<p><strong>ಸಿರುಗುಪ್ಪ: </strong>ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಕೃಷಿ ಕೂಲಿಕಾರರು ಗುಳೆ ಹೋಗದಂತೆ ತಡೆಗಟ್ಟುವಲ್ಲಿ ಏನೇನು ಕ್ರಮ ತೆಗೆದುಕೊಂಡೀರಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಪ್ರಶ್ನಿಸಿದರು.<br /> <br /> ಇಲ್ಲಿಯ ತಾಲ್ಲೂಕು ಪಂಚಾಯಿತಿ ಯಲ್ಲಿ ಗುರುವಾರ ಜರುಗಿದ 5ನೇ ಸಾಮಾನ್ಯ ಸಭೆಯಲ್ಲಿ ಬರ ಕಾಮಗಾರಿ ಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.<br /> <br /> ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರಿಗೆ ಉದ್ಯೋಗವಿಲ್ಲದೇ ಗುಳೆ ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಗಡಿಭಾಗದ ರಾವಿಹಾಳು, ಬೀರಳ್ಳಿ ಗ್ರಾಮಗಳ ಜನರು ಬೆಂಗಳೂರಿನತ್ತ ಉದ್ಯೋಗ ಅರೆಸಿ ಗುಳೆ ಹೋಗುತ್ತಿದ್ದಾರೆ, ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿಹೊಂಡ, ಕೆರೆ ಹೂಳು ತೆಗೆಸು ವುದು, ಹಲವು ಅಭಿವೃದ್ಧಿ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ಶಾಸಕರು ಸಲಹೆ ಮಾಡಿದರು.<br /> <br /> ಸರ್ಕಾರ ಇದಕ್ಕಾಗಿ ಎರಡು ಕೋಟಿ 70 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ, ಅದು ಪೋಲಾಗ ಬಾರದು ಜನರಿಗೆ ಮುಟ್ಟುವಂತೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಆ ಕುಟುಂಬಗಳಿಗೆ ಉದ್ಯೋಗ ಕೊಡಿ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು.<br /> <br /> ತಾಲ್ಲೂಕಿಗೆ ಇಂದಿರಾ ಆವಾಸ್ ಯೋಜನೆಯಡಿ 505 ಮನೆ, ಬಸವ ವಸತಿ ಯೋಜನೆಯಡಿ 1999 ಮನೆ ಗಳು ಮಂಜೂರಾಗಿದ್ದು ಗ್ರಾಮ ಸಭೆ ನಡೆಸಿ ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿ ಯಲ್ಲಿದೆ ಎಂದು ತಾ.ಪಂ.ಇ.ಓ ತಿಪ್ಪೇರುದ್ರಪ್ಪ ಸಭೆಯಲ್ಲಿ ಮಾಹಿತಿ ನೀಡಿದರು.<br /> <br /> ಸುವರ್ಣ ಭೂಮಿ ಯೋಜನೆಯಡಿ 1468 ರೈತರಿಗೆ ತಲಾ ಐದು ಸಾವಿರ ರೂಪಾಯಿ ಅನುದಾನವನ್ನು ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಇಲಾಖೆಯ ಪ್ರಗತಿ ವಿವರಿಸಿದರು.<br /> <br /> 2011-12 ನೇ ಸಾಲಿನ ಒಂದನೇ ಕಂತಿನ 13ನೇ ಹಣಕಾಸು ಯೋಜನೆ ಕ್ರಿಯಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ - ಬೆಂಚು ಸರಬರಾಜು ಮಾಡಲು 31.21 ಲಕ್ಷ ರೂಪಾಯಿ ಅನುದಾನಕ್ಕೆ ಸಭೆ ಅನುಮೋದನೆ ನೀಡಿತು.<br /> <br /> ಬಳ್ಳಾರಿಗೆ ಹೆರಿಗೆ: ಗ್ರಾಮೀಣ ಪ್ರದೇಶ ದಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದ ಗರ್ಭಿಣಿಯರನ್ನು ಬಳ್ಳಾರಿಗೆ ಕಳಿಸಿಕೊಡುತ್ತಿರುವ ವೈದ್ಯರ ಬಗ್ಗೆ ತಾ.ಪಂ.ಸದಸ್ಯ ರಾಮಾ ನಾಯಕ್ ಸಭೆಯಲ್ಲಿ ಪ್ರಸ್ತಾಪಿಸಿ ಗಮನಸೆಳೆದರು.<br /> <br /> ಆಸ್ಪತ್ರೆಯಲ್ಲಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೂ ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗೆ ಮತ್ತು ಬಳ್ಳಾರಿಗೆ ಹೆರಿಗೆಗೆ ಕಳಿಸುತ್ತಿ ರುವ ವೈದ್ಯರ ನಿರ್ಲಕ್ಷತನ ಬಗ್ಗೆ ಮಾಹಿತಿ ಕೊಡಿ ಎಂದು ಸಭೆಯಲ್ಲಿದ್ದ ಆರೋಗ್ಯಾಧಿಕಾರಿಗಳಲ್ಲಿ ಕೋರಿದರು.<br /> <br /> ತಾ.ಪಂ.ಅಧ್ಯಕ್ಷೆ ಲಕ್ಷ್ಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಂಜಿನಪ್ಪ, ತಹಸೀಲ್ದಾರ್ ಎಂ.