<p><strong>ಹೊನ್ನಾವರ: </strong>ಪುರಾಣ ಪ್ರಸಿದ್ಧ ರಾಮ ತೀರ್ಥ ಬಳಿಯಿರುವ ಐತಿಹಾಸಿಕ ಅರೆ ಸಾಮಿ ಕೆರೆಯ ಅಭಿವೃದ್ಧಿಯ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರತಿಕ್ರಿಯೆ ನಿರಾಶಾದಾಯಕವಾಗಿದ್ದು ಸಚಿವರ ಈ ಧೋರಣೆಗೆ ಈ ಭಾಗದ ಪರಿಸರಪ್ರಿಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.<br /> <br /> ಅರೆಸಾಮಿ ಕೆರೆಗೆ ಸರ್ಕಾರ ಲಕ್ಷಾಂತರ ರೂ ಬಿಡುಗಡೆ ಮಾಡಿ ವರ್ಷ ಕಳೆದರೂ ಈ ಕಾಮಗಾರಿಯ ಟೆಂಡರ್ ನೀಡಿಲ್ಲ. ಸ್ಥಳೀಯ ಪಂಚಾಯಿತಿ ಕೆರೆಯ ಅಭಿವೃದ್ಧಿಗಾಗಿ ಶಾಶ್ವತ ಕಾಮಗಾರಿ ಕೈಗೊಳ್ಳುತ್ತಿಲ್ಲ. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಗಾಗಿ ಕೆರೆಯನ್ನು ತಮಗೆ ಹಸ್ತಾಂತರಿಸಬೇಕೆಂಬ ಮನವಿ ನೆನೆ ಗುದಿಗೆ ಬಿದ್ದಿದೆ.<br /> <br /> ಪರಿಸರ ಸಮ ತೋಲನ ದೃಷ್ಟಿಯಿಂದ ಮಹತ್ವದ್ದಾದ 39 ಎಕರೆ ವಿಸ್ತೀರ್ಣವುಳ್ಳ ಕೆರೆಯ ಅಭಿವೃದ್ಧಿಗೆ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಭಾನು ವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಕೆಲವು ನಾಗರಿಕರು ಒತ್ತಾಯಿಸಿದರು.<br /> <br /> ಅರೆಸಾಮಿ ಕೆರೆ ಕಂದಾಯ ಇಲಾಖೆಗೆ ಸೇರಿರುವುದರಿಂದ ಇದನ್ನು ಹಸ್ತಾಂತರಿಸಲು ಸಾಧ್ಯವಿಲ್ಲವೆಂಬ ತಹಶೀಲ್ದಾರರ ಹೇಳಿಕೆಯನ್ನು ಸರ್ಕಾರದ ನೀತಿ ನಿಯಮಾವಳಿಗಳನ್ನು ರೂಪಿಸುವ ಸ್ಥಾನದಲ್ಲಿರುವ ಸಚಿವರು ಪುರಸ್ಕರಿಸಿದ್ದು ಸರಿಯಲ್ಲ. <br /> <br /> ಕಂದಾಯ ಇಲಾಖೆಯಂತೆ ಅರಣ್ಯ ಇಲಾಖೆಯೂ ಸರ್ಕಾರದ ಇಲಾಖೆಯೇ ಆಗಿದ್ದು ಸಚಿವರು ಕೆರೆಯ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದು ಕೆರೆಯ ಅಭಿ ವೃದ್ಧಿಗಾಗಿ ಸಮಾನ ಮನಸ್ಕರ ಹೋರಾಟ ಮುಂದುವರಿಯುವುದಾಗಿ ತಿಳಿಸಿದ್ದಾರೆ.<br /> <br /> <strong>ಕನ್ನಡ ಕಸ್ತೂರಿ ಪರೀಕ್ಷೆ: ಉತ್ತಮ ಸಾಧನೆ<br /> </strong><br /> <strong>ಕಾರವಾರ: </strong>ದಾವಣಗೆರೆಯಲ್ಲಿ ನಡೆದ ಪ್ರಸಕ್ತ ಸಾಲಿನ ಕಸ್ತೂರಿ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಇಲ್ಲಿಯ ಹಿಂದು ಪ್ರೌಢ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟ ದಲ್ಲಿ 8, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ 9 ಸೇರಿದಂತೆ ಒಟ್ಟು 26 ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. <br /> <br /> <strong>ರಾಜ್ಯಮಟ್ಟ:</strong> ಶಾಲೆಯ ವಿದ್ಯಾರ್ಥಿ ಗಳಾಗಿರುವ ಶ್ರೀಕಾಂತ ಉತ್ತಂಗಿ ಮೂರು, ರಂಜಿತ ಅರಗೇಕರ ಮತ್ತು ಆಕಾಶ ನಾಯಕ-4, ಸಂದೇಶ ದುರ್ಗೇಕರ, ಯೋಗಿತಾ ದೇವಸ್ಕರ ದಾಕ್ಷಾಯಿಣಿ ಎಚ್ ನಾಯಕ, ಅಂಕಿತಾ ನಾಯಕ, ನೂತನಾ ಎಮ್ ನಾಯಕ-5 ರ್ಯಾಂಕ್ ಪಡೆದಿದ್ದಾರೆ.