<p><strong>ಬಸವಾಪಟ್ಟಣ:</strong> ನಿಯಮ ಮೀರಿ, ತಪ್ಪು ಮಾಹಿತಿ ನೀಡಿ, ಮಧ್ಯವರ್ತಿ ಸಹಾಯದಿಂದ ಸರ್ಕಾರದ ಸೌಲಭ್ಯ ಪಡೆಯಬೇಡಿ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದರು.</p>.<p>ಇಲ್ಲಿ ಭಾನುವಾರ ಹೋಬಳಿಮಟ್ಟದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರದ ನೀತಿ ನಿಯಮಗಳ ಅನ್ವಯ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಇದುವರೆಗೆ ಸೌಲಭ್ಯ ದೊರೆಯದ ಫಲಾನುಭವಿಗಳು ಕೂಡಾ ಅರ್ಜಿ ಸಲ್ಲಿಸಲಿ, ಅರ್ಹತೆ ಇದ್ದ್ಲ್ಲಲಿ ಅವರಿಗೂ ಸವಲತ್ತು ದೊರಕಿಸಿಕೊಡಲಾಗುವುದು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದರು.</p>.<p>ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 38 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಸ್ಥಳೀಯ ಹೋಬಳಿಮಟ್ಟದಲ್ಲಿ ಇದು 2ನೇ ಕಾರ್ಯಕ್ರಮವಾಗಿದೆ. ಈ ಮೂಲಕ ಹೆಚ್ಚು ಮಂದಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಜಮೀನು ಇದ್ದವರಿಗೆ ಮಾಸಾಶನ ನೀಡುವಂತಿಲ್ಲ ಎಂಬ ನಿಯಮದಿಂದ ಸಮಸ್ಯೆ ಉಂಟಾಗಿದ್ದಲ್ಲಿ ಆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.</p>.<p>ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಇದುವರೆಗೂ 22 ಸಾವಿರ ಜನರಿಗೆ ವಿವಿಧ ಯೋಜನೆಗಳಿಂದ ಪ್ರಯೋಜನವಾಗಿದೆ. ಬಸವಾಪಟ್ಟಣ ಹೋಬಳಿಗೆ ರೂ. 6.5ಕೋಟಿ ಅನುದಾನ ಬಿಡುಗಡೆ ಮಾಡಲಾಗ್ದ್ದಿದು, ಇನ್ನೂ ರೂ. 3 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.</p>.<p>ಸಭೆಯಲ್ಲಿ ತಹಶೀಲ್ದಾರ್ ರೇವಣಸಿದ್ದಪ್ಪ, ತಾ.ಪಂ. ಪ್ರಭಾರ ಅಧ್ಯಕ್ಷ ಗಣೇಶ ನಾಯ್ಕ, ತಾ.ಪಂ. ಸದಸ್ಯೆ ಪಾರ್ವತಿಬಾಯಿ, ಗ್ರಾ.ಪಂ. ಅಧ್ಯಕ್ಷ ಪಿ. ಖಲಂದರ್, ದಾಗಿನಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಪಾರಿಬಾಯಿ. ಹಿರೇಮಳಲಿ ಲೋಕೇಶ್, ಬಿ.ಜಿ. ಯೋಗೇಶ್ ಉಪಸ್ಥಿತರಿದ್ದರು.</p>.<p><strong>ಕಾರ್ಯಕ್ರಮದಲ್ಲಿ ಅಸಮಾಧಾನ</strong></p>.<p>ತಹಶೀಲ್ದಾರ್ ರೇವಣದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡು ತ್ತಿದ್ದಂತೆಯೇ ಸಭೆಯಲ್ಲಿ ಕೆಲವರು ಎದ್ದು ನಿಂತು ಸಭೆಯ ಬಗ್ಗೆ ಸರಿಯಾಗಿ ಪ್ರಚಾರ ಕೊಟ್ಟಿಲ್ಲ. ಗ್ರಾಮದಲ್ಲಿ ಟಾಂಟಾಂ ಹೊಡೆಸಿ ಹೇಳಬೇಕಿತ್ತು. ಅದನ್ನು ಮಾಡಿಲ್ಲ. ಹಾಗಿದ್ದ ಮೇಲೆ ಏಕೆ ಈ ಸಭೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.</p>.<p>ತಮ್ಮ ಕ್ರಮ ಸಮರ್ಥಿಸಿದ ತಹಶೀಲ್ದಾರ್, ಸಾಕಷ್ಟು ಪ್ರಚಾರ ನೀಡಲಾಗಿದೆ. ಎಲ್ಲರಿಗೂ ಆಮಂತ್ರಣ ಕೊಡಲಾಗದು. ಅರ್ಹ ಫಲಾನುಭವಿಗಳು ಬಂದು ಸೌಲಭ್ಯ ಪಡೆಯಬೇಕು. ನಾವು ನಿಯಮ ಮೀರಿ ನಡೆಯಲಾಗದು. ಮಾಹಿತಿ ಪಡೆದವರು ಸಭೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಸಂಸತ್ ಸದಸ್ಯ ಸಿದ್ದೇಶ್ವರ, ಅಧಿಕಾರಿಗಳು ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಪ್ರಚಾರಪಡಿಸಬೇಕು. ನೀವು ಸೌಲಭ್ಯ ಕೊಡುವುದಲ್ಲ. ಸರ್ಕಾರ ಕೊಡುತ್ತಿದೆ. ಆದ್ದರಿಂದ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ನಿಯಮ ಮೀರಿ, ತಪ್ಪು ಮಾಹಿತಿ ನೀಡಿ, ಮಧ್ಯವರ್ತಿ ಸಹಾಯದಿಂದ ಸರ್ಕಾರದ ಸೌಲಭ್ಯ ಪಡೆಯಬೇಡಿ ಎಂದು ಸಚಿವ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದರು.</p>.<p>ಇಲ್ಲಿ ಭಾನುವಾರ ಹೋಬಳಿಮಟ್ಟದ ಜನಸ್ಪಂದನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರದ ನೀತಿ ನಿಯಮಗಳ ಅನ್ವಯ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುವುದು. ಇದುವರೆಗೆ ಸೌಲಭ್ಯ ದೊರೆಯದ ಫಲಾನುಭವಿಗಳು ಕೂಡಾ ಅರ್ಜಿ ಸಲ್ಲಿಸಲಿ, ಅರ್ಹತೆ ಇದ್ದ್ಲ್ಲಲಿ ಅವರಿಗೂ ಸವಲತ್ತು ದೊರಕಿಸಿಕೊಡಲಾಗುವುದು, ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದರು.</p>.<p>ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 38 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಸ್ಥಳೀಯ ಹೋಬಳಿಮಟ್ಟದಲ್ಲಿ ಇದು 2ನೇ ಕಾರ್ಯಕ್ರಮವಾಗಿದೆ. ಈ ಮೂಲಕ ಹೆಚ್ಚು ಮಂದಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಜಮೀನು ಇದ್ದವರಿಗೆ ಮಾಸಾಶನ ನೀಡುವಂತಿಲ್ಲ ಎಂಬ ನಿಯಮದಿಂದ ಸಮಸ್ಯೆ ಉಂಟಾಗಿದ್ದಲ್ಲಿ ಆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.</p>.<p>ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಇದುವರೆಗೂ 22 ಸಾವಿರ ಜನರಿಗೆ ವಿವಿಧ ಯೋಜನೆಗಳಿಂದ ಪ್ರಯೋಜನವಾಗಿದೆ. ಬಸವಾಪಟ್ಟಣ ಹೋಬಳಿಗೆ ರೂ. 6.5ಕೋಟಿ ಅನುದಾನ ಬಿಡುಗಡೆ ಮಾಡಲಾಗ್ದ್ದಿದು, ಇನ್ನೂ ರೂ. 3 ಕೋಟಿ ಅನುದಾನ ಬರಲಿದೆ ಎಂದು ಹೇಳಿದರು.</p>.<p>ಸಭೆಯಲ್ಲಿ ತಹಶೀಲ್ದಾರ್ ರೇವಣಸಿದ್ದಪ್ಪ, ತಾ.ಪಂ. ಪ್ರಭಾರ ಅಧ್ಯಕ್ಷ ಗಣೇಶ ನಾಯ್ಕ, ತಾ.ಪಂ. ಸದಸ್ಯೆ ಪಾರ್ವತಿಬಾಯಿ, ಗ್ರಾ.ಪಂ. ಅಧ್ಯಕ್ಷ ಪಿ. ಖಲಂದರ್, ದಾಗಿನಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಪಾರಿಬಾಯಿ. ಹಿರೇಮಳಲಿ ಲೋಕೇಶ್, ಬಿ.ಜಿ. ಯೋಗೇಶ್ ಉಪಸ್ಥಿತರಿದ್ದರು.</p>.<p><strong>ಕಾರ್ಯಕ್ರಮದಲ್ಲಿ ಅಸಮಾಧಾನ</strong></p>.<p>ತಹಶೀಲ್ದಾರ್ ರೇವಣದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡು ತ್ತಿದ್ದಂತೆಯೇ ಸಭೆಯಲ್ಲಿ ಕೆಲವರು ಎದ್ದು ನಿಂತು ಸಭೆಯ ಬಗ್ಗೆ ಸರಿಯಾಗಿ ಪ್ರಚಾರ ಕೊಟ್ಟಿಲ್ಲ. ಗ್ರಾಮದಲ್ಲಿ ಟಾಂಟಾಂ ಹೊಡೆಸಿ ಹೇಳಬೇಕಿತ್ತು. ಅದನ್ನು ಮಾಡಿಲ್ಲ. ಹಾಗಿದ್ದ ಮೇಲೆ ಏಕೆ ಈ ಸಭೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.</p>.<p>ತಮ್ಮ ಕ್ರಮ ಸಮರ್ಥಿಸಿದ ತಹಶೀಲ್ದಾರ್, ಸಾಕಷ್ಟು ಪ್ರಚಾರ ನೀಡಲಾಗಿದೆ. ಎಲ್ಲರಿಗೂ ಆಮಂತ್ರಣ ಕೊಡಲಾಗದು. ಅರ್ಹ ಫಲಾನುಭವಿಗಳು ಬಂದು ಸೌಲಭ್ಯ ಪಡೆಯಬೇಕು. ನಾವು ನಿಯಮ ಮೀರಿ ನಡೆಯಲಾಗದು. ಮಾಹಿತಿ ಪಡೆದವರು ಸಭೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಸಂಸತ್ ಸದಸ್ಯ ಸಿದ್ದೇಶ್ವರ, ಅಧಿಕಾರಿಗಳು ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಪ್ರಚಾರಪಡಿಸಬೇಕು. ನೀವು ಸೌಲಭ್ಯ ಕೊಡುವುದಲ್ಲ. ಸರ್ಕಾರ ಕೊಡುತ್ತಿದೆ. ಆದ್ದರಿಂದ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>