<p><strong>ನವದೆಹಲಿ (ಪ್ರಜಾವಾಣಿ ವಾರ್ತೆ/ಪಿಐಟಿ): </strong>ಪ್ರಣವ್ ಮುಖರ್ಜಿ ಶುಕ್ರವಾರ ಮಂಡಿಸಿದ ಬಜೆಟ್ಗೆ ವಿರೋಧ ಪಕ್ಷಗಳು ಹಾಗೂ `ಯುಪಿಎ~ ಮಿತ್ರ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.<br /> <br /> ಯಾವಾಗಲೂ ಸರ್ಕಾರದ ವಿರುದ್ಧ ಕಿಡಿಕಾರುವ `ಯುಪಿಎ~ ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಈ ಬಜೆಟ್ ಸಹಿಸಲರ್ಹ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂದೋಪಾಧ್ಯಾಯ ಪಶ್ಚಿಮ ಬಂಗಾಳಕ್ಕೆ ನೀಡಿರುವ ಪರಿಹಾರದ ಪ್ಯಾಕೇಜ್ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.<br /> <br /> ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಬಿಎಸ್ಪಿ ಇದು `ನಗರ ಕೇಂದ್ರಿತ~ ಎಂದು ಅಭಿಪ್ರಾಯ ಪಟ್ಟಿದೆ. <br /> ಸರ್ಕಾರದ ಮತ್ತೊಬ್ಬ ಮಿತ್ರ ಪಕ್ಷವಾಗಿರುವ ಡಿಎಂಕೆ, ಬಜೆಟ್ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಶ್ಲಾಘಿಸಿದೆ.<br /> ವಿರೋಧ ಪಕ್ಷಗಳು ಬಜೆಟ್ ಜನವಿರೋಧಿಯಾಗಿದೆ, ನೀರಸವಾಗಿದೆ ಎಂದು ಟೀಕಿಸಿವೆ.<br /> <br /> ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಈ ಬಜೆಟ್ ಜನವಿರೋಧಿಯಾಗಿದೆ. ಮತ್ತಷ್ಟು ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದೆ.ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಎಂ, ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆಗೆ ಇದು ಕಾರಣವಾಗಲಿದೆ ಎಂದಿದೆ.<br /> <br /> ಭಾರತ ಮತ್ತೊಮ್ಮೆ ತಲೆ ಎತ್ತುವ ಹಾದಿಯಲ್ಲಿದೆ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ. ಆರ್ಥಿಕ ಸೇರ್ಪಡೆಯ ಬಜೆಟ್ ಬದಲಾಗಿ ಆರ್ಥಿಕ ಬಲವರ್ಧನೆಯ ಹೆಸರಿನಲ್ಲಿ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.<br /> <br /> ಈ ಬಜೆಟ್ ನಿಷ್ಪರಿಣಾಮಕಾರಿ ಹಾಗೂ ಯಾಂತ್ರಿಕವಾಗಿದೆ ಎಂದು ಹೇಳಿರುವ ಸಿಪಿಐ ನಾಯಕ ಗುರುದಾಸ್ ದಾಸ್ಗುಪ್ತ, ಹಣಕಾಸು ಸಚಿವಾಲಯದ ಗುಮಾಸ್ತರೇ ಇದನ್ನು ಸಿದ್ಧಪಡಿಸಬಹುದಿತ್ತು. <br /> ಅದಕ್ಕಾಗಿ ಪ್ರಣವ್ ಮುಖರ್ಜಿ ಶ್ರಮವಹಿಸುವ ಅಗತ್ಯ ಇರಲಿಲ್ಲ ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪ್ರಜಾವಾಣಿ ವಾರ್ತೆ/ಪಿಐಟಿ): </strong>ಪ್ರಣವ್ ಮುಖರ್ಜಿ ಶುಕ್ರವಾರ ಮಂಡಿಸಿದ ಬಜೆಟ್ಗೆ ವಿರೋಧ ಪಕ್ಷಗಳು ಹಾಗೂ `ಯುಪಿಎ~ ಮಿತ್ರ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.<br /> <br /> ಯಾವಾಗಲೂ ಸರ್ಕಾರದ ವಿರುದ್ಧ ಕಿಡಿಕಾರುವ `ಯುಪಿಎ~ ಭಾಗವಾಗಿರುವ ತೃಣಮೂಲ ಕಾಂಗ್ರೆಸ್ ಈ ಬಜೆಟ್ ಸಹಿಸಲರ್ಹ ಎಂದು ಹೇಳಿದೆ. ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂದೋಪಾಧ್ಯಾಯ ಪಶ್ಚಿಮ ಬಂಗಾಳಕ್ಕೆ ನೀಡಿರುವ ಪರಿಹಾರದ ಪ್ಯಾಕೇಜ್ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.<br /> <br /> ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಬಿಎಸ್ಪಿ ಇದು `ನಗರ ಕೇಂದ್ರಿತ~ ಎಂದು ಅಭಿಪ್ರಾಯ ಪಟ್ಟಿದೆ. <br /> ಸರ್ಕಾರದ ಮತ್ತೊಬ್ಬ ಮಿತ್ರ ಪಕ್ಷವಾಗಿರುವ ಡಿಎಂಕೆ, ಬಜೆಟ್ ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಶ್ಲಾಘಿಸಿದೆ.<br /> ವಿರೋಧ ಪಕ್ಷಗಳು ಬಜೆಟ್ ಜನವಿರೋಧಿಯಾಗಿದೆ, ನೀರಸವಾಗಿದೆ ಎಂದು ಟೀಕಿಸಿವೆ.<br /> <br /> ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಈ ಬಜೆಟ್ ಜನವಿರೋಧಿಯಾಗಿದೆ. ಮತ್ತಷ್ಟು ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದೆ.ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಪಿಎಂ, ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆಗೆ ಇದು ಕಾರಣವಾಗಲಿದೆ ಎಂದಿದೆ.<br /> <br /> ಭಾರತ ಮತ್ತೊಮ್ಮೆ ತಲೆ ಎತ್ತುವ ಹಾದಿಯಲ್ಲಿದೆ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ. ಆರ್ಥಿಕ ಸೇರ್ಪಡೆಯ ಬಜೆಟ್ ಬದಲಾಗಿ ಆರ್ಥಿಕ ಬಲವರ್ಧನೆಯ ಹೆಸರಿನಲ್ಲಿ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.<br /> <br /> ಈ ಬಜೆಟ್ ನಿಷ್ಪರಿಣಾಮಕಾರಿ ಹಾಗೂ ಯಾಂತ್ರಿಕವಾಗಿದೆ ಎಂದು ಹೇಳಿರುವ ಸಿಪಿಐ ನಾಯಕ ಗುರುದಾಸ್ ದಾಸ್ಗುಪ್ತ, ಹಣಕಾಸು ಸಚಿವಾಲಯದ ಗುಮಾಸ್ತರೇ ಇದನ್ನು ಸಿದ್ಧಪಡಿಸಬಹುದಿತ್ತು. <br /> ಅದಕ್ಕಾಗಿ ಪ್ರಣವ್ ಮುಖರ್ಜಿ ಶ್ರಮವಹಿಸುವ ಅಗತ್ಯ ಇರಲಿಲ್ಲ ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>