<br /> <br /> <strong>ಜಿಲ್ಲಾ ಮಟ್ಟ: </strong>ರೋಶನ ನಾಯಕ, ಮಯೂರ ಮಹೇಕರ, ವರ್ಷ ಕೋಳಿ-1 ವಿತೇಶ ನಾಯಕ, . ಸೌಮ್ಯ ಹುಲಸ್ವಾರ, ನಾಗವೇಣಿ ಅಣ್ವೇಕರ-2, ಸಂಜನಾ ಹರಿಕಂತ್ರ, ಅನಿಲಕುಮಾರ ಇಟಗಿ, ಶ್ರೇಯಾ ನಾಯ್ಕ-3 ನೇ ರ್ಯಾಂಕ್ ಪಡೆದಿದ್ದಾರೆ. <br /> <br /> <strong>ತಾಲ್ಲೂಕು ಮಟ್ಟ: </strong>ಶಾಮಿನ್ ಖಾನ್, ವಿನೂತ ಪ್ರಭು, ಶುಭೋದಯ ಅಜಗಾಂವಕರ-1, ಸುಜಯ ಮಹಾಲೆ, ಲಿಖಿತಾ ಅಣ್ವೇಕರ-2, ಅನುಷಾ ಬಿಣಗೇಕರ, ಅನುಶ್ರೀ ಶೇಟ್ಟಿ, ಮಗಜ ನಾಯ್ಕ, ಲಕ್ಷ್ಮೀ ತಳೇವಾಡಾ-3 ರ್ಯಾಂಕ್ ಪಡೆದಿದ್ದಾರೆ.<br /> <br /> ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಬಂಟ, ಎಚ್.ಆರ್.ಆಚಾರ್ಯ, ಮಂಗಲಾ ಶೇಜವಾಡರ್, ಸಂಗೀತಾ ಭಟ್, ಶೋಭಾ ನಾಯ್ಕ ಅಭಿನಂದಿ ಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗಿರುವ `ಸಂಘಟನಾ ಶಿಕ್ಷಕ ಪ್ರಮಾಣಪತ್ರ ಪಡೆದಿರುವ ಬಿ. ಎಚ್. ಕಂದಾರಿ ಅವರನ್ನೂ ಶಿಕ್ಷಕರು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ: </strong>ಪುರಾಣ ಪ್ರಸಿದ್ಧ ರಾಮ ತೀರ್ಥ ಬಳಿಯಿರುವ ಐತಿಹಾಸಿಕ ಅರೆ ಸಾಮಿ ಕೆರೆಯ ಅಭಿವೃದ್ಧಿಯ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರತಿಕ್ರಿಯೆ ನಿರಾಶಾದಾಯಕವಾಗಿದ್ದು ಸಚಿವರ ಈ ಧೋರಣೆಗೆ ಈ ಭಾಗದ ಪರಿಸರಪ್ರಿಯರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.<br /> <br /> ಅರೆಸಾಮಿ ಕೆರೆಗೆ ಸರ್ಕಾರ ಲಕ್ಷಾಂತರ ರೂ ಬಿಡುಗಡೆ ಮಾಡಿ ವರ್ಷ ಕಳೆದರೂ ಈ ಕಾಮಗಾರಿಯ ಟೆಂಡರ್ ನೀಡಿಲ್ಲ. ಸ್ಥಳೀಯ ಪಂಚಾಯಿತಿ ಕೆರೆಯ ಅಭಿವೃದ್ಧಿಗಾಗಿ ಶಾಶ್ವತ ಕಾಮಗಾರಿ ಕೈಗೊಳ್ಳುತ್ತಿಲ್ಲ. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಗಾಗಿ ಕೆರೆಯನ್ನು ತಮಗೆ ಹಸ್ತಾಂತರಿಸಬೇಕೆಂಬ ಮನವಿ ನೆನೆ ಗುದಿಗೆ ಬಿದ್ದಿದೆ.<br /> <br /> ಪರಿಸರ ಸಮ ತೋಲನ ದೃಷ್ಟಿಯಿಂದ ಮಹತ್ವದ್ದಾದ 39 ಎಕರೆ ವಿಸ್ತೀರ್ಣವುಳ್ಳ ಕೆರೆಯ ಅಭಿವೃದ್ಧಿಗೆ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಭಾನು ವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿ ಮಾಡಿದ ಕೆಲವು ನಾಗರಿಕರು ಒತ್ತಾಯಿಸಿದರು.