<p><strong>ಬಂಟ್ವಾಳ: </strong> ತಾಲ್ಲೂಕಿನ ಸರಪಾಡಿ ಅಣೆಕಟ್ಟೆಯಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಸ್ಇ ಜೆಡ್)ಕ್ಕಾಗಿ ಇಲ್ಲಿನ ಬಂಟ್ವಾಳ-ಮೂಡುಬಿದಿರೆ ರಸ್ತೆ ನಡುವೆ ಹಾದುಹೋಗಲಿರುವ ಬೃಹತ್ ಗಾತ್ರದ ಪೈಪ್ಲೈನ್ ಅಳವಡಿಸಲು ಅಗೆದು ಹಾಕಲಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ. <br /> <br /> ಕಳೆದ ಏಳೆಂಟು ತಿಂಗಳಿನಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಈಗಾಗಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿತ್ಯಾನಂದ ನಗರ ಸಹಿತ ಲೊರೆಟ್ಟೊ, ಭಂಡಸಾಲೆ, ಸೋರ್ನಾಡು, ಮುಲ್ಲಾರಪಟ್ನ ಮತ್ತಿತರ ಕಡೆಗಳಲ್ಲಿ ಬಿಸಿಲಿನ ವೇಳೆ ಧೂಳೆಬ್ಬಿಸುತ್ತಾ ಪೈಪ್ಲೈನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. <br /> <br /> ಕೆಲವೆಡೆ ರಸ್ತೆ ವಿಸ್ತರಣೆ, ಹೊಸ ಮೋರಿ ಅಳವಡಿಕೆ ಮತ್ತು ಹಾನಿಗೀಡಾದ ರಸ್ತೆ ಬದಿ ತೇಪೆ ಡಾಂಬರೀಕರಣದಿಂದ ವಾಹನ ಸವಾರರು ಮತ್ತು ಸ್ಥಳೀಯರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ನಡುವೆ ಖಾಸಗಿ ಜಮೀನು ಅತಿಕ್ರಮಣ, ದೂರವಾಣಿ ಸಂಪರ್ಕ ಸ್ಥಗಿತ, ಕುಡಿಯುವ ನೀರು ಮತ್ತಿತರ ಪೈಪುಗಳಿಗೆ ಹಾನಿ ಮತ್ತಿತರ ದೂರು ಪೊಲೀಸ್ ಠಾಣೆ ಮೆಟ್ಟಿಲೇರಿ ಬಳಿಕ ಪ್ರತಿಭಟನೆಯೂ ನಡೆದಿತ್ತು.<br /> <br /> ಈ ನಡುವೆ ಜಕ್ರಿಬೆಟ್ಟು ಮತ್ತು ಮಣಿಹಳ್ಳ ನಡುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹಲವೆಡೆ ಅನಧಿಕೃತವಾಗಿ ಪೈಪ್ಲೈನ್ ದಾಸ್ತಾನು ಮಾಡಿದೆ ಎಂದು ಇಲ್ಲಿನ ಬಳಕೆದಾರರ ವೇದಿಕೆ ಆರೋಪಿಸಿತ್ತು.<br /> <br /> ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬಂಟ್ವಾಳ-ಮೂಡುಬಿದಿರೆ ರಸ್ತೆಯ ಸೋರ್ನಾಡು ಮತ್ತು ಎಸ್ವಿಎಸ್ ಕಾಲೇಜು ಬಳಿ ರಸ್ತೆಯುದ್ದಕ್ಕೂ ಕೆಸರು ತುಂಬಿಕೊಂಡಿದೆ. ಮಾತ್ರವಲ್ಲದೆ ರಸ್ತೆ ನಡುವೆಯೇ ಬೃಹತ್ ಗಾತ್ರದ ಹೊಂಡಗಳನ್ನು ಕೊರೆಯಲಾಗಿದೆ. ಇದರಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಎದುರಿಸಿದ್ದಾರೆ. <br /> <br /> ಲೋಕೋಪಯೋಗಿ ಇಲಾಖೆಗೆ ಮುಂಗಡ ಮೊತ್ತ ಪಾವತಿಸಿ ಕೈಗೊಳ್ಳುವ ಈ ಕಾಮಗಾರಿ ವೇಳೆ ಕೆಸರುಮಯ ರಸ್ತೆಗೆ ಜೆಲ್ಲಿ ಹುಡಿ ಅಥವಾ ಮರಳು ಹಾಕುವ ಮೂಲಕ ಇಲ್ಲಿ ಸಂಚರಿಸುವ ವಾಹನಗಳ ಚಕ್ರ ಜಾರುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ: </strong> ತಾಲ್ಲೂಕಿನ ಸರಪಾಡಿ ಅಣೆಕಟ್ಟೆಯಿಂದ ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಸ್ಇ ಜೆಡ್)ಕ್ಕಾಗಿ ಇಲ್ಲಿನ ಬಂಟ್ವಾಳ-ಮೂಡುಬಿದಿರೆ ರಸ್ತೆ ನಡುವೆ ಹಾದುಹೋಗಲಿರುವ ಬೃಹತ್ ಗಾತ್ರದ ಪೈಪ್ಲೈನ್ ಅಳವಡಿಸಲು ಅಗೆದು ಹಾಕಲಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ. <br /> <br /> ಕಳೆದ ಏಳೆಂಟು ತಿಂಗಳಿನಿಂದ ನಡೆಯುತ್ತಿರುವ ಈ ಕಾಮಗಾರಿಯಿಂದಾಗಿ ಈಗಾಗಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿತ್ಯಾನಂದ ನಗರ ಸಹಿತ ಲೊರೆಟ್ಟೊ, ಭಂಡಸಾಲೆ, ಸೋರ್ನಾಡು, ಮುಲ್ಲಾರಪಟ್ನ ಮತ್ತಿತರ ಕಡೆಗಳಲ್ಲಿ ಬಿಸಿಲಿನ ವೇಳೆ ಧೂಳೆಬ್ಬಿಸುತ್ತಾ ಪೈಪ್ಲೈನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. <br /> <br /> ಕೆಲವೆಡೆ ರಸ್ತೆ ವಿಸ್ತರಣೆ, ಹೊಸ ಮೋರಿ ಅಳವಡಿಕೆ ಮತ್ತು ಹಾನಿಗೀಡಾದ ರಸ್ತೆ ಬದಿ ತೇಪೆ ಡಾಂಬರೀಕರಣದಿಂದ ವಾಹನ ಸವಾರರು ಮತ್ತು ಸ್ಥಳೀಯರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ನಡುವೆ ಖಾಸಗಿ ಜಮೀನು ಅತಿಕ್ರಮಣ, ದೂರವಾಣಿ ಸಂಪರ್ಕ ಸ್ಥಗಿತ, ಕುಡಿಯುವ ನೀರು ಮತ್ತಿತರ ಪೈಪುಗಳಿಗೆ ಹಾನಿ ಮತ್ತಿತರ ದೂರು ಪೊಲೀಸ್ ಠಾಣೆ ಮೆಟ್ಟಿಲೇರಿ ಬಳಿಕ ಪ್ರತಿಭಟನೆಯೂ ನಡೆದಿತ್ತು.<br /> <br /> ಈ ನಡುವೆ ಜಕ್ರಿಬೆಟ್ಟು ಮತ್ತು ಮಣಿಹಳ್ಳ ನಡುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಹಲವೆಡೆ ಅನಧಿಕೃತವಾಗಿ ಪೈಪ್ಲೈನ್ ದಾಸ್ತಾನು ಮಾಡಿದೆ ಎಂದು ಇಲ್ಲಿನ ಬಳಕೆದಾರರ ವೇದಿಕೆ ಆರೋಪಿಸಿತ್ತು.<br /> <br /> ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬಂಟ್ವಾಳ-ಮೂಡುಬಿದಿರೆ ರಸ್ತೆಯ ಸೋರ್ನಾಡು ಮತ್ತು ಎಸ್ವಿಎಸ್ ಕಾಲೇಜು ಬಳಿ ರಸ್ತೆಯುದ್ದಕ್ಕೂ ಕೆಸರು ತುಂಬಿಕೊಂಡಿದೆ. ಮಾತ್ರವಲ್ಲದೆ ರಸ್ತೆ ನಡುವೆಯೇ ಬೃಹತ್ ಗಾತ್ರದ ಹೊಂಡಗಳನ್ನು ಕೊರೆಯಲಾಗಿದೆ. ಇದರಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಎದುರಿಸಿದ್ದಾರೆ. <br /> <br /> ಲೋಕೋಪಯೋಗಿ ಇಲಾಖೆಗೆ ಮುಂಗಡ ಮೊತ್ತ ಪಾವತಿಸಿ ಕೈಗೊಳ್ಳುವ ಈ ಕಾಮಗಾರಿ ವೇಳೆ ಕೆಸರುಮಯ ರಸ್ತೆಗೆ ಜೆಲ್ಲಿ ಹುಡಿ ಅಥವಾ ಮರಳು ಹಾಕುವ ಮೂಲಕ ಇಲ್ಲಿ ಸಂಚರಿಸುವ ವಾಹನಗಳ ಚಕ್ರ ಜಾರುವುದನ್ನು ತಪ್ಪಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>