<p><strong>ಬೆಂಗಳೂರು: </strong>ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಮೂರು ಮತ್ತು ನಾಲ್ಕನೆಯ ಖಾಸಗಿ ದೂರಿನ ಕುರಿತ ವಿಚಾರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಮಂಗಳವಾರ ಹಾಜರಾಗಲಿಲ್ಲ.<br /> <br /> ಯಡಿಯೂರಪ್ಪ ಇದುವರೆಗೆ ಎರಡು ಬಾರಿ ಲೋಕಾಯುಕ್ತ ನ್ಯಾಯಾಲಯದ ಎದುರು ಹಾಜರಾಗಿದ್ದಾರೆ. ಕಳೆದ ಎರಡು ಬಾರಿ ಅವರು ಹಾಜರಾಗಿದ್ದಾಗ ನ್ಯಾಯಾಲಯದ ಎದುರು ಭಾರಿ ಜನಜಂಗುಳಿ ಸೇರಿತ್ತು. ಆದರೆ ಮಂಗಳವಾರ ಅಂಥ ಯಾವುದೇ ದೃಶ್ಯ ಕಂಡುಬರಲಿಲ್ಲ.<br /> <br /> ಭದ್ರತೆಗೆ ನಿಯೋಜಿತರಾಗಿದ್ದ ಕೆಲವು ಮಂದಿ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿದರೆ ನ್ಯಾಯಾಲಯದ ಎದುರು ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು. `ದಿನಕಳೆದಂತೆ ಜನರಿಗೂ ಆಸಕ್ತಿ ಕಡಿಮೆಯಾಗುತ್ತದೆ~ ಎಂದು ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿ ತಮ್ಮಲ್ಲೇ ಮಾತನಾಡಿಕೊಂಡಿದ್ದು ಕೇಳಿಬಂತು.</p>.<p><strong>ಬಾಂಬ್ ಅಲ್ಲ, ಬ್ರಷ್!<br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು:</strong> ಬಿ.ಎಸ್. ಯಡಿಯೂರಪ್ಪ ಅವರ ಬರುವಿಕೆಗಾಗಿ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಎದುರು ಕಾಯುತ್ತ ನಿಂತಿದ್ದರು. ಆ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಒಂದರ ಹಿಂಬದಿಯ ಸೀಟಿನಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲ ಇಟ್ಟಿದ್ದರು.<br /> <br /> ಕೆಲ ಹೊತ್ತು ಆ ಬೈಕ್ ಮತ್ತು ಪ್ಲಾಸ್ಟಿಕ್ ಚೀಲ ಅಲ್ಲೇ ಇದ್ದ ಕಾರಣ ಅನುಮಾನಗೊಂಡ ಮಾಧ್ಯಮ ಪ್ರತಿನಿಧಿಯೊಬ್ಬರು ನ್ಯಾಯಾಲಯದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಒಬ್ಬರು ಆ ಚೀಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ತೆರೆದರು. ಅದರಲ್ಲಿದ್ದಿದ್ದು ಬಣ್ಣ ಬಳಿಯಲು ಬಳಸುವ ಬ್ರಷ್ ಎಂದು ತಿಳಿದಾಗ ಅಲ್ಲಿದ್ದವರ ಮುಖದಲ್ಲಿ ನಗು ಮೂಡಿತು.<br /> <br /> ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಓಡಿಬಂದ ಬೈಕ್ ಮಾಲೀಕ ಶಂಕರ ನಾಯ್ಕ, `ಅಯ್ಯಯ್ಯೋ ಎಲ್ಲ ತೆರೆದುಬಿಟ್ಟಿದ್ದಾರೆ~ ಎಂದು ಕೂಗಿದರು. `ಬೈಕ್ ಮತ್ತು ಚೀಲವನ್ನು ಹಾಗೆ ಬಿಟ್ಟು ಹೋಗುವುದಾ~ ಎಂದು ಪೊಲೀಸರು ಗದರಿದಾಗ ನಾಯ್ಕ ಅವರ ಮುಖದಲ್ಲೂ ನಗು ಅರಳಿತು!