಚೋದಕವೂ, ಸಮಯೋಚಿತವೂ ಆಗಿದೆ.<br /> ಇದೊಂದು ಚಿರನೂತನ ಪ್ರಯೋಗ. ಎಲ್ಲ ಲೇಖನಗಳನ್ನು ಸೇರಿಸಿ ಒಂದು ಪುಸ್ತಕವನ್ನೇ `ಪ್ರಜಾವಾಣಿ~ ಮುದ್ರಿಸಬಹುದು. <br /> ಅಂದ ಹಾಗೆ ಡಾ.ಅಂಬೇಡ್ಕರ್ ಮತ್ತು ಡಾ.ಲೋಹಿಯಾ ಅವರ ಪತ್ರ ವ್ಯವಹಾರಗಳ ಪುಸ್ತಕ ಪ್ರಕಟವಾಗಿದೆ. ಅದರಲ್ಲಿ ಇಬ್ಬರು ಸೇರಿ ಭಾರತದ ನವಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವ ಪ್ರಸ್ತಾಪವಿದೆ. ಈ ಬಗ್ಗೆ ಲೇಖನಗಳಲ್ಲಿ ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು.<br /> ಹಿರಿಯ ಸಮಾಜವಾದಿ, ಮಾಜಿ ಶಾಸಕ <strong>ಕೋಣಂದೂರು ಲಿಂಗಪ್ಪ </strong>ಶಿವಮೊಗ್ಗ <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತಃಕರಣದ ನುಡಿ<br /> </strong>`ಪ್ರಜಾವಾಣಿ~ ತನ್ನ ಸಾಮಾಜಿಕ ಕಳಕಳಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಯಾವ ಪತ್ರಿಕೆಗೂ ಇಲ್ಲದ ದಲಿತ ಪರ ಧೋರಣೆಯನ್ನು ಆಗಾಗ ಪ್ರಕಟಿಸುತ್ತಲೇ ಬಂದಿದೆ. ಪ್ರಜ್ಞಾಪೂರ್ವಕವಾಗಿ ಈ ಬಗೆಯ ವಿಶೇಷ ಸಂಚಿಕೆ ಹೊರತಂದಿರುವುದು ಮೆಚ್ಚುವಂತಹದ್ದು. <br /> <strong>ಡಾ.ಸಿ.ಜಿ. ಲಕ್ಷ್ಮೀಪತಿ </strong><br /> ಸಮಾಜ ಶಾಸ್ತ್ರಜ್ಞರು, ಬೆಂಗಳೂರು<br /> <br /> <strong>ಪ್ರಯೋಗಶೀಲತೆ... </strong><br /> `ನಿಜಕ್ಕೂ ಇದು ಉತ್ತಮ ಬೆಳವಣಿಗೆ. ಪತ್ರಿಕೆಯು ಇಂತಹ ಪ್ರಯೋಗಶೀಲತೆಯನ್ನು ಮುಂದುವರಿಸಿಕೊಂಡು ಹೋಗಲಿ~.<br /> <strong>ಎ.ಆರ್.ಇನ್ಫಂಟ್ </strong><br /> ರಾಜ್ಯ ಪೊಲೀಸ್ಮಹಾ ನಿರ್ದೇಶಕರು<br /> <br /> <strong>ಹೃದಯ ತಂಪಾಗಿಸಿತು..<br /> </strong>ಕನ್ನಡ ಪತ್ರಿಕೋದ್ಯಮದಲ್ಲಿಸಾಂಸ್ಕೃತಿಕ ಅಗತ್ಯಗಳನ್ನು ಹೆಚ್ಚಾಗಿ ಗ್ರಹಿಸುತ್ತಿರುವ ಮತ್ತು ನಿರ್ವಹಿಸುತ್ತಿರುವ ಏಕೈಕ ದಿನಪತ್ರಿಕೆ `ಪ್ರಜಾವಾಣಿ~. ಬೆಳ್ಳಂಬೆಳಗ್ಗೆ ಕೈಗೆ ಸಿಕ್ಕ ಸಂಚಿಕೆ ಹೃದಯವನ್ನು ತೇವಗೊಳಿಸಿ, ತಂಪಾಗಿಸಿತು. ಪತ್ರಿಕೆಯ ಈ ಕಾಳಜಿ ಮತ್ತು ಪ್ರಯತ್ನಕ್ಕೆ ನಮ್ಮ ಹೃದಯದಲ್ಲೊಂದು ಧನ್ಯತಾ ಭಾವ ಹುಟ್ಟಿಕೊಂಡಿದೆ.<br /> <strong>ಕೆ.ಗಿರೀಶ್<br /> </strong> ಬರಹಗಾರ, ಬೆಂಗಳೂರು <br /> <br /> <strong>`ಪ್ರಜಾವಾಣಿ~ಯೇ ಸಾಟಿ</strong><br /> ಕಳೆದ 20 ವರ್ಷಗಳಿಂದ ನಿರಂತರವಾಗಿ `ಪ್ರಜಾವಾಣಿ~ ಓದುತ್ತಿದ್ದೇನೆ. ದಲಿತರ ಬಗ್ಗೆ ವಿಶೇಷ ಸಂಚಿಕೆ ಪ್ರಕಟಿಸುವ ಮೂಲಕ ನಿಜಕ್ಕೂ ಶೋಷಿತರ ಕಣ್ಣು ತೆರೆಸಿದೆ. `ಪ್ರಜಾವಾಣಿ~ಗೆ `ಪ್ರಜಾವಾಣಿ~ಯೇ ಸಾಟಿ. <br /> <strong>ಡಾ.ರವಿಕುಮಾರ್, ಬಸವನಗುಡಿ<br /> <br /> ಅಂತರಾಳ ತಟ್ಟಿತು</strong><br /> `ಪ್ರಜಾವಾಣಿ~ ಇತಿಹಾಸದಲ್ಲಿ ನೆನಪಿಡಬೇಕಾದಂತಹ ಸಂಚಿಕೆ. ನಾಡಿನ ಚಿಂತಕರು ದಲಿತರ ಸಮಸ್ಯೆಗಳು ಕುರಿತು ಬರೆದ ಲೇಖನಗಳು ಅಂತರಾಳವನ್ನು ತಟ್ಟಿತ್ತು. ಈ ಪ್ರಯತ್ನ ಂದುವರೆಯಲಿ.<br /> <strong>ಎನ್.ಎಂ. ಮಂಜುನಾಥ್ ಜರಗನಹಳ್ಳಿ <br /> </strong><br /> <strong>ಗಂಭೀರ ನಿರ್ವಚನ...</strong><br /> ದಿನ ನಿತ್ಯದ `ಪ್ರಜಾವಾಣಿ~ ಇಂದು ವಿಶೇಷ ಸಂಚಿಕೆ ಆಗಿತ್ತು. ಎಂದಿನಿಂತೆ ತಿರುವಿ ಹಾಕುವ ಪತ್ರಿಕೆ ಆಗಿರಲಿಲ್ಲ. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹತ್ತು ಹಲವು ಚಿಂತನೆಗಳನ್ನು ಗಂಭೀರವಾಗಿ ಕುಳಿತು ನಿರ್ವಚಿಸುವ ರೀತಿಯಲ್ಲಿ ಇತ್ತು.<br /> ಸಮಗ್ರ ಜನತೆಯ ಏಳಿಗೆ ಬಯಸುವ `ಪ್ರಜಾವಾಣಿ~ ಮತ್ತು ಸಂಪಾದಕರು ದಿನದ ಸಂಚಿಕೆಯನ್ನು ವಿಶೇಷ ಸಂಚಿಕೆಯಾಗಿ ರೂಪಿಸಿ ಅಭಿನಂದನೆಗೆ ಪಾತ್ರವಾಗಿದ್ದಾರೆ.<br /> -<strong>ಡಾ.ಎಂ.ಜಿ. ಈಶ್ವರಪ್ಪ</strong> <br /> ನಿವೃತ್ತ ಪ್ರಾಂಶುಪಾಲರು,ಜಾನಪದ ತಜ್ಞರು<br /> <br /> <strong>ರೈತರ ಸಂಚಿಕೆ ಬರಲಿ... <br /> </strong>ಅತ್ಯುತ್ತಮ ಸ್ತುತ್ಯರ್ಹ ಹಾಗೂ ಪತ್ರಿಕಾ ರಂಗದಲ್ಲಿ ಅದ್ಭುತವಾದ ಒಂದು ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಪತ್ರಿಕೆ ಮೇಲಿನ ಓದುಗರ ಪ್ರೀತಿ ಇಮ್ಮಡಿಸಿದೆ. `ಪ್ರಜಾವಾಣಿ~ ನಿತ್ಯವೂ ಮಾಧ್ಯಮ ಕ್ಷೇತ್ರದಲ್ಲಿ ಅನುಕರಣೀಯವಾಗಿದ್ದು, ನನ್ನಂತಹ ಲಕ್ಷಾಂತರ ಜನರಲ್ಲಿ ವೈಚಾರಿಕ ಹಾಗೂ ಜಾತ್ಯತೀತ ಮನೋಭಾವ ಬೆಳೆಸುವಂತಾಗಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗೆ ಕನ್ನಡಿ ಹಿಡಿಯಲಿ. <br /> <strong>ಎಲ್.ಎಚ್. ಅರುಣ್ಕುಮಾರ್ <br /> <br /> ಸರಳ ಸುಂದರ</strong><br /> ಅಪರೂಪದ ವಿಚಾರವಂತರಾದ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಬಂದಿರುವ `ಪ್ರಜಾವಾಣಿ~ ಸಂಚಿಕೆ ಸರಳ ಮತ್ತು ಸುಂದರ. ಸಾಮಾಜಿಕ ಸಮಾನತೆಯ ಆಶಯವನ್ನು ಇಷ್ಟು ಆಳವಾದ, ತೀವ್ರವಾದ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪ್ರಕಟಿಸುವುದು `ಪ್ರಜಾವಾಣಿ~ಯಿಂದ ಮಾತ್ರ ಸಾಧ್ಯ ಎಂದು ಮತ್ತೆ ಮತ್ತೆ ಅನಿಸುವುದು ಇದೇ ಕಾರಣಕ್ಕೆ.<br /> <strong>ಡಾ.ಬಿ.ಸಿ. ದಾದಾಪೀರ್ ದಾವಣಗೆರೆ<br /> </strong><br /> <strong>ಅತ್ಯುತ್ತಮ ಪ್ರಯತ್ನ</strong><br /> ಪತ್ರಿಕೆ ಬಗ್ಗೆ ಕಾಲೇಜಿನಲ್ಲಿ ಚರ್ಚೆ ಮಾಡಿದೆವು. ಇದು ಬಹಳ ಅತ್ಯುತ್ತಮವಾದ ಪ್ರಯತ್ನ. ತಳಸಮುದಾಯಗಳ ಬಗ್ಗೆ ಪತ್ರಿಕೆಯ ಬದ್ಧತೆ, ಕಾಳಜಿಯನ್ನು ತೋರಿಸುತ್ತದೆ. ಇದು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲ ದಲಿತಪರ ಚಿಂತಕರು ಶಾಶ್ವತವಾಗಿ ಇಟ್ಟುಕೊಳ್ಳಬೇಕಾದ ಸಂಗ್ರಹಯೋಗ್ಯ ಸಂಚಿಕೆ. <br /> <strong>ಡಾ.ಮಲ್ಲಿಕಾರ್ಜುನಕಲಮರಹಳ್ಳಿ, ದಾವಣಗೆರೆ <br /> <br /> ಹೊಸ ಮೈಲಿಗಲ್ಲು</strong> <br /> ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿ ಬಂದಿದೆ. `ಪ್ರಜಾವಾಣಿ~ ಮೈಲಿಗಲ್ಲು ಸ್ಥಾಪಿಸಿದೆ. <br /> <strong>ಚಂದ್ರಶೇಖರ್ ತಾಳ್ಯ, ಸಾಹಿತಿ<br /> <br /> ನೋವು ತೆರೆದಿಟ್ಟಿದ್ದಾರೆ</strong><br /> ಸಂಚಿಕೆ ತುಂಬಾ ಚೆನ್ನಾಗಿ ಬಂದಿದೆ. ಶೋಷಿತ ವರ್ಗ ಶತಮಾನಗಳಿಂದ ಅನುಭವಿಸುವ ನೋವುಗಳನ್ನು ದೇವನೂರು ಮಹಾದೇವ ಅವರು ತೆರೆದಿಟ್ಟಿದ್ದಾರೆ. <br /> <strong>ಪ್ರೊ.ಬಿ.ಪಿ. ವೀರಭದ್ರಪ್ಪ ಶಿವಗಂಗೋತ್ರಿ<br /> <br /> ಚರಿತ್ರೆ ಬರೆದ ಪತ್ರಿಕೆ <br /> </strong>ಶನಿವಾರದ `ಪ್ರಜಾವಾಣಿ~ ಕೇವಲ ಸಂಚಿಕೆಯಲ್ಲ. ದಲಿತರ ನೋವು-ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಮೂಲಕ ಚರಿತ್ರೆ ಸೃಷ್ಟಿಸಿದೆ.