<p><strong>ಕಾರವಾರ: </strong>ಕರ್ನಾಟಕ ವಿಶ್ವವಿದ್ಯಾಲ ಯದ ದೂರ ಶಿಕ್ಷಣ ವಿದ್ಯಾಲಯವು ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ನೀಡಿರುವ ಅಧ್ಯಯನ ಪರಿಕರ ಗಳಲ್ಲಿ ನೂರಾರು ದೋಷಗಳಿರುವುದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ.<br /> <br /> ಅಂತಿಮ ವರ್ಷದ ಪರೀಕ್ಷೆ ಬರೆ ಯುವ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ (ಬೆಸಿಕ್) ಮತ್ತು ರಾಜ ಕೀಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ, ತತ್ವಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 18 ಐಚ್ಛಿಕ ವಿಷಯಗಳಿವೆ. ಈ ಐಚ್ಛಿಕ ವಿಷಯಗಳ ಪೈಕಿ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದ ಭಾರತೀಯ ಸಮಾಜದ ಅಧ್ಯಯನ (ಸಮಾಜಶಾಸ್ತ್ರ ಪತ್ರಿಕೆ-1), ಭಾರತದ ಇತಿಹಾಸ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-1) ಹಾಗೂ ಆಧುನಿಕ ಯುರೋಪಿನ ಚರಿತ್ರೆ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-2) ವಿಷಯಗಳಲ್ಲಿ ವ್ಯಾಕರಣ ದೋಷಗಳಿದ್ದು ಈ ವಿಷಯಗಳನ್ನು ಓದಲು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗು ತ್ತಿದೆ.<br /> <br /> ಭಾರತದ ಇತಿಹಾಸ ಹಾಗೂ ಆಧುನಿಕ ಯುರೋಪಿನ ಚರಿತ್ರೆ ವಿಷಯದ ಅಧ್ಯಯನ ಪರಿಕರದ ಒಂದು ಪುಟದಲ್ಲಿ ಎರಡರಿಂದ ಮೂರು ತಪ್ಪುಗಳಿದ್ದರೆ, ಭಾರತೀಯ ಸಮಾಜ ಅಧ್ಯಯನ ವಿಷಯದಲ್ಲಿ ಪ್ರತಿ ಸಾಲಿನಲ್ಲೂ ತಪ್ಪುಗಳಿರುವುದು ಕಂಡು ಬಂದಿದೆ. ಕರೆಯತೊಡಗಿದರು ಎನ್ನುವ ಬದಲು `ಕರೆಯತೋಡಗಿದರು~, ಕರೆ ಯುವುದುಂಟು ಎಂದು ಬರೆಯುವ ಬದಲು `ಕರೆಯುವುದುಟು~, ಎಂದು ಬರೆಯಲಾಗಿದೆ. ವಿಧಿ-ವಿಧಾನಗಳ ಬದಲು ವಿಧಿ-ವಧಾನ ಗಳು, ಬೆಳೆದು ನಿಂತಿರುವುದರಿಂದ ಎನ್ನುವ ಬದಲು `ಬೆಳೆದು ನಿತ್ತಿರುವುದರಿಂದ~, `ಕರ್ಮ ಸಿದ್ಧಾಂತದಲ್ಲಿ~ ಎನ್ನುವ ಬದಲು ಕರ್ವ ಸಿದ್ಧಾಂತದಲ್ಲಿ ಹೀಗೆ ಪ್ರತಿ ಪುಟದಲ್ಲಿ ಕನಿಷ್ಠ ಹತ್ತು ತಪ್ಪುಗಳಿವೆ.<br /> <br /> ಉಳೀದೆಲ್ಲ ಧರ್ಮಗಳಿಗೆ ಹೋಲಿಸಿ ದರೆ ಹಿಂದೂ ಧರ್ಮವು ಅತ್ಯಂತ ಸಂಕೀರ್ಣವಾದ ಧರ್ಮ. ಏಕೆಂದರೆ ಹಿಂದೂ ಧರ್ಮಕ್ಕೆ ಧರ್ಮ ಸಂಸ್ಥಾಪಕನು ಇರುವುದಿಲ್ಲ. ಈ ರೀತಿ ಯಾಗಿ ಒಂದೇ ವಾಕ್ಯದಲ್ಲಿ ಎರಡೆರಡು ತಪ್ಪುಗಳಿವೆ. ಜಾತಿಯ ಪ್ರಮುಖ ಗುಣಲಕ್ಷಣಗಳು ಎನ್ನುವ ಪಠ್ಯದಲ್ಲಿ ಸಮಾಜಿಕ (ಸಾಮಾಜಿಕ) ರಚನೆಯ ಬ್ರಹ್ಮಣ (ಬ್ರಾಹ್ಮಣ) ಎಂದಿದೆ. <br /> <br /> ಆಧುನಿಕ ಯುರೋಪಿನ ಚರಿತ್ರೆ ಪುಸ್ತಕ ದಲ್ಲಿ `ಮಹಕ್ರಾಂತಿ~, `ಅಸಮಧಾನಕ್ಕೆ~, `ಸವಾಯ ಪ್ರಜ್ಞೆ~, `ವಶಂದ~ ಎಂದು ಬರೆದಿರುವುದರಿಂದ ವಿದ್ಯಾರ್ಥಿಗಳು ಎಲ್ಲ ಶಬ್ದಗಳನ್ನು ತಪ್ಪುತಪ್ಪಾಗಿ ಓದ ಬೇಕಾಗಿದೆ. ಪ್ರತಿಯೊಂದು ಪ್ಯಾರಾದಲ್ಲಿ ತಪ್ಪುಗಳು ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ.