<p><strong>ಬೆಂಗಳೂರು:</strong> ಪ್ರೆಸ್ಕ್ಲಬ್ ಆವರಣದಲ್ಲಿದ್ದ ಎರಡು ಗಂಧದ ಮರಗಳನ್ನು ಕಳ್ಳರು ಶುಕ್ರವಾರ ಮುಂಜಾನೆ ಕಳವು ಮಾಡಿರುವ ಘಟನೆ ನಡೆದಿದೆ.<br /> <br /> ಕ್ಲಬ್ ದ್ವಾರದ ಎಡಭಾಗದಲ್ಲಿದ್ದ ಮರಗಳನ್ನು ಕಡಿದಿರುವ ಕಳ್ಳರು, ನಂತರ ಗೊತ್ತಾಗದಂತೆ ವಾಹನಗಳಲ್ಲಿ ಸಾಗಿಸಿದ್ದಾರೆ. ಬೆಳಿಗ್ಗೆ 8.30ರ ಸುಮಾರಿಗೆ ಕಾರ್ಮಿಕರು ಕ್ಲಬ್ ಆವರಣವನ್ನು ಸ್ವಚ್ಛಗೊಳಿಸುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದರು.<br /> <br /> ದ್ವಾರದ ಬಳಿ ರಾತ್ರಿ 2 ಗಂಟೆ ಸುಮಾರಿಗೆ ಬಂದು ಹೋಗಿದ್ದ ಕ್ಲಬ್ನ ಭದ್ರತಾ ಸಿಬ್ಬಂದಿ, ನಂತರ ಒಳಗಡೆ ಹೋಗಿ ಮಲಗಿದ್ದಾಗಿ ತಿಳಿಸಿದ್ದಾರೆ. ಬೆಳಗ್ಗಿನ ಜಾವ 2ರಿಂದ 4ರ ಅವಧಿಯಲ್ಲಿ ಮರಗಳನ್ನು ಕಡಿದಿರುವ ಕಳ್ಳರು, ನಂತರ ಯಾರಿಗೂ ಗೊತ್ತಾಗದಂತೆ ಕಡಿದ ಜಾಗವನ್ನು ಸೊಪ್ಪುಗಳಿಂದ ಮುಚ್ಚಿದ್ದಾರೆ ಎಂದು ಪೊಲೀಸರು ಹೇಳಿದರು.<br /> <br /> ಸಾಮಾನ್ಯವಾಗಿ ಕ್ಲಬ್ನಲ್ಲಿ ಮಧ್ಯರಾತ್ರಿವರೆಗೆ ಯಾರಾದರೂ ಇದ್ದೇ ಇರುತ್ತಾರೆ. ಹಾಗಾಗಿ, ಇಲ್ಲಿಗೆ ಬರುವವರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಬಹಳ ದಿನಗಳಿಂದ ಗಮನಿಸಿರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದರು.<br /> <br /> ಘಟನೆ ಸಂಬಂಧ ಪ್ರೆಸ್ಕ್ಲಬ್ನ ಅಧ್ಯಕ್ಷರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕ್ಲಬ್ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಅದರಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದ್ದು, ಕಳ್ಳರ ಗುರುತು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಪೊಲೀಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರೆಸ್ಕ್ಲಬ್ ಆವರಣದಲ್ಲಿದ್ದ ಎರಡು ಗಂಧದ ಮರಗಳನ್ನು ಕಳ್ಳರು ಶುಕ್ರವಾರ ಮುಂಜಾನೆ ಕಳವು ಮಾಡಿರುವ ಘಟನೆ ನಡೆದಿದೆ.<br /> <br /> ಕ್ಲಬ್ ದ್ವಾರದ ಎಡಭಾಗದಲ್ಲಿದ್ದ ಮರಗಳನ್ನು ಕಡಿದಿರುವ ಕಳ್ಳರು, ನಂತರ ಗೊತ್ತಾಗದಂತೆ ವಾಹನಗಳಲ್ಲಿ ಸಾಗಿಸಿದ್ದಾರೆ. ಬೆಳಿಗ್ಗೆ 8.30ರ ಸುಮಾರಿಗೆ ಕಾರ್ಮಿಕರು ಕ್ಲಬ್ ಆವರಣವನ್ನು ಸ್ವಚ್ಛಗೊಳಿಸುವಾಗ ಘಟನೆ ಬೆಳಕಿಗೆ ಬಂದಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದರು.<br /> <br /> ದ್ವಾರದ ಬಳಿ ರಾತ್ರಿ 2 ಗಂಟೆ ಸುಮಾರಿಗೆ ಬಂದು ಹೋಗಿದ್ದ ಕ್ಲಬ್ನ ಭದ್ರತಾ ಸಿಬ್ಬಂದಿ, ನಂತರ ಒಳಗಡೆ ಹೋಗಿ ಮಲಗಿದ್ದಾಗಿ ತಿಳಿಸಿದ್ದಾರೆ. ಬೆಳಗ್ಗಿನ ಜಾವ 2ರಿಂದ 4ರ ಅವಧಿಯಲ್ಲಿ ಮರಗಳನ್ನು ಕಡಿದಿರುವ ಕಳ್ಳರು, ನಂತರ ಯಾರಿಗೂ ಗೊತ್ತಾಗದಂತೆ ಕಡಿದ ಜಾಗವನ್ನು ಸೊಪ್ಪುಗಳಿಂದ ಮುಚ್ಚಿದ್ದಾರೆ ಎಂದು ಪೊಲೀಸರು ಹೇಳಿದರು.<br /> <br /> ಸಾಮಾನ್ಯವಾಗಿ ಕ್ಲಬ್ನಲ್ಲಿ ಮಧ್ಯರಾತ್ರಿವರೆಗೆ ಯಾರಾದರೂ ಇದ್ದೇ ಇರುತ್ತಾರೆ. ಹಾಗಾಗಿ, ಇಲ್ಲಿಗೆ ಬರುವವರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಬಹಳ ದಿನಗಳಿಂದ ಗಮನಿಸಿರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದರು.<br /> <br /> ಘಟನೆ ಸಂಬಂಧ ಪ್ರೆಸ್ಕ್ಲಬ್ನ ಅಧ್ಯಕ್ಷರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕ್ಲಬ್ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಅದರಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದ್ದು, ಕಳ್ಳರ ಗುರುತು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಪೊಲೀಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>