<p><br /> ಪಟ್ನಾ (ಐಎಎನ್ಎಸ್): ಅಂತರರಾಷ್ಟ್ರೀಯ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನಕ್ಕೆ ದೇಣಿಗೆ ಸಂಗ್ರಹಿಸಲು ಬುಧವಾರ ಇಲ್ಲಿಗೆ ಆಗಮಿಸಿದ ಸಾಫ್ಟ್ವೇರ್ ದೈತ್ಯಸಂಸ್ಥೆ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ಗೇಟ್ಸ್ ಮತ್ತು ಪತ್ನಿ ಮಿಲಿಂದಾ ಬುಧವಾರ ಕೆಲವು ಗ್ರಾಮಗಳಿಗೂ ಭೇಟಿ ನೀಡಿದರು.<br /> <br /> ಪಟ್ನಾಗೆ ಆಗಮಿಸುತ್ತಿದ್ದಂತೆ ಈ ದಂಪತಿ ಸಮೀಪದ ದಾನಪುರ ಉಪ ವಿಭಾಗದ ಜಮ್ಸಾತ್ ಮತ್ತು ಸಬ್ಜಪುರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಲ್ ಗೇಟ್ಸ್, ಬಿಹಾರ ಸರ್ಕಾರದ ಸಹಭಾಗಿತ್ವದೊಂದಿಗಿನ ತಮ್ಮ ಪ್ರತಿಷ್ಠಾನದ ಆರೋಗ್ಯ ಕಾರ್ಯಕ್ರಮವು ಇಲ್ಲಿ ಜನರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎಂಬುದನ್ನು ಅರಿಯಲು ಬಂದಿರುವುದಾಗಿ ಹೇಳಿದರು.<br /> <br /> ‘ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿಯಲು ಯತ್ನಿಸಿದರು’ ಎಂದು ಬಿಲ್ ಗೇಟ್ಸ್ಜಿಲ್ಲೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ರೈತರಿಗೆ ನೆರವು ನೀಡುವ ಸಿಎಸ್ಐಎಸ್ಎ ಸಂಸ್ಥೆಗೂ ಅವರು ಭೇಟಿ ನೀಡಿದರು. ಜಾರಿಯಲ್ಲಿರುವ ಪ್ರತಿಷ್ಠಾನದ ಯೋಜನೆಯ ಬಗ್ಗೆ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.<br /> <br /> ನಂತರ ಅವರು ಮುಖ್ಯಮಂತ್ರಿ ನಿತೀಶ್ಕುಮಾರ್, ಹಿರಿಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಪಟ್ನಾ (ಐಎಎನ್ಎಸ್): ಅಂತರರಾಷ್ಟ್ರೀಯ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನಕ್ಕೆ ದೇಣಿಗೆ ಸಂಗ್ರಹಿಸಲು ಬುಧವಾರ ಇಲ್ಲಿಗೆ ಆಗಮಿಸಿದ ಸಾಫ್ಟ್ವೇರ್ ದೈತ್ಯಸಂಸ್ಥೆ ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ಗೇಟ್ಸ್ ಮತ್ತು ಪತ್ನಿ ಮಿಲಿಂದಾ ಬುಧವಾರ ಕೆಲವು ಗ್ರಾಮಗಳಿಗೂ ಭೇಟಿ ನೀಡಿದರು.<br /> <br /> ಪಟ್ನಾಗೆ ಆಗಮಿಸುತ್ತಿದ್ದಂತೆ ಈ ದಂಪತಿ ಸಮೀಪದ ದಾನಪುರ ಉಪ ವಿಭಾಗದ ಜಮ್ಸಾತ್ ಮತ್ತು ಸಬ್ಜಪುರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.<br /> <br /> ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಲ್ ಗೇಟ್ಸ್, ಬಿಹಾರ ಸರ್ಕಾರದ ಸಹಭಾಗಿತ್ವದೊಂದಿಗಿನ ತಮ್ಮ ಪ್ರತಿಷ್ಠಾನದ ಆರೋಗ್ಯ ಕಾರ್ಯಕ್ರಮವು ಇಲ್ಲಿ ಜನರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎಂಬುದನ್ನು ಅರಿಯಲು ಬಂದಿರುವುದಾಗಿ ಹೇಳಿದರು.<br /> <br /> ‘ಗ್ರಾಮಸ್ಥರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆಗಳ ಬಗ್ಗೆ ತಿಳಿಯಲು ಯತ್ನಿಸಿದರು’ ಎಂದು ಬಿಲ್ ಗೇಟ್ಸ್ಜಿಲ್ಲೆಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.<br /> <br /> ರೈತರಿಗೆ ನೆರವು ನೀಡುವ ಸಿಎಸ್ಐಎಸ್ಎ ಸಂಸ್ಥೆಗೂ ಅವರು ಭೇಟಿ ನೀಡಿದರು. ಜಾರಿಯಲ್ಲಿರುವ ಪ್ರತಿಷ್ಠಾನದ ಯೋಜನೆಯ ಬಗ್ಗೆ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.<br /> <br /> ನಂತರ ಅವರು ಮುಖ್ಯಮಂತ್ರಿ ನಿತೀಶ್ಕುಮಾರ್, ಹಿರಿಯ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>