<p><strong>ಬೀದರ್: </strong> ಕೋಟೆ, ಮಹಮೂದ್ ಗಾವಾನ್ ಮದರಸಾ, ತನ್ನದೇ ಪರಂಪರೆ ಹೊಂದಿರುವ ದೇಗುಲಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿಗೆ ವಿಫುಲ ಅವಕಾಶಗಳಿದ್ದರೂ, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳೇ ಇಲ್ಲ.<br /> <br /> ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಒತ್ತು ನೀಡಲು ಪ್ರತ್ಯೇಕವಾಗಿ ಪ್ರವಾಸೋದ್ಯಮ ಇಲಾಖೆಯೇ ಇದ್ದರೂ ಜಿಲ್ಲೆಯಲ್ಲಿ ಇಲಾಖೆ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಬಹುತೇಕ ಹುದ್ದೆಗಳು ಖಾಲಿ ಇರುವಂತೇ ಈ ಹುದ್ದೆಯನ್ನು ಭರ್ತಿ ಮಾಡುವ ಕಾರ್ಯವು ನೆನೆಗುದಿಗೆ ಬಿದ್ದಿದೆ.<br /> <br /> ಅಧಿಕಾರಿ ಮೂಲಗಳ ಪ್ರಕಾರ, ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗೇ ಜಿಲ್ಲೆಯ ಪ್ರಭಾರದ ಹೊಣೆಯೂ ಇದೆ. ಅವರ ಕೆಲಸ ಕಚೇರಿ ಕೆಲಸಗಳಿಗೆ ಸೀಮಿತವಾದ ಕಾರಣ, ಜಿಲ್ಲೆಯ ಮಟ್ಟಿಗೆ ಆ ಅಧಿಕಾರಿಯೂ ಅಪರೂಪದ ಅತಿಥಿಯೇ ಆಗಿದ್ದಾರೆ.<br /> <br /> ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿಯೇ ಒಂದು ಶಾಖೆ ಇದ್ದು, ಅಲ್ಲಿಯೂ ಕೇವಲ ಗುಮಾಸ್ತರೊಬ್ಬರು ಮಾತ್ರ ಇದ್ದಾರೆ. ಉಳಿದಂತೆ, ಯಾವುದೇ ಸಿಬ್ಬಂದಿ ಇಲ್ಲ ಎಂಬುದು ತಿಳಿದುಬಂದ ಮಾಹಿತಿ.<br /> <br /> ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ವಲ್ಯ್ಪುರೆ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚುರುಕು ನೀಡಿದ್ದು, ಸ್ಥಳೀಯ ಆರ್ಥಿಕತೆ ಪ್ರಗತಿಗೆ ಪೂರಕವಾಗಿ ರೂಪುರೇಷೆ ಸಿದ್ಧಪಡಿಸುವ ಮಾತನಾಡಿದ್ದಾರೆ. <br /> <br /> ಮೊದಲ ಹಂತವಾಗಿ ಇಲಾಖೆಗೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕಾದ ಹೊಣೆಗಾರಿಕೆ ಸಚಿವರ ಮೇಲಿದೆ.<br /> ಸಚಿವರೇ ಉಲ್ಲೇಖಿಸಿರುವಂತೆ ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆಯ ಸ್ಥಳಗಳು ಸೇರಿದಂತೆ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಸಾಕಷ್ಟು ಸ್ಥಳಗಳು, ಅವಕಾಶಗಳು ಇದ್ದರೂ ಹಲವು ವರ್ಷಗಳಿಂದ ಕಡೆಗಣಿಸಲಾಗಿದೆ ಎಂಬುದು ನಿಜ. <br /> <br /> ನಗರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕೋಟೆ, ಮಹಮೂದ್ ಗಾವಾನ್ ಮದರಸಾ, ಪಾಪನಾಶ ದೇವಾಲಯ, ನರಸಿಂಹ ಝರಣಿ, ಗುರುನಾನಕ ಝೀರಾ, ಅಷ್ಟೂರಿನ ಗುಂಬಜ್ಗಳು, ಹೊನ್ನಕೇರಿ ಸಿದ್ದೇಶ್ವರ ದೇವಾಲಯ, ಮೈಲಾರ ಮಲ್ಲಣ್ಣ ದೇವಾಲಯ, ಬಸವಕಲ್ಯಾಣದ ಅನುಭವ ಮಂಟಪ ಸೇರಿದಂತೆ ಅನೇಕ ತಾಣಗಳಿವೆ.<br /> <br /> `ನೆರೆಯ ಹೈದರಾಬಾದ್ ಪಟ್ಟಣದಿಂದ ನಗರಕ್ಕೆ ಅತ್ಯುತ್ತಮ ರಸ್ತೆ ಸಂಪರ್ಕ ಸೌಲಭ್ಯ ಇರುವುದು ಅನುಕೂಲಕರ. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಜಿಲ್ಲೆಗೆ ಭೇಟಿ ನೀಡುವಂಥ ವಾತಾವರಣ ರೂಪಿಸಿದರೂ ಸ್ಥಳೀಯವಾಗಿ ಆರ್ಥಿಕತೆ ಅಭಿವೃದ್ಧಿಯ ಜೊತೆಗೆ, ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯತೆಗಳು ಇವೆ~ ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್ ಅವರು.