<p><strong>ಉಡುಪಿ: </strong>ತಾಲ್ಲೂಕಿನ ಪಿಲಾರು ಗ್ರಾಮದಲ್ಲಿ ಫ್ರಾನ್ಸಿಸ್ ಕುತಿಂಜ್ಞ ಎಂಬವರ ಮಾಲೀಕತ್ವದ 1.59 ಎಕರೆ ಜಮೀನು ಲಪಟಾಯಿಸಲು ನಕಲಿ ಕ್ರಯಪತ್ರ ಮಾಡಿದ್ದ 13 ವರ್ಷಗಳ ಹಿಂದಿನ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇವರಲ್ಲಿ ಇಬ್ಬರಿಗೆ ತಲಾ 6 ವರ್ಷ ಜೈಲು ಹಾಗೂ ರೂ. 24 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 18 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶಿಸಿದೆ.<br /> <br /> <strong>ಶಿಕ್ಷೆಗೊಳಗಾದವರು: </strong> ಪಿಲಾರು ಗ್ರಾಮದ ಪ್ರಾನ್ಸಿಸ್ ಇಗ್ನೇಷಿಯಸ್ ಡಿಸೋಜ (42), ರೊನಾಲ್ಡ್ ಗೋಮ್ಸ (31), ರಾಖಿ ಡಿಸೋಜ (33), ರತ್ನಪ್ಪ (80). 4ನೇ ಆರೋಪಿ ಇತ್ತೀಚೆಗೆ ಮೃತಪಟ್ಟಿದ್ದಾರೆ. <br /> <br /> <strong>ವಿವರ:</strong> ಫ್ರಾನ್ಸಿಸ್ ಕುತಿಂಜ್ಞ ಇರುವಿಕೆ ಹಲವು ವರ್ಷ ಯಾರಿಗೂ ತಿಳಿಯದ ಕಾರಣ ದುರ್ಲಾಭ ಪಡೆಯಲು ಮುಂದಾದ ಅಪರಾಧಿಗಳು 1998ರಲ್ಲಿ ಸರ್ವೆ ನಂ.101/5ರಲ್ಲಿನ ಜಮೀನಿಗೆ ನಕಲಿ ಕ್ರಯಪತ್ರ ತಯಾರಿಸಿ ಮುಲ್ಕಿ ಉಪ ನೋಂದಣಿಕಾರಿ ಮುಂದೆ ಹಾಜರಾಗಿ ನಕಲಿ ಸಹಿಯನ್ನೂ ಮಾಡಿ ಸಾಕ್ಷಿಯನ್ನೂ ಹಾಕಿದ್ದರು. <br /> ಫ್ರಾನ್ಸಿಸ್ ಎಂಬವರು ಜಮೀನಿನಲ್ಲಿ ಮಾಲೀಕತ್ವ ಸ್ಥಾಪಿಸಲು ಸಹಕರಿಸಿದ್ದರು.<br /> <br /> ನಂತರ ಫ್ರಾನ್ಸಿಸ್ ಆರ್.ಟಿ.ಸಿ.ಯಲ್ಲಿ ತಮ್ಮ ಹೆಸರಿಗೆ ಮಾಲೀಕತ್ವ ಬದಲಿಸಲು ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ಈ ವಿಚಾರ ತಿಳಿದ ಜೆರಾಲ್ಡ್ ಲೋಬೊ, ಎಲ್ಲಾ 4 ಆರೋಪಿಗಳ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.<br /> <br /> ಅಂದಿನ ಪಿಎಸ್ಐ ಬಶೀರ್ ಅಹಮ್ಮದ್ ಪ್ರಕರಣ ದಾಖಲಿಸಿ ಇನ್ಸ್ಪೆಕ್ಟರ್ ಎಂ.ಐ.ಜಮೀಲ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.<br /> <br /> ನ್ಯಾಯಾಲಯದಲ್ಲಿ 13 ವರ್ಷ ಸುದೀರ್ಘ ವಿಚಾರಣೆ ನಡೆದು ಪ್ರಾಸಿಕ್ಯೂಷನ್ ಪರ 19 ಮಂದಿ ಸಾಕ್ಷ್ಯ ಹೇಳಿದ್ದರು. ನ್ಯಾಯಾಧೀಶ ಎಂ.ಸಿ.ನಂಜೇಗೌಡ ಫೆ. 