<p><strong>ಕಾರವಾರ: </strong>ಶಿರಸಿ ಮತ್ತು ಹಾವೇರಿ ತಂಡದವರು ಇಲ್ಲಿ ಸೋಮವಾರ ಆರಂಭಗೊಂಡ ಬೆಳಗಾವಿ ವಿಭಾಗಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.<br /> <br /> ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಬಾಲಕಿಯರ ಮೊದಲ ಸೆಮಿಫೈನಲ್ ಪಂದ್ಯಗಳಲ್ಲಿ ಶಿರಸಿ ತಂಡ ಬೆಳಗಾವಿ ತಂಡವನ್ನು ಮಣಿಸಿತು. ಎರಡನೇ ಸೆಮಿಫೈನಲ್ನಲ್ಲಿ ಹಾವೇರಿ ತಂಡ ವಿಜಾಪುರ ತಂಡವನ್ನು ಸೋಲಿಸಿತು.<br /> <br /> ಬಾಲಕರ ವಿಭಾಗದಲ್ಲಿ ಕಾರವಾರ ಮತ್ತು ಬಾಗಲಕೋಟೆ ತಂಡಗಳು ಮೊದಲ ಸೆಮಿಫೈನಲ್ನಲ್ಲಿ ಸೆಣಸಲಿದ್ದು ಶಿರಸಿ ಮತ್ತು ಹಾವೇರಿ ತಂಡಗಳು ಎರಡನೇ ಸೆಮಿಫೈನಲ್ನಲ್ಲಿ ಎದುರಾಗಲಿವೆ. ಮಂಗಳವಾರ ಈ ಪಂದ್ಯಗಳು ನಡೆಯಲಿವೆ.<br /> <br /> ಅವ್ಯವಸ್ಥೆಯ ಗೂಡಾದ ಕ್ರೀಡಾಕೂಟ: ಪಂದ್ಯದ ವೇಳೆ ಬಾಲಕಿಯೊಬ್ಬಳು ತಲೆ ಸುತ್ತು ಬಂದು ಕುಸಿದು ಬಿದ್ದಳು. ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ.<br /> <br /> ಅವ್ಯವಸ್ಥೆಗಳ ಬಗ್ಗೆ ಆಯಾ ವಿಭಾಗದಿಂದ ಬಂದಿದ್ದ ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ನಾರಾಯಣ ಗೌಡ ಅವರ ಬಳಿ ದೂರಿದರು.<br /> <br /> ವಿಭಾಗ ಮಟ್ಟದಲ್ಲಿ ಕನಿಷ್ಠ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ದೈಹಿಕ ಶಿಕ್ಷಣ ಶಿಕ್ಷಕರು ಕಿಡಿ ಕಾರಿದರು.<br /> <br /> ಕೊನೆಗೆ ಎಚ್ಚೆತ್ತುಕೊಂಡ ಆಯೋಜಕರು ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ‘ನಮ್ಮ ಊರಿನಿಂದ ಕಾರವಾರಕ್ಕೆ ಬಂದು ಹಿಂದಿರುಗಲು ಪ್ರತಿಯೊಬ್ಬರಿಗೆ ₨ 512 ಪ್ರಯಾಣ ವೆಚ್ಚವಿದೆ. ಅದನ್ನು ಶಿಕ್ಷಕ ಹಾಗೂ ವಿದ್ಯಾರ್ಥಿಗಳೇ ಭರಿಸಿದ್ದಾರೆ.<br /> <br /> ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜಿಸಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲಾಖೆ ಮಾಡಿಲ್ಲ. ಪ್ರಥಮ ಚಿಕಿತ್ಸೆಗೂ ಅವಕಾಶವಿಲ್ಲ’ ಎಂದು ಬಾಗಲಕೋಟೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಶಿರಸಿ ಮತ್ತು ಹಾವೇರಿ ತಂಡದವರು ಇಲ್ಲಿ ಸೋಮವಾರ ಆರಂಭಗೊಂಡ ಬೆಳಗಾವಿ ವಿಭಾಗಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.