<p><strong>ಹಾನಗಲ್:</strong> ‘ದೃಢ ನಿರ್ಧಾರ, ಸಾಮಾಜಿಕ ಬದ್ಧತೆ, ದೇಶದ ಭದ್ರತೆ, ಉದ್ಯೋಗ ಸೃಷ್ಟಿ, ರಾಜಕೀಯ ಇಚ್ಛಾಶಕ್ತಿ ಸೇರಿದಂತೆ ನೂರೆಂಟು ರಂಗಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ’ ಎಂದು ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.<br /> <br /> ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಮತದಾರರ ಬಳಿಗೆ ತೆರಳಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.<br /> <br /> ‘ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎಸರ್ಕಾರದಿಂದ ಬೆಲೆ ಏರಿಕೆಗೊಂಡು ಜನಸಾಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿಶ್ವದಲ್ಲಿಯೇ ಉತ್ತಮ ಆರ್ಥಿಕ ತಜ್ಞ ಎಂದು ಹೆಸರು ಪಡೆದಿದ್ದ ಪ್ರಧಾನಿ ಮನಮೋಹನ ಸಿಂಗ್ ಭಾರತದ ಇಡೀ ಆರ್ಥಿಕ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಬಸವ ರಾಜ ಹಾದಿಮನಿ ಮಾತನಾಡಿದರು. ‘ಉತ್ತಮ ಸಂಸದಿಯ ಪಟುವಾಗಿ ಹೊಮ್ಮಿರುವ ಶಿವಕುಮಾರ ಉದಾಸಿ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ರೈತಪರ, ಜನಪರ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿ ನಿರ್ವಹಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಜರಾಜ ಕರೂದಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ನಿಂಬಣ್ಣನವರ, ಮುಖಂಡರಾದ ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಭೋಜಪ್ಪ ಲಂಗಟಿ, ಎನ್.ಬಿ.ಪೂಜಾರ, ಭರಮಣ್ಣ ಶಿವೂರ, ಶಿವಪುತ್ರಪ್ಪ ಮಾಳಗಿ, ಶಿವಪುತ್ರಪ್ಪ ಕರ್ಜಗಿ, ಡಾ.ಕೃಷ್ಣರಾವ್ ಕುಲಕರ್ಣಿ, ಹಾಲಪ್ಪ ಮಾಳಗಿ, ಗೋಪಾಲ ಗಿರೆಣ್ಣನವರ, ಎಂ.ಎಫ್. ಕಠಾರಿ, ಸುರೇಶ ಅರಳೇಶ್ವರ, ಮಲ್ಲಪ್ಪ ಗಿರಿಯಣ್ಣನವರ, ಸಿದ್ಧಪ್ಪ ಕನವಳ್ಳಿ, ಎಂ.ಬಿ.ಕತ್ತಿ, ಪಿ.ಬಿ.ಕಲ್ಲೇಗೌಡರ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ‘ದೃಢ ನಿರ್ಧಾರ, ಸಾಮಾಜಿಕ ಬದ್ಧತೆ, ದೇಶದ ಭದ್ರತೆ, ಉದ್ಯೋಗ ಸೃಷ್ಟಿ, ರಾಜಕೀಯ ಇಚ್ಛಾಶಕ್ತಿ ಸೇರಿದಂತೆ ನೂರೆಂಟು ರಂಗಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ’ ಎಂದು ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.<br /> <br /> ತಾಲ್ಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಮತದಾರರ ಬಳಿಗೆ ತೆರಳಿ ಮತಯಾಚನೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.<br /> <br /> ‘ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎಸರ್ಕಾರದಿಂದ ಬೆಲೆ ಏರಿಕೆಗೊಂಡು ಜನಸಾಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿಶ್ವದಲ್ಲಿಯೇ ಉತ್ತಮ ಆರ್ಥಿಕ ತಜ್ಞ ಎಂದು ಹೆಸರು ಪಡೆದಿದ್ದ ಪ್ರಧಾನಿ ಮನಮೋಹನ ಸಿಂಗ್ ಭಾರತದ ಇಡೀ ಆರ್ಥಿಕ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತಂದಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಬಸವ ರಾಜ ಹಾದಿಮನಿ ಮಾತನಾಡಿದರು. ‘ಉತ್ತಮ ಸಂಸದಿಯ ಪಟುವಾಗಿ ಹೊಮ್ಮಿರುವ ಶಿವಕುಮಾರ ಉದಾಸಿ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ. ರೈತಪರ, ಜನಪರ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಜವಾಬ್ದಾರಿ ನಿರ್ವಹಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಭೋಜರಾಜ ಕರೂದಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ನಿಂಬಣ್ಣನವರ, ಮುಖಂಡರಾದ ಸಿದ್ಧಲಿಂಗಪ್ಪ ಶಂಕ್ರಿಕೊಪ್ಪ, ಭೋಜಪ್ಪ ಲಂಗಟಿ, ಎನ್.ಬಿ.ಪೂಜಾರ, ಭರಮಣ್ಣ ಶಿವೂರ, ಶಿವಪುತ್ರಪ್ಪ ಮಾಳಗಿ, ಶಿವಪುತ್ರಪ್ಪ ಕರ್ಜಗಿ, ಡಾ.ಕೃಷ್ಣರಾವ್ ಕುಲಕರ್ಣಿ, ಹಾಲಪ್ಪ ಮಾಳಗಿ, ಗೋಪಾಲ ಗಿರೆಣ್ಣನವರ, ಎಂ.ಎಫ್. ಕಠಾರಿ, ಸುರೇಶ ಅರಳೇಶ್ವರ, ಮಲ್ಲಪ್ಪ ಗಿರಿಯಣ್ಣನವರ, ಸಿದ್ಧಪ್ಪ ಕನವಳ್ಳಿ, ಎಂ.ಬಿ.ಕತ್ತಿ, ಪಿ.ಬಿ.ಕಲ್ಲೇಗೌಡರ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>