<br /> ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಆ ನಿಟ್ಟಿನಲ್ಲಿ ಕಾರ್ಯ ಸಾಧನೆಯಾಗಿಲ್ಲ. <br /> <br /> ಹಾಗಂತ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಹಣವೇ ವೆಚ್ಚವಾಗಿಲ್ಲ ಎಂದು ಅರ್ಥವಲ್ಲ.<br /> ಈಚೆಗೆ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕ ರಘುನಾಥರಾವ್ ಮಲ್ಕಾಪುರೆ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸರ್ಕಾರವೇ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ (2008-09 ರಿಂದ 2011-12) ಬೀದರ್ ತಾಲ್ಲೂಕಿಗಾಗಿಯೇ ಕೇಂದ್ರದ ಅನುದಾನದಲ್ಲಿ 10,224 ಲಕ್ಷ, ರಾಜ್ಯದ ಅನುದಾನದಲ್ಲಿ 708 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.<br /> <br /> ಜೊತೆಗೆ, ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಡಾರ್ಮಿಟರಿ, ಧ್ವನಿ ಬೆಳಕು ಯೋಜನೆ, ಜಲಕ್ರೀಡಾ, ಸಾಹಸ ಕ್ರೀಡಾ ಸೌಲಭ್ಯಗಳನ್ನು ಪ್ರವಾಸಿಗಳಿಗೆ ಒದಗಿಸಲಾಗುತ್ತಿದೆ ಎಂದು ಉತ್ತರವನ್ನು ಸರ್ಕಾರ ನೀಡಿದೆ. ಈ ಸೌಲಭ್ಯಗಳನ್ನು ಎಲ್ಲಿ ಒದಗಿಸಲಾಗುತ್ತಿದೆ ಎಂಬ ಕುತೂಲಹವಂತೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong> ಕೋಟೆ, ಮಹಮೂದ್ ಗಾವಾನ್ ಮದರಸಾ, ತನ್ನದೇ ಪರಂಪರೆ ಹೊಂದಿರುವ ದೇಗುಲಗಳು ಸೇರಿದಂತೆ ಅನೇಕ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿಗೆ ವಿಫುಲ ಅವಕಾಶಗಳಿದ್ದರೂ, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳೇ ಇಲ್ಲ.<br /> <br /> ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಒತ್ತು ನೀಡಲು ಪ್ರತ್ಯೇಕವಾಗಿ ಪ್ರವಾಸೋದ್ಯಮ ಇಲಾಖೆಯೇ ಇದ್ದರೂ ಜಿಲ್ಲೆಯಲ್ಲಿ ಇಲಾಖೆ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಬಹುತೇಕ ಹುದ್ದೆಗಳು ಖಾಲಿ ಇರುವಂತೇ ಈ ಹುದ್ದೆಯನ್ನು ಭರ್ತಿ ಮಾಡುವ ಕಾರ್ಯವು ನೆನೆಗುದಿಗೆ ಬಿದ್ದಿದೆ.<br /> <br /> ಅಧಿಕಾರಿ ಮೂಲಗಳ ಪ್ರಕಾರ, ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗೇ ಜಿಲ್ಲೆಯ ಪ್ರಭಾರದ ಹೊಣೆಯೂ ಇದೆ. ಅವರ ಕೆಲಸ ಕಚೇರಿ ಕೆಲಸಗಳಿಗೆ ಸೀಮಿತವಾದ ಕಾರಣ, ಜಿಲ್ಲೆಯ ಮಟ್ಟಿಗೆ ಆ ಅಧಿಕಾರಿಯೂ ಅಪರೂಪದ ಅತಿಥಿಯೇ ಆಗಿದ್ದಾರೆ.<br /> <br /> ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿಯೇ ಒಂದು ಶಾಖೆ ಇದ್ದು, ಅಲ್ಲಿಯೂ ಕೇವಲ ಗುಮಾಸ್ತರೊಬ್ಬರು ಮಾತ್ರ ಇದ್ದಾರೆ. ಉಳಿದಂತೆ, ಯಾವುದೇ ಸಿಬ್ಬಂದಿ ಇಲ್ಲ ಎಂಬುದು ತಿಳಿದುಬಂದ ಮಾಹಿತಿ.