<p><strong>ಮಂಡ್ಯ</strong>: ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಿರುವ ಸರ್ಕಾರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿದ್ದಂಥ ಪ್ರೋತ್ಸಾಹಧನವನ್ನು ರೂ15,000 ಏರಿಸಿದೆ.<br /> ಈವರೆವಿಗೂ, ನಿರ್ಮಲ ಭಾರತ ಅಭಿಯಾನ (ಎನ್.ಬಿ.ಎ.) ಯೋಜನೆಯಡಿ ರೂ10,000 ಮಾತ್ರ ನೀಡಲಾಗುತ್ತಿತ್ತು. ಈಗ, ಈ ಮೊತ್ತವು 15 ಸಾವಿರಕ್ಕೆ ಹೆಚ್ಚಳವಾಗಿದೆ.<br /> <br /> ಎನ್ಬಿಎ ಯೋಜನೆಯಡಿ ರೂ 4,700; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ 4,500 ಹಾಗೂ ಫಲಾನುಭವಿಯ ವಂತಿಕೆ ರೂ 800 ಸೇರಿದಂತೆ ಒಟ್ಟು ರೂ10,000. ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು.<br /> <br /> ಈಗ ಹೆಚ್ಚುವರಿಯಾಗಿ ನೀಡುತ್ತಿರುವ ರೂ5,000 ಅನ್ನು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆ (ಎಸ್ಸಿಪಿ) ಹಾಗೂ ಪರಿಶಿಷ್ಟ ವರ್ಗ ಉಪ ಯೋಜನೆ (ಟಿಎಸ್ಪಿ) ಅಡಿಯಲ್ಲಿ ಭರಿಸಲಾಗುತ್ತಿದೆ.<br /> <br /> ಈವೊಂದು ಆರ್ಥಿಕ ನೆರವು ಎಲ್ಲ ಬಿಪಿಎಲ್ ಮತ್ತು ನಿರ್ಬಂಧಿತ ಎಪಿಎಲ್ (ಎಸ್ಸಿ/ಎಸ್ಟಿ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು, ಮಹಿಳಾ ಪ್ರಧಾನ ಹಾಗೂ ಅಂಗವಿಕಲ ಕುಟುಂಬಗಳು) ಕುಟುಂಬಗಳಿಗೆ ಸಿಗಲಿದೆ. 2013ರ ನ. 13 ರಿಂದ ಅನ್ವಯವಾಗುವಂತೆ, ಅಪೂರ್ಣವಾಗಿರುವ ಅಥವಾ ಪ್ರಾರಂಭವಾಗುವ ಗ್ರಾಮೀಣ ಪ್ರದೇಶದಲ್ಲಿನ ಈ ವರ್ಗಗಳ ಕುಟುಂಬಗಳಿಗೆ ಗೃಹ ಶೌಚಾಲಯ ಹೊಂದಲು ಪ್ರತಿ ಘಟಕಕ್ಕೆ 15 ಸಾವಿರ ರೂ. ದೊರೆಯಲಿದೆ.<br /> <br /> ಪ್ರಸಕ್ತ ಸಾಲಿನಲ್ಲಿ ರೂಪಿಸಿರುವ ಕ್ರಿಯಾ ಯೋಜನೆ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3,609 ಕುಟುಂಬಗಳಿಗೆ ಈ ನೆರವು ದೊರೆಯಲಿದೆ. ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಎಸ್ಸಿ –2,202, ಎಸ್ಟಿ –211 ಹಾಗೂ ನಿರ್ಬಂಧಿತ ಎಪಿಎಲ್ ಎಸ್ಸಿ –1,045 ಹಾಗೂ ಎಸ್ಟಿ –151 ಕುಟುಂಬಗಳು ಸೇರಿವೆ.<br /> <br /> <strong>ಷರತ್ತುಗಳೇನು?: </strong>ಸಂಪೂರ್ಣ ಸ್ವಚ್ಛತಾ ಆಂದೋಲನ (ಟಿಎಸ್ಸಿ)/ಎನ್.ಬಿ.ಎ. ಅಥವಾ ಇನ್ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ ಪಡೆಯದೇ ಇರುವವರನ್ನು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಬೇಕಿರುತ್ತದೆ. ಇದಕ್ಕಾಗಿ ಪ್ರತ್ಯೇಕ ಪುಸ್ತಕವನ್ನು ಗ್ರಾಪಂ ಸಿಬ್ಬಂದಿ ನಿರ್ವಹಣೆ ಮಾಡಬೇಕಿದೆ.<br /> <br /> ಗೃಹ ಶೌಚಾಲಯ ನಿರ್ಮಾಣದ ನಂತರ ಒಂದೇ ಕಂತಿನಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.