<p><strong>ಕಿಂಗ್ಸ್ಟನ್, ಜಮೈಕಾ (ಪಿಟಿಐ):</strong> ವೆಸ್ಟ್ ಇಂಡೀಸ್ನ ಬ್ಯಾಟ್ಸ್ಮನ್ ಮಾರ್ಲಾನ್ ಸ್ಯಾಮುಯೆಲ್ಸ್ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಲಭಿಸಿದ್ದ ಅವಕಾಶವನ್ನು ತಿರಸ್ಕರಿಸಿದ್ದಾರೆ. ಭಾರತಕ್ಕೆ ಬಂದರೆ ಬಂಧನಕ್ಕೊಳಗಾಗುವ ಭೀತಿಯಿಂದ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ‘ದಿ ಟ್ರಿನಿಡಾಡ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ.<br /> <br /> ಗಾಯಾಳು ಡ್ವೇಯ್ನಿ ಬ್ರಾವೊಗೆ ಬದಲಿ ಆಟಗಾರನಾಗಿ ಸ್ಯಾಮುಯೆಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಬಯಸಿತ್ತು. ಆದರೆ ವಿಂಡೀಸ್ ಮಂಡಳಿ ಮುಂದಿಟ್ಟ ಪ್ರಸ್ತಾಪವನ್ನು ಸ್ಯಾಮುಯೆಲ್ಸ್ ತಿರಸ್ಕರಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.<br /> <br /> ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಸ್ಯಾಮುಯೆಲ್ಸ್ 2006 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ (ಐಸಿಸಿ) ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. <br /> <br /> ಪಂದ್ಯದ ಕುರಿತ ಮಾಹಿತಿಗಳನ್ನು ಬುಕ್ಕಿಗಳಿಗೆ ನೀಡಿದ ಆರೋಪ ಸ್ಯಾಮುಯೆಲ್ಸ್ ಮೇಲಿತ್ತು. ಬುಕ್ಕಿಗಳ ಜೊತೆ ಅವರು ನಡೆಸಿದ್ದ ದೂರವಾಣಿ ಸಂಭಾಷಣೆಯ ಮಾಹಿತಿ ದೆಹಲಿ ಪೊಲೀಸರಿಗೆ ಲಭಿಸಿತ್ತು. <br /> <br /> ಇದರ ಆಧಾರದಲ್ಲಿ ಐಸಿಸಿ 2006ರ ಮೇ ತಿಂಗಳಲ್ಲಿ ಇವರ ಮೇಲೆ ನಿಷೇಧ ಹೇರಿತ್ತು. ‘ಆಟದ ಬಗ್ಗೆ ಮೊದಲೇ ಮಾಹಿತಿ ನೀಡಿದ’ ಆರೋಪವನ್ನು ಐಸಿಸಿ ಇವರ ಮೇಲೆ ಹೊರಿಸಿತ್ತು. <br /> <br /> ಸ್ಯಾಮುಯೆಲ್ಸ್ ಅವರು ಆಡಲು ಒಪ್ಪದ ಕಾರಣ ವಿಂಡೀಸ್ ಮಂಡಳಿ ಬ್ರಾವೊಗೆ ಬದಲು ದೇವೇಂದ್ರ ಬಿಶೂ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದ ವರದಿ ವಿವರಿಸಿದೆ. ಆದರೆ ವಿಂಡೀಸ್ ಮಂಡಳಿಯ ಅಧಿಕಾರಿ ಇಮ್ರಾನ್ ಖಾನ್ ಅವರು ಈ ವರದಿಯನ್ನು ಖಚಿತಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ. <br /> <br /> ನಿಷೇಧ ಶಿಕ್ಷೆಯ ಅವಧಿ ಕೊನೆಗೊಂಡಿರುವ ಕಾರಣ ಸ್ಯಾಮುಯೆಲ್ಸ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. <br /> <br /> ನಿಷೇಧಕ್ಕೆ ಒಳಗಾಗುವ ಮುನ್ನ ಅವರು 29 ಟೆಸ್ಟ್ ಹಾಗೂ 107 ಏಕದಿನ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಂಗ್ಸ್ಟನ್, ಜಮೈಕಾ (ಪಿಟಿಐ):</strong> ವೆಸ್ಟ್ ಇಂಡೀಸ್ನ ಬ್ಯಾಟ್ಸ್ಮನ್ ಮಾರ್ಲಾನ್ ಸ್ಯಾಮುಯೆಲ್ಸ್ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಲಭಿಸಿದ್ದ ಅವಕಾಶವನ್ನು ತಿರಸ್ಕರಿಸಿದ್ದಾರೆ. ಭಾರತಕ್ಕೆ ಬಂದರೆ ಬಂಧನಕ್ಕೊಳಗಾಗುವ ಭೀತಿಯಿಂದ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ‘ದಿ ಟ್ರಿನಿಡಾಡ್ ಎಕ್ಸ್ಪ್ರೆಸ್’ ಪತ್ರಿಕೆ ವರದಿ ಮಾಡಿದೆ.<br /> <br /> ಗಾಯಾಳು ಡ್ವೇಯ್ನಿ ಬ್ರಾವೊಗೆ ಬದಲಿ ಆಟಗಾರನಾಗಿ ಸ್ಯಾಮುಯೆಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಬಯಸಿತ್ತು. ಆದರೆ ವಿಂಡೀಸ್ ಮಂಡಳಿ ಮುಂದಿಟ್ಟ ಪ್ರಸ್ತಾಪವನ್ನು ಸ್ಯಾಮುಯೆಲ್ಸ್ ತಿರಸ್ಕರಿಸಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.<br /> <br /> ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ ಆರೋಪದಲ್ಲಿ ಸ್ಯಾಮುಯೆಲ್ಸ್ 2006 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ (ಐಸಿಸಿ) ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. <br /> <br /> ಪಂದ್ಯದ ಕುರಿತ ಮಾಹಿತಿಗಳನ್ನು ಬುಕ್ಕಿಗಳಿಗೆ ನೀಡಿದ ಆರೋಪ ಸ್ಯಾಮುಯೆಲ್ಸ್ ಮೇಲಿತ್ತು. ಬುಕ್ಕಿಗಳ ಜೊತೆ ಅವರು ನಡೆಸಿದ್ದ ದೂರವಾಣಿ ಸಂಭಾಷಣೆಯ ಮಾಹಿತಿ ದೆಹಲಿ ಪೊಲೀಸರಿಗೆ ಲಭಿಸಿತ್ತು. <br /> <br /> ಇದರ ಆಧಾರದಲ್ಲಿ ಐಸಿಸಿ 2006ರ ಮೇ ತಿಂಗಳಲ್ಲಿ ಇವರ ಮೇಲೆ ನಿಷೇಧ ಹೇರಿತ್ತು. ‘ಆಟದ ಬಗ್ಗೆ ಮೊದಲೇ ಮಾಹಿತಿ ನೀಡಿದ’ ಆರೋಪವನ್ನು ಐಸಿಸಿ ಇವರ ಮೇಲೆ ಹೊರಿಸಿತ್ತು. <br /> <br /> ಸ್ಯಾಮುಯೆಲ್ಸ್ ಅವರು ಆಡಲು ಒಪ್ಪದ ಕಾರಣ ವಿಂಡೀಸ್ ಮಂಡಳಿ ಬ್ರಾವೊಗೆ ಬದಲು ದೇವೇಂದ್ರ ಬಿಶೂ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದ ವರದಿ ವಿವರಿಸಿದೆ. ಆದರೆ ವಿಂಡೀಸ್ ಮಂಡಳಿಯ ಅಧಿಕಾರಿ ಇಮ್ರಾನ್ ಖಾನ್ ಅವರು ಈ ವರದಿಯನ್ನು ಖಚಿತಪಡಿಸಿಯೂ ಇಲ್ಲ, ನಿರಾಕರಿಸಿಯೂ ಇಲ್ಲ. <br /> <br /> ನಿಷೇಧ ಶಿಕ್ಷೆಯ ಅವಧಿ ಕೊನೆಗೊಂಡಿರುವ ಕಾರಣ ಸ್ಯಾಮುಯೆಲ್ಸ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. <br /> <br /> ನಿಷೇಧಕ್ಕೆ ಒಳಗಾಗುವ ಮುನ್ನ ಅವರು 29 ಟೆಸ್ಟ್ ಹಾಗೂ 107 ಏಕದಿನ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>