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಮೂರು ಮತ್ತು ನಾಲ್ಕನೆಯ ಖಾಸಗಿ ದೂರಿನ ಕುರಿತ ವಿಚಾರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಮಂಗಳವಾರ ಹಾಜರಾಗಲಿಲ್ಲ.<br /> <br /> ಯಡಿಯೂರಪ್ಪ ಇದುವರೆಗೆ ಎರಡು ಬಾರಿ ಲೋಕಾಯುಕ್ತ ನ್ಯಾಯಾಲಯದ ಎದುರು ಹಾಜರಾಗಿದ್ದಾರೆ. ಕಳೆದ ಎರಡು ಬಾರಿ ಅವರು ಹಾಜರಾಗಿದ್ದಾಗ ನ್ಯಾಯಾಲಯದ ಎದುರು ಭಾರಿ ಜನಜಂಗುಳಿ ಸೇರಿತ್ತು. ಆದರೆ ಮಂಗಳವಾರ ಅಂಥ ಯಾವುದೇ ದೃಶ್ಯ ಕಂಡುಬರಲಿಲ್ಲ.<br /> <br /> ಭದ್ರತೆಗೆ ನಿಯೋಜಿತರಾಗಿದ್ದ ಕೆಲವು ಮಂದಿ ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿದರೆ ನ್ಯಾಯಾಲಯದ ಎದುರು ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿತ್ತು. `ದಿನಕಳೆದಂತೆ ಜನರಿಗೂ ಆಸಕ್ತಿ ಕಡಿಮೆಯಾಗುತ್ತದೆ~ ಎಂದು ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿ ತಮ್ಮಲ್ಲೇ ಮಾತನಾಡಿಕೊಂಡಿದ್ದು ಕೇಳಿಬಂತು.</p>.<p><strong>ಬಾಂಬ್ ಅಲ್ಲ, ಬ್ರಷ್!<br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು:</strong> ಬಿ.ಎಸ್. ಯಡಿಯೂರಪ್ಪ ಅವರ ಬರುವಿಕೆಗಾಗಿ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಎದುರು ಕಾಯುತ್ತ ನಿಂತಿದ್ದರು. ಆ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಒಂದರ ಹಿಂಬದಿಯ ಸೀಟಿನಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲ ಇಟ್ಟಿದ್ದರು.<br /> <br /> ಕೆಲ ಹೊತ್ತು ಆ ಬೈಕ್ ಮತ್ತು ಪ್ಲಾಸ್ಟಿಕ್ ಚೀಲ ಅಲ್ಲೇ ಇದ್ದ ಕಾರಣ ಅನುಮಾನಗೊಂಡ ಮಾಧ್ಯಮ ಪ್ರತಿನಿಧಿಯೊಬ್ಬರು ನ್ಯಾಯಾಲಯದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಒಬ್ಬರು ಆ ಚೀಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ತೆರೆದರು. ಅದರಲ್ಲಿದ್ದಿದ್ದು ಬಣ್ಣ ಬಳಿಯಲು ಬಳಸುವ ಬ್ರಷ್ ಎಂದು ತಿಳಿದಾಗ ಅಲ್ಲಿದ್ದವರ ಮುಖದಲ್ಲಿ ನಗು ಮೂಡಿತು.<br /> <br /> ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಓಡಿಬಂದ ಬೈಕ್ ಮಾಲೀಕ ಶಂಕರ ನಾಯ್ಕ, `ಅಯ್ಯಯ್ಯೋ ಎಲ್ಲ ತೆರೆದುಬಿಟ್ಟಿದ್ದಾರೆ~ ಎಂದು ಕೂಗಿದರು. `ಬೈಕ್ ಮತ್ತು ಚೀಲವನ್ನು ಹಾಗೆ ಬಿಟ್ಟು ಹೋಗುವುದಾ~ ಎಂದು ಪೊಲೀಸರು ಗದರಿದಾಗ ನಾಯ್ಕ ಅವರ ಮುಖದಲ್ಲೂ ನಗು ಅರಳಿತು!<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>