<br /> <strong>ಆಲೂರು ನಿಂಗರಾಜ್ </strong><br /> ದಸಂಸ ರಾಜ್ಯ ಸಂಘಟನಾಸಂಚಾಲಕ<br /> <br /> <strong>ಸೂಕ್ತ ಸಂಚಿಕೆ <br /> </strong> `ಪ್ರಜಾವಾಣಿ~ `ದಲಿತ ಸಂಚಿಕೆ~ ಹೊರತಂದಿರುವುದು ಉತ್ತಮ ಪ್ರಯೋಗವಾಗಿದೆ. `ಪ್ರಜಾವಾಣಿ~ಗೆ ಅತಿಥಿ ಸಂಪಾದಕರಾಗುವುದಕ್ಕೆ ಚಿಂತಕ ದೇವನೂರ ಮಹಾದೇವ ಅವರು ಸೂಕ್ತ ವ್ಯಕ್ತಿ. ಸಂಗ್ರಹ ಯೋಗ್ಯವಾಗಿದೆ.<br /> <strong>ಟಿ. ಗಿರಿಜಾ, ಲೇಖಕಿ, ದಾವಣಗೆರೆ<br /> <br /> ಕಾಳಜಿಗಳ ಮರುಶೋಧ</strong><br /> ಸೌರಮಾನ ಯುಗಾದಿ, ಅಂಬೇಡ್ಕರ್ ಜಯಂತಿಗಳ ಜತೆಗೆ`ಪ್ರಜಾವಾಣಿ~ ಹೊಸತನ ನೀಡಿದೆ.ನಿಜವಾದ ಅರ್ಥದಲ್ಲಿ ಪತ್ರಿಕೆ ಇಂದು ಕಾಳಜಿಗಳ ಮರುಶೋಧಮಾಡಿಬಿಟ್ಟಿದೆ.<br /> `ಪ್ರಜಾವಾಣಿ~ಯ ಪುಟ ಪುಟಗಳಲ್ಲಿ ಹಾಗೂ ಪುರವಣಿಯಲ್ಲಿ ಮಿಂಚಿನ ಸೆಳೆತ ಇತ್ತು. ಇಂತಹ ಪ್ರಯೋಗ ಮುಂದುವರಿಯಲಿ.<br /> <strong>ವಾಮನ ನಂದಾವರ ಜಾನಪದ ವಿದ್ವಾಂಸ<br /> <br /> ಸಂಗ್ರಹಯೋಗ್ಯ ಸಂಚಿಕೆ</strong><br /> ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಡಿ ಹೊರಬಂದಿರುವ ಶನಿವಾರದ `ಪ್ರಜಾವಾಣಿ~ ಸಂಚಿಕೆ ಉತ್ತಮವಾಗಿದ್ದು, ಸಂಗ್ರಹಯೋಗ್ಯವಾಗಿದೆ. ನಾಡಿನ ಎಲ್ಲಾ ರೀತಿಯ ಶೋಷಿತ ವರ್ಗದ ಜನತೆಯನ್ನು ಸ್ಮರಿಸಿ, ಪರಿಹಾರ ಸೂಚಿಸುವ ಸಂಚಿಕೆಯಾಗಿ ಹೊರಬಂದಿದೆ. ಮಹಾನ್ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಹೇಗೆ ಸ್ಮರಿಸಬಹುದೆಂಬುದನ್ನು ತೋರಿಸಿದ್ದಾರೆ.<br /> -<strong>ಸಚಿವ ಎಸ್.ಸುರೇಶ್ ಕುಮಾರ್ ಚಿಕ್ಕಮಗಳೂರಿನಲ್ಲಿ ನಡೆದಕಾರ್ಯಕ್ರಮವೊಂದರಲ್ಲಿ...<br /> <br /> ಹೊಸ ಚಿಂತನೆಗೆ ದಾರಿ<br /> </strong>ದೇವನೂರ ಮಹಾದೇವ ಅವರನ್ನು ಅತಿಥಿ ಸಂಪಾದಕರನ್ನಾಗಿಸುವ ಮೂಲಕ ಈ ನಾಡಿನ ನತದೃಷ್ಟ ಜನಾಂಗದ ಆತ್ಮಬಲವನ್ನು ಹೆಚ್ಚಿಸುವಲ್ಲಿ `ಪ್ರಜಾವಾಣಿ~ ಪ್ರಜ್ಞೆ ನಿಜಕ್ಕೂ ಮೆಚ್ಚುಗೆ ಆಗಿದೆ.