<p>ನವದೆಹಲಿ (ಪಿಟಿಐ): ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮದೇವ್ ಅವರು ಜೂನ್ ತಿಂಗಳಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದ ವೇಳೆ ದೆಹಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ರಾಜ್ ಬಾಲಾ ಎಂಬ ಮಹಿಳೆ ಸೋಮವಾರ ಮೃತರಾಗಿದ್ದಾರೆ.<br /> <br /> ಪೊಲೀಸ್ ಕಾರ್ಯಾಚರಣೆಯಲ್ಲಿ ಬೆನ್ನುಹುರಿಗೆ ಏಟು ತಗುಲಿ ಅಸ್ವಸ್ಥರಾಗಿದ್ದ ಗುಡಗಾಂವ್ ನಿವಾಸಿ ರಾಜ್ ಬಾಲಾ (51) ಅವರನ್ನು ಜೂನ್ 4 ರಂದು ಚಿಕಿತ್ಸೆಗಾಗಿ ಜಿ.ಬಿ ಪಂತ್ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸೆ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. <br /> <br /> ದಾಖಲಾದ ದಿನದಿಂದಲೂ ಅವರ ಪರಿಸ್ಥಿತಿಯು ಚಿಂತಾಜನಕವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ರಾಜ್ ಬಾಲಾ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೆಟರ್) ಮಾಡಲಾಗಿತ್ತು. ನರಗಳ ಮೇಲಾದ ಗಾಯದ ಪರಿಣಾಮದಿಂದಾಗಿ ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು.<br /> <br /> ರಾಜ್ ಬಾಲಾ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಬಾಬಾ ರಾಮದೇವ್ ಅವರು `ಭ್ರಷ್ಟಾಚಾರದ ವಿರುದ್ದ ಕೈಗೊಂಡ ಚಳುವಳಿ ಹಾಗೂ ಇಡೀ ಸಂಘಟನೆಗೆ ಇದೊಂದು ತುಂಬಲಾರದ ನಷ್ಟ~ ಎಂದು ಹೇಳಿದರು.<br /> <br /> `ಇದೊಂದು ಸರ್ವಶ್ರೇಷ್ಠ ಬಲಿದಾನ. ಅವರ ಬಲಿದಾನವು ನಿಷ್ಪ್ರಯೋಜಕವಾಗಲಾರದು. ಅವರ ಲಕ್ಷಾಂತರ ಸಹೋದರ, ಸಹೋದರಿಯರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನು ಮುಂದುವರಿಸಲಿದ್ದಾರೆ~ ರಾಮ ದೇವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಸಾವಿರಾರು ಅಮಾಯಕ ಜನರು ಗಾಯಗೊಂಡ `ಸಂವಿಧಾನ ವಿರೋಧಿ ಪೊಲೀಸ್ ಕಾರ್ಯಾಚರಣೆ~ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಕೇಂದ್ರ ಗೃಹ ಸಚಿವಾಲಯ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಈ ಕುರಿತು ವರದಿ ನೀಡುವಂತೆ ಜೂನ್ 6ರಂದು ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಕಪ್ಪುಹಣದ ವಿರುದ್ಧ ಯೋಗಗುರು ಬಾಬಾ ರಾಮದೇವ್ ಅವರು ಜೂನ್ ತಿಂಗಳಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದ ವೇಳೆ ದೆಹಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ರಾಜ್ ಬಾಲಾ ಎಂಬ ಮಹಿಳೆ ಸೋಮವಾರ ಮೃತರಾಗಿದ್ದಾರೆ.<br /> <br /> ಪೊಲೀಸ್ ಕಾರ್ಯಾಚರಣೆಯಲ್ಲಿ ಬೆನ್ನುಹುರಿಗೆ ಏಟು ತಗುಲಿ ಅಸ್ವಸ್ಥರಾಗಿದ್ದ ಗುಡಗಾಂವ್ ನಿವಾಸಿ ರಾಜ್ ಬಾಲಾ (51) ಅವರನ್ನು ಜೂನ್ 4 ರಂದು ಚಿಕಿತ್ಸೆಗಾಗಿ ಜಿ.ಬಿ ಪಂತ್ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸೆ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. <br /> <br /> ದಾಖಲಾದ ದಿನದಿಂದಲೂ ಅವರ ಪರಿಸ್ಥಿತಿಯು ಚಿಂತಾಜನಕವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ರಾಜ್ ಬಾಲಾ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೆಟರ್) ಮಾಡಲಾಗಿತ್ತು. ನರಗಳ ಮೇಲಾದ ಗಾಯದ ಪರಿಣಾಮದಿಂದಾಗಿ ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು.<br /> <br /> ರಾಜ್ ಬಾಲಾ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಬಾಬಾ ರಾಮದೇವ್ ಅವರು `ಭ್ರಷ್ಟಾಚಾರದ ವಿರುದ್ದ ಕೈಗೊಂಡ ಚಳುವಳಿ ಹಾಗೂ ಇಡೀ ಸಂಘಟನೆಗೆ ಇದೊಂದು ತುಂಬಲಾರದ ನಷ್ಟ~ ಎಂದು ಹೇಳಿದರು.<br /> <br /> `ಇದೊಂದು ಸರ್ವಶ್ರೇಷ್ಠ ಬಲಿದಾನ. ಅವರ ಬಲಿದಾನವು ನಿಷ್ಪ್ರಯೋಜಕವಾಗಲಾರದು. ಅವರ ಲಕ್ಷಾಂತರ ಸಹೋದರ, ಸಹೋದರಿಯರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನು ಮುಂದುವರಿಸಲಿದ್ದಾರೆ~ ರಾಮ ದೇವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಸಾವಿರಾರು ಅಮಾಯಕ ಜನರು ಗಾಯಗೊಂಡ `ಸಂವಿಧಾನ ವಿರೋಧಿ ಪೊಲೀಸ್ ಕಾರ್ಯಾಚರಣೆ~ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಕೇಂದ್ರ ಗೃಹ ಸಚಿವಾಲಯ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಈ ಕುರಿತು ವರದಿ ನೀಡುವಂತೆ ಜೂನ್ 6ರಂದು ಸೂಚಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>