<p><strong>ಬೆಂಗಳೂರು:</strong> ನಗರದ ಶ್ರೀರಾಂಪುರ ಮತ್ತು ಟೆಲಿಕಾಂ ಲೇಔಟ್ ಬಳಿ ಮಂಗಳವಾರ ಬೆಳಿಗ್ಗೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ರೈಲಿಗೆ ಸಿಲುಕಿ ಸತ್ತಿದ್ದಾರೆ.</p>.<p>ರೈಲಿಗೆ ಸಿಲುಕಿ ಸತ್ತಿರುವ ಜಗಜೀವನರಾಂನಗರದ ಟೆಲಿಕಾಂ ಲೇಔಟ್ ಸಮೀಪ ಜಾನ್ಸನ್ ದೀಪಕ್ (21), ನಾಗವಾರದ ಬಳಿ ಇರುವ ಖಾಸಗಿ ಕಾಲೇಜು ಒಂದರಲ್ಲಿ ಬಿ.ಕಾಂ ಓದುತ್ತಿದ್ದ. ಆತ ಲಿಂಗರಾಜಪುರದಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಾಲೇಜಿಗೆ ಹೋಗುವುದಾಗಿ ಸಂಬಂಧಿಕರಿಗೆ ಹೇಳಿ ಬಂದಿದ್ದ ಜಾನ್ಸನ್, ರೈಲಿಗೆ ಸಿಲುಕಿ ಸತ್ತಿದ್ದಾನೆ. ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.</p>.<p><strong>ಮತ್ತೊಂದು ಪ್ರಕರಣ:</strong> ಶ್ರೀರಾಂಪುರ ಸಮೀಪದ ಮಹಮಡನ್ ಬ್ಲಾಕ್ ಸೇತುವೆ ಬಳಿ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.</p>.<p>ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ. ಆ ವ್ಯಕ್ತಿಯ ರುಂಡ-ಮುಂಡ ಬೇರೆ ಬೇರೆಯಾಗಿದೆ ಮತ್ತು ದೇಹ ಸಹ ಸಂಪೂರ್ಣ ಛಿದ್ರವಾಗಿದೆ. ಇದರಿಂದಾಗಿ ಆತನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಶ್ರೀರಾಂಪುರ ಮತ್ತು ಟೆಲಿಕಾಂ ಲೇಔಟ್ ಬಳಿ ಮಂಗಳವಾರ ಬೆಳಿಗ್ಗೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ರೈಲಿಗೆ ಸಿಲುಕಿ ಸತ್ತಿದ್ದಾರೆ.</p>.<p>ರೈಲಿಗೆ ಸಿಲುಕಿ ಸತ್ತಿರುವ ಜಗಜೀವನರಾಂನಗರದ ಟೆಲಿಕಾಂ ಲೇಔಟ್ ಸಮೀಪ ಜಾನ್ಸನ್ ದೀಪಕ್ (21), ನಾಗವಾರದ ಬಳಿ ಇರುವ ಖಾಸಗಿ ಕಾಲೇಜು ಒಂದರಲ್ಲಿ ಬಿ.ಕಾಂ ಓದುತ್ತಿದ್ದ. ಆತ ಲಿಂಗರಾಜಪುರದಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಾಲೇಜಿಗೆ ಹೋಗುವುದಾಗಿ ಸಂಬಂಧಿಕರಿಗೆ ಹೇಳಿ ಬಂದಿದ್ದ ಜಾನ್ಸನ್, ರೈಲಿಗೆ ಸಿಲುಕಿ ಸತ್ತಿದ್ದಾನೆ. ಸಾವಿಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.</p>.<p><strong>ಮತ್ತೊಂದು ಪ್ರಕರಣ:</strong> ಶ್ರೀರಾಂಪುರ ಸಮೀಪದ ಮಹಮಡನ್ ಬ್ಲಾಕ್ ಸೇತುವೆ ಬಳಿ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.</p>.<p>ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ. ಆ ವ್ಯಕ್ತಿಯ ರುಂಡ-ಮುಂಡ ಬೇರೆ ಬೇರೆಯಾಗಿದೆ ಮತ್ತು ದೇಹ ಸಹ ಸಂಪೂರ್ಣ ಛಿದ್ರವಾಗಿದೆ. ಇದರಿಂದಾಗಿ ಆತನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ರೈಲು ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>