<br /> <br /> ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ವಲ್ಯ್ಪುರೆ ಅವರು, ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಚುರುಕು ನೀಡಿದ್ದು, ಸ್ಥಳೀಯ ಆರ್ಥಿಕತೆ ಪ್ರಗತಿಗೆ ಪೂರಕವಾಗಿ ರೂಪುರೇಷೆ ಸಿದ್ಧಪಡಿಸುವ ಮಾತನಾಡಿದ್ದಾರೆ. <br /> <br /> ಮೊದಲ ಹಂತವಾಗಿ ಇಲಾಖೆಗೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕಾದ ಹೊಣೆಗಾರಿಕೆ ಸಚಿವರ ಮೇಲಿದೆ.<br /> ಸಚಿವರೇ ಉಲ್ಲೇಖಿಸಿರುವಂತೆ ಜಿಲ್ಲೆಯಲ್ಲಿ ಐತಿಹಾಸಿಕ ಪರಂಪರೆಯ ಸ್ಥಳಗಳು ಸೇರಿದಂತೆ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಸಾಕಷ್ಟು ಸ್ಥಳಗಳು, ಅವಕಾಶಗಳು ಇದ್ದರೂ ಹಲವು ವರ್ಷಗಳಿಂದ ಕಡೆಗಣಿಸಲಾಗಿದೆ ಎಂಬುದು ನಿಜ. <br /> <br /> ನಗರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಕೋಟೆ, ಮಹಮೂದ್ ಗಾವಾನ್ ಮದರಸಾ, ಪಾಪನಾಶ ದೇವಾಲಯ, ನರಸಿಂಹ ಝರಣಿ, ಗುರುನಾನಕ ಝೀರಾ, ಅಷ್ಟೂರಿನ ಗುಂಬಜ್ಗಳು, ಹೊನ್ನಕೇರಿ ಸಿದ್ದೇಶ್ವರ ದೇವಾಲಯ, ಮೈಲಾರ ಮಲ್ಲಣ್ಣ ದೇವಾಲಯ, ಬಸವಕಲ್ಯಾಣದ ಅನುಭವ ಮಂಟಪ ಸೇರಿದಂತೆ ಅನೇಕ ತಾಣಗಳಿವೆ.<br /> <br /> `ನೆರೆಯ ಹೈದರಾಬಾದ್ ಪಟ್ಟಣದಿಂದ ನಗರಕ್ಕೆ ಅತ್ಯುತ್ತಮ ರಸ್ತೆ ಸಂಪರ್ಕ ಸೌಲಭ್ಯ ಇರುವುದು ಅನುಕೂಲಕರ. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರೂ ಜಿಲ್ಲೆಗೆ ಭೇಟಿ ನೀಡುವಂಥ ವಾತಾವರಣ ರೂಪಿಸಿದರೂ ಸ್ಥಳೀಯವಾಗಿ ಆರ್ಥಿಕತೆ ಅಭಿವೃದ್ಧಿಯ ಜೊತೆಗೆ, ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯತೆಗಳು ಇವೆ~ ಎನ್ನುತ್ತಾರೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ್ ಅವರು.<br /> ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂಬ ಕೂಗು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಆ ನಿಟ್ಟಿನಲ್ಲಿ ಕಾರ್ಯ ಸಾಧನೆಯಾಗಿಲ್ಲ. <br /> <br /> ಹಾಗಂತ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಹಣವೇ ವೆಚ್ಚವಾಗಿಲ್ಲ ಎಂದು ಅರ್ಥವಲ್ಲ.<br /> ಈಚೆಗೆ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕ ರಘುನಾಥರಾವ್ ಮಲ್ಕಾಪುರೆ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸರ್ಕಾರವೇ, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ (2008-09 ರಿಂದ 2011-12) ಬೀದರ್ ತಾಲ್ಲೂಕಿಗಾಗಿಯೇ ಕೇಂದ್ರದ ಅನುದಾನದಲ್ಲಿ 10,224 ಲಕ್ಷ, ರಾಜ್ಯದ ಅನುದಾನದಲ್ಲಿ 708 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.<br /> <br /> ಜೊತೆಗೆ, ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಡಾರ್ಮಿಟರಿ, ಧ್ವನಿ ಬೆಳಕು ಯೋಜನೆ, ಜಲಕ್ರೀಡಾ, ಸಾಹಸ ಕ್ರೀಡಾ ಸೌಲಭ್ಯಗಳನ್ನು ಪ್ರವಾಸಿಗಳಿಗೆ ಒದಗಿಸಲಾಗುತ್ತಿದೆ ಎಂದು ಉತ್ತರವನ್ನು ಸರ್ಕಾರ ನೀಡಿದೆ. ಈ ಸೌಲಭ್ಯಗಳನ್ನು ಎಲ್ಲಿ ಒದಗಿಸಲಾಗುತ್ತಿದೆ ಎಂಬ ಕುತೂಲಹವಂತೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>