<p>ಮಂಡ್ಯ: ಮಂದಗತಿ ಕಾಮಗಾರಿಯ ಪರಿಣಾಮ ನಿರ್ಮಲ ಭಾರತ ಅಭಿಯಾನಕ್ಕಾಗಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಗೆ ಬಿಡುಗಡೆಯಾಗಿದ್ದ ₨ 8 ಕೋಟಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ.<br /> <br /> 2012ನೇ ಸಾಲಿಗೆ ಆರಂಭಿಕ ಶಿಲ್ಕಾಗಿ ಕೇಂದ್ರದ ₨ 4.13 ಕೋಟಿ, ರಾಜ್ಯದ ₨ 46.32 ಲಕ್ಷ ಉಳಿದುಕೊಂಡಿದೆ. 2012–13ನೇ ಸಾಲಿಗೆ ಕೇಂದ್ರವು ₨ 9.48 ಕೋಟಿ ಹಾಗೂ ರಾಜ್ಯವು ₨ 1.02 ಕೋಟಿ ಬಿಡುಗಡೆ ಮಾಡಿತ್ತು.<br /> ಪೂರ್ಣ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯು ಕೇವಲ ₨ 2.05 ಕೋಟಿಗಳನ್ನಷ್ಟೇ ಖರ್ಚು ಮಾಡಿದ್ದು, ₨ 13.05 ಕೋಟಿ ಬಾಕಿ ಉಳಿದಿತ್ತು.<br /> <br /> ಮಂಡ್ಯ ಜಿಲ್ಲಾ ಪಂಚಾಯಿತಿಯು ಅನುದಾನವನ್ನು ಸಮಪರ್ಕವಾಗಿ ಬಳಸದ್ದನ್ನು ಗಮನಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನವನ್ನು ಕಡಿತಗೊಳಿಸಿ, 2013–14ನೇ ಸಾಲಿಗೆ ಕೇಂದ್ರವು ₨ 5.24 ಕೋಟಿ ಹಾಗೂ ರಾಜ್ಯವು ₨ 51 ಲಕ್ಷ ಮಾತ್ರ ಬಿಡುಗಡೆ ಮಾಡಿದವು.<br /> <br /> ಒಟ್ಟಾರೆ ಅನುದಾನವು ₨ 18.80 ಕೋಟಿಗೆ ಏರಿತು. ಇಷ್ಟನ್ನೂ ಬಳಸಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ಅರಿತುಕೊಂಡ ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ₨ 7 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ₨ 1 ಕೋಟಿಯನ್ನು ವರ್ಗಾಯಿಸುವಂತೆ ಸೂಚಿಸಿತ್ತು. ಆ ಪ್ರಕಾರ ವರ್ಗಾವಣೆ ಮಾಡಲಾಗಿದೆ.<br /> <br /> ಶೌಚಾಲಯವಿಲ್ಲದ ಗೋಳು:<br /> 2012ರಲ್ಲಿ ನಡೆದ ಸರ್ವೆ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದ 3,74,445 ಕುಟುಂಬಗಳಿವೆ. 2005ರಿಂದ ಇಲ್ಲಿಯವರೆಗೆ 1.23 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2,51,445 ಕುಟುಂಬಗಳು ಶೌಚಾಲಯವನ್ನೇ ಹೊಂದಿಲ್ಲ.<br /> <br /> ಜಿಲ್ಲೆಯಲ್ಲಿರುವ 1,631 ಶಾಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 914 ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, 204 ಅಂಗನವಾಡಿಗಳಲ್ಲಿ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.<br /> <br /> ಸಮುದಾಯ ಶೌಚಾಲಯಗಳಿಗೆ ₨ 2 ಲಕ್ಷದವರೆಗೂ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶೇ 10ರಷ್ಟನ್ನು ಮಾತ್ರ ಸಾರ್ವಜನಿಕರು ವಂತಿಗೆ ಮೂಲಕ ಭರಿಸಿಕೊಳ್ಳಬೇಕು. ಇಲ್ಲಿಯವರೆಗೆ 25 ಸಮುದಾಯ ಶೌಚಾಲಯಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗಿದೆ.<br /> <br /> ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಳ್ಳಲು ₨ 4,700 ನೀಡಲಾಗುತ್ತಿದೆ. ನರೇಗಾದಿಂದ ₨ 4,500 ನೀಡಲಾಗುತ್ತಿದೆ. ಜತೆಗೆ ಫಲಾನುಭವಿಯ ₨ 800 ಸೇರಿಸಿಕೊಂಡು ಹತ್ತು ಸಾವಿರ ರೂಪಾಯಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕಾಗಿದೆ. ಪ್ರಚಾರದ ಕೊರತೆ, ಸಾರ್ವಜನಿಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಜಾಗದ ಕೊರತೆಯಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.<br /> <br /> ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆಯ ನಾಲ್ಕು ಯೋಜನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅವುಗಳನ್ನು ಸರ್ಕಾರ ತಿರಸ್ಕರಿಸಿದ್ದು, ಪರಿಷ್ಕರಿಸಿ ಮತ್ತೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.<br /> <br /> ಜಿಲ್ಲೆಯ 29 ಗ್ರಾಮಗಳು ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿವೆ. ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಲಭ್ಯವಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಪರಿಣಾಮ ಅನುದಾನ ಬೇರೆ ಜಿಲ್ಲೆಗಳ ಪಾಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಮಂದಗತಿ ಕಾಮಗಾರಿಯ ಪರಿಣಾಮ ನಿರ್ಮಲ ಭಾರತ ಅಭಿಯಾನಕ್ಕಾಗಿ ಬಿಡುಗಡೆಯಾಗಿದ್ದ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಗೆ ಬಿಡುಗಡೆಯಾಗಿದ್ದ ₨ 8 ಕೋಟಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ.<br /> <br /> 2012ನೇ ಸಾಲಿಗೆ ಆರಂಭಿಕ ಶಿಲ್ಕಾಗಿ ಕೇಂದ್ರದ ₨ 4.13 ಕೋಟಿ, ರಾಜ್ಯದ ₨ 46.32 ಲಕ್ಷ ಉಳಿದುಕೊಂಡಿದೆ. 2012–13ನೇ ಸಾಲಿಗೆ ಕೇಂದ್ರವು ₨ 9.48 ಕೋಟಿ ಹಾಗೂ ರಾಜ್ಯವು ₨ 1.02 ಕೋಟಿ ಬಿಡುಗಡೆ ಮಾಡಿತ್ತು.<br /> ಪೂರ್ಣ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯು ಕೇವಲ ₨ 2.05 ಕೋಟಿಗಳನ್ನಷ್ಟೇ ಖರ್ಚು ಮಾಡಿದ್ದು, ₨ 13.05 ಕೋಟಿ ಬಾಕಿ ಉಳಿದಿತ್ತು.<br /> <br /> ಮಂಡ್ಯ ಜಿಲ್ಲಾ ಪಂಚಾಯಿತಿಯು ಅನುದಾನವನ್ನು ಸಮಪರ್ಕವಾಗಿ ಬಳಸದ್ದನ್ನು ಗಮನಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನವನ್ನು ಕಡಿತಗೊಳಿಸಿ, 2013–14ನೇ ಸಾಲಿಗೆ ಕೇಂದ್ರವು ₨ 5.24 ಕೋಟಿ ಹಾಗೂ ರಾಜ್ಯವು ₨ 51 ಲಕ್ಷ ಮಾತ್ರ ಬಿಡುಗಡೆ ಮಾಡಿದವು.<br /> <br /> ಒಟ್ಟಾರೆ ಅನುದಾನವು ₨ 18.80 ಕೋಟಿಗೆ ಏರಿತು. ಇಷ್ಟನ್ನೂ ಬಳಸಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ಅರಿತುