<p><strong>ಶಹಾಪುರ: </strong>ಬಸವಣ್ಣನವರು ಮನುಷ್ಯ ಸಮಾನತೆಯನ್ನು ಮಾತ್ರ ತರಲಿಲ್ಲ. ಅವರು ಮನುಷ್ಯ ಮನುಷ್ಯರ ನಡುವೆ ಸಹಬಾಳ್ವೆಯನ್ನು ಜಾರಿಗೊಳಿಸಿದರು. ಮನುಷ್ಯ ಸಮಾಜ ಒಂದಾಗಿ ಜೀವಿಸುವ ಪರಿಯನ್ನು ತಿಳಿಸಿಕೊಟ್ಟರು ಎಂದು ಪ್ರೊ.ರಮೇಶ ಯಾಳಗಿ ನುಡಿದರು.<br /> <br /> ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಈಚೆಗೆ ಹಮ್ಮಿಕೊಂಡಿದ್ದ ಬಸವ ಬೆಳಕು-8 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರಿಗಿಂತ ಪೂರ್ವದಲ್ಲಿ ನಾಗರಿಕ ಸಮಾಜದಲ್ಲಿರುವ ಸಾವಿರಾರು ಸಮಸ್ಯೆ, ಗೊಂದಲಗಳಿಗೆ ಮುಕ್ತಿ ನೀಡಿದರು. `ಅರಿದಡೆ ಶರಣ, ಮರೆತಡೆ ಮಾನವ~ ಎಂಬ ಮಹಾನ್ ತತ್ವಸಾರಿದರು ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗುಲ್ಬರ್ಗದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಸವರಾಜ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು. ಡಾ. ಭೀಮರಾಯ ಲಿಂಗೇರಿ ಪುಸ್ತಕ ಕುರಿತು ಮಾತನಾಡಿದರು.<br /> <br /> ಪ್ರತಿಷ್ಠಾನದ ಸಂಚಾಲಕ ಲಿಂಗಣ್ಣ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತರಾಯ ಸಿಂದಗಿ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ವಕೀಲ ಆರ್.ಎಂ.ಹೊನ್ನಾರಡ್ಡಿ ವಂದಿಸಿದರು. ಗುರುಬಸವಯ್ಯ ಗದ್ದುಗೆ, ಡಾ.ಚಂದ್ರಶೇಖರ ಸುಬೇದಾರ, ಆರ್.ಎಸ್.ಹಳಗೊಂಡ, ನಿವೃತ್ತ ಎಂಜಿನಿಯರ್ ಭೀಮರಡ್ಡಿ, ಬಸವರಾಜ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. <br /> <br /> ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಾಸೋಹಿಗಳಾದ ಪಂಪಣ್ಣಗೌಡ ಹಾಗೂ ಬಸಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಮೈಲಾರಪ್ಪ ಸಗರ ಬಸವ ಮಾರ್ಗದ ಹಾಡುಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ: </strong>ಬಸವಣ್ಣನವರು ಮನುಷ್ಯ ಸಮಾನತೆಯನ್ನು ಮಾತ್ರ ತರಲಿಲ್ಲ. ಅವರು ಮನುಷ್ಯ ಮನುಷ್ಯರ ನಡುವೆ ಸಹಬಾಳ್ವೆಯನ್ನು ಜಾರಿಗೊಳಿಸಿದರು. ಮನುಷ್ಯ ಸಮಾಜ ಒಂದಾಗಿ ಜೀವಿಸುವ ಪರಿಯನ್ನು ತಿಳಿಸಿಕೊಟ್ಟರು ಎಂದು ಪ್ರೊ.ರಮೇಶ ಯಾಳಗಿ ನುಡಿದರು.<br /> <br /> ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಈಚೆಗೆ ಹಮ್ಮಿಕೊಂಡಿದ್ದ ಬಸವ ಬೆಳಕು-8 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣನವರಿಗಿಂತ ಪೂರ್ವದಲ್ಲಿ ನಾಗರಿಕ ಸಮಾಜದಲ್ಲಿರುವ ಸಾವಿರಾರು ಸಮಸ್ಯೆ, ಗೊಂದಲಗಳಿಗೆ ಮುಕ್ತಿ ನೀಡಿದರು. `ಅರಿದಡೆ ಶರಣ, ಮರೆತಡೆ ಮಾನವ~ ಎಂಬ ಮಹಾನ್ ತತ್ವಸಾರಿದರು ಎಂದು ಅವರು ಹೇಳಿದರು.<br /> <br /> ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗುಲ್ಬರ್ಗದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಸವರಾಜ ಮಾತನಾಡಿ, ಬಸವಾದಿ ಶರಣರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು. ಡಾ. ಭೀಮರಾಯ ಲಿಂಗೇರಿ ಪುಸ್ತಕ ಕುರಿತು ಮಾತನಾಡಿದರು.<br /> <br /> ಪ್ರತಿಷ್ಠಾನದ ಸಂಚಾಲಕ ಲಿಂಗಣ್ಣ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತರಾಯ ಸಿಂದಗಿ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ವಕೀಲ ಆರ್.ಎಂ.ಹೊನ್ನಾರಡ್ಡಿ ವಂದಿಸಿದರು. ಗುರುಬಸವಯ್ಯ ಗದ್ದುಗೆ, ಡಾ.ಚಂದ್ರಶೇಖರ ಸುಬೇದಾರ, ಆರ್.ಎಸ್.ಹಳಗೊಂಡ, ನಿವೃತ್ತ ಎಂಜಿನಿಯರ್ ಭೀಮರಡ್ಡಿ, ಬಸವರಾಜ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. <br /> <br /> ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಾಸೋಹಿಗಳಾದ ಪಂಪಣ್ಣಗೌಡ ಹಾಗೂ ಬಸಮ್ಮ ದಂಪತಿಯನ್ನು ಸನ್ಮಾನಿಸಲಾಯಿತು. ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಮೈಲಾರಪ್ಪ ಸಗರ ಬಸವ ಮಾರ್ಗದ ಹಾಡುಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>