<p>ಜಿಲ್ಲೆಯಲ್ಲಿ ವ್ಯಾಪಿಸಿರುವ ಬರಗಾಲದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಕೆರೆಗಳು ಬತ್ತುತ್ತಿವೆ. ಬತ್ತಿರುವ ಕೆರೆಗಳ ಪ್ರದೇಶವು ಒತ್ತುವರಿಯಾಗುತ್ತಿದ್ದು, ಅಲ್ಲಿ ಮನೆಗಳನ್ನು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.<br /> <br /> ಕೆರೆಗಳು ಬತ್ತುವುದು ಹಿಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಯಾವ ಸ್ವರೂಪದಲ್ಲಿ ಕಾಡಬಹುದು ಎಂಬ ಆತಂಕ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ. <br /> <br /> ಆದರೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮಸಮುದ್ರ ಇತರ ಎಲ್ಲ ಕೆರೆಗಳಿಗಿಂತ ತುಂಬ ಭಿನ್ನ. ಅಚ್ಚರಿಯ ಸಂಗತಿಯೆಂದರೆ, ಸರಿಸುಮಾರು 122 ವರ್ಷಗಳಾದರೂ ರಾಮಸಮುದ್ರ ಕೆರೆಯು ಒಮ್ಮೆಯೂ ಬತ್ತಿಲ್ಲ!!<br /> <br /> 122 ವರ್ಷಗಳಲ್ಲಿ ಹಲವಾರು ಮಳೆಗಾಲ, ಬೇಸಿಗೆಗಾಲ ಕಂಡಿರುವ ರಾಮಸಮುದ್ರ ಕೆರೆಗೆ ಇದುವರೆಗೆ ಬರಗಾಲದ ಬಾಧೆ ತಟ್ಟಿಲ್ಲ. ಕೆರೆಯ ಸುತ್ತಮುತ್ತಲಿನ ಸಣ್ಣಪುಟ್ಟ ಕೆರೆಗಳು ಬರಿದಾಗಿದ್ದರೂ ಮತ್ತು ಬಾವಿಗಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದ್ದರೂ ಈ ಕೆರೆ ಮಾತ್ರ ನೀರು ತುಂಬಿಕೊಂಡೇ ಇದೆ. <br /> <br /> ಮಳೆಯಾಗದಿದ್ದಾಗ ಮತ್ತು ಬಿಸಿಲಿನ ಪ್ರಕೋಪ ತೀವ್ರವಿದ್ದಾಗ, ನೀರಿನ ಪ್ರಮಾಣ ಕಡಿಮೆಯಾಗಿದೆ ಹೊರತು ಕೆರೆ ಅಂಗಳ ಒಮ್ಮೆಯು ಬರಿದಾಗಿಲ್ಲ. ಈ ಕಾರಣದಿಂದಲೇ ಸಾದಲಿ, ಎಸ್.ದೇವಗಾನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಕೆರೆಯನ್ನು ದೇವತೆಯೆಂದೇ ಪೂಜಿಸುತ್ತಾರೆ. `ಜಲಮಾತೆ~ ಇರುವವರೆಗೆ ತಮಗೆ ಯಾವುದೇ ರೀತಿಯ ಸಮಸ್ಯೆ ಕಾಡುವುದಿಲ್ಲ ಎಂಬ ಭಾವನೆ ಅವರಲ್ಲಿದೆ.<br /> <br /> ವಿಶಿಷ್ಟವಾದ ಇತಿಹಾಸವನ್ನು ಹೊಂದಿರುವ ರಾಮಸಮುದ್ರ ಕೆರೆಯು ಅಸ್ತಿತ್ವಕ್ಕೆ ಬಂದಿದ್ದು, 1884-1889ರ ಅವಧಿಯಲ್ಲಿ. ಕೃಷಿ ನೀರಾವರಿಗೆಂದೇ ಆಗಿನ ಮೈಸೂರು ದಿವಾನರಾಗಿದ್ದ ಶೇಷಗಿರಿ ಅಯ್ಯರ್ ಮತ್ತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. <br /> <br /> ಸುಮಾರು ಐದು ವರ್ಷಗಳ ಕಾಲ ಕಾಮಗಾರಿ ಪೂರ್ಣಗೊಂಡ ನಂತರ ಅಸ್ತಿತ್ವಕ್ಕೆ ಬಂದ ಈ ಕೆರೆಯು ಸಾದಲಿ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕಿನ ಜನರಿಗೆ ತುಂಬ ಉಪಯುಕ್ತವಾಯಿತು. ಮಳೆಯಾದಾಗಲೆಲ್ಲ ತುಂಬಿ ಹರಿಯುತ್ತಿದ್ದ ನೀರನ್ನು ಕಾಲುವೆ ಮೂಲಕ ಜಮೀನುಗಳಿಗೆ ಹರಿಸಲಾಗುತಿತ್ತು. ಕಾಲುವೆ ಮೂಲಕ ಹರಿಯುವ ನೀರಿನಿಂದ ಉತ್ತಮ ಬೆಳೆ ಕಾಣುತ್ತಿದ್ದ ರೈತರು ಸಂತೋಷದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು.<br /> <br /> ಈ ಕೆರೆಯ ಒಟ್ಟು ಜಲಾವೃತ ಪ್ರದೇಶ 188 ಹೆಕ್ಟರ್ ಆಗಿದ್ದು, ಪ್ರಸ್ತುತ ಅಚ್ಚುಕಟ್ಟು ಪ್ರದೇಶ 382 ಹೆಕ್ಟರ್ಗಳಷ್ಟು ಇದೆ. ಕೆರೆಯ ಪ್ರದೇಶದ ಉದ್ದ 462 ಮೀಟರ್ ಆಗಿದ್ದು, ಇದರ ಗರಿಷ್ಠ 10 ಮೀಟರ್. ಬಲದಂಡೆಯ ಕಾಲುವೆ ಸುಮಾರು 9 ಸಾವಿರ ಮೀಟರ್ಗಳಷ್ಟು ಉದ್ದವಿದ್ದರೆ, ಎಡದಂಡೆಯ ಕಾಲುವೆ ಸುಮಾರು 7000 ಮೀಟರ್ಗಳಷ್ಟು ಉದ್ದವಿದೆ. <br /> <br /> `ವರ್ಷಗಳು ಕಳೆದಂತೆ ಕೆರೆಗಳಿಗೆ ಸಂಬಂಧಿಸಿದಂತೆ ಕೆಲವಾರು ಬದಲಾವಣೆಗಳು ನಡೆದವು. ರಾಜ್ಯ ಸರ್ಕಾರದ ಜಲಸಂವರ್ಧನೆ ಯೋಜನೆಯಡಿ ಕೆರೆಯ ಸಂರಕ್ಷಣೆಗಾಗಿ ರಾಮಸಮುದ್ರ ಕೆರೆ ಬಳಕೆದಾರರ ಸಂಘವನ್ನು ರಚಿಸಲಾಯಿತು. ಕೆರೆ ನಿರ್ವಹಣೆ ಮತ್ತು ಬಳಕೆ ಜವಾಬ್ದಾರಿಯನ್ನು ಕೆರೆ ಬಳಕೆದಾರರ ಸಂಘಕ್ಕೆ ವಹಿಸಲಾಯಿತು. <br /> <br /> ಮೀನುಗಾರಿಕೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಸದಸ್ಯರ ಮಟ್ಟದಲ್ಲಿ ಹಲವಾರು ಬಾರಿಯು ಚರ್ಚೆ ನಡೆಸಲಾಯಿತು. ಆದರೆ ಅನುದಾನದ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಕೆರೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಆಗಲಿಲ್ಲ~ ಎಂದು ಗ್ರಾಮಸ್ಥರು ಹೇಳುತ್ತಾರೆ.<br /> <br /> `ಕೆರೆ ಪ್ರದೇಶವನ್ನು ಸುಂದರ ಪ್ರವಾಸಿ ತಾಣವಾಗಿಸುವ ಉದ್ದೇಶ ಗ್ರಾಮಸ್ಥರಿಗಿದೆ. ಇದಕ್ಕೆಂದೇ ಹಲವಾರು ಬಾರಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಸಮರ್ಪಕ ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳು ಇರದ ಕಾರಣ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿಲ್ಲ. <br /> <br /> ಈ ಕೆರೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸುತ್ತಮುತ್ತಲ ಭಾಗಗಳಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ಕುಡಿಯುವ ನೀರಿಗೂ ಸಹ ಈ ಕೆರೆಯನ್ನು ಬಳಸಬಹುದು~ ಎಂದು ಗ್ರಾಮಸ್ಥ ಡಿ.ವಿ.ಪ್ರಸಾದ್ ಎನ್ನುತ್ತಾರೆ.