<br /> <strong>ಜಯನ್ ಮಲ್ಪೆ<br /> </strong> ದಲಿತ ಸಂಘರ್ಷ ಸಮಿತಿ, ಉಡುಪಿ<br /> <br /> <strong>ಪ್ರಯತ್ನ ಶ್ಲಾಘನೀಯ<br /> </strong> ದೇವನೂರ ನಿಜಕ್ಕೂ ಸಂಪಾದಕರಾಗುವ ಅರ್ಹತೆ ಹೊಂದಿರುವವರು. ಅವರನ್ನು ಅತಿಥಿ ಸಂಪಾದಕರನ್ನಾಗಿಸಿ `ಪ್ರಜಾವಾಣಿ~ ಹೊರತಂದ ಸಂಚಿಕೆ ಉತ್ತಮವಾಗಿತ್ತು. <br /> ಆದರೆ ಅಂಬೇಡ್ಕರ್ ಜನ್ಮದಿನದಂದೇ ದೇವನೂರರನ್ನು ಸಂಪಾದಕರನ್ನಾಗಿಸಿದ್ದು ಮತ್ತೆ ದಲಿತರಿಗೆ, ಅಂಬೇಡ್ಕರರಿಗೆ ಕೇವಲ ಈ ದಿನ ಮಾತ್ರ ಬೇಕಿತ್ತಾ ಎಂಬ ಸಂದೇಹ ನನ್ನಲ್ಲಿ ಉಳಿಯಿತು<br /> <strong>ದಿನಕರ ಬೆಂಗ್ರೆ<br /> <br /> ತಿಂಗಳಿಗೆ ಒಂದು ಪುಟ</strong><br /> ರಾಜಕಾರಣಿಗಳಲ್ಲಿ ಕೇವಲ ಮತ ಬ್ಯಾಂಕ್ ಹಿನ್ನೆಲೆಯ ದಲಿತರ ಕಾಳಜಿ ಇರುವ ಇಂದಿನ ದಿನದಲ್ಲಿ ಪತ್ರಿಕೆಯೊಂದು ದಲಿತರ ಬಗ್ಗೆ ಅಂಬೇಡ್ಕರ್ ಜನ್ಮದಿನಾಚರಣೆ ಸಂದರ್ಭ ಕಾಳಜಿ ವಹಿಸಿರುವುದು ಸ್ತುತ್ಯರ್ಹ. `ಪ್ರಜಾವಾಣಿ~ಯ ಇಂದಿನ ಪ್ರಯೋಗ ಉತ್ತಮ ಬೆಳವಣಿಗೆ. ಅಸಮಾನತೆಯಿಂದ ಕಾಣುವ ಜನಾಂಗದ ಕುರಿತು ತಿಂಗಳಿಗೆ ಒಂದು ಬಾರಿಯಾದರೂ ಒಂದು ಪುಟವನ್ನು ಮೀಸಲಿರಿಸಿದರೆ ಉತ್ತಮ.<br /> <strong>ಎಂ.ಎ.ಖಾದರ್ ಪುತ್ತೂರು<br /> </strong> ವರ್ತಕರ ಸಂಘದ ಮಾಜಿಕಾರ್ಯದರ್ಶಿ<br /> <br /> <strong>ಸಕಾಲದ ಸಂಚಿಕೆ<br /> </strong>ಸಕಾಲಕ್ಕೆ ವಿಶೇಷ ಸಂಚಿಕೆ ಮೂಡಿ ಬಂದಿದೆ. ದೇವನೂರು ಮಹಾದೇವ ಅವರ ಎತ್ತಿರುವ ಪ್ರಶ್ನೆಗಳು ಪ್ರಸ್ತುತವಾಗಿವೆ. <br /> <strong>-ತಾರಿಣಿ ಶುಭದಾಯಿನಿ <br /> </strong><br /> <strong>ಇತಿಹಾಸದಲ್ಲಿ ದಾಖಲಾರ್ಹ <br /> </strong>`ಪ್ರಜಾವಾಣಿ~ ದಿನಪತ್ರಿಕೆಯು ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ದಾಖಲಾರ್ಹವಾದಂತಹ, ಶ್ಲಾಘನೀಯವಾದ ಕಾರ್ಯವನ್ನು ನಿರ್ವಹಿಸಿದೆ. <br /> ಈ ಮೂಲಕ ಕಟ್ಟಕಡೆಯ ಮನುಷ್ಯನಿಗೂ ತಲುಪುವ ಪತ್ರಿಕೆ `ಪ್ರಜಾವಾಣಿ~ ಎಂಬುದನ್ನು ಈ ಸಂಚಿಕೆಯ ಮೂಲಕ ಸಾಬೀತು ಮಾಡಿದ್ದೀರಿ. <br /> <strong>ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಶಂಕರಘಟ್ಟ<br /> <br /> ಜಾಗೃತಿಗೆ ಪೂರಕ<br /> </strong>`ಸಂಚಿಕೆ ಬಹಳ ಚೆನ್ನಾಗಿತ್ತು. ಈ ಸಂಚಿಕೆ ರೂಪಿಸಿದ್ದಕ್ಕೆ ಪತ್ರಿಕೆಗೆ ವಿಶೇಷ ಗೌರವ ವ್ಯಕ್ತಪಡಿಸುತ್ತೇನೆ. ದಲಿತರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಲು ಈ ಸಂಚಿಕೆ ಪೂರಕ ಆಗಲಿದೆ~. <br /> <strong>ಕೋಡಿಹಳ್ಳಿ ಚಂದ್ರಶೇಖರ್ </strong><br /> ರಾಜ್ಯ ರೈತ ಸಂಘದ ಅಧ್ಯಕ್ಷ <br /> <br /> <strong>ಬಸವ ಜಯಂತಿಗೂ ಬರಲಿ</strong><br /> ಡಾ.ಅಂಬೇಡ್ಕರ್ ರವರ 121 ನೇ ಜಯಂತಿ ಅಂಗವಾಗಿ ದೇವನೂರ ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರಬಂದ `ಪ್ರಜಾವಾಣಿ~ ದಿನಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದೆ. ಇದಕ್ಕಾಗಿ ಸಂಪಾದಕ ಕೆ.ಎನ್. ಶಾಂತಕುಮಾರ್ ಅವರಿಗೆ ಅಭಿನಂದನೆಗಳು.<br /> 12 ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿ ಮಾಡಿದ ಮಹಾಪುರುಷ ಜಗಜ್ಯೋತಿ ಬಸವೇಶ್ವರರ ಜಯಂತಿ ಸಂದರ್ಭದಲ್ಲಿ (24.4.2012) ಇದೇ ರೀತಿಯ ಸಂಚಿಕೆ ಬರಬಹುದೆಂದು ನಾವು ನಿರೀಕ್ಷಿಸಬಹುದೇ?<br /> -<strong>ಎಸ್.ಎಂ.ಜಂಬುಕೇಶ್ವರ</strong> ಛಾಯಾಚಿತ್ರ ಕಲಾವಿದ. ಮೈಸೂರು<br /> <br /> <strong>ವಿಚಾರ ಪ್ರಚೋದಕ</strong><br /> ಅಂಬೇಡ್ಕರ್ ಜಯಂತಿ ದಿನ`ಪ್ರಜಾವಾಣಿ~ ಸಾಹಿತಿ ದೇವನೂರು ಮಹಾದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಹೊರತಂದ ವಿಶೇಷ ಸಂಚಿಕೆ ತುಂಬಾ ವಿಚಾರಪ್ರಚೋದಕವೂ, ಸಮಯೋಚಿತವೂ ಆಗಿದೆ.<br /> ಇದೊಂದು ಚಿರನೂತನ ಪ್ರಯೋಗ. ಎಲ್ಲ ಲೇಖನಗಳನ್ನು ಸೇರಿಸಿ ಒಂದು ಪುಸ್ತಕವನ್ನೇ `ಪ್ರಜಾವಾಣಿ~ ಮುದ್ರಿಸಬಹುದು. <br /> ಅಂದ ಹಾಗೆ ಡಾ.ಅಂಬೇಡ್ಕರ್ ಮತ್ತು ಡಾ.ಲೋಹಿಯಾ ಅವರ ಪತ್ರ ವ್ಯವಹಾರಗಳ ಪುಸ್ತಕ ಪ್ರಕಟವಾಗಿದೆ. ಅದರಲ್ಲಿ ಇಬ್ಬರು ಸೇರಿ ಭಾರತದ ನವಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುವ ಪ್ರಸ್ತಾಪವಿದೆ. ಈ ಬಗ್ಗೆ ಲೇಖನಗಳಲ್ಲಿ ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು.<br /> ಹಿರಿಯ ಸಮಾಜವಾದಿ, ಮಾಜಿ ಶಾಸಕ <strong>ಕೋಣಂದೂರು ಲಿಂಗಪ್ಪ </strong>ಶಿವಮೊಗ್ಗ <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>