<p><strong>ತಲಶೇರಿ (ಕೇರಳ) (ಪಿಟಿಐ): </strong>ಹದಿಮೂರು ವರ್ಷದ ಬಾಲಕಿಯ ಮೇಲೆ ಸ್ವಂತ ತಂದೆ, ಅಣ್ಣ ಮತ್ತು ಚಿಕ್ಕಪ್ಪ ಎರಡು ವರ್ಷಗಳಿಂದ ಅತ್ಯಾಚಾರವೆಸಗುತ್ತ ಬಂದ ಹೀನ ದುಷ್ಕೃತ್ಯ ಎರಡು ದಿನದ ಹಿಂದೆ ಬೆಳಕಿಗೆ ಬಂದಿದೆ.<br /> <br /> ಘಟನೆ ಬೆಳಕಿಗೆ ಬಂದಿದ್ದು: ಕಣ್ಣೂರು ಜಿಲ್ಲೆಯ ಧರ್ಮಡಂನ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ, ಪ್ರತಿ ದಿನ ಶಾಲೆ ಅವಧಿ ಮುಗಿದರೂ `ಮನೆಗೆ ಹಿಂದಿರುಗಲು ಒಲ್ಲೆ' ಎಂದು ಹಟ ಹಿಡಿಯುತ್ತಿದ್ದಳು. ಒಮ್ಮಮ್ಮೆ ಅಳುತ್ತಿದ್ದಳು. ಎರಡು ದಿನದ ಹಿಂದೆ ಶಿಕ್ಷಕಿಯೊಬ್ಬರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಎರಡು ವರ್ಷಗಳಿಂದಲೂ ತಂದೆ, ಸಹೋದರ ಮತ್ತು ಚಿಕ್ಕಪ್ಪನಿಂದ `ಲೈಂಗಿಕ ದೌರ್ಜನ್ಯ'ಕ್ಕೆ ಒಳಗಾಗಿರುವ ಕುರಿತು ಹೇಳಿದ್ದಾಳೆ.<br /> <br /> ವಿಷಯ ತಿಳಿದ ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದರನ್ವಯ ಬಾಲಕಿಯ ತಂದೆ, ಹದಿನೈದು ವರ್ಷದ ಸಹೋದರ ಹಾಗೂ ಚಿಕ್ಕಪ್ಪನ್ನು ಬಂಧಿಸಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ತಲಶೇರಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ವಿ. ವಿನೋದ್ ಕುಮಾರ್ ತಿಳಿಸಿದ್ದಾರೆ.<br /> <br /> ಸೋದರನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.<br /> <br /> `ಆರನೇ ತರಗತಿಯಲ್ಲಿದ್ದಾಗಿನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ನನ್ನ ಅಕ್ಕ ಕೂಡ ಇಂಥದ್ದೇ ದೌರ್ಜನ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಳು' ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.<br /> <br /> <strong>ವನಿತಾ ಆಯೋಗ ಆಕ್ರೋಶ:</strong> `ಈ ಘಟನೆಯಿಂದ ಇಡೀ ಕೇರಳ ರಾಜ್ಯವೇ ತಲೆತಗ್ಗಿಸುವಂತಾಗಿದೆ' ಎಂದು ಕೇರಳ ವನಿತಾ ಆಯೋಗದ ಅಧ್ಯಕ್ಷೆ ಕೆ.ರೋಸಾಕುಟ್ಟಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ಅಕ್ಕನ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.<br /> <br /> ಬಾಲಕಿಯ ಬಗ್ಗೆ ವನಿತಾ ಆಯೋಗ ಕಾಳಜಿ ವಹಿಸಲಿದೆ. ಸದ್ಯ ಆಕೆಯನ್ನು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ವಸತಿ ಗೃಹದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಲಶೇರಿ (ಕೇರಳ) (ಪಿಟಿಐ): </strong>ಹದಿಮೂರು ವರ್ಷದ ಬಾಲಕಿಯ ಮೇಲೆ ಸ್ವಂತ ತಂದೆ, ಅಣ್ಣ ಮತ್ತು ಚಿಕ್ಕಪ್ಪ ಎರಡು ವರ್ಷಗಳಿಂದ ಅತ್ಯಾಚಾರವೆಸಗುತ್ತ ಬಂದ ಹೀನ ದುಷ್ಕೃತ್ಯ ಎರಡು ದಿನದ ಹಿಂದೆ ಬೆಳಕಿಗೆ ಬಂದಿದೆ.<br /> <br /> ಘಟನೆ ಬೆಳಕಿಗೆ ಬಂದಿದ್ದು: ಕಣ್ಣೂರು ಜಿಲ್ಲೆಯ ಧರ್ಮಡಂನ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ, ಪ್ರತಿ ದಿನ ಶಾಲೆ ಅವಧಿ ಮುಗಿದರೂ `ಮನೆಗೆ ಹಿಂದಿರುಗಲು ಒಲ್ಲೆ' ಎಂದು ಹಟ ಹಿಡಿಯುತ್ತಿದ್ದಳು. ಒಮ್ಮಮ್ಮೆ ಅಳುತ್ತಿದ್ದಳು. ಎರಡು ದಿನದ ಹಿಂದೆ ಶಿಕ್ಷಕಿಯೊಬ್ಬರು ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಎರಡು ವರ್ಷಗಳಿಂದಲೂ ತಂದೆ, ಸಹೋದರ ಮತ್ತು ಚಿಕ್ಕಪ್ಪನಿಂದ `ಲೈಂಗಿಕ ದೌರ್ಜನ್ಯ'ಕ್ಕೆ ಒಳಗಾಗಿರುವ ಕುರಿತು ಹೇಳಿದ್ದಾಳೆ.<br /> <br /> ವಿಷಯ ತಿಳಿದ ಶಾಲೆಯ ಆಡಳಿತ ಮಂಡಳಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದರನ್ವಯ ಬಾಲಕಿಯ ತಂದೆ, ಹದಿನೈದು ವರ್ಷದ ಸಹೋದರ ಹಾಗೂ ಚಿಕ್ಕಪ್ಪನ್ನು ಬಂಧಿಸಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ತಲಶೇರಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ವಿ. ವಿನೋದ್ ಕುಮಾರ್ ತಿಳಿಸಿದ್ದಾರೆ.<br /> <br /> ಸೋದರನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.<br /> <br /> `ಆರನೇ ತರಗತಿಯಲ್ಲಿದ್ದಾಗಿನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ನನ್ನ ಅಕ್ಕ ಕೂಡ ಇಂಥದ್ದೇ ದೌರ್ಜನ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಳು' ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.<br /> <br /> <strong>ವನಿತಾ ಆಯೋಗ ಆಕ್ರೋಶ:</strong> `ಈ ಘಟನೆಯಿಂದ ಇಡೀ ಕೇರಳ ರಾಜ್ಯವೇ ತಲೆತಗ್ಗಿಸುವಂತಾಗಿದೆ' ಎಂದು ಕೇರಳ ವನಿತಾ ಆಯೋಗದ ಅಧ್ಯಕ್ಷೆ ಕೆ.ರೋಸಾಕುಟ್ಟಿ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ಅಕ್ಕನ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.<br /> <br /> ಬಾಲಕಿಯ ಬಗ್ಗೆ ವನಿತಾ ಆಯೋಗ ಕಾಳಜಿ ವಹಿಸಲಿದೆ. ಸದ್ಯ ಆಕೆಯನ್ನು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ವಸತಿ ಗೃಹದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>