28ರಂದು ತೀರ್ಪು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ತಾಲ್ಲೂಕಿನ ಪಿಲಾರು ಗ್ರಾಮದಲ್ಲಿ ಫ್ರಾನ್ಸಿಸ್ ಕುತಿಂಜ್ಞ ಎಂಬವರ ಮಾಲೀಕತ್ವದ 1.59 ಎಕರೆ ಜಮೀನು ಲಪಟಾಯಿಸಲು ನಕಲಿ ಕ್ರಯಪತ್ರ ಮಾಡಿದ್ದ 13 ವರ್ಷಗಳ ಹಿಂದಿನ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇವರಲ್ಲಿ ಇಬ್ಬರಿಗೆ ತಲಾ 6 ವರ್ಷ ಜೈಲು ಹಾಗೂ ರೂ. 24 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 18 ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆಯೂ ಆದೇಶಿಸಿದೆ.<br /> <br /> <strong>ಶಿಕ್ಷೆಗೊಳಗಾದವರು: </strong> ಪಿಲಾರು ಗ್ರಾಮದ ಪ್ರಾನ್ಸಿಸ್ ಇಗ್ನೇಷಿಯಸ್ ಡಿಸೋಜ (42), ರೊನಾಲ್ಡ್ ಗೋಮ್ಸ (31), ರಾಖಿ ಡಿಸೋಜ (33), ರತ್ನಪ್ಪ (80). 4ನೇ ಆರೋಪಿ ಇತ್ತೀಚೆಗೆ ಮೃತಪಟ್ಟಿದ್ದಾರೆ. <br /> <br /> <strong>ವಿವರ:</strong> ಫ್ರಾನ್ಸಿಸ್ ಕುತಿಂಜ್ಞ ಇರುವಿಕೆ ಹಲವು ವರ್ಷ ಯಾರಿಗೂ ತಿಳಿಯದ ಕಾರಣ ದುರ್ಲಾಭ ಪಡೆಯಲು ಮುಂದಾದ ಅಪರಾಧಿಗಳು 1998ರಲ್ಲಿ ಸರ್ವೆ ನಂ.101/5ರಲ್ಲಿನ ಜಮೀನಿಗೆ ನಕಲಿ ಕ್ರಯಪತ್ರ ತಯಾರಿಸಿ ಮುಲ್ಕಿ ಉಪ ನೋಂದಣಿಕಾರಿ ಮುಂದೆ ಹಾಜರಾಗಿ ನಕಲಿ ಸಹಿಯನ್ನೂ ಮಾಡಿ ಸಾಕ್ಷಿಯನ್ನೂ ಹಾಕಿದ್ದರು. <br /> ಫ್ರಾನ್ಸಿಸ್ ಎಂಬವರು ಜಮೀನಿನಲ್ಲಿ ಮಾಲೀಕತ್ವ ಸ್ಥಾಪಿಸಲು ಸಹಕರಿಸಿದ್ದರು.<br /> <br /> ನಂತರ ಫ್ರಾನ್ಸಿಸ್ ಆರ್.ಟಿ.ಸಿ.ಯಲ್ಲಿ ತಮ್ಮ ಹೆಸರಿಗೆ ಮಾಲೀಕತ್ವ ಬದಲಿಸಲು ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ಈ ವಿಚಾರ ತಿಳಿದ ಜೆರಾಲ್ಡ್ ಲೋಬೊ, ಎಲ್ಲಾ 4 ಆರೋಪಿಗಳ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.<br /> <br /> ಅಂದಿನ ಪಿಎಸ್ಐ ಬಶೀರ್ ಅಹಮ್ಮದ್ ಪ್ರಕರಣ ದಾಖಲಿಸಿ ಇನ್ಸ್ಪೆಕ್ಟರ್ ಎಂ.ಐ.ಜಮೀಲ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.<br /> <br /> ನ್ಯಾಯಾಲಯದಲ್ಲಿ 13 ವರ್ಷ ಸುದೀರ್ಘ ವಿಚಾರಣೆ ನಡೆದು ಪ್ರಾಸಿಕ್ಯೂಷನ್ ಪರ 19 ಮಂದಿ ಸಾಕ್ಷ್ಯ ಹೇಳಿದ್ದರು. ನ್ಯಾಯಾಧೀಶ ಎಂ.ಸಿ.ನಂಜೇಗೌಡ ಫೆ. 28ರಂದು ತೀರ್ಪು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>