<p><strong>ಕೂಡಲಸಂಗಮ: </strong>ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ನೀರು ಬರಿದಾಗಿರುವುದರಿಂದ ತೀರದ ಗ್ರಾಮಗಳಿಗೆ, ನಿತ್ಯ ಕೂಡಲಸಂಗಮಕ್ಕೆ ಬರುವ ಭಕ್ತರಿಗೆ ನೀರಿಲ್ಲ.<br /> ಕೂಡಲಸಂಗಮದಲ್ಲಿ ಹರಡಿಕೊಂಡಿದ್ದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಬರಿದಾಗಿದ್ದು, ಮರುಭೂಮಿಯಂಗಿವೆ.<br /> <br /> ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸುವ ಭಕ್ತರು ಅನಿವಾರ್ಯವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯವರು ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಿ ಸಂಗಮನಾಥನ ದರ್ಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.<br /> <br /> ಕೃಷ್ಣಾ ನದಿಯ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನೇ ಯಂತ್ರಗಳ ಮೂಲಕ ತಾತ್ಕಾಲಿಕ ಸ್ನಾನ ಘಟ್ಟಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.<br /> <br /> ದೇವಾಲಯದ ಆವರಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆಡಳಿತ ಮಂಡಳಿ ಯಾವುದೇ ವ್ಯವಸ್ಥೆ ಮಾಡದ ಕಾರಣ ಭಕ್ತರು ಹೋಟಲ್ಗಳಲ್ಲಿ 2 ರೂ.ಗೆ ನೀರು ಕುಡಿಯವಂತಾಗಿದೆ. ಟ್ಯಾಂಕರ್ ಮೂಲಕ ನೀರು ತರಿಸಿ ಭಕ್ತರಿಗೆ ಮಂಡಳಿ ಅನುಕೂಲ ಮಾಡಿಕೊಡಬೇಕು ಎಂದು ಶಿವಮೊಗ್ಗದಿಂದ ಬಂದಿದ್ದ ಭಕ್ತರಾದ ಸಂಪತಕುಮಾರ ಪಾಟೀಲ ಮನವಿ ಮಾಡಿದರು.<br /> <br /> ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಈ ನದಿಗಳಲ್ಲಿ ನೀರು ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್ ಮೊದಲ ವಾರದ್ಲ್ಲಲೇ ನದಿ ಬತ್ತಿ ತೊಂದರೆ ಹೆಚ್ಚಾಗಿದೆ. <br /> <br /> ಕೂಡಲಸಂಗಮ ಸಮೀಪದ ಕಟಗೂರ, ತುರಡಗಿ, ಕೆಂಗಲ್ಲ, ಕಜಗಲ್ಲ, ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ ಮುಂತಾದ ಗ್ರಾಮಗಳಲ್ಲಿ ನೀರಿನ ತೊಂದರೆ ಉಂಟಾಗಿದೆ.ಹುನಗುಂದ ತಾಲ್ಲೂಕು ಆಡಳಿತ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿಲ್ಲ ಎಂದು ಸಿದ್ದು ಸಾರಂಗಮಠ ಆರೋಪಿಸುತ್ತಾರೆ.<br /> <br /> ಕೂಡಲಸಂಗಮ, ಅಡವಿಹಾಳ ಹಾಗೂ ಕುಂಚಗನೂರ ನಡುವಿನ ದೋಣಿ ಸಂಚಾರ ಕೂಡ 1 ವಾರದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಜನರು ಕೂಡಲಸಂಗಮಕ್ಕೆ ಬರಲು 25 ಕಿ.ಮೀಯಷ್ಟು ಹೆಚ್ಚು ಸುತ್ತಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ: </strong>ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದಲ್ಲಿ ನೀರು ಬರಿದಾಗಿರುವುದರಿಂದ ತೀರದ ಗ್ರಾಮಗಳಿಗೆ, ನಿತ್ಯ ಕೂಡಲಸಂಗಮಕ್ಕೆ ಬರುವ ಭಕ್ತರಿಗೆ ನೀರಿಲ್ಲ.<br /> ಕೂಡಲಸಂಗಮದಲ್ಲಿ ಹರಡಿಕೊಂಡಿದ್ದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಬರಿದಾಗಿದ್ದು, ಮರುಭೂಮಿಯಂಗಿವೆ.<br /> <br /> ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸುವ ಭಕ್ತರು ಅನಿವಾರ್ಯವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯವರು ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಿ ಸಂಗಮನಾಥನ ದರ್ಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.<br /> <br /> ಕೃಷ್ಣಾ ನದಿಯ ತಗ್ಗು ಪ್ರದೇಶದಲ್ಲಿ ನಿಂತ ನೀರನ್ನೇ ಯಂತ್ರಗಳ ಮೂಲಕ ತಾತ್ಕಾಲಿಕ ಸ್ನಾನ ಘಟ್ಟಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.<br /> <br /> ದೇವಾಲಯದ ಆವರಣದಲ್ಲಿ ಕುಡಿಯುವ ನೀರು ಪೂರೈಕೆಗೆ ಆಡಳಿತ ಮಂಡಳಿ ಯಾವುದೇ ವ್ಯವಸ್ಥೆ ಮಾಡದ ಕಾರಣ ಭಕ್ತರು ಹೋಟಲ್ಗಳಲ್ಲಿ 2 ರೂ.ಗೆ ನೀರು ಕುಡಿಯವಂತಾಗಿದೆ. ಟ್ಯಾಂಕರ್ ಮೂಲಕ ನೀರು ತರಿಸಿ ಭಕ್ತರಿಗೆ ಮಂಡಳಿ ಅನುಕೂಲ ಮಾಡಿಕೊಡಬೇಕು ಎಂದು ಶಿವಮೊಗ್ಗದಿಂದ ಬಂದಿದ್ದ ಭಕ್ತರಾದ ಸಂಪತಕುಮಾರ ಪಾಟೀಲ ಮನವಿ ಮಾಡಿದರು.<br /> <br /> ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಈ ನದಿಗಳಲ್ಲಿ ನೀರು ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಮಾರ್ಚ್ ಮೊದಲ ವಾರದ್ಲ್ಲಲೇ ನದಿ ಬತ್ತಿ ತೊಂದರೆ ಹೆಚ್ಚಾಗಿದೆ. <br /> <br /> ಕೂಡಲಸಂಗಮ ಸಮೀಪದ ಕಟಗೂರ, ತುರಡಗಿ, ಕೆಂಗಲ್ಲ, ಕಜಗಲ್ಲ, ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ ಮುಂತಾದ ಗ್ರಾಮಗಳಲ್ಲಿ ನೀರಿನ ತೊಂದರೆ ಉಂಟಾಗಿದೆ.ಹುನಗುಂದ ತಾಲ್ಲೂಕು ಆಡಳಿತ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿಲ್ಲ ಎಂದು ಸಿದ್ದು ಸಾರಂಗಮಠ ಆರೋಪಿಸುತ್ತಾರೆ.<br /> <br /> ಕೂಡಲಸಂಗಮ, ಅಡವಿಹಾಳ ಹಾಗೂ ಕುಂಚಗನೂರ ನಡುವಿನ ದೋಣಿ ಸಂಚಾರ ಕೂಡ 1 ವಾರದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಜನರು ಕೂಡಲಸಂಗಮಕ್ಕೆ ಬರಲು 25 ಕಿ.ಮೀಯಷ್ಟು ಹೆಚ್ಚು ಸುತ್ತಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>