<br /> <br /> ವಿಶ್ವವಿದ್ಯಾಲಯವೇ ಸಿದ್ಧಪಡಿಸಿದ ಅಧ್ಯಯನ ಪರಿಕರದಲ್ಲಿ ಇಂತಹ ತಪ್ಪು ಗಳಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ. ಮುಂಬರುವ ಎಪ್ರಿಲ್, ಮೇದಲ್ಲಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಈ ತಪ್ಪುಗಳನ್ನು ಸರಿ ಪಡಿಸಿಕೊಂಡು ಅಧ್ಯಯನ ಮಾಡಬೇಕಾಗಿದೆ.<br /> <br /> `ಪರೀಕ್ಷೆ ಬರೆಯಲು ಕವಿವಿ ಸಂಪರ್ಕ ವಿದ್ಯಾಲಯವು ನೀಡಿದ ಅಧ್ಯಯನ ಪರಿಕರದಲ್ಲಿ ತಪ್ಪುಗಳಿರುವುದರಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಯಾವುದು ಸರಿ, ತಪ್ಪು ಎನ್ನುವುದು ತಿಳಿ ಯುತ್ತಿಲ್ಲ. ಸಮಾಜಶಾಸ್ತ್ರ ವಿಷಯದ ಪ್ರತಿಯೊಂದು ಪ್ಯಾರಾದಲ್ಲಿ ತಪ್ಪು ಗಳಿರುವುದರಿಂದ ಓದಿನಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ~ ಎನ್ನುತ್ತಾರೆ ಬಿ.ಎ. ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿ ಪ್ರಮೋದ ಹರಿಕಂತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಕರ್ನಾಟಕ ವಿಶ್ವವಿದ್ಯಾಲ ಯದ ದೂರ ಶಿಕ್ಷಣ ವಿದ್ಯಾಲಯವು ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ನೀಡಿರುವ ಅಧ್ಯಯನ ಪರಿಕರ ಗಳಲ್ಲಿ ನೂರಾರು ದೋಷಗಳಿರುವುದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ.<br /> <br /> ಅಂತಿಮ ವರ್ಷದ ಪರೀಕ್ಷೆ ಬರೆ ಯುವ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ (ಬೆಸಿಕ್) ಮತ್ತು ರಾಜ ಕೀಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ, ತತ್ವಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಒಟ್ಟು 18 ಐಚ್ಛಿಕ ವಿಷಯಗಳಿವೆ. ಈ ಐಚ್ಛಿಕ ವಿಷಯಗಳ ಪೈಕಿ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದ ಭಾರತೀಯ ಸಮಾಜದ ಅಧ್ಯಯನ (ಸಮಾಜಶಾಸ್ತ್ರ ಪತ್ರಿಕೆ-1), ಭಾರತದ ಇತಿಹಾಸ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-1) ಹಾಗೂ ಆಧುನಿಕ ಯುರೋಪಿನ ಚರಿತ್ರೆ (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ಪತ್ರಿಕೆ-2) ವಿಷಯಗಳಲ್ಲಿ ವ್ಯಾಕರಣ ದೋಷಗಳಿದ್ದು ಈ ವಿಷಯಗಳನ್ನು ಓದಲು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗು ತ್ತಿದೆ.