<p><strong>ಕೆಜಿಎಫ್: </strong>ಬಸ್ ನಿಲ್ದಾಣ ದಲ್ಲಿ ಬಸ್ಗೆ ದಾರಿಬಿಡುವಂತೆ ಕೇಳಿದ ಬಸ್ ಚಾಲಕನ ಮೇಲೆ ಇಬ್ಬರು ಲಾಂಗ್ನಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.<br /> <br /> ರಾಬರ್ಟಸನ್ಪೇಟೆ ನಗರಸಭೆ ಬಸ್ ನಿಲ್ದಾಣದಲ್ಲಿ ಸಂಜೆ 4 ಗಂಟೆ ವೇಳೆ ಲಾಂಗ್ ಹಿಡಿದು ಬಸ್ ಚಾಲಕನನ್ನು ಇಬ್ಬರು ದುಷ್ಕರ್ಮಿ ಗಳು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಪ್ರಯಾಣಿಕರು ಭೀತಿಗೊಂಡಿದ್ದರು.<br /> <br /> ಬಸ್ ನಿಲ್ದಾಣದಿಂದ ಹೊರ ಹೋಗಲು ಖಾಸಗಿ ಬಸ್ ನಿಂತಿತ್ತು. ಹಿಂಭಾಗದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ದಾರಿಗಾಗಿ ಹಾರ್ನ್ ಮಾಡುತ್ತಿದ್ದ. ಈ ಸಂದರ್ಭ ಮುಂದೆ ಇದ್ದ ಬಸ್ ಚಾಲಕನ ಜೊತೆ ಇಬ್ಬರು ಜಗಳ ವಾಡುತ್ತಿದ್ದರು. ಜಗಳ ಕಂಡು ಅಸಹನೆ ವ್ಯಕ್ತಪಡಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ ಮುನಿಸ್ವಾಮಿ ವಿರುದ್ಧ ಕೋಪಗೊಂಡ ಈ ಇಬ್ಬರು ಲಾಂಗ್ ತೆಗೆದು ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ದುಷ್ಕರ್ಮಿಗಳಿಂದ ಪಾರಾಗಲು ಚಾಲಕ ಬಸ್ ನಿಲ್ದಾಣದಲ್ಲಿ ಓಡಲು ಶುರು ಮಾಡಿದ. ಅವನನ್ನು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು ಹೊಟ್ಟೆಗೆ ತಿವಿದಿದ್ದಾರೆ.<br /> <br /> ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಅಂಬೇಡ್ಕರ್ ನಗರ ನಿವಾಸಿ ಸುರೇಶ್ ಮತ್ತು ಸಂಜಯಗಾಂಧಿ ನಗರ ನಿವಾಸಿ ಶ್ರಿನಿವಾಸನ್ ಎಂದು ಗುರುತಿಸಲಾಗಿದೆ. ರಾಬರ್ಟಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್: </strong>ಬಸ್ ನಿಲ್ದಾಣ ದಲ್ಲಿ ಬಸ್ಗೆ ದಾರಿಬಿಡುವಂತೆ ಕೇಳಿದ ಬಸ್ ಚಾಲಕನ ಮೇಲೆ ಇಬ್ಬರು ಲಾಂಗ್ನಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.<br /> <br /> ರಾಬರ್ಟಸನ್ಪೇಟೆ ನಗರಸಭೆ ಬಸ್ ನಿಲ್ದಾಣದಲ್ಲಿ ಸಂಜೆ 4 ಗಂಟೆ ವೇಳೆ ಲಾಂಗ್ ಹಿಡಿದು ಬಸ್ ಚಾಲಕನನ್ನು ಇಬ್ಬರು ದುಷ್ಕರ್ಮಿ ಗಳು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಪ್ರಯಾಣಿಕರು ಭೀತಿಗೊಂಡಿದ್ದರು.<br /> <br /> ಬಸ್ ನಿಲ್ದಾಣದಿಂದ ಹೊರ ಹೋಗಲು ಖಾಸಗಿ ಬಸ್ ನಿಂತಿತ್ತು. ಹಿಂಭಾಗದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ದಾರಿಗಾಗಿ ಹಾರ್ನ್ ಮಾಡುತ್ತಿದ್ದ. ಈ ಸಂದರ್ಭ ಮುಂದೆ ಇದ್ದ ಬಸ್ ಚಾಲಕನ ಜೊತೆ ಇಬ್ಬರು ಜಗಳ ವಾಡುತ್ತಿದ್ದರು. ಜಗಳ ಕಂಡು ಅಸಹನೆ ವ್ಯಕ್ತಪಡಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ ಮುನಿಸ್ವಾಮಿ ವಿರುದ್ಧ ಕೋಪಗೊಂಡ ಈ ಇಬ್ಬರು ಲಾಂಗ್ ತೆಗೆದು ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ದುಷ್ಕರ್ಮಿಗಳಿಂದ ಪಾರಾಗಲು ಚಾಲಕ ಬಸ್ ನಿಲ್ದಾಣದಲ್ಲಿ ಓಡಲು ಶುರು ಮಾಡಿದ. ಅವನನ್ನು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು ಹೊಟ್ಟೆಗೆ ತಿವಿದಿದ್ದಾರೆ.<br /> <br /> ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಅಂಬೇಡ್ಕರ್ ನಗರ ನಿವಾಸಿ ಸುರೇಶ್ ಮತ್ತು ಸಂಜಯಗಾಂಧಿ ನಗರ ನಿವಾಸಿ ಶ್ರಿನಿವಾಸನ್ ಎಂದು ಗುರುತಿಸಲಾಗಿದೆ. ರಾಬರ್ಟಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>