<p>ಅಣ್ಣಿಗೇರಿ: ಸಮಾಜ ತಿರಸ್ಕರಿಸಿದ ಕಟ್ಟ ಕಡೆಯ ವ್ಯಕ್ತಿ ಸಂಬೊಳಿ ನಾಗಿದೇವನಲ್ಲಿ ಕೂಡಲ ಸಂಗಮನನ್ನು ಕಂಡ ಬಸವಣ್ಣ ಪ್ರಪಂಚ ಕಂಡ ಅತಿ ದೊಡ್ಡ ಸಂತ, ಚಿಂತಕ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ನುಡಿದರು.<br /> <br /> ಸ್ಥಳೀಯ ಬಸವಕೇಂದ್ರ ಹೊರಕೇರಿ ಓಣಿಯ ಮಲ್ಲಿಕಾರ್ಜುನ ನವಲಗುಂದ ಅವರ ಮನೆಯಲ್ಲಿ ಏರ್ಪಡಿಸಿದ ಶರಣ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಹರಿದುಕೊಂಡು ತಿನ್ನುವುದಕ್ಕಿಂತ ಹಂಚಿಕೊಂಡು ತಿನ್ನುವುದೇ ಶರಣ ಸಂಸ್ಕೃತಿ. ಸಮಾಜದಲ್ಲಿ ಸಂಘರ್ಷದ ಮೂಲ ಬೇಧಗಳಾದ ಗಂಡು- ಹೆಣ್ಣು, ಬಡವ- ಬಲ್ಲಿದ, ಮೇಲು- ಕೀಳುಗಳಿಗೆ ಕಿಚ್ಚು ಹಚ್ಚಿ ಕಾಯಕ ದಾಸೋಹಗಳನ್ನು ರೂಢಿಗೆ ತಂದ ಬಸವನ್ನನ ಚಿಂತನೆಗಳು ಅಂದು ಇಂದು ಎಂದೆಂದಿಗೂ ಪ್ರಸ್ತುತ. ಬಸವಣ್ಣನ ಈ ಅದ್ಭುತ ಚಿಂತನೆಗಳನ್ನು ನಾಗರಿಕರು ತಮ್ಮ ಜೀವನದಲ್ಲಿ ರೂಢಿಸಿ ಕೊಳ್ಳುವುದು ಬಹಳ ಅಗತ್ಯ ಎಂದು ಮಾರ್ಗದರ್ಶನ ನೀಡಿದರು.<br /> <br /> ಕ್ರಾಂತಿಯೋಗಿ ಬಸವಣ್ಣನನ್ನು ಕುರಿತು ಶಿಕ್ಷಕಿ ಪ್ರೇಮಾ ಉಪನ್ಯಾಸ ನೀಡಿದರು.<br /> ಬಸನಗೌಡ ಕುರಹಟ್ಟಿ, ರಾಜೇಸಾಬ ಸುಂಕದ, ಪ್ರವೀಣ ನಾವಳ್ಳಿ, ಎಸ್. ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಸುರಕೋಡ ಮತ್ತಿತರರು ಉಪಸ್ಥಿತರಿದ್ದರು.<br /> <br /> ಶಿಲ್ಪಾ ಉಳ್ಳಾಗಡ್ಡಿ ಪ್ರಾರ್ಥಿಸಿದರು. ಕುಂಬಾರ ಸ್ವಾಗತಿಸಿದರು. ಬೀರಣ್ಣವರ ವಂದಿಸಿದರು,<br /> ಅಮೃತೇಶ ಶೆಟ್ಟರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಣ್ಣಿಗೇರಿ: ಸಮಾಜ ತಿರಸ್ಕರಿಸಿದ ಕಟ್ಟ ಕಡೆಯ ವ್ಯಕ್ತಿ ಸಂಬೊಳಿ ನಾಗಿದೇವನಲ್ಲಿ ಕೂಡಲ ಸಂಗಮನನ್ನು ಕಂಡ ಬಸವಣ್ಣ ಪ್ರಪಂಚ ಕಂಡ ಅತಿ ದೊಡ್ಡ ಸಂತ, ಚಿಂತಕ ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ನುಡಿದರು.<br /> <br /> ಸ್ಥಳೀಯ ಬಸವಕೇಂದ್ರ ಹೊರಕೇರಿ ಓಣಿಯ ಮಲ್ಲಿಕಾರ್ಜುನ ನವಲಗುಂದ ಅವರ ಮನೆಯಲ್ಲಿ ಏರ್ಪಡಿಸಿದ ಶರಣ ಶ್ರಾವಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಹರಿದುಕೊಂಡು ತಿನ್ನುವುದಕ್ಕಿಂತ ಹಂಚಿಕೊಂಡು ತಿನ್ನುವುದೇ ಶರಣ ಸಂಸ್ಕೃತಿ. ಸಮಾಜದಲ್ಲಿ ಸಂಘರ್ಷದ ಮೂಲ ಬೇಧಗಳಾದ ಗಂಡು- ಹೆಣ್ಣು, ಬಡವ- ಬಲ್ಲಿದ, ಮೇಲು- ಕೀಳುಗಳಿಗೆ ಕಿಚ್ಚು ಹಚ್ಚಿ ಕಾಯಕ ದಾಸೋಹಗಳನ್ನು ರೂಢಿಗೆ ತಂದ ಬಸವನ್ನನ ಚಿಂತನೆಗಳು ಅಂದು ಇಂದು ಎಂದೆಂದಿಗೂ ಪ್ರಸ್ತುತ. ಬಸವಣ್ಣನ ಈ ಅದ್ಭುತ ಚಿಂತನೆಗಳನ್ನು ನಾಗರಿಕರು ತಮ್ಮ ಜೀವನದಲ್ಲಿ ರೂಢಿಸಿ ಕೊಳ್ಳುವುದು ಬಹಳ ಅಗತ್ಯ ಎಂದು ಮಾರ್ಗದರ್ಶನ ನೀಡಿದರು.<br /> <br /> ಕ್ರಾಂತಿಯೋಗಿ ಬಸವಣ್ಣನನ್ನು ಕುರಿತು ಶಿಕ್ಷಕಿ ಪ್ರೇಮಾ ಉಪನ್ಯಾಸ ನೀಡಿದರು.<br /> ಬಸನಗೌಡ ಕುರಹಟ್ಟಿ, ರಾಜೇಸಾಬ ಸುಂಕದ, ಪ್ರವೀಣ ನಾವಳ್ಳಿ, ಎಸ್. ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಸುರಕೋಡ ಮತ್ತಿತರರು ಉಪಸ್ಥಿತರಿದ್ದರು.<br /> <br /> ಶಿಲ್ಪಾ ಉಳ್ಳಾಗಡ್ಡಿ ಪ್ರಾರ್ಥಿಸಿದರು. ಕುಂಬಾರ ಸ್ವಾಗತಿಸಿದರು. ಬೀರಣ್ಣವರ ವಂದಿಸಿದರು,<br /> ಅಮೃತೇಶ ಶೆಟ್ಟರ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>