<p>ಹುಣಸಗಿ: ದಿನಬಳಕೆ ವಸ್ತುಗಳು, ದಿನಸಿ ಬೆಲೆ ಏರಿಕೆ ಮಧ್ಯೆಯೂ ಹುಣಸಗಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಖರೀದಿ ಜೋರಾಗಿಯೇ ನಡೆದಿದೆ. ಹುಣಸಗಿ, ಕೊಡೇಕಲ್ಲ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ನರಕಚತುರ್ದಶಿ ಆಚರಿಸಿದ್ದರಿಂದ ಸೋಮವಾರ ಮತ್ತು ಮಂಗಳವಾರ ಹುಣಸಗಿಯಲ್ಲಿ ಹಬ್ಬದ ಖರೀದಿ ಭರ್ಜರಿಯಾಗಿ ನಡೆದಿತ್ತು. <br /> <br /> ಕಳೆದ ವರ್ಷಕ್ಕಿಂತ ಈ ಬಾರಿ ಹೂವು, ಹಣ್ಣು, ತರಕಾರಿ, ಆಕಾಶಬುಟ್ಟಿಗಳ ಬೆಲೆ ಗಗನಕ್ಕೆರಿದ್ದರೂ ಹಬ್ಬದ ಆಚರಣೆ ಮಾಡಬೇಕಲ್ಲವೇ ಆಚರಣೆ ಬಿಡಲು ಬರುವುದಿಲ್ಲ ಎಂದು ಬಲಶೆಟ್ಟಿಹಾಳ ಗ್ರಾಮದ ಬಸಮ್ಮ ಹೇಳಿದರು. <br /> <br /> <strong>ಕುಂಬಳಕಾಯಿಗೆ ಬೇಡಿಕೆ:</strong> ದೀಪಾವಳಿಗೆ ಪ್ರತಿಯೊಬ್ಬರೂ ತಮ್ಮ ವಾಹನ ಪೂಜೆಗೆ ಕರಿಕುಂಬಳಕಾಯಿ ಬಳಸುವುದರಿಂದ ಅದರ ಬೆಲೆ ನೂರರಿಂದ ನೂರಾ ಐವತ್ತು ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತಿದೆ. <br /> <br /> <strong>ಕೈಸುಡುವ ಪಟಾಕಿ:</strong> ಕಳೆದ ವರ್ಷಕ್ಕಿಂತ ಈ ಬಾರಿ ಪಟಾಕಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಸರಾಸರಿ 60 ರಷ್ಟು ಮಾತ್ರ ಮಾರಾಟವಾಗುವ ಲಕ್ಷಣವಿದೆ ಎಂದು ಪಟಾಕಿ ವ್ಯಾಪಾರಿ ಪುರುಷೋತ್ತಮ ಠವಾಣಿ ಹೇಳುತ್ತಾರೆ. <br /> <br /> ಚಂಡುಹೂ, ಸೇವಂತಿಗೆ, ಬಾಳೆದಿಂಡು, ತೆಂಗಿನಗರಿ ಕನಕಾಂಬರ ಹೂವಿನ ವ್ಯಾಪಾರ ಮಾತ್ರ ಭರ್ಜರಿಯಾಗಿತ್ತು. ಎರಡು ಕಟ್ಟು ಹೂಗಿಡಕ್ಕೆ ನೂರರಿಂದ ನೂರಾಪ್ಪತ್ತು ವರೆರೆ ಸಿಗುತ್ತಿದೆ. <br /> <br /> ಪ್ರತಿ ದೀಪಾವಳಿಗೆ ಬಜಾರ್ ಪೂರ್ತಿ ಜನರಿಂದ ತುಂಬಿರುತ್ತಿತ್ತು. ಆದರೆ ಬಹುತೇಕ ಹಳ್ಳಿಗಳಲ್ಲಿ ತಾಂಡಾಗಳಲ್ಲಿ ಗುಳೇ ಹೊಗಿದ್ದರಿಂದ ವ್ಯಾಪಾರ ತಕ್ಕಮಟ್ಟಿಗೆ ಇದೆ ಎಂದು ತೆಂಗಿನ ಕಾಯಿ ವ್ಯಾಪಾರಿ ಸಿದ್ದು ರೇವಡಿ ಹೇಳುತ್ತಾರೆ. <br /> <br /> ಕಳೆದ ಬಾರಿ ಎರಡನೆ ಹಂಗಾಮಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ಇದ್ದುದರಿಂದ ಮತ್ತು ಈ ಬಾರಿ ಬತ್ತದ ಗದ್ದೆಗೆ ಬೀಜ ಗೊಬ್ಬರಕ್ಕಾಗಿ ಎಲ್ಲ ಹಣ ಖರ್ಚು ಮಾಡಿದ್ದರಿಂದ ದೀಪಾವಳಿ ಸಾಲ ಮಾಡಿಯೇ ಹಬ್ಬ ಮಾಡುವ ಅನಿವಾರ್ಯತೆ ಇದೆ ಎಂದು ಕೆಲವು ರೈತರು ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ದಿನಬಳಕೆ ವಸ್ತುಗಳು, ದಿನಸಿ ಬೆಲೆ ಏರಿಕೆ ಮಧ್ಯೆಯೂ ಹುಣಸಗಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಖರೀದಿ ಜೋರಾಗಿಯೇ ನಡೆದಿದೆ. ಹುಣಸಗಿ, ಕೊಡೇಕಲ್ಲ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ನರಕಚತುರ್ದಶಿ ಆಚರಿಸಿದ್ದರಿಂದ ಸೋಮವಾರ ಮತ್ತು ಮಂಗಳವಾರ ಹುಣಸಗಿಯಲ್ಲಿ ಹಬ್ಬದ ಖರೀದಿ ಭರ್ಜರಿಯಾಗಿ ನಡೆದಿತ್ತು. <br /> <br /> ಕಳೆದ ವರ್ಷಕ್ಕಿಂತ ಈ ಬಾರಿ ಹೂವು, ಹಣ್ಣು, ತರಕಾರಿ, ಆಕಾಶಬುಟ್ಟಿಗಳ ಬೆಲೆ ಗಗನಕ್ಕೆರಿದ್ದರೂ ಹಬ್ಬದ ಆಚರಣೆ ಮಾಡಬೇಕಲ್ಲವೇ ಆಚರಣೆ ಬಿಡಲು ಬರುವುದಿಲ್ಲ ಎಂದು ಬಲಶೆಟ್ಟಿಹಾಳ ಗ್ರಾಮದ ಬಸಮ್ಮ ಹೇಳಿದರು. <br /> <br /> <strong>ಕುಂಬಳಕಾಯಿಗೆ ಬೇಡಿಕೆ:</strong> ದೀಪಾವಳಿಗೆ ಪ್ರತಿಯೊಬ್ಬರೂ ತಮ್ಮ ವಾಹನ ಪೂಜೆಗೆ ಕರಿಕುಂಬಳಕಾಯಿ ಬಳಸುವುದರಿಂದ ಅದರ ಬೆಲೆ ನೂರರಿಂದ ನೂರಾ ಐವತ್ತು ರೂಪಾಯಿ ವರೆಗೂ ಮಾರಾಟ ಮಾಡಲಾಗುತ್ತಿದೆ. <br /> <br /> <strong>ಕೈಸುಡುವ ಪಟಾಕಿ:</strong> ಕಳೆದ ವರ್ಷಕ್ಕಿಂತ ಈ ಬಾರಿ ಪಟಾಕಿ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಸರಾಸರಿ 60 ರಷ್ಟು ಮಾತ್ರ ಮಾರಾಟವಾಗುವ ಲಕ್ಷಣವಿದೆ ಎಂದು ಪಟಾಕಿ ವ್ಯಾಪಾರಿ ಪುರುಷೋತ್ತಮ ಠವಾಣಿ ಹೇಳುತ್ತಾರೆ. <br /> <br /> ಚಂಡುಹೂ, ಸೇವಂತಿಗೆ, ಬಾಳೆದಿಂಡು, ತೆಂಗಿನಗರಿ ಕನಕಾಂಬರ ಹೂವಿನ ವ್ಯಾಪಾರ ಮಾತ್ರ ಭರ್ಜರಿಯಾಗಿತ್ತು. ಎರಡು ಕಟ್ಟು ಹೂಗಿಡಕ್ಕೆ ನೂರರಿಂದ ನೂರಾಪ್ಪತ್ತು ವರೆರೆ ಸಿಗುತ್ತಿದೆ. <br /> <br /> ಪ್ರತಿ ದೀಪಾವಳಿಗೆ ಬಜಾರ್ ಪೂರ್ತಿ ಜನರಿಂದ ತುಂಬಿರುತ್ತಿತ್ತು. ಆದರೆ ಬಹುತೇಕ ಹಳ್ಳಿಗಳಲ್ಲಿ ತಾಂಡಾಗಳಲ್ಲಿ ಗುಳೇ ಹೊಗಿದ್ದರಿಂದ ವ್ಯಾಪಾರ ತಕ್ಕಮಟ್ಟಿಗೆ ಇದೆ ಎಂದು ತೆಂಗಿನ ಕಾಯಿ ವ್ಯಾಪಾರಿ ಸಿದ್ದು ರೇವಡಿ ಹೇಳುತ್ತಾರೆ. <br /> <br /> ಕಳೆದ ಬಾರಿ ಎರಡನೆ ಹಂಗಾಮಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ಇದ್ದುದರಿಂದ ಮತ್ತು ಈ ಬಾರಿ ಬತ್ತದ ಗದ್ದೆಗೆ ಬೀಜ ಗೊಬ್ಬರಕ್ಕಾಗಿ ಎಲ್ಲ ಹಣ ಖರ್ಚು ಮಾಡಿದ್ದರಿಂದ ದೀಪಾವಳಿ ಸಾಲ ಮಾಡಿಯೇ ಹಬ್ಬ ಮಾಡುವ ಅನಿವಾರ್ಯತೆ ಇದೆ ಎಂದು ಕೆಲವು ರೈತರು ಅಭಿಪ್ರಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>