ಎನ್. ಮಂಜುನಾಥ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ: </strong>ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದ್ದು, ಕೃಷಿ ಕೂಲಿಕಾರರು ಗುಳೆ ಹೋಗದಂತೆ ತಡೆಗಟ್ಟುವಲ್ಲಿ ಏನೇನು ಕ್ರಮ ತೆಗೆದುಕೊಂಡೀರಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಪ್ರಶ್ನಿಸಿದರು.<br /> <br /> ಇಲ್ಲಿಯ ತಾಲ್ಲೂಕು ಪಂಚಾಯಿತಿ ಯಲ್ಲಿ ಗುರುವಾರ ಜರುಗಿದ 5ನೇ ಸಾಮಾನ್ಯ ಸಭೆಯಲ್ಲಿ ಬರ ಕಾಮಗಾರಿ ಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.<br /> <br /> ಗ್ರಾಮೀಣ ಪ್ರದೇಶದ ಕೃಷಿ ಕೂಲಿಕಾರರಿಗೆ ಉದ್ಯೋಗವಿಲ್ಲದೇ ಗುಳೆ ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಗಡಿಭಾಗದ ರಾವಿಹಾಳು, ಬೀರಳ್ಳಿ ಗ್ರಾಮಗಳ ಜನರು ಬೆಂಗಳೂರಿನತ್ತ ಉದ್ಯೋಗ ಅರೆಸಿ ಗುಳೆ ಹೋಗುತ್ತಿದ್ದಾರೆ, ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿಹೊಂಡ, ಕೆರೆ ಹೂಳು ತೆಗೆಸು ವುದು, ಹಲವು ಅಭಿವೃದ್ಧಿ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ಶಾಸಕರು ಸಲಹೆ ಮಾಡಿದರು.<br /> <br /> ಸರ್ಕಾರ ಇದಕ್ಕಾಗಿ ಎರಡು ಕೋಟಿ 70 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ, ಅದು ಪೋಲಾಗ ಬಾರದು ಜನರಿಗೆ ಮುಟ್ಟುವಂತೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಆ ಕುಟುಂಬಗಳಿಗೆ ಉದ್ಯೋಗ ಕೊಡಿ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು.<br /> <br /> ತಾಲ್ಲೂಕಿಗೆ ಇಂದಿರಾ ಆವಾಸ್ ಯೋಜನೆಯಡಿ 505 ಮನೆ, ಬಸವ ವಸತಿ ಯೋಜನೆಯಡಿ 1999 ಮನೆ ಗಳು ಮಂಜೂರಾಗಿದ್ದು ಗ್ರಾಮ ಸಭೆ ನಡೆಸಿ ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿ ಯಲ್ಲಿದೆ ಎಂದು ತಾ.ಪಂ.ಇ.ಓ ತಿಪ್ಪೇರುದ್ರಪ್ಪ ಸಭೆಯಲ್ಲಿ ಮಾಹಿತಿ ನೀಡಿದರು.<br /> <br /> ಸುವರ್ಣ ಭೂಮಿ ಯೋಜನೆಯಡಿ 1468 ರೈತರಿಗೆ ತಲಾ ಐದು ಸಾವಿರ ರೂಪಾಯಿ ಅನುದಾನವನ್ನು ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ್ ಇಲಾಖೆಯ ಪ್ರಗತಿ ವಿವರಿಸಿದರು.<br /> <br /> 2011-12 ನೇ ಸಾಲಿನ ಒಂದನೇ ಕಂತಿನ 13ನೇ ಹಣಕಾಸು ಯೋಜನೆ ಕ್ರಿಯಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಡೆಸ್ಕ್ - ಬೆಂಚು ಸರಬರಾಜು ಮಾಡಲು 31.21 ಲಕ್ಷ ರೂಪಾಯಿ ಅನುದಾನಕ್ಕೆ ಸಭೆ ಅನುಮೋದನೆ ನೀಡಿತು.<br /> <br /> ಬಳ್ಳಾರಿಗೆ ಹೆರಿಗೆ: ಗ್ರಾಮೀಣ ಪ್ರದೇಶ ದಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದ ಗರ್ಭಿಣಿಯರನ್ನು ಬಳ್ಳಾರಿಗೆ ಕಳಿಸಿಕೊಡುತ್ತಿರುವ ವೈದ್ಯರ ಬಗ್ಗೆ ತಾ.ಪಂ.ಸದಸ್ಯ ರಾಮಾ ನಾಯಕ್ ಸಭೆಯಲ್ಲಿ ಪ್ರಸ್ತಾಪಿಸಿ ಗಮನಸೆಳೆದರು.<br /> <br /> ಆಸ್ಪತ್ರೆಯಲ್ಲಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೂ ಗರ್ಭಿಣಿಯರನ್ನು ಖಾಸಗಿ ಆಸ್ಪತ್ರೆಗೆ ಮತ್ತು ಬಳ್ಳಾರಿಗೆ ಹೆರಿಗೆಗೆ ಕಳಿಸುತ್ತಿ ರುವ ವೈದ್ಯರ ನಿರ್ಲಕ್ಷತನ ಬಗ್ಗೆ ಮಾಹಿತಿ ಕೊಡಿ ಎಂದು ಸಭೆಯಲ್ಲಿದ್ದ ಆರೋಗ್ಯಾಧಿಕಾರಿಗಳಲ್ಲಿ ಕೋರಿದರು.<br /> <br /> ತಾ.ಪಂ.ಅಧ್ಯಕ್ಷೆ ಲಕ್ಷ್ಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಂಜಿನಪ್ಪ, ತಹಸೀಲ್ದಾರ್ ಎಂ.ಎನ್. ಮಂಜುನಾಥ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>