<p>‘ತಿರುಪತಿಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಭಕ್ತರು ತಾಸುಗಟ್ಟಲೆ ಕಾಯತ್ತಾರೆ... ಅಷ್ಟೆಲ್ಲ ಭದ್ರತೆ ಇರತೈತಿ... ಅಂತಾದ್ರಾಗೆ ಈ ಕುಡುಕ ಅದ್ಹೆಂಗೆ ಎಲ್ಲರ ಕಣ್ಣಿಗೆ ಮಣ್ಣೆರಚಿ ಗೋವಿಂದರಾಯ ದೇವಾಲಯದ ಗೋಪುರ ಏರಿದ!’ ಬೆಕ್ಕಣ್ಣ ಸುದ್ದಿ ಓದುತ್ತ ಉದ್ಗರಿಸಿತು.</p>.<p>‘ಕುಡಿದ ಮತ್ತಿನಲ್ಲಿಯೂ ಅಂವಾ ಕಾಲು ಜಾರದೇ ಅಷ್ಟೆತ್ತರದ ಗೋಪುರ ಏರ್ಯಾನೆ ಅಂದರೆ ಅದವನ ಹೊಸ ವರ್ಷದ ಸಂಕಲ್ಪ ಆಗಿರಬಕು’ ಎಂದು ನಾನು ನಕ್ಕೆ.</p>.<p>‘ಕಳ್ಳತನದಿಂದ ಗೋಪುರ ಏರಿದರೂ, ಕುಡುಕನೇ ಆದರೂ, ನನ್ನ ಭಕ್ತನೇ ತಾನೆ, ಅವನ ರಕ್ಷಣೆ ಮಾಡಣ ಅಂತ ಪಾಪದ ದೇವರೂ ಸಂಕಲ್ಪ ಮಾಡಿರಬಕು’ ಎನ್ನುತ್ತ ಬೆಕ್ಕಣ್ಣ ಮುಸಿಮುಸಿ ನಕ್ಕಿತು.</p>.<p>‘ಯಾರ್ಯಾರು ಏನೇನು ಹೊಸವರ್ಷದ ಸಂಕಲ್ಪ ಮಾಡ್ಯಾರೋ ಯಾರಿಗೆ ಗೊತ್ತು... ಟ್ರಂಪಣ್ಣನಂತೂ ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ತಗಳ್ಳಲೇ ಬೇಕಂತ ಸಂಕಲ್ಪ ಮಾಡಿರಬೌದು.’</p>.<p>‘ಶಾಂತಿ ಪ್ರಶಸ್ತಿಗೆ ಮೊದಲನೇ ಹೆಜ್ಜೆ ಅಂತ ಅಂವಾ ವೆನೆಜುವೆಲಾ ಮೇಲೆ ದಾಳಿ ಮಾಡಿ, ಅಲ್ಲಿಯ ಅಧ್ಯಕ್ಷರನ್ನೇ ಸೆರೆ ಹಿಡಿದಾನೆ!’</p>.<p>‘ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಂಗಿಲ್ಲ ಅಂತ ಸಂಕಲ್ಪ ಮಾಡಿರಬೌದು. ಪ್ಯಾಲೆಸ್ಟೀನ್ ಹಂತಹಂತವಾಗಿ ನಾಶ ಮಾಡೂದು ಇಸ್ರೇಲಿನ ಹೊಸವರ್ಷದ ಗುಪ್ತಸಂಕಲ್ಪ ಆಗಿರಬೌದು’ ಎಂದೆ.</p>.<p>‘ವಿಶ್ವದ ಉಸಾಬರಿ ನಮಗ್ಯಾಕೆ ಬಿಡು... ನಮ್ಮ ಮಂದಿ ಸಂಕಲ್ಪ ಮಾಡೂದ್ರಾಗೆ ಏನು ಕಡಿಮಿ?’ ಎಂದಿತು ಬೆಕ್ಕಣ್ಣ.</p>.<p>‘ಭ್ರಷ್ಟಾಚಾರಿಗಳ ಧನಕನಕ ಸಂಕಲ್ಪ, ರಾಜಕಾರಣಿಗಳ ಕುರ್ಚಿ ಸಂಕಲ್ಪ... ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ಸರ್ವಂಸ್ವಾಹಾ ಸಂಕಲ್ಪ, ತಂದೆತಾಯಂದಿರು, ಖಾಪ್ ಪಂಚಾಯಿತಿಗಳಿಗೆ ಮರ್ಯಾದೆಗೇಡು ಹತ್ಯೆ ಮಾಡುವ ಸಂಕಲ್ಪ...’ ನಾನು ಪಟ್ಟಿ ಹೇಳುತ್ತ ಹೋದೆ.</p>.<p>‘ಕೊನೇಪಕ್ಷ ತಂದೆ–ತಾಯಂದಿರು ಮನುಷ್ಯರಾಗೋ ಸಂಕಲ್ಪ ಮಾಡಿದರೆ ಸ್ವಂತಮಕ್ಕಳ ಮರ್ಯಾದೆಗೇಡು ಹತ್ಯೆ ತಪ್ಪತೈತಿ. ನೀವು ಮೊದಲು ಮನುಷ್ಯರಾಗುವ ಮನುಷ್ಯತ್ವದ ಸಂಕಲ್ಪ ಮಾಡಿರಿ!’