<p><strong>ಚೆನ್ನಮ್ಮನ ಕಿತ್ತೂರು: </strong>ಕಿತ್ತೂರು ರಾಣಿ ಚೆನ್ನಮ್ಮಾಜಿಯ ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಣೆಯ ಐತಿಹಾಸಿಕ `ಕಿತ್ತೂರು ಉತ್ಸವ~ ಆಚರಣೆ ಇದೇ 23ರಿಂದ 25ರವರೆಗೆ ನಡೆಯ ಲಿದ್ದು, ಪೂರ್ವಭಾವಿಯಾಗಿ ಕೆಟ್ಟ ರಸ್ತೆಗೆ ತೇಪೆ ಹಾಕುವುದು, ಕೋಟೆ ಆವರಣ, ಮುಖ್ಯ ಬೀದಿ ಸ್ವಚ್ಛಗೊಳಿಸುವ ಕೆಲಸ ಭರದಿಂದ ಪಟ್ಟಣದಲ್ಲಿ ನಡೆದಿದೆ.<br /> <br /> ~ಬೆಂಕಿ ಬಿದ್ದಾಗಲೇ ಬಾವಿ ತೋಡುವ ಪ್ರವೃತ್ತಿ~ಗೆ ಜೋತು ಬಿದ್ದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತರಾತುರಿ ಕೆಲಸಕ್ಕೆ ಮಳೆರಾಯ ಅಡಚಣೆಯಾಗಿ ಪರಿಣಮಿಸಿದ್ದಾನೆ. ಬುಧವಾರ ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ಉತ್ಸವ ಸಿದ್ಧತೆಯಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಗುರುವಾರದ ಕೆಲ ಕಾಮಗಾರಿಗಳಿಗೆ ಸ್ವಲ್ಪ ತೊಂದರೆಯಾಯಿತು.<br /> <br /> ಕೋಟೆ ಆವರಣದೊಳಗಿರುವ `ರಿಂಗ್ ರೋಡ್~ ಅಕ್ಕಪಕ್ಕ ಬೆಳೆದು ನಿಂತಿದ್ದ ಕಸ, ಕಂಟಿ, ಫುಟ್ಪಾತ್ ಸ್ವಚ್ಛಗೊಳಿಸುವ ಕೆಲಸ ಒಂದೆಡೆ ಸಾಗಿದೆ. ಅಶ್ವಾರೂಢ ಚನ್ನಮ್ಮ ಪ್ರತಿಮೆಯಿಂದ ಪಟ್ಟಣದೊಳಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ವಿಭಜಕ, ಫುಟ್ಪಾತ್ಗಳಿಗೆ ಬಣ್ಣ ಬಳಿಯುವ ಕಾಮಗಾರಿಯೂ ಪ್ರಗತಿಯಲ್ಲಿದೆ.<br /> <br /> ಇದನ್ನು ಹೊರತುಪಡಿಸಿದರೆ, ಅರಳಿಕಟ್ಟಿ ವೃತ್ತದಿಂದ ಗೊಂಬಿಗುಡಿಯವರೆಗೆ ಈಗಾಗಲೇ ಕೆಲಸ ನಡೆದು ಅರ್ಧಕ್ಕೆ ನಿಂತಿದ್ದ ರಸ್ತೆ ಡಾಂಬರಿಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಪಟ್ಟಣದ ಹದಗೆಟ್ಟು ಹೋಗಿರುವ ರಸ್ತೆಗಳನ್ನು ಅಲ್ಲಲ್ಲಿ ಸುಧಾರಿಸುವುದಕ್ಕೂ ಆದ್ಯತೆ ನೀಡಲಾಗಿದೆ. <br /> <br /> `ಹೇಗಾದರೂ ಸರಿ ನಿಗದಿತ ಕಾರ್ಯಗಳನ್ನು ಉತ್ಸವ ಆರಂಭದ ಮುನ್ನಾದಿನದ ವರೆಗೂ ಮಾಡಿ ಮುಗಿಸುವ ಉತ್ಸಾಹ ಅಧಿಕಾರಿಗಳಲ್ಲಿ ಇದ್ದಂತಿದೆ. ಹೀಗಾಗಿ ಕೆಲಸದ ಗುಣಮಟ್ಟ ಸಮಾಧಾನ ತರುವಂತಿಲ್ಲ~ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿದೆ.<br /> <br /> <strong>ಹಾಗೇ ಇರುವ ದುಡ್ಡು</strong><br /> ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರಾ ಗಿದ್ದ ರೂ.8ಕೋಟಿಯಲ್ಲಿ ಈಗಾಗಲೇ ರೂ. 4.44 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾ ಗಿದೆ. ದುಡ್ಡಿನ ಜೊತೆಗೆ, ಮಾಡಿರುವ ಕೆಲ ಕಾಮ ಗಾರಿಗಳು ಹೆಳ ಹೆಸರಿಲ್ಲದಂತಾಗಿವೆ. <br /> <br /> ಖರ್ಚು ಮಾಡಿ ಉಳಿದಿರುವ ದುಡ್ಡು ರೂ. 