<p><strong>ಬೆಂಗಳೂರು: </strong>ಗಣರಾಜ್ಯೋತ್ಸವ ಸಮಾರಂಭಕ್ಕೆ (ಜ.26) ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ‘ಅಲ್ ಕೈದಾ’ ಭಯೋತ್ಪಾದನಾ ಸಂಘಟನೆ ಹೆಸರಿನಲ್ಲಿ ವಸಂತನಗರದ ಫ್ರಾನ್ಸ್ ಕಾನ್ಸಲ್ ಕಚೇರಿಗೆ ಬೆದರಿಕೆ ಪತ್ರ ಬಂದಿದೆ.<br /> <br /> ‘ಆ ಪತ್ರವನ್ನು ಜ.9ರಂದು ಚೆನ್ನೈನಿಂದ ಪೋಸ್ಟ್ ಮಾಡಲಾಗಿದೆ. ಜ.14ರಂದುಕಾನ್ಸಲ್ ಕಚೇರಿಗೆ ತಲುಪಿದೆ. ಈ ಬಗ್ಗೆ ದೂರು ಬಂದ ಕೂಡಲೇ ಎಸ್ಐ ನೇತೃತ್ವದ ತಂಡವನ್ನು ಚೆನ್ನೈಗೆ ಕಳುಹಿಸಿ, ಆ ವಿಳಾಸವನ್ನು ಪರಿಶೀಲಿಸಲಾಗಿದೆ. ಆದರೆ, ಅದು ನಕಲಿ ವಿಳಾಸ ಎಂಬುದು ಖಚಿತವಾಗಿದೆ. ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಈ ಪತ್ರ ಕಳುಹಿಸಿದ್ದಾರೆ ಎಂಬುದು ದೃಢಪಟ್ಟಿದೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್ ರೆಡ್ಡಿ ತಿಳಿಸಿದರು.<br /> <br /> <strong>ಪತ್ರದಲ್ಲೇನಿದೆ: </strong>‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷರು ಪಾಲ್ಗೊಳ್ಳುವ ಮಾಹಿತಿ ಇದೆ. ಅವರು ನಗರಕ್ಕೆ ಬರಬಾರದು. ಈ ಆಜ್ಞೆ ಉಲ್ಲಂಘಿಸಿ ಬಂದರೆ ಸುಮ್ಮನಿರುವುದಿಲ್ಲ. ದೇಶದ ಬೇರೆಬೇರೆ ಕಡೆಗಳಲ್ಲಿ ನಾವು ನೆತ್ತರು ಹರಿಸಿರುವುದನ್ನು ಕಣ್ಣಾರೆ ಕಂಡಿದ್ದೀರಿ. ಇಲ್ಲೂ ಅದೇ ಗತಿಯಾಗುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.<br /> <br /> ‘ಪತ್ರದ ಮೇಲೆ ಭಾರತದ ಭೂಪಟವಿದೆ. ಅಲ್ಲದೆ, ಉಗ್ರನೊಬ್ಬ ಬಂದೂಕು ಹಿಡಿದು ನಿಂತಿರುವಫೋಟೊ ಇದೆ. ಫ್ರಾನ್ಸ್ ಅಧ್ಯಕ್ಷರು ನಗರಕ್ಕೆ ಬರಬಾರದೆಂದು ಇಂಗ್ಲಿಷ್ ಭಾಷೆಯಲ್ಲಿ 4 ಸಾಲುಗಳನ್ನು ಬರೆದಿದ್ದಾರೆ. ಈ ಸಂಬಂಧ ಕಾನ್ಸಲ್ ಕಚೇರಿಯ ಉಪ ಮುಖ್ಯಸ್ಥರು ದೂರು ಕೊಟ್ಟಿದ್ದರು’ ಎಂದು ಚರಣ್ರೆಡ್ಡಿ ಮಾಹಿತಿ ನೀಡಿದರು.<br /> <br /> ‘ಅಲ್ ಕೈದಾ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಇತ್ತೀಚೆಗೆ ಮೌಲಾನಾ ಸೈಯದ್ ಅನ್ಸರ್ ಶಾ ಖಾಸ್ಮಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಇಂಥ ಪತ್ರ ಬಂದದ್ದು ಆತಂಕಕ್ಕೆ ಕಾರಣವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಗಣರಾಜ್ಯೋತ್ಸವ ಸಮಾರಂಭಕ್ಕೆ (ಜ.26) ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ‘ಅಲ್ ಕೈದಾ’ ಭಯೋತ್ಪಾದನಾ ಸಂಘಟನೆ ಹೆಸರಿನಲ್ಲಿ ವಸಂತನಗರದ ಫ್ರಾನ್ಸ್ ಕಾನ್ಸಲ್ ಕಚೇರಿಗೆ ಬೆದರಿಕೆ ಪತ್ರ ಬಂದಿದೆ.