<br /> <br /> ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಬಾಲಕಿಯರ ಮೊದಲ ಸೆಮಿಫೈನಲ್ ಪಂದ್ಯಗಳಲ್ಲಿ ಶಿರಸಿ ತಂಡ ಬೆಳಗಾವಿ ತಂಡವನ್ನು ಮಣಿಸಿತು. ಎರಡನೇ ಸೆಮಿಫೈನಲ್ನಲ್ಲಿ ಹಾವೇರಿ ತಂಡ ವಿಜಾಪುರ ತಂಡವನ್ನು ಸೋಲಿಸಿತು.<br /> <br /> ಬಾಲಕರ ವಿಭಾಗದಲ್ಲಿ ಕಾರವಾರ ಮತ್ತು ಬಾಗಲಕೋಟೆ ತಂಡಗಳು ಮೊದಲ ಸೆಮಿಫೈನಲ್ನಲ್ಲಿ ಸೆಣಸಲಿದ್ದು ಶಿರಸಿ ಮತ್ತು ಹಾವೇರಿ ತಂಡಗಳು ಎರಡನೇ ಸೆಮಿಫೈನಲ್ನಲ್ಲಿ ಎದುರಾಗಲಿವೆ. ಮಂಗಳವಾರ ಈ ಪಂದ್ಯಗಳು ನಡೆಯಲಿವೆ.<br /> <br /> ಅವ್ಯವಸ್ಥೆಯ ಗೂಡಾದ ಕ್ರೀಡಾಕೂಟ: ಪಂದ್ಯದ ವೇಳೆ ಬಾಲಕಿಯೊಬ್ಬಳು ತಲೆ ಸುತ್ತು ಬಂದು ಕುಸಿದು ಬಿದ್ದಳು. ಕ್ರೀಡಾಂಗಣದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯ ಕಲ್ಪಿಸಿರಲಿಲ್ಲ. ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ.<br /> <br /> ಅವ್ಯವಸ್ಥೆಗಳ ಬಗ್ಗೆ ಆಯಾ ವಿಭಾಗದಿಂದ ಬಂದಿದ್ದ ದೈಹಿಕ ಶಿಕ್ಷಣ ಶಿಕ್ಷಕರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ನಾರಾಯಣ ಗೌಡ ಅವರ ಬಳಿ ದೂರಿದರು.<br /> <br /> ವಿಭಾಗ ಮಟ್ಟದಲ್ಲಿ ಕನಿಷ್ಠ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ದೈಹಿಕ ಶಿಕ್ಷಣ ಶಿಕ್ಷಕರು ಕಿಡಿ ಕಾರಿದರು.<br /> <br /> ಕೊನೆಗೆ ಎಚ್ಚೆತ್ತುಕೊಂಡ ಆಯೋಜಕರು ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ‘ನಮ್ಮ ಊರಿನಿಂದ ಕಾರವಾರಕ್ಕೆ ಬಂದು ಹಿಂದಿರುಗಲು ಪ್ರತಿಯೊಬ್ಬರಿಗೆ ₨ 512 ಪ್ರಯಾಣ ವೆಚ್ಚವಿದೆ. ಅದನ್ನು ಶಿಕ್ಷಕ ಹಾಗೂ ವಿದ್ಯಾರ್ಥಿಗಳೇ ಭರಿಸಿದ್ದಾರೆ.<br /> <br /> ವಿಭಾಗ ಮಟ್ಟದ ಕ್ರೀಡಾಕೂಟ ಆಯೋಜಿಸಿ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನು ಇಲಾಖೆ ಮಾಡಿಲ್ಲ. ಪ್ರಥಮ ಚಿಕಿತ್ಸೆಗೂ ಅವಕಾಶವಿಲ್ಲ’ ಎಂದು ಬಾಗಲಕೋಟೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>