3.56ಕೋಟಿ ಇನ್ನೂ ಹಾಗೆ ಇದೆ. `ಮಳೆನಿಂತಾಗ ಈ ಕೆಲಸ ಗಳನ್ನು ಉತ್ಸವ ತಿಂಗಳಿನ ಸಾಕಷ್ಟು ಮೊದಲೇ ಪ್ರಾರಂಭಿಸಬೇಕಿತ್ತು. ಆದರೆ ಆಡಳಿತ ನಡೆಸುವ ವರಿಗೆ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳಿಗೆ ತುರ್ತು ಕಾರ್ಯಗಳ ಆದ್ಯತೆ. <br /> <br /> ಇದರಿಂದಾಗಿಯೇ ಉತ್ಸವ ಆಚರಣೆ ಹೊಸ್ತಿಲಲ್ಲಿರುವ ಈ ಸಂದರ್ಭ ದಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಲಾಗಿದೆ~ ಎಂಬ ಆರೋಪ ಇಲ್ಲಿ ಮಾರ್ದನಿಸುತ್ತಿದೆ.<br /> <br /> <strong>ದಾರಿ ಬಿಡಿ:</strong> ಕಿತ್ತೂರು ಉತ್ಸವ ಆಚರಣೆಯಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ ಎಂಬ ಆಸೆಯಿಟ್ಟುಕೊಂಡು ಬೀದಿ ಬದಿಯ ವ್ಯಾಪಾರಿಗಳು ಕಿತ್ತೂರಿಗೆ ದೌಡಾಯಿಸುತ್ತಿದ್ದಾರೆ. ಇವರ ಜೊತೆ ಯಲ್ಲೇ ಉತ್ಸವದ ಕಳೆ ಹೆಚ್ಚಿಸಲು ವೈವಿಧ್ಯಮಯ ಆಟಗಳ ~ಫ್ರಂಟ್ ಡೆಕಾರೇಶನ್~ದವರ ಆಗಮನವಾಗಿದೆ. ತೊಟ್ಟಿಲಗಳು, ಮಕ್ಕಳು ತಿರುಗುವ ಮೋಟಾರ್ಗಳನ್ನು ಜೋಡಿಸುವ ಪ್ರಾಥಮಿಕ ಕಾರ್ಯವನ್ನು ಅವರು ಪ್ರಾರಂಭಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನಮ್ಮನ ಕಿತ್ತೂರು: </strong>ಕಿತ್ತೂರು ರಾಣಿ ಚೆನ್ನಮ್ಮಾಜಿಯ ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಣೆಯ ಐತಿಹಾಸಿಕ `ಕಿತ್ತೂರು ಉತ್ಸವ~ ಆಚರಣೆ ಇದೇ 23ರಿಂದ 25ರವರೆಗೆ ನಡೆಯ ಲಿದ್ದು, ಪೂರ್ವಭಾವಿಯಾಗಿ ಕೆಟ್ಟ ರಸ್ತೆಗೆ ತೇಪೆ ಹಾಕುವುದು, ಕೋಟೆ ಆವರಣ, ಮುಖ್ಯ ಬೀದಿ ಸ್ವಚ್ಛಗೊಳಿಸುವ ಕೆಲಸ ಭರದಿಂದ ಪಟ್ಟಣದಲ್ಲಿ ನಡೆದಿದೆ.<br /> <br /> ~ಬೆಂಕಿ ಬಿದ್ದಾಗಲೇ ಬಾವಿ ತೋಡುವ ಪ್ರವೃತ್ತಿ~ಗೆ ಜೋತು ಬಿದ್ದಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತರಾತುರಿ ಕೆಲಸಕ್ಕೆ ಮಳೆರಾಯ ಅಡಚಣೆಯಾಗಿ ಪರಿಣಮಿಸಿದ್ದಾನೆ. ಬುಧವಾರ ಸಂಜೆ ಸುರಿದ ವಿಪರೀತ ಮಳೆಯಿಂದಾಗಿ ಉತ್ಸವ ಸಿದ್ಧತೆಯಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಗುರುವಾರದ ಕೆಲ ಕಾಮಗಾರಿಗಳಿಗೆ ಸ್ವಲ್ಪ ತೊಂದರೆಯಾಯಿತು.<br /> <br /> ಕೋಟೆ ಆವರಣದೊಳಗಿರುವ `ರಿಂಗ್ ರೋಡ್~ ಅಕ್ಕಪಕ್ಕ ಬೆಳೆದು ನಿಂತಿದ್ದ ಕಸ, ಕಂಟಿ, ಫುಟ್ಪಾತ್ ಸ್ವಚ್ಛಗೊಳಿಸುವ ಕೆಲಸ ಒಂದೆಡೆ ಸಾಗಿದೆ. ಅಶ್ವಾರೂಢ ಚನ್ನಮ್ಮ ಪ್ರತಿಮೆಯಿಂದ ಪಟ್ಟಣದೊಳಗೆ ಸಾಗುವ ದಾರಿಯುದ್ದಕ್ಕೂ ರಸ್ತೆ ವಿಭಜಕ, ಫುಟ್ಪಾತ್ಗಳಿಗೆ ಬಣ್ಣ ಬಳಿಯುವ ಕಾಮಗಾರಿಯೂ ಪ್ರಗತಿಯಲ್ಲಿದೆ.<br /> <br /> ಇದನ್ನು ಹೊರತುಪಡಿಸಿದರೆ, ಅರಳಿಕಟ್ಟಿ ವೃತ್ತದಿಂದ ಗೊಂಬಿಗುಡಿಯವರೆಗೆ ಈಗಾಗಲೇ ಕೆಲಸ ನಡೆದು ಅರ್ಧಕ್ಕೆ ನಿಂತಿದ್ದ ರಸ್ತೆ ಡಾಂಬರಿಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಪಟ್ಟಣದ ಹದಗೆಟ್ಟು ಹೋಗಿರುವ ರಸ್ತೆಗಳನ್ನು ಅಲ್ಲಲ್ಲಿ ಸುಧಾರಿಸುವುದಕ್ಕೂ ಆದ್ಯತೆ ನೀಡಲಾಗಿದೆ. <br /> <br /> `ಹೇಗಾದರೂ ಸರಿ ನಿಗದಿತ ಕಾರ್ಯಗಳನ್ನು ಉತ್ಸವ ಆರಂಭದ ಮುನ್ನಾದಿನದ ವರೆಗೂ ಮಾಡಿ ಮುಗಿಸುವ ಉತ್ಸಾಹ ಅಧಿಕಾರಿಗಳಲ್ಲಿ ಇದ್ದಂತಿದೆ. ಹೀಗಾಗಿ ಕೆಲಸದ ಗುಣಮಟ್ಟ ಸಮಾಧಾನ ತರುವಂತಿಲ್ಲ~ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿದೆ.<br /> <br /> <strong>ಹಾಗೇ ಇರುವ ದುಡ್ಡು</strong><br /> ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರಾ ಗಿದ್ದ ರೂ.8ಕೋಟಿಯಲ್ಲಿ ಈಗಾಗಲೇ ರೂ. 4.44 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾ ಗಿದೆ. ದುಡ್ಡಿನ ಜೊತೆಗೆ, ಮಾಡಿರುವ ಕೆಲ ಕಾಮ ಗಾರಿಗಳು ಹೆಳ ಹೆಸರಿಲ್ಲದಂತಾಗಿವೆ. <br /> <br /> ಖರ್ಚು ಮಾಡಿ ಉಳಿದಿರುವ ದುಡ್ಡು ರೂ. 3.56ಕೋಟಿ ಇನ್ನೂ ಹಾಗೆ ಇದೆ. `ಮಳೆನಿಂತಾಗ ಈ ಕೆಲಸ ಗಳನ್ನು ಉತ್ಸವ ತಿಂಗಳಿನ ಸಾಕಷ್ಟು ಮೊದಲೇ ಪ್ರಾರಂಭಿಸಬೇಕಿತ್ತು. ಆದರೆ ಆಡಳಿತ ನಡೆಸುವ ವರಿಗೆ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳಿಗೆ ತುರ್ತು ಕಾರ್ಯಗಳ ಆದ್ಯತೆ. <br /> <br /> ಇದರಿಂದಾಗಿಯೇ ಉತ್ಸವ ಆಚರಣೆ ಹೊಸ್ತಿಲಲ್ಲಿರುವ ಈ ಸಂದರ್ಭ ದಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಲಾಗಿದೆ~ ಎಂಬ ಆರೋಪ ಇಲ್ಲಿ ಮಾರ್ದನಿಸುತ್ತಿದೆ.<br /> <br /> <strong>ದಾರಿ ಬಿಡಿ:</strong> ಕಿತ್ತೂರು ಉತ್ಸವ ಆಚರಣೆಯಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ ಎಂಬ ಆಸೆಯಿಟ್ಟುಕೊಂಡು ಬೀದಿ ಬದಿಯ ವ್ಯಾಪಾರಿಗಳು ಕಿತ್ತೂರಿಗೆ ದೌಡಾಯಿಸುತ್ತಿದ್ದಾರೆ. ಇವರ ಜೊತೆ ಯಲ್ಲೇ ಉತ್ಸವದ ಕಳೆ ಹೆಚ್ಚಿಸಲು ವೈವಿಧ್ಯಮಯ ಆಟಗಳ ~ಫ್ರಂಟ್ ಡೆಕಾರೇಶನ್~ದವರ ಆಗಮನವಾಗಿದೆ. ತೊಟ್ಟಿಲಗಳು, ಮಕ್ಕಳು ತಿರುಗುವ ಮೋಟಾರ್ಗಳನ್ನು ಜೋಡಿಸುವ ಪ್ರಾಥಮಿಕ ಕಾರ್ಯವನ್ನು ಅವರು ಪ್ರಾರಂಭಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>