<br /> <br /> ಭಾರತದ ಇತಿಹಾಸ ಹಾಗೂ ಆಧುನಿಕ ಯುರೋಪಿನ ಚರಿತ್ರೆ ವಿಷಯದ ಅಧ್ಯಯನ ಪರಿಕರದ ಒಂದು ಪುಟದಲ್ಲಿ ಎರಡರಿಂದ ಮೂರು ತಪ್ಪುಗಳಿದ್ದರೆ, ಭಾರತೀಯ ಸಮಾಜ ಅಧ್ಯಯನ ವಿಷಯದಲ್ಲಿ ಪ್ರತಿ ಸಾಲಿನಲ್ಲೂ ತಪ್ಪುಗಳಿರುವುದು ಕಂಡು ಬಂದಿದೆ. ಕರೆಯತೊಡಗಿದರು ಎನ್ನುವ ಬದಲು `ಕರೆಯತೋಡಗಿದರು~, ಕರೆ ಯುವುದುಂಟು ಎಂದು ಬರೆಯುವ ಬದಲು `ಕರೆಯುವುದುಟು~, ಎಂದು ಬರೆಯಲಾಗಿದೆ. ವಿಧಿ-ವಿಧಾನಗಳ ಬದಲು ವಿಧಿ-ವಧಾನ ಗಳು, ಬೆಳೆದು ನಿಂತಿರುವುದರಿಂದ ಎನ್ನುವ ಬದಲು `ಬೆಳೆದು ನಿತ್ತಿರುವುದರಿಂದ~, `ಕರ್ಮ ಸಿದ್ಧಾಂತದಲ್ಲಿ~ ಎನ್ನುವ ಬದಲು ಕರ್ವ ಸಿದ್ಧಾಂತದಲ್ಲಿ ಹೀಗೆ ಪ್ರತಿ ಪುಟದಲ್ಲಿ ಕನಿಷ್ಠ ಹತ್ತು ತಪ್ಪುಗಳಿವೆ.<br /> <br /> ಉಳೀದೆಲ್ಲ ಧರ್ಮಗಳಿಗೆ ಹೋಲಿಸಿ ದರೆ ಹಿಂದೂ ಧರ್ಮವು ಅತ್ಯಂತ ಸಂಕೀರ್ಣವಾದ ಧರ್ಮ. ಏಕೆಂದರೆ ಹಿಂದೂ ಧರ್ಮಕ್ಕೆ ಧರ್ಮ ಸಂಸ್ಥಾಪಕನು ಇರುವುದಿಲ್ಲ. ಈ ರೀತಿ ಯಾಗಿ ಒಂದೇ ವಾಕ್ಯದಲ್ಲಿ ಎರಡೆರಡು ತಪ್ಪುಗಳಿವೆ. ಜಾತಿಯ ಪ್ರಮುಖ ಗುಣಲಕ್ಷಣಗಳು ಎನ್ನುವ ಪಠ್ಯದಲ್ಲಿ ಸಮಾಜಿಕ (ಸಾಮಾಜಿಕ) ರಚನೆಯ ಬ್ರಹ್ಮಣ (ಬ್ರಾಹ್ಮಣ) ಎಂದಿದೆ. <br /> <br /> ಆಧುನಿಕ ಯುರೋಪಿನ ಚರಿತ್ರೆ ಪುಸ್ತಕ ದಲ್ಲಿ `ಮಹಕ್ರಾಂತಿ~, `ಅಸಮಧಾನಕ್ಕೆ~, `ಸವಾಯ ಪ್ರಜ್ಞೆ~, `ವಶಂದ~ ಎಂದು ಬರೆದಿರುವುದರಿಂದ ವಿದ್ಯಾರ್ಥಿಗಳು ಎಲ್ಲ ಶಬ್ದಗಳನ್ನು ತಪ್ಪುತಪ್ಪಾಗಿ ಓದ ಬೇಕಾಗಿದೆ. ಪ್ರತಿಯೊಂದು ಪ್ಯಾರಾದಲ್ಲಿ ತಪ್ಪುಗಳು ಕಂಡು ಬಂದಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿದೆ.<br /> <br /> ವಿಶ್ವವಿದ್ಯಾಲಯವೇ ಸಿದ್ಧಪಡಿಸಿದ ಅಧ್ಯಯನ ಪರಿಕರದಲ್ಲಿ ಇಂತಹ ತಪ್ಪು ಗಳಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಿದೆ. ಮುಂಬರುವ ಎಪ್ರಿಲ್, ಮೇದಲ್ಲಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಈ ತಪ್ಪುಗಳನ್ನು ಸರಿ ಪಡಿಸಿಕೊಂಡು ಅಧ್ಯಯನ ಮಾಡಬೇಕಾಗಿದೆ.<br /> <br /> `ಪರೀಕ್ಷೆ ಬರೆಯಲು ಕವಿವಿ ಸಂಪರ್ಕ ವಿದ್ಯಾಲಯವು ನೀಡಿದ ಅಧ್ಯಯನ ಪರಿಕರದಲ್ಲಿ ತಪ್ಪುಗಳಿರುವುದರಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಯಾವುದು ಸರಿ, ತಪ್ಪು ಎನ್ನುವುದು ತಿಳಿ ಯುತ್ತಿಲ್ಲ. ಸಮಾಜಶಾಸ್ತ್ರ ವಿಷಯದ ಪ್ರತಿಯೊಂದು ಪ್ಯಾರಾದಲ್ಲಿ ತಪ್ಪು ಗಳಿರುವುದರಿಂದ ಓದಿನಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲ~ ಎನ್ನುತ್ತಾರೆ ಬಿ.ಎ. ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿ ಪ್ರಮೋದ ಹರಿಕಂತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>