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ತಿರುಪತಿಯ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಭಕ್ತರು ತಾಸುಗಟ್ಟಲೆ ಕಾಯತ್ತಾರೆ... ಅಷ್ಟೆಲ್ಲ ಭದ್ರತೆ ಇರತೈತಿ... ಅಂತಾದ್ರಾಗೆ ಈ ಕುಡುಕ ಅದ್ಹೆಂಗೆ ಎಲ್ಲರ ಕಣ್ಣಿಗೆ ಮಣ್ಣೆರಚಿ ಗೋವಿಂದರಾಯ ದೇವಾಲಯದ ಗೋಪುರ ಏರಿದ!’ ಬೆಕ್ಕಣ್ಣ ಸುದ್ದಿ ಓದುತ್ತ ಉದ್ಗರಿಸಿತು.</p>.<p>‘ಕುಡಿದ ಮತ್ತಿನಲ್ಲಿಯೂ ಅಂವಾ ಕಾಲು ಜಾರದೇ ಅಷ್ಟೆತ್ತರದ ಗೋಪುರ ಏರ್ಯಾನೆ ಅಂದರೆ ಅದವನ ಹೊಸ ವರ್ಷದ ಸಂಕಲ್ಪ ಆಗಿರಬಕು’ ಎಂದು ನಾನು ನಕ್ಕೆ.</p>.<p>‘ಕಳ್ಳತನದಿಂದ ಗೋಪುರ ಏರಿದರೂ, ಕುಡುಕನೇ ಆದರೂ, ನನ್ನ ಭಕ್ತನೇ ತಾನೆ, ಅವನ ರಕ್ಷಣೆ ಮಾಡಣ ಅಂತ ಪಾಪದ ದೇವರೂ ಸಂಕಲ್ಪ ಮಾಡಿರಬಕು’ ಎನ್ನುತ್ತ ಬೆಕ್ಕಣ್ಣ ಮುಸಿಮುಸಿ ನಕ್ಕಿತು.</p>.<p>‘ಯಾರ್ಯಾರು ಏನೇನು ಹೊಸವರ್ಷದ ಸಂಕಲ್ಪ ಮಾಡ್ಯಾರೋ ಯಾರಿಗೆ ಗೊತ್ತು... ಟ್ರಂಪಣ್ಣನಂತೂ ಈ ಸಲ ನೊಬೆಲ್ ಶಾಂತಿ ಪ್ರಶಸ್ತಿ ತಗಳ್ಳಲೇ ಬೇಕಂತ ಸಂಕಲ್ಪ ಮಾಡಿರಬೌದು.’</p>.<p>‘ಶಾಂತಿ ಪ್ರಶಸ್ತಿಗೆ ಮೊದಲನೇ ಹೆಜ್ಜೆ ಅಂತ ಅಂವಾ ವೆನೆಜುವೆಲಾ ಮೇಲೆ ದಾಳಿ ಮಾಡಿ, ಅಲ್ಲಿಯ ಅಧ್ಯಕ್ಷರನ್ನೇ ಸೆರೆ ಹಿಡಿದಾನೆ!’</p>.<p>‘ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಂಗಿಲ್ಲ ಅಂತ ಸಂಕಲ್ಪ ಮಾಡಿರಬೌದು. ಪ್ಯಾಲೆಸ್ಟೀನ್ ಹಂತಹಂತವಾಗಿ ನಾಶ ಮಾಡೂದು ಇಸ್ರೇಲಿನ ಹೊಸವರ್ಷದ ಗುಪ್ತಸಂಕಲ್ಪ ಆಗಿರಬೌದು’ ಎಂದೆ.</p>.<p>‘ವಿಶ್ವದ ಉಸಾಬರಿ ನಮಗ್ಯಾಕೆ ಬಿಡು... ನಮ್ಮ ಮಂದಿ ಸಂಕಲ್ಪ ಮಾಡೂದ್ರಾಗೆ ಏನು ಕಡಿಮಿ?’ ಎಂದಿತು ಬೆಕ್ಕಣ್ಣ.</p>.<p>‘ಭ್ರಷ್ಟಾಚಾರಿಗಳ ಧನಕನಕ ಸಂಕಲ್ಪ, ರಾಜಕಾರಣಿಗಳ ಕುರ್ಚಿ ಸಂಕಲ್ಪ... ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ಸರ್ವಂಸ್ವಾಹಾ ಸಂಕಲ್ಪ, ತಂದೆತಾಯಂದಿರು, ಖಾಪ್ ಪಂಚಾಯಿತಿಗಳಿಗೆ ಮರ್ಯಾದೆಗೇಡು ಹತ್ಯೆ ಮಾಡುವ ಸಂಕಲ್ಪ...’ ನಾನು ಪಟ್ಟಿ ಹೇಳುತ್ತ ಹೋದೆ.</p>.<p>‘ಕೊನೇಪಕ್ಷ ತಂದೆ–ತಾಯಂದಿರು ಮನುಷ್ಯರಾಗೋ ಸಂಕಲ್ಪ ಮಾಡಿದರೆ ಸ್ವಂತಮಕ್ಕಳ ಮರ್ಯಾದೆಗೇಡು ಹತ್ಯೆ ತಪ್ಪತೈತಿ. ನೀವು ಮೊದಲು ಮನುಷ್ಯರಾಗುವ ಮನುಷ್ಯತ್ವದ ಸಂಕಲ್ಪ ಮಾಡಿರಿ!’ ಎಂದು ಬೆಕ್ಕಣ್ಣ ಗುರುಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>