<p>ಕ್ರಿಕೆಟ್ ಇಂದು ಭಾರತದಲ್ಲಿ ಬಹುಶಃ ಸಿನಿಮಾಗಿಂತಲೂ ಜನಪ್ರಿಯವೆಂದರೆ ತಪ್ಪಾಗಲಾರದು.<br /> <br /> ಮಕ್ಕಳಿಂದ ವೃದ್ಧರವರೆಗೂ ಇದರ ಬಗ್ಗೆ ಆಸಕ್ತಿ. ಕಚೇರಿಗಳಲ್ಲಿ, ಹೋಟೆಲ್ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸಾಧಾರಣವಾಗಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಇದರ ಬಗ್ಗೆ ಚರ್ಚೆ, ಟೀಕೆ ಆಗುತ್ತಿರುವುದು ಸಾಮಾನ್ಯ ದೃಶ್ಯ.<br /> <br /> ಪ್ರಮುಖ ಪಂದ್ಯಗಳೇನಾದರೂ ನಡೆಯುವ ದಿನಗಳಲ್ಲಿ ಬಹಳಷ್ಟು ಕಚೇರಿಗಳಲ್ಲಿ ಕೆಲಸಗಳು ಅಷ್ಟಕಷ್ಟೆ. ಅದರಲ್ಲೂ ಭಾರತ - ಪಾಕಿಸ್ತಾನ ಪಂದ್ಯವೇನಾದರೂ ಇದ್ದರೆ, ಅಂದು ಅನೇಕರು ತಮ್ಮ ಕೆಲಸಗಳನ್ನು ಮುಂದೂಡುತ್ತಾರೆ. ಅನೇಕರು ರಜೆ ಹಾಕಿ ಟಿ.ವಿ.ಗಳ ಮುಂದೆ ಕೂರುತ್ತಾರೆ.<br /> <br /> ಕೋಟ್ಯಂತರ ಜನರನ್ನು ರಮಿಸುವ, ಕುತೂಹಲ ಕೆರಳಿಸುವ, ಮನರಂಜನೆ ನೀಡುವ, ಈ ಆಟದಲ್ಲಿ ಕಳ್ಳಾಟ ಹೊಕ್ಕಿರುವುದು ಆಘಾತ ತಂದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿ.ಸಿ.ಸಿ.ಐ. ಇಂತಹ ಸಂಸ್ಥೆಯ `ತಲೆ' ಶ್ರೀನಿವಾಸನ್. ಇವರ ಅಳಿಯ ಕಳ್ಳಾಟದಲ್ಲಿ ಪ್ರಮುಖ ಪಾತ್ರವಹಿಸಿ ಬಂಧನವಾಗಿದ್ದು, ಇದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡದೆ ನಾಟಕವಾಡಿದ್ದು ನಿಜಕ್ಕೂ ಅಸಹ್ಯವೆನಿಸಿತು. ಶ್ರೀಶಾಂತನಿಂದ ಶ್ರೀನಿವಾಸನ್ರವರೆಗೂ ಈ ನಾಟಕ ನಡೆದಿದೆ.<br /> <br /> ಇನ್ನು ಕ್ರಿಕೆಟ್ ಬಗ್ಗೆ ಬಹಳಷ್ಟು ಮಾತನಾಡುವ ದಿಗ್ಗಜರಾದ ಗಾವಸ್ಕರ್, ರವಿಶಾಸ್ತ್ರಿ, ಸಂಜಯ್ ಮಾಂಜ್ರೇಕರ್ ಇದರ ಬಗ್ಗೆ ತುಟಿಬಿಚ್ಚದಿರುವುದು ಆಶ್ಚರ್ಯವಾಗಿದೆ. ಇಷ್ಟು ರಾದ್ಧಾಂತವಾಗುತ್ತಿದ್ದರೂ ಭಾರತ ತಂಡದ ನಾಯಕ ದೋನಿ ಮೌನವಹಿಸಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ಐಪಿಎಲ್ನಿಂದ ಕ್ರಿಕೆಟಿಗರು ಶ್ರೀಮಂತರಾದರು. ಕ್ರಿಕೆಟ್ ಬಡವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ರಿಕೆಟ್ ಇಂದು ಭಾರತದಲ್ಲಿ ಬಹುಶಃ ಸಿನಿಮಾಗಿಂತಲೂ ಜನಪ್ರಿಯವೆಂದರೆ ತಪ್ಪಾಗಲಾರದು.<br /> <br /> ಮಕ್ಕಳಿಂದ ವೃದ್ಧರವರೆಗೂ ಇದರ ಬಗ್ಗೆ ಆಸಕ್ತಿ. ಕಚೇರಿಗಳಲ್ಲಿ, ಹೋಟೆಲ್ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಸಾಧಾರಣವಾಗಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಇದರ ಬಗ್ಗೆ ಚರ್ಚೆ, ಟೀಕೆ ಆಗುತ್ತಿರುವುದು ಸಾಮಾನ್ಯ ದೃಶ್ಯ.<br /> <br /> ಪ್ರಮುಖ ಪಂದ್ಯಗಳೇನಾದರೂ ನಡೆಯುವ ದಿನಗಳಲ್ಲಿ ಬಹಳಷ್ಟು ಕಚೇರಿಗಳಲ್ಲಿ ಕೆಲಸಗಳು ಅಷ್ಟಕಷ್ಟೆ. ಅದರಲ್ಲೂ ಭಾರತ - ಪಾಕಿಸ್ತಾನ ಪಂದ್ಯವೇನಾದರೂ ಇದ್ದರೆ, ಅಂದು ಅನೇಕರು ತಮ್ಮ ಕೆಲಸಗಳನ್ನು ಮುಂದೂಡುತ್ತಾರೆ. ಅನೇಕರು ರಜೆ ಹಾಕಿ ಟಿ.ವಿ.ಗಳ ಮುಂದೆ ಕೂರುತ್ತಾರೆ.<br /> <br /> ಕೋಟ್ಯಂತರ ಜನರನ್ನು ರಮಿಸುವ, ಕುತೂಹಲ ಕೆರಳಿಸುವ, ಮನರಂಜನೆ ನೀಡುವ, ಈ ಆಟದಲ್ಲಿ ಕಳ್ಳಾಟ ಹೊಕ್ಕಿರುವುದು ಆಘಾತ ತಂದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿ.ಸಿ.ಸಿ.ಐ. ಇಂತಹ ಸಂಸ್ಥೆಯ `ತಲೆ' ಶ್ರೀನಿವಾಸನ್. ಇವರ ಅಳಿಯ ಕಳ್ಳಾಟದಲ್ಲಿ ಪ್ರಮುಖ ಪಾತ್ರವಹಿಸಿ ಬಂಧನವಾಗಿದ್ದು, ಇದರಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡದೆ ನಾಟಕವಾಡಿದ್ದು ನಿಜಕ್ಕೂ ಅಸಹ್ಯವೆನಿಸಿತು. ಶ್ರೀಶಾಂತನಿಂದ ಶ್ರೀನಿವಾಸನ್ರವರೆಗೂ ಈ ನಾಟಕ ನಡೆದಿದೆ.<br /> <br /> ಇನ್ನು ಕ್ರಿಕೆಟ್ ಬಗ್ಗೆ ಬಹಳಷ್ಟು ಮಾತನಾಡುವ ದಿಗ್ಗಜರಾದ ಗಾವಸ್ಕರ್, ರವಿಶಾಸ್ತ್ರಿ, ಸಂಜಯ್ ಮಾಂಜ್ರೇಕರ್ ಇದರ ಬಗ್ಗೆ ತುಟಿಬಿಚ್ಚದಿರುವುದು ಆಶ್ಚರ್ಯವಾಗಿದೆ. ಇಷ್ಟು ರಾದ್ಧಾಂತವಾಗುತ್ತಿದ್ದರೂ ಭಾರತ ತಂಡದ ನಾಯಕ ದೋನಿ ಮೌನವಹಿಸಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ಐಪಿಎಲ್ನಿಂದ ಕ್ರಿಕೆಟಿಗರು ಶ್ರೀಮಂತರಾದರು. ಕ್ರಿಕೆಟ್ ಬಡವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>