<p>ಪ್ರತಿಭೆ, ಬದ್ಧತೆ, ಸಾಮಾಜಿಕ ಕಾಳಜಿ ಹಾಗೂ ಒಳನೋಟಗಳಿಂದ ಕನ್ನಡ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಹಿರಿಯರ ಪಟ್ಟಿಯಲ್ಲಿ ಪಾ.ವೆಂ.ಆಚಾರ್ಯ ಹಾಗೂ ಪಾಟೀಲ ಪುಟ್ಟಪ್ಪ ಅವರದ್ದು ಎದ್ದುಕಾಣುವ ಹೆಸರುಗಳು. <br /> <br /> ಈ ಇಬ್ಬರ ಜೀವನ ಹಾಗೂ ಸಾಧನೆಯನ್ನು ಒಟ್ಟಿಗೆ ಕಾಣುವ ಪ್ರಯತ್ನವನ್ನು ಮತ್ತೊಬ್ಬ ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಮಾಡಿದ್ದಾರೆ. ಈ ಪ್ರಯತ್ನದ ಫಲ- `ಪ್ರಪಂಚದ ಪಾಪು; `ಕಸ್ತೂರಿ~ಯ ಪಾವೆಂ~ ಕೃತಿ.<br /> <br /> ಪಾವೆಂ ಹಾಗೂ ಪಾಪು ಅವರನ್ನು ಹತ್ತಿರದಿಂದ ಬಲ್ಲ ಜೋಶಿ ಅವರು, ಹಿರಿಯರೊಂದಿಗಿನ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಮೂಲಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವೈಯಕ್ತಿಕ ಬದುಕಿನಿಂದ ವೃತ್ತಿಬದುಕಿನವರೆಗೆ ಇಬ್ಬರ ನಡುವಣ ಸಾಮ್ಯಗಳನ್ನು ಗುರ್ತಿಸುವುದರ ಜೊತೆಗೆ, ಇಬ್ಬರ ಅನನ್ಯ ಗುಣವಿಶೇಷಗಳನ್ನು ಈ ಪುಟ್ಟ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ. <br /> <br /> ಬಡ ಕುಟುಂಬದಿಂದ ಬಂದ, ಉನ್ನತ ಶಿಕ್ಷಣ ಪಡೆಯದ ಪಾವೆಂ ಅವರು `ಕಸ್ತೂರಿ~ ಡೈಜೆಸ್ಟ್ ಅನ್ನು ರೂಪಿಸಿದ ಹಾಗೂ `ಪದಾರ್ಥ ಚಿಂತಾಮಣಿ~ಯಂಥ ಅಪರೂಪದ ಮಾಲಿಕೆಯನ್ನು ರೂಪಿಸಿದ ಸಾಧನಗಾಥೆ ಇಲ್ಲಿದೆ. ಅಂತೆಯೇ ಶೈಕ್ಷಣಿಕವಾಗಿ ಸಾಕಷ್ಟು ಗಟ್ಟಿಗರಾದ (ವಿದೇಶದಲ್ಲಿಯೂ ಕಲಿತ) ಪಾಪು ಅವರು `ವಿಶಾಲ ಕರ್ನಾಟಕ~, `ನವಯುಗ~ಗಳಿಂದ `ಪ್ರಪಂಚ~ದವರೆಗೆ ಬೆಳೆದುಬಂದ ಹಾದಿಯ ವಿಶ್ಲೇಷಣೆಯಿದೆ. <br /> <br /> ಸಮಕಾಲೀನ ಸಂಗತಿಗಳಿಗೆ `ಪ್ರಪಂಚ~ ಕನ್ನಡಿಯಾಗಿದ್ದರೆ, ವೈವಿಧ್ಯಮಯ ಜಗತ್ತನ್ನು `ಕಸ್ತೂರಿ~ ಒಳಗೊಳ್ಳುತ್ತಿದ್ದುದನ್ನು ಜೋಶಿಯವರು ಸಕಾರಣವಾಗಿಯೇ ಗುರ್ತಿಸಿದ್ದಾರೆ.<br /> <br /> ಪಾವೆಂ ಅವರಲ್ಲಿ ಓರ್ವ ಕವಿಯನ್ನು ಗುರ್ತಿಸುವ ಅವರು, ಪಾಪು ಅವರನ್ನು ಎದೆಯಲ್ಲಿ ಕಿಚ್ಚುಳ್ಳ ಹೋರಾಟಗಾರನಂತೆ ಕಾಣುತ್ತಾರೆ. ಆಚಾರ್ಯರು ಲೇಖಕರನ್ನು ಹಾಗೂ ಪುಟ್ಟಪ್ಪನವರು ಪತ್ರಕರ್ತರನ್ನು ತಯಾರುಮಾಡಿದ್ದನ್ನೂ ಗುರ್ತಿಸುತ್ತಾರೆ.<br /> <br /> ವೃತ್ತಿಸಂಬಂಧ ವಿವರಗಳು ಮಾತ್ರವಲ್ಲದೆ, ಪಾವೆಂ ಹಾಗೂ ಪಾಪು ಅವರ ಕುಟುಂಬದ ವಿವರಗಳೂ (`ಸೌಭಾಗ್ಯವತಿಯರು) ಪುಸ್ತಕದಲ್ಲಿವೆ. ಈ ಇಬ್ಬರು ಗಣ್ಯರ ಬಗ್ಗೆ ಇತರ ಗಣ್ಯರು ವ್ಯಕ್ತಪಡಿಸಿರುವ ಅನಿಸಿಕೆಗಳೂ ಇಲ್ಲಿ ಸಂಗ್ರಹಗೊಂಡಿವೆ.<br /> <br /> ಪಾವೆಂ ಮತ್ತು ಪಾಪು ಅವರ ಬದುಕು - ಸಾಧನೆಯ ಬಗ್ಗೆ ಜೋಶಿ ಅವರ ಬರವಣಿಗೆ ಆಪ್ತವಾಗಿದೆ. ಈ ಆಪ್ತಗುಣ ಪುಸ್ತಕದ ಗುಣವೂ ಹೌದು, ಮಿತಿಯೂ ಹೌದು. ಒಂದು ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ನಿಷ್ಠುರ ವಿಮರ್ಶೆ ಸಾಧ್ಯವಾಗಿದ್ದರೆ ಪುಸ್ತಕದ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.<br /> <br /> ಆದರೆ, ಅಭಿಮಾನದ ಹಂತದಲ್ಲಿಯೇ ಇಲ್ಲಿನ ಬರವಣಿಗೆ ತೃಪ್ತಗೊಂಡಿದೆ. ಆದರೂ, ಸಹೃದಯರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇಬ್ಬರು ಧೀಮಂತರನ್ನು ಮುಖಾಮುಖಿಯಾಗಿಸುವ ಪರಿಚಯ ರೂಪದ ಪುಸ್ತಕವಾಗಿ ಇದು ಗಮನಸೆಳೆಯುತ್ತದೆ.<br /> <br /> <strong>`ಪ್ರಪಂಚ~ದ ಪಾಪು `ಕಸ್ತೂರಿ~ಯ ಪಾವೆಂ</strong><br /> ಲೇ: ಶಿವಾನಂದ ಜೋಶಿ; ಪು: 76; ಬೆ: ರೂ. 85; ಪ್ರ: ಚಿಂತನ ಪ್ರಕಾಶನ, ನಂ.5, ಪತ್ರಕರ್ತನಗರ, ನೃಪತುಂಗ ಬೆಟ್ಟ, ಹುಬ್ಬಳ್ಳಿ- 32.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರತಿಭೆ, ಬದ್ಧತೆ, ಸಾಮಾಜಿಕ ಕಾಳಜಿ ಹಾಗೂ ಒಳನೋಟಗಳಿಂದ ಕನ್ನಡ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ ಹಿರಿಯರ ಪಟ್ಟಿಯಲ್ಲಿ ಪಾ.ವೆಂ.ಆಚಾರ್ಯ ಹಾಗೂ ಪಾಟೀಲ ಪುಟ್ಟಪ್ಪ ಅವರದ್ದು ಎದ್ದುಕಾಣುವ ಹೆಸರುಗಳು. <br /> <br /> ಈ ಇಬ್ಬರ ಜೀವನ ಹಾಗೂ ಸಾಧನೆಯನ್ನು ಒಟ್ಟಿಗೆ ಕಾಣುವ ಪ್ರಯತ್ನವನ್ನು ಮತ್ತೊಬ್ಬ ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಮಾಡಿದ್ದಾರೆ. ಈ ಪ್ರಯತ್ನದ ಫಲ- `ಪ್ರಪಂಚದ ಪಾಪು; `ಕಸ್ತೂರಿ~ಯ ಪಾವೆಂ~ ಕೃತಿ.<br /> <br /> ಪಾವೆಂ ಹಾಗೂ ಪಾಪು ಅವರನ್ನು ಹತ್ತಿರದಿಂದ ಬಲ್ಲ ಜೋಶಿ ಅವರು, ಹಿರಿಯರೊಂದಿಗಿನ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಮೂಲಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವೈಯಕ್ತಿಕ ಬದುಕಿನಿಂದ ವೃತ್ತಿಬದುಕಿನವರೆಗೆ ಇಬ್ಬರ ನಡುವಣ ಸಾಮ್ಯಗಳನ್ನು ಗುರ್ತಿಸುವುದರ ಜೊತೆಗೆ, ಇಬ್ಬರ ಅನನ್ಯ ಗುಣವಿಶೇಷಗಳನ್ನು ಈ ಪುಟ್ಟ ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ. <br /> <br /> ಬಡ ಕುಟುಂಬದಿಂದ ಬಂದ, ಉನ್ನತ ಶಿಕ್ಷಣ ಪಡೆಯದ ಪಾವೆಂ ಅವರು `ಕಸ್ತೂರಿ~ ಡೈಜೆಸ್ಟ್ ಅನ್ನು ರೂಪಿಸಿದ ಹಾಗೂ `ಪದಾರ್ಥ ಚಿಂತಾಮಣಿ~ಯಂಥ ಅಪರೂಪದ ಮಾಲಿಕೆಯನ್ನು ರೂಪಿಸಿದ ಸಾಧನಗಾಥೆ ಇಲ್ಲಿದೆ. ಅಂತೆಯೇ ಶೈಕ್ಷಣಿಕವಾಗಿ ಸಾಕಷ್ಟು ಗಟ್ಟಿಗರಾದ (ವಿದೇಶದಲ್ಲಿಯೂ ಕಲಿತ) ಪಾಪು ಅವರು `ವಿಶಾಲ ಕರ್ನಾಟಕ~, `ನವಯುಗ~ಗಳಿಂದ `ಪ್ರಪಂಚ~ದವರೆಗೆ ಬೆಳೆದುಬಂದ ಹಾದಿಯ ವಿಶ್ಲೇಷಣೆಯಿದೆ. <br /> <br /> ಸಮಕಾಲೀನ ಸಂಗತಿಗಳಿಗೆ `ಪ್ರಪಂಚ~ ಕನ್ನಡಿಯಾಗಿದ್ದರೆ, ವೈವಿಧ್ಯಮಯ ಜಗತ್ತನ್ನು `ಕಸ್ತೂರಿ~ ಒಳಗೊಳ್ಳುತ್ತಿದ್ದುದನ್ನು ಜೋಶಿಯವರು ಸಕಾರಣವಾಗಿಯೇ ಗುರ್ತಿಸಿದ್ದಾರೆ.<br /> <br /> ಪಾವೆಂ ಅವರಲ್ಲಿ ಓರ್ವ ಕವಿಯನ್ನು ಗುರ್ತಿಸುವ ಅವರು, ಪಾಪು ಅವರನ್ನು ಎದೆಯಲ್ಲಿ ಕಿಚ್ಚುಳ್ಳ ಹೋರಾಟಗಾರನಂತೆ ಕಾಣುತ್ತಾರೆ. ಆಚಾರ್ಯರು ಲೇಖಕರನ್ನು ಹಾಗೂ ಪುಟ್ಟಪ್ಪನವರು ಪತ್ರಕರ್ತರನ್ನು ತಯಾರುಮಾಡಿದ್ದನ್ನೂ ಗುರ್ತಿಸುತ್ತಾರೆ.<br /> <br /> ವೃತ್ತಿಸಂಬಂಧ ವಿವರಗಳು ಮಾತ್ರವಲ್ಲದೆ, ಪಾವೆಂ ಹಾಗೂ ಪಾಪು ಅವರ ಕುಟುಂಬದ ವಿವರಗಳೂ (`ಸೌಭಾಗ್ಯವತಿಯರು) ಪುಸ್ತಕದಲ್ಲಿವೆ. ಈ ಇಬ್ಬರು ಗಣ್ಯರ ಬಗ್ಗೆ ಇತರ ಗಣ್ಯರು ವ್ಯಕ್ತಪಡಿಸಿರುವ ಅನಿಸಿಕೆಗಳೂ ಇಲ್ಲಿ ಸಂಗ್ರಹಗೊಂಡಿವೆ.<br /> <br /> ಪಾವೆಂ ಮತ್ತು ಪಾಪು ಅವರ ಬದುಕು - ಸಾಧನೆಯ ಬಗ್ಗೆ ಜೋಶಿ ಅವರ ಬರವಣಿಗೆ ಆಪ್ತವಾಗಿದೆ. ಈ ಆಪ್ತಗುಣ ಪುಸ್ತಕದ ಗುಣವೂ ಹೌದು, ಮಿತಿಯೂ ಹೌದು. ಒಂದು ಅಂತರ ಕಾಪಾಡಿಕೊಳ್ಳುವುದು ಸಾಧ್ಯವಾಗಿದ್ದರೆ, ನಿಷ್ಠುರ ವಿಮರ್ಶೆ ಸಾಧ್ಯವಾಗಿದ್ದರೆ ಪುಸ್ತಕದ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.<br /> <br /> ಆದರೆ, ಅಭಿಮಾನದ ಹಂತದಲ್ಲಿಯೇ ಇಲ್ಲಿನ ಬರವಣಿಗೆ ತೃಪ್ತಗೊಂಡಿದೆ. ಆದರೂ, ಸಹೃದಯರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇಬ್ಬರು ಧೀಮಂತರನ್ನು ಮುಖಾಮುಖಿಯಾಗಿಸುವ ಪರಿಚಯ ರೂಪದ ಪುಸ್ತಕವಾಗಿ ಇದು ಗಮನಸೆಳೆಯುತ್ತದೆ.<br /> <br /> <strong>`ಪ್ರಪಂಚ~ದ ಪಾಪು `ಕಸ್ತೂರಿ~ಯ ಪಾವೆಂ</strong><br /> ಲೇ: ಶಿವಾನಂದ ಜೋಶಿ; ಪು: 76; ಬೆ: ರೂ. 85; ಪ್ರ: ಚಿಂತನ ಪ್ರಕಾಶನ, ನಂ.5, ಪತ್ರಕರ್ತನಗರ, ನೃಪತುಂಗ ಬೆಟ್ಟ, ಹುಬ್ಬಳ್ಳಿ- 32.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>