<br /> <br /> ‘ಆ ಪತ್ರವನ್ನು ಜ.9ರಂದು ಚೆನ್ನೈನಿಂದ ಪೋಸ್ಟ್ ಮಾಡಲಾಗಿದೆ. ಜ.14ರಂದುಕಾನ್ಸಲ್ ಕಚೇರಿಗೆ ತಲುಪಿದೆ. ಈ ಬಗ್ಗೆ ದೂರು ಬಂದ ಕೂಡಲೇ ಎಸ್ಐ ನೇತೃತ್ವದ ತಂಡವನ್ನು ಚೆನ್ನೈಗೆ ಕಳುಹಿಸಿ, ಆ ವಿಳಾಸವನ್ನು ಪರಿಶೀಲಿಸಲಾಗಿದೆ. ಆದರೆ, ಅದು ನಕಲಿ ವಿಳಾಸ ಎಂಬುದು ಖಚಿತವಾಗಿದೆ. ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಈ ಪತ್ರ ಕಳುಹಿಸಿದ್ದಾರೆ ಎಂಬುದು ದೃಢಪಟ್ಟಿದೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್ ರೆಡ್ಡಿ ತಿಳಿಸಿದರು.<br /> <br /> <strong>ಪತ್ರದಲ್ಲೇನಿದೆ: </strong>‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷರು ಪಾಲ್ಗೊಳ್ಳುವ ಮಾಹಿತಿ ಇದೆ. ಅವರು ನಗರಕ್ಕೆ ಬರಬಾರದು. ಈ ಆಜ್ಞೆ ಉಲ್ಲಂಘಿಸಿ ಬಂದರೆ ಸುಮ್ಮನಿರುವುದಿಲ್ಲ. ದೇಶದ ಬೇರೆಬೇರೆ ಕಡೆಗಳಲ್ಲಿ ನಾವು ನೆತ್ತರು ಹರಿಸಿರುವುದನ್ನು ಕಣ್ಣಾರೆ ಕಂಡಿದ್ದೀರಿ. ಇಲ್ಲೂ ಅದೇ ಗತಿಯಾಗುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.<br /> <br /> ‘ಪತ್ರದ ಮೇಲೆ ಭಾರತದ ಭೂಪಟವಿದೆ. ಅಲ್ಲದೆ, ಉಗ್ರನೊಬ್ಬ ಬಂದೂಕು ಹಿಡಿದು ನಿಂತಿರುವಫೋಟೊ ಇದೆ. ಫ್ರಾನ್ಸ್ ಅಧ್ಯಕ್ಷರು ನಗರಕ್ಕೆ ಬರಬಾರದೆಂದು ಇಂಗ್ಲಿಷ್ ಭಾಷೆಯಲ್ಲಿ 4 ಸಾಲುಗಳನ್ನು ಬರೆದಿದ್ದಾರೆ. ಈ ಸಂಬಂಧ ಕಾನ್ಸಲ್ ಕಚೇರಿಯ ಉಪ ಮುಖ್ಯಸ್ಥರು ದೂರು ಕೊಟ್ಟಿದ್ದರು’ ಎಂದು ಚರಣ್ರೆಡ್ಡಿ ಮಾಹಿತಿ ನೀಡಿದರು.<br /> <br /> ‘ಅಲ್ ಕೈದಾ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಇತ್ತೀಚೆಗೆ ಮೌಲಾನಾ ಸೈಯದ್ ಅನ್ಸರ್ ಶಾ ಖಾಸ್ಮಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಇಂಥ ಪತ್ರ ಬಂದದ್ದು ಆತಂಕಕ್ಕೆ ಕಾರಣವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>