<p>ಹುಬ್ಬಳ್ಳಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಚೆಗೆ ನಡೆಸಿದ ಲೆವೆಲ್-2 ಅಂಪೈರಿಂಗ್ ಪರೀಕ್ಷೆಯಲ್ಲಿ ನಗರದ ಅಂಪೈರ್ ಅಭಿಜಿತ್ ಬೆಂಗೇರಿ ತೇರ್ಗಡೆಯಾಗಿದ್ದು, ಮಂಡಳಿ ಸಂಘಟಿಸುವ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಅರ್ಹತೆ ಪಡೆದಿದ್ದಾರೆ.<br /> <br /> ನಾಗಪುರದ ರಾಷ್ಟ್ರೀಯ ಅಂಪೈರಿಂಗ್ ಅಕಾಡೆಮಿಯಲ್ಲಿ ಕಳೆದ ಜುಲೈನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ನೂರಕ್ಕೆ 98 ಅಂಕ ಪಡೆದಿರುವ ಅಭಿಜಿತ್ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಉತ್ತರ ಕರ್ನಾಟಕದಿಂದ ಬಿಸಿಸಿಐ ಅಂಪೈರ್ ಆಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಅವರು ಒಳಗಾಗಿದ್ದಾರೆ. <br /> <br /> ಬೆಂಗಳೂರಿನ ವಿ.ಎನ್. ಕುಲಕರ್ಣಿ ಅವರನ್ನು ಹೊರತುಪಡಿಸಿದರೆ ಕರ್ನಾಟಕದ ಯಾವೊಬ್ಬ ಅಂಪೈರ್ ಕೂಡ ಈ ಸಾಧನೆ ಮಾಡಿಲ್ಲ. ರಾಜ್ಯ 14 ಮತ್ತು 16 ವರ್ಷದೊಳಗಿನ ತಂಡದಲ್ಲಿ ಆಡಿದ್ದ ಅಭಿಜಿತ್, ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಟಗಾರರೂ ಆಗಿದ್ದರು. ಹಿರಿಯ ಆಟಗಾರ ವಿಜಯ್ ಕಾಮತ್ ಮತ್ತು ವಿ.ಎನ್. ಕುಲಕರ್ಣಿ ಅವರ ಗರಡಿಯಲ್ಲಿ ಈ ಯುವ ಅಂಪೈರ್ ಪಳಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಚೆಗೆ ನಡೆಸಿದ ಲೆವೆಲ್-2 ಅಂಪೈರಿಂಗ್ ಪರೀಕ್ಷೆಯಲ್ಲಿ ನಗರದ ಅಂಪೈರ್ ಅಭಿಜಿತ್ ಬೆಂಗೇರಿ ತೇರ್ಗಡೆಯಾಗಿದ್ದು, ಮಂಡಳಿ ಸಂಘಟಿಸುವ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಅರ್ಹತೆ ಪಡೆದಿದ್ದಾರೆ.<br /> <br /> ನಾಗಪುರದ ರಾಷ್ಟ್ರೀಯ ಅಂಪೈರಿಂಗ್ ಅಕಾಡೆಮಿಯಲ್ಲಿ ಕಳೆದ ಜುಲೈನಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ನೂರಕ್ಕೆ 98 ಅಂಕ ಪಡೆದಿರುವ ಅಭಿಜಿತ್ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಉತ್ತರ ಕರ್ನಾಟಕದಿಂದ ಬಿಸಿಸಿಐ ಅಂಪೈರ್ ಆಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಅವರು ಒಳಗಾಗಿದ್ದಾರೆ. <br /> <br /> ಬೆಂಗಳೂರಿನ ವಿ.ಎನ್. ಕುಲಕರ್ಣಿ ಅವರನ್ನು ಹೊರತುಪಡಿಸಿದರೆ ಕರ್ನಾಟಕದ ಯಾವೊಬ್ಬ ಅಂಪೈರ್ ಕೂಡ ಈ ಸಾಧನೆ ಮಾಡಿಲ್ಲ. ರಾಜ್ಯ 14 ಮತ್ತು 16 ವರ್ಷದೊಳಗಿನ ತಂಡದಲ್ಲಿ ಆಡಿದ್ದ ಅಭಿಜಿತ್, ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಟಗಾರರೂ ಆಗಿದ್ದರು. ಹಿರಿಯ ಆಟಗಾರ ವಿಜಯ್ ಕಾಮತ್ ಮತ್ತು ವಿ.ಎನ್. ಕುಲಕರ್ಣಿ ಅವರ ಗರಡಿಯಲ್ಲಿ ಈ ಯುವ ಅಂಪೈರ್ ಪಳಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>