<br /> <br /> ಎನ್ಬಿಎ ನೋಡೆಲ್ ಅಧಿಕಾರಿಗಳು ಹಾಗೂ ಜಿಲ್ಲಾ/ತಾಲ್ಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ವಹಣೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಿರುವ ಸರ್ಕಾರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿದ್ದಂಥ ಪ್ರೋತ್ಸಾಹಧನವನ್ನು ರೂ15,000 ಏರಿಸಿದೆ.<br /> ಈವರೆವಿಗೂ, ನಿರ್ಮಲ ಭಾರತ ಅಭಿಯಾನ (ಎನ್.ಬಿ.ಎ.) ಯೋಜನೆಯಡಿ ರೂ10,000 ಮಾತ್ರ ನೀಡಲಾಗುತ್ತಿತ್ತು. ಈಗ, ಈ ಮೊತ್ತವು 15 ಸಾವಿರಕ್ಕೆ ಹೆಚ್ಚಳವಾಗಿದೆ.<br /> <br /> ಎನ್ಬಿಎ ಯೋಜನೆಯಡಿ ರೂ 4,700; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ 4,500 ಹಾಗೂ ಫಲಾನುಭವಿಯ ವಂತಿಕೆ ರೂ 800 ಸೇರಿದಂತೆ ಒಟ್ಟು ರೂ10,000. ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು.<br /> <br /> ಈಗ ಹೆಚ್ಚುವರಿಯಾಗಿ ನೀಡುತ್ತಿರುವ ರೂ5,000 ಅನ್ನು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆ (ಎಸ್ಸಿಪಿ) ಹಾಗೂ ಪರಿಶಿಷ್ಟ ವರ್ಗ ಉಪ ಯೋಜನೆ (ಟಿಎಸ್ಪಿ) ಅಡಿಯಲ್ಲಿ ಭರಿಸಲಾಗುತ್ತಿದೆ.<br /> <br /> ಈವೊಂದು ಆರ್ಥಿಕ ನೆರವು ಎಲ್ಲ ಬಿಪಿಎಲ್ ಮತ್ತು ನಿರ್ಬಂಧಿತ ಎಪಿಎಲ್ (ಎಸ್ಸಿ/ಎಸ್ಟಿ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು, ಮಹಿಳಾ ಪ್ರಧಾನ ಹಾಗೂ ಅಂಗವಿಕಲ ಕುಟುಂಬಗಳು) ಕುಟುಂಬಗಳಿಗೆ ಸಿಗಲಿದೆ. 2013ರ ನ. 13 ರಿಂದ ಅನ್ವಯವಾಗುವಂತೆ, ಅಪೂರ್ಣವಾಗಿರುವ ಅಥವಾ ಪ್ರಾರಂಭವಾಗುವ ಗ್ರಾಮೀಣ ಪ್ರದೇಶದಲ್ಲಿನ ಈ ವರ್ಗಗಳ ಕುಟುಂಬಗಳಿಗೆ ಗೃಹ ಶೌಚಾಲಯ ಹೊಂದಲು ಪ್ರತಿ ಘಟಕಕ್ಕೆ 15 ಸಾವಿರ ರೂ. ದೊರೆಯಲಿದೆ.<br /> <br /> ಪ್ರಸಕ್ತ ಸಾಲಿನಲ್ಲಿ ರೂಪಿಸಿರುವ ಕ್ರಿಯಾ ಯೋಜನೆ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3,609 ಕುಟುಂಬಗಳಿಗೆ ಈ ನೆರವು ದೊರೆಯಲಿದೆ. ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಎಸ್ಸಿ –2,202, ಎಸ್ಟಿ –211 ಹಾಗೂ ನಿರ್ಬಂಧಿತ ಎಪಿಎಲ್ ಎಸ್ಸಿ –1,045 ಹಾಗೂ ಎಸ್ಟಿ –151 ಕುಟುಂಬಗಳು ಸೇರಿವೆ.<br /> <br /> <strong>ಷರತ್ತುಗಳೇನು?: </strong>ಸಂಪೂರ್ಣ ಸ್ವಚ್ಛತಾ ಆಂದೋಲನ (ಟಿಎಸ್ಸಿ)/ಎನ್.ಬಿ.ಎ. ಅಥವಾ ಇನ್ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ ಪಡೆಯದೇ ಇರುವವರನ್ನು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಬೇಕಿರುತ್ತದೆ. ಇದಕ್ಕಾಗಿ ಪ್ರತ್ಯೇಕ ಪುಸ್ತಕವನ್ನು ಗ್ರಾಪಂ ಸಿಬ್ಬಂದಿ ನಿರ್ವಹಣೆ ಮಾಡಬೇಕಿದೆ.<br /> <br /> ಗೃಹ ಶೌಚಾಲಯ ನಿರ್ಮಾಣದ ನಂತರ ಒಂದೇ ಕಂತಿನಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.<br /> <br /> ಎನ್ಬಿಎ ನೋಡೆಲ್ ಅಧಿಕಾರಿಗಳು ಹಾಗೂ ಜಿಲ್ಲಾ/ತಾಲ್ಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ವಹಣೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>