<p><strong>ಬೆಂಗಳೂರು: </strong>`ನಿಮ್ಮ ಹಾಗೆ ನನಗೆ ಪ್ರಾಯೋಗಿಕ ಜ್ಞಾನ ಇಲ್ಲದಿರಬಹುದು. ಆದರೆ, ದೇವರು ಬುದ್ಧಿ ಕೊಟ್ಟಿದ್ದಾನೆ...'<br /> ಹೀಗೆ ತೀಕ್ಷ್ಣ ಮಾತುಗಳಿಂದ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಚುಚ್ಚಿದ್ದು ಅರಣ್ಯ ಸಚಿವ ಬಿ. ರಮಾನಾಥ ರೈ.<br /> ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಲ್.ಎ. ರವಿಸುಬ್ರಹ್ಮಣ್ಯ ಅವರು ಕಾಡಾನೆ ಹಾವಳಿ ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.<br /> <br /> `ಹಾವಳಿ ತಪ್ಪಿಸುವುದಕ್ಕೆ ಆನೆ ಕಾರಿಡಾರ್ ನಿರ್ಮಿಸುತ್ತಿದ್ದು, ಇದಕ್ಕಾಗಿ ರೂ. 109 ಕೋಟಿ ಯೋಜನೆ ಸಿದ್ಧವಾಗಿದೆ. ಮೂರು ವರ್ಷಗಳಲ್ಲಿ ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗು ವುದು' ಎಂದು ರೈ ವಿಧಾನಸಭೆಗೆ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಕೆ.ಜಿ.ಬೋಪಯ್ಯ ಅವರು `ಆನೆ ಕಾರಿಡಾರ್ ನಿರ್ಮಾಣಕ್ಕೆ ಕೊಡಗು ಜಿಲ್ಲೆ ಒಂದಕ್ಕೆ ಸುಮಾರು ರೂ. 50 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸ ಲಾಗಿದೆ. ಆದರೆ, ಈ ಸಲದ ಬಜೆಟ್ನಲ್ಲಿ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ ರೂ. 30 ಕೋಟಿ. ಈ ಹಣದಿಂದ ಆನೆ ಹಾವಳಿ ಹೇಗೆ ತಡೆಯುತ್ತೀರಿ' ಎಂದು ಪ್ರಶ್ನಿಸಿದರು.<br /> ಹೀಗೆ ಚರ್ಚೆ ನಡೆಯುತ್ತಿದ್ದ ವೇಳೆಯೇ ಅಪ್ಪಚ್ಚು ರಂಜನ್ ಅವರು `ಅರಣ್ಯ ಭಾಗದ ಶಾಸಕರನ್ನು ಅರಣ್ಯ ಮಂತ್ರಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ನೀವು ಕರಾವಳಿ ಭಾಗದವರು' ಎಂದು ಕಿಚಾಯಿಸಿದರು.<br /> <br /> ಇದು ರೈ ಅವರಿಗೆ ಕೇಳಿಸಲಿಲ್ಲ. ನಂತರ ಅವರ ಪಕ್ಕದಲ್ಲೇ ಇದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ರೈ ಅವರಿಗೆ ಅಪ್ಪಚ್ಚು ಹೇಳಿದ್ದನ್ನು ವಿವರಿಸಿದರು.<br /> <br /> ಆಗ ಸಿಟ್ಟಾದ ರೈ ಅವರು `ಅಪ್ಪಚ್ಚು, ನೀವು ಹೇಳಿದ್ದನ್ನು ಮತ್ತೊಮ್ಮೆ ಹೇಳಿ ಎಂದು ಗದರಿಸಿದರು. ನಾನು ಕರಾವಳಿ ಯವ ಇರಬಹುದು. ಆದರೆ, ನನಗೆ ದೇವರು ಬುದ್ಧಿ ಕೊಟ್ಟಿದ್ದಾನೆ. ಜನಪರ ವಾದ ತೀರ್ಮಾನಗಳನ್ನು ತೆಗೆದು ಕೊಳ್ಳಲು ಯಾವ ಪ್ರಾಯೋಗಿಕ ಜ್ಞಾನವೂ ಅಗತ್ಯ ಇಲ್ಲ' ಎಂದು ತಿರುಗೇಟು ನೀಡಿದರು.<br /> <br /> ನಂತರ ಅಪ್ಪಚ್ಚು ಅವರು `ಅಲ್ಲಾ ಸಾರ್, ನಿಮ್ಮ ಬಗ್ಗೆ ಗೌರವ ಇದೆ. ಬೇಸರ ಮಾಡಿಕೊಳ್ಳಬೇಡಿ. ನಾನು ಅರಣ್ಯ ಭಾಗದವರೇ ಅರಣ್ಯ ಸಚಿವರಾ ಗಿದ್ದರೆ ಸಮಸ್ಯೆಗಳಿಗೆ ಬೇಗ ಸ್ಪಂದಿಸಲು ಅನುಕೂಲ ಆಗುತ್ತಿತ್ತು ಎಂದು ಹೇಳಿದೆ. ಇದರಲ್ಲಿ ಬೇಸರದ ವಿಷಯ ಏನೂ ಇಲ್ಲ' ಎಂದು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ನಿಮ್ಮ ಹಾಗೆ ನನಗೆ ಪ್ರಾಯೋಗಿಕ ಜ್ಞಾನ ಇಲ್ಲದಿರಬಹುದು. ಆದರೆ, ದೇವರು ಬುದ್ಧಿ ಕೊಟ್ಟಿದ್ದಾನೆ...'