<p><strong>ಬೆಂಗಳೂರು:</strong> ಬ್ರೈಟ್ ಶಾಲೆಯ ನಾಲ್ಕು ವರ್ಷದ ಮಗು ಮಹಮ್ಮದ್ ಪೈಜಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಶಾಲಾ ವಾಹನದ ಚಾಲಕ ಭರತ್ಸಿಂಗ್ (35) ಎಂಬಾತನನ್ನು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.<br /> <br /> ಉತ್ತರಪ್ರದೇಶ ಮೂಲದ ಭರತ್ಸಿಂಗ್ ಥಣಿಸಂದ್ರದಲ್ಲಿ ವಾಸವಾಗಿದ್ದಾನೆ. ಶಾಲೆ ಮುಗಿದ ನಂತರ ಮಗುವನ್ನು ಮನೆಗೆ ಬಿಡಲು ವಾಹನದಲ್ಲಿ ಕರೆದುಕೊಂಡು ಬಂದ ಚಾಲಕ, ರಾಚೇನಹಳ್ಳಿ ಮುಖ್ಯರಸ್ತೆಯಲ್ಲಿ ಫೈಜಲ್ನನ್ನು ಇಳಿಸಿದ್ದ. ಆ ವೇಳೆ ವಾಹನದ ಬಾಗಿಲು ಬಡಿದು ಮಗು ಸಾವನ್ನಪ್ಪಿತ್ತು.<br /> <br /> `ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಚಾಲಕನನ್ನು ಸಾರ್ವಜನಿಕರು ಬೈಕ್ಗಳಲ್ಲಿ ಹಿಂಬಾಲಿಸಿದರು. ಥಣಿಸಂದ್ರ ಬಸ್ ನಿಲ್ದಾಣದ ಬಳಿ ವಾಹನವನ್ನು ಅಡ್ಡಗಟ್ಟಿ ಚಾಲಕನಿಗೆ ಥಳಿಸಿದರು. ಪ್ರಾಣ ಭಯದಿಂದ ಚಾಲಕ ವಾಹನ ಬಿಟ್ಟು ಓಡಿಹೋಗಿದ್ದ~ ಎಂದು ಪ್ರತ್ಯಕ್ಷದರ್ಶಿ ಬಾಬು ತಿಳಿಸಿದರು.<br /> <br /> ಬೈಟ್ ಶಾಲೆಯ ವಾಹನಗಳ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿರುವ ಮಹಮ್ಮದ್ ಉಬೈದ್ಉಲ್ಲಾ ಅವರು ಭರತ್ಸಿಂಗ್ನನ್ನು ಚಿಕ್ಕಜಾಲ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದರು. ಆತನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬ್ರೈಟ್ ಶಾಲೆಯ ನಾಲ್ಕು ವರ್ಷದ ಮಗು ಮಹಮ್ಮದ್ ಪೈಜಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಶಾಲಾ ವಾಹನದ ಚಾಲಕ ಭರತ್ಸಿಂಗ್ (35) ಎಂಬಾತನನ್ನು ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.<br /> <br /> ಉತ್ತರಪ್ರದೇಶ ಮೂಲದ ಭರತ್ಸಿಂಗ್ ಥಣಿಸಂದ್ರದಲ್ಲಿ ವಾಸವಾಗಿದ್ದಾನೆ. ಶಾಲೆ ಮುಗಿದ ನಂತರ ಮಗುವನ್ನು ಮನೆಗೆ ಬಿಡಲು ವಾಹನದಲ್ಲಿ ಕರೆದುಕೊಂಡು ಬಂದ ಚಾಲಕ, ರಾಚೇನಹಳ್ಳಿ ಮುಖ್ಯರಸ್ತೆಯಲ್ಲಿ ಫೈಜಲ್ನನ್ನು ಇಳಿಸಿದ್ದ. ಆ ವೇಳೆ ವಾಹನದ ಬಾಗಿಲು ಬಡಿದು ಮಗು ಸಾವನ್ನಪ್ಪಿತ್ತು.<br /> <br /> `ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಚಾಲಕನನ್ನು ಸಾರ್ವಜನಿಕರು ಬೈಕ್ಗಳಲ್ಲಿ ಹಿಂಬಾಲಿಸಿದರು. ಥಣಿಸಂದ್ರ ಬಸ್ ನಿಲ್ದಾಣದ ಬಳಿ ವಾಹನವನ್ನು ಅಡ್ಡಗಟ್ಟಿ ಚಾಲಕನಿಗೆ ಥಳಿಸಿದರು. ಪ್ರಾಣ ಭಯದಿಂದ ಚಾಲಕ ವಾಹನ ಬಿಟ್ಟು ಓಡಿಹೋಗಿದ್ದ~ ಎಂದು ಪ್ರತ್ಯಕ್ಷದರ್ಶಿ ಬಾಬು ತಿಳಿಸಿದರು.<br /> <br /> ಬೈಟ್ ಶಾಲೆಯ ವಾಹನಗಳ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿರುವ ಮಹಮ್ಮದ್ ಉಬೈದ್ಉಲ್ಲಾ ಅವರು ಭರತ್ಸಿಂಗ್ನನ್ನು ಚಿಕ್ಕಜಾಲ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದರು. ಆತನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>