<br /> <br /> ಅರೆಸಾಮಿ ಕೆರೆ ಕಂದಾಯ ಇಲಾಖೆಗೆ ಸೇರಿರುವುದರಿಂದ ಇದನ್ನು ಹಸ್ತಾಂತರಿಸಲು ಸಾಧ್ಯವಿಲ್ಲವೆಂಬ ತಹಶೀಲ್ದಾರರ ಹೇಳಿಕೆಯನ್ನು ಸರ್ಕಾರದ ನೀತಿ ನಿಯಮಾವಳಿಗಳನ್ನು ರೂಪಿಸುವ ಸ್ಥಾನದಲ್ಲಿರುವ ಸಚಿವರು ಪುರಸ್ಕರಿಸಿದ್ದು ಸರಿಯಲ್ಲ. <br /> <br /> ಕಂದಾಯ ಇಲಾಖೆಯಂತೆ ಅರಣ್ಯ ಇಲಾಖೆಯೂ ಸರ್ಕಾರದ ಇಲಾಖೆಯೇ ಆಗಿದ್ದು ಸಚಿವರು ಕೆರೆಯ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದು ಕೆರೆಯ ಅಭಿ ವೃದ್ಧಿಗಾಗಿ ಸಮಾನ ಮನಸ್ಕರ ಹೋರಾಟ ಮುಂದುವರಿಯುವುದಾಗಿ ತಿಳಿಸಿದ್ದಾರೆ.<br /> <br /> <strong>ಕನ್ನಡ ಕಸ್ತೂರಿ ಪರೀಕ್ಷೆ: ಉತ್ತಮ ಸಾಧನೆ<br /> </strong><br /> <strong>ಕಾರವಾರ: </strong>ದಾವಣಗೆರೆಯಲ್ಲಿ ನಡೆದ ಪ್ರಸಕ್ತ ಸಾಲಿನ ಕಸ್ತೂರಿ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಇಲ್ಲಿಯ ಹಿಂದು ಪ್ರೌಢ ಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟ ದಲ್ಲಿ 8, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ 9 ಸೇರಿದಂತೆ ಒಟ್ಟು 26 ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. <br /> <br /> <strong>ರಾಜ್ಯಮಟ್ಟ:</strong> ಶಾಲೆಯ ವಿದ್ಯಾರ್ಥಿ ಗಳಾಗಿರುವ ಶ್ರೀಕಾಂತ ಉತ್ತಂಗಿ ಮೂರು, ರಂಜಿತ ಅರಗೇಕರ ಮತ್ತು ಆಕಾಶ ನಾಯಕ-4, ಸಂದೇಶ ದುರ್ಗೇಕರ, ಯೋಗಿತಾ ದೇವಸ್ಕರ ದಾಕ್ಷಾಯಿಣಿ ಎಚ್ ನಾಯಕ, ಅಂಕಿತಾ ನಾಯಕ, ನೂತನಾ ಎಮ್ ನಾಯಕ-5 ರ್ಯಾಂಕ್ ಪಡೆದಿದ್ದಾರೆ.<br /> <br /> <strong>ಜಿಲ್ಲಾ ಮಟ್ಟ: </strong>ರೋಶನ ನಾಯಕ, ಮಯೂರ ಮಹೇಕರ, ವರ್ಷ ಕೋಳಿ-1 ವಿತೇಶ ನಾಯಕ, . ಸೌಮ್ಯ ಹುಲಸ್ವಾರ, ನಾಗವೇಣಿ ಅಣ್ವೇಕರ-2, ಸಂಜನಾ ಹರಿಕಂತ್ರ, ಅನಿಲಕುಮಾರ ಇಟಗಿ, ಶ್ರೇಯಾ ನಾಯ್ಕ-3 ನೇ ರ್ಯಾಂಕ್ ಪಡೆದಿದ್ದಾರೆ. <br /> <br /> <strong>ತಾಲ್ಲೂಕು ಮಟ್ಟ: </strong>ಶಾಮಿನ್ ಖಾನ್, ವಿನೂತ ಪ್ರಭು, ಶುಭೋದಯ ಅಜಗಾಂವಕರ-1, ಸುಜಯ ಮಹಾಲೆ, ಲಿಖಿತಾ ಅಣ್ವೇಕರ-2, ಅನುಷಾ ಬಿಣಗೇಕರ, ಅನುಶ್ರೀ ಶೇಟ್ಟಿ, ಮಗಜ ನಾಯ್ಕ, ಲಕ್ಷ್ಮೀ ತಳೇವಾಡಾ-3 ರ್ಯಾಂಕ್ ಪಡೆದಿದ್ದಾರೆ.<br /> <br /> ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಬಂಟ, ಎಚ್.ಆರ್.ಆಚಾರ್ಯ, ಮಂಗಲಾ ಶೇಜವಾಡರ್, ಸಂಗೀತಾ ಭಟ್, ಶೋಭಾ ನಾಯ್ಕ ಅಭಿನಂದಿ ಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗಿರುವ `ಸಂಘಟನಾ ಶಿಕ್ಷಕ ಪ್ರಮಾಣಪತ್ರ ಪಡೆದಿರುವ ಬಿ. ಎಚ್. ಕಂದಾರಿ ಅವರನ್ನೂ ಶಿಕ್ಷಕರು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>