<br /> ಹೀಗೆ ತೀಕ್ಷ್ಣ ಮಾತುಗಳಿಂದ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಚುಚ್ಚಿದ್ದು ಅರಣ್ಯ ಸಚಿವ ಬಿ. ರಮಾನಾಥ ರೈ.<br /> ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಲ್.ಎ. ರವಿಸುಬ್ರಹ್ಮಣ್ಯ ಅವರು ಕಾಡಾನೆ ಹಾವಳಿ ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.<br /> <br /> `ಹಾವಳಿ ತಪ್ಪಿಸುವುದಕ್ಕೆ ಆನೆ ಕಾರಿಡಾರ್ ನಿರ್ಮಿಸುತ್ತಿದ್ದು, ಇದಕ್ಕಾಗಿ ರೂ. 109 ಕೋಟಿ ಯೋಜನೆ ಸಿದ್ಧವಾಗಿದೆ. ಮೂರು ವರ್ಷಗಳಲ್ಲಿ ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗು ವುದು' ಎಂದು ರೈ ವಿಧಾನಸಭೆಗೆ ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಕೆ.ಜಿ.ಬೋಪಯ್ಯ ಅವರು `ಆನೆ ಕಾರಿಡಾರ್ ನಿರ್ಮಾಣಕ್ಕೆ ಕೊಡಗು ಜಿಲ್ಲೆ ಒಂದಕ್ಕೆ ಸುಮಾರು ರೂ. 50 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸ ಲಾಗಿದೆ. ಆದರೆ, ಈ ಸಲದ ಬಜೆಟ್ನಲ್ಲಿ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ ರೂ. 30 ಕೋಟಿ. ಈ ಹಣದಿಂದ ಆನೆ ಹಾವಳಿ ಹೇಗೆ ತಡೆಯುತ್ತೀರಿ' ಎಂದು ಪ್ರಶ್ನಿಸಿದರು.<br /> ಹೀಗೆ ಚರ್ಚೆ ನಡೆಯುತ್ತಿದ್ದ ವೇಳೆಯೇ ಅಪ್ಪಚ್ಚು ರಂಜನ್ ಅವರು `ಅರಣ್ಯ ಭಾಗದ ಶಾಸಕರನ್ನು ಅರಣ್ಯ ಮಂತ್ರಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ನೀವು ಕರಾವಳಿ ಭಾಗದವರು' ಎಂದು ಕಿಚಾಯಿಸಿದರು.<br /> <br /> ಇದು ರೈ ಅವರಿಗೆ ಕೇಳಿಸಲಿಲ್ಲ. ನಂತರ ಅವರ ಪಕ್ಕದಲ್ಲೇ ಇದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ರೈ ಅವರಿಗೆ ಅಪ್ಪಚ್ಚು ಹೇಳಿದ್ದನ್ನು ವಿವರಿಸಿದರು.<br /> <br /> ಆಗ ಸಿಟ್ಟಾದ ರೈ ಅವರು `ಅಪ್ಪಚ್ಚು, ನೀವು ಹೇಳಿದ್ದನ್ನು ಮತ್ತೊಮ್ಮೆ ಹೇಳಿ ಎಂದು ಗದರಿಸಿದರು. ನಾನು ಕರಾವಳಿ ಯವ ಇರಬಹುದು. ಆದರೆ, ನನಗೆ ದೇವರು ಬುದ್ಧಿ ಕೊಟ್ಟಿದ್ದಾನೆ. ಜನಪರ ವಾದ ತೀರ್ಮಾನಗಳನ್ನು ತೆಗೆದು ಕೊಳ್ಳಲು ಯಾವ ಪ್ರಾಯೋಗಿಕ ಜ್ಞಾನವೂ ಅಗತ್ಯ ಇಲ್ಲ' ಎಂದು ತಿರುಗೇಟು ನೀಡಿದರು.<br /> <br /> ನಂತರ ಅಪ್ಪಚ್ಚು ಅವರು `ಅಲ್ಲಾ ಸಾರ್, ನಿಮ್ಮ ಬಗ್ಗೆ ಗೌರವ ಇದೆ. ಬೇಸರ ಮಾಡಿಕೊಳ್ಳಬೇಡಿ. ನಾನು ಅರಣ್ಯ ಭಾಗದವರೇ ಅರಣ್ಯ ಸಚಿವರಾ ಗಿದ್ದರೆ ಸಮಸ್ಯೆಗಳಿಗೆ ಬೇಗ ಸ್ಪಂದಿಸಲು ಅನುಕೂಲ ಆಗುತ್ತಿತ್ತು ಎಂದು ಹೇಳಿದೆ. ಇದರಲ್ಲಿ ಬೇಸರದ ವಿಷಯ ಏನೂ ಇಲ್ಲ' ಎಂದು ಸಮಜಾಯಿಷಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>