<br /> -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಿಲ್ಲೆಯಲ್ಲಿ ವ್ಯಾಪಿಸಿರುವ ಬರಗಾಲದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಕೆರೆಗಳು ಬತ್ತುತ್ತಿವೆ. ಬತ್ತಿರುವ ಕೆರೆಗಳ ಪ್ರದೇಶವು ಒತ್ತುವರಿಯಾಗುತ್ತಿದ್ದು, ಅಲ್ಲಿ ಮನೆಗಳನ್ನು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.<br /> <br /> ಕೆರೆಗಳು ಬತ್ತುವುದು ಹಿಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಯಾವ ಸ್ವರೂಪದಲ್ಲಿ ಕಾಡಬಹುದು ಎಂಬ ಆತಂಕ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ. <br /> <br /> ಆದರೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮಸಮುದ್ರ ಇತರ ಎಲ್ಲ ಕೆರೆಗಳಿಗಿಂತ ತುಂಬ ಭಿನ್ನ. ಅಚ್ಚರಿಯ ಸಂಗತಿಯೆಂದರೆ, ಸರಿಸುಮಾರು 122 ವರ್ಷಗಳಾದರೂ ರಾಮಸಮುದ್ರ ಕೆರೆಯು ಒಮ್ಮೆಯೂ ಬತ್ತಿಲ್ಲ!!<br /> <br /> 122 ವರ್ಷಗಳಲ್ಲಿ ಹಲವಾರು ಮಳೆಗಾಲ, ಬೇಸಿಗೆಗಾಲ ಕಂಡಿರುವ ರಾಮಸಮುದ್ರ ಕೆರೆಗೆ ಇದುವರೆಗೆ ಬರಗಾಲದ ಬಾಧೆ ತಟ್ಟಿಲ್ಲ. ಕೆರೆಯ ಸುತ್ತಮುತ್ತಲಿನ ಸಣ್ಣಪುಟ್ಟ ಕೆರೆಗಳು ಬರಿದಾಗಿದ್ದರೂ ಮತ್ತು ಬಾವಿಗಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದ್ದರೂ ಈ ಕೆರೆ ಮಾತ್ರ ನೀರು ತುಂಬಿಕೊಂಡೇ ಇದೆ. <br /> <br /> ಮಳೆಯಾಗದಿದ್ದಾಗ ಮತ್ತು ಬಿಸಿಲಿನ ಪ್ರಕೋಪ ತೀವ್ರವಿದ್ದಾಗ, ನೀರಿನ ಪ್ರಮಾಣ ಕಡಿಮೆಯಾಗಿದೆ ಹೊರತು ಕೆರೆ ಅಂಗಳ ಒಮ್ಮೆಯು ಬರಿದಾಗಿಲ್ಲ. ಈ ಕಾರಣದಿಂದಲೇ ಸಾದಲಿ, ಎಸ್.ದೇವಗಾನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಕೆರೆಯನ್ನು ದೇವತೆಯೆಂದೇ ಪೂಜಿಸುತ್ತಾರೆ. `ಜಲಮಾತೆ~ ಇರುವವರೆಗೆ ತಮಗೆ ಯಾವುದೇ ರೀತಿಯ ಸಮಸ್ಯೆ ಕಾಡುವುದಿಲ್ಲ ಎಂಬ ಭಾವನೆ ಅವರಲ್ಲಿದೆ.<br /> <br /> ವಿಶಿಷ್ಟವಾದ ಇತಿಹಾಸವನ್ನು ಹೊಂದಿರುವ ರಾಮಸಮುದ್ರ ಕೆರೆಯು ಅಸ್ತಿತ್ವಕ್ಕೆ ಬಂದಿದ್ದು, 1884-1889ರ ಅವಧಿಯಲ್ಲಿ. ಕೃಷಿ ನೀರಾವರಿಗೆಂದೇ ಆಗಿನ ಮೈಸೂರು ದಿವಾನರಾಗಿದ್ದ ಶೇಷಗಿರಿ ಅಯ್ಯರ್ ಮತ್ತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. <br /> <br /> ಸುಮಾರು ಐದು ವರ್ಷಗಳ ಕಾಲ ಕಾಮಗಾರಿ ಪೂರ್ಣಗೊಂಡ ನಂತರ ಅಸ್ತಿತ್ವಕ್ಕೆ ಬಂದ ಈ ಕೆರೆಯು ಸಾದಲಿ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕಿನ ಜನರಿಗೆ ತುಂಬ ಉಪಯುಕ್ತವಾಯಿತು. ಮಳೆಯಾದಾಗಲೆಲ್ಲ ತುಂಬಿ ಹರಿಯುತ್ತಿದ್ದ ನೀರನ್ನು ಕಾಲುವೆ ಮೂಲಕ ಜಮೀನುಗಳಿಗೆ ಹರಿಸಲಾಗುತಿತ್ತು. ಕಾಲುವೆ ಮೂಲಕ ಹರಿಯುವ ನೀರಿನಿಂದ ಉತ್ತಮ ಬೆಳೆ ಕಾಣುತ್ತಿದ್ದ ರೈತರು ಸಂತೋಷದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು.<br /> <br /> ಈ ಕೆರೆಯ ಒಟ್ಟು ಜಲಾವೃತ ಪ್ರದೇಶ 188 ಹೆಕ್ಟರ್ ಆಗಿದ್ದು, ಪ್ರಸ್ತುತ ಅಚ್ಚುಕಟ್ಟು ಪ್ರದೇಶ 382 ಹೆಕ್ಟರ್ಗಳಷ್ಟು ಇದೆ. ಕೆರೆಯ ಪ್ರದೇಶದ ಉದ್ದ 462 ಮೀಟರ್ ಆಗಿದ್ದು, ಇದರ ಗರಿಷ್ಠ 10 ಮೀಟರ್. ಬಲದಂಡೆಯ ಕಾಲುವೆ ಸುಮಾರು 9 ಸಾವಿರ ಮೀಟರ್ಗಳಷ್ಟು ಉದ್ದವಿದ್ದರೆ, ಎಡದಂಡೆಯ ಕಾಲುವೆ ಸುಮಾರು 7000 ಮೀಟರ್ಗಳಷ್ಟು ಉದ್ದವಿದೆ. <br /> <br /> `ವರ್ಷಗಳು ಕಳೆದಂತೆ ಕೆರೆಗಳಿಗೆ ಸಂಬಂಧಿಸಿದಂತೆ ಕೆಲವಾರು ಬದಲಾವಣೆಗಳು ನಡೆದವು. ರಾಜ್ಯ ಸರ್ಕಾರದ ಜಲಸಂವರ್ಧನೆ ಯೋಜನೆಯಡಿ ಕೆರೆಯ ಸಂರಕ್ಷಣೆಗಾಗಿ ರಾಮಸಮುದ್ರ ಕೆರೆ ಬಳಕೆದಾರರ ಸಂಘವನ್ನು ರಚಿಸಲಾಯಿತು. ಕೆರೆ ನಿರ್ವಹಣೆ ಮತ್ತು ಬಳಕೆ ಜವಾಬ್ದಾರಿಯನ್ನು ಕೆರೆ ಬಳಕೆದಾರರ ಸಂಘಕ್ಕೆ ವಹಿಸಲಾಯಿತು. <br /> <br /> ಮೀನುಗಾರಿಕೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಸದಸ್ಯರ ಮಟ್ಟದಲ್ಲಿ ಹಲವಾರು ಬಾರಿಯು ಚರ್ಚೆ ನಡೆಸಲಾಯಿತು. ಆದರೆ ಅನುದಾನದ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಕೆರೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಆಗಲಿಲ್ಲ~ ಎಂದು ಗ್ರಾಮಸ್ಥರು ಹೇಳುತ್ತಾರೆ.<br /> <br /> `ಕೆರೆ ಪ್ರದೇಶವನ್ನು ಸುಂದರ ಪ್ರವಾಸಿ ತಾಣವಾಗಿಸುವ ಉದ್ದೇಶ ಗ್ರಾಮಸ್ಥರಿಗಿದೆ. ಇದಕ್ಕೆಂದೇ ಹಲವಾರು ಬಾರಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಸಮರ್ಪಕ ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳು ಇರದ ಕಾರಣ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿಲ್ಲ. <br /> <br /> ಈ ಕೆರೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸುತ್ತಮುತ್ತಲ ಭಾಗಗಳಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ಕುಡಿಯುವ ನೀರಿಗೂ ಸಹ ಈ ಕೆರೆಯನ್ನು ಬಳಸಬಹುದು~ ಎಂದು ಗ್ರಾಮಸ್ಥ ಡಿ.ವಿ.ಪ್ರಸಾದ್ ಎನ್ನುತ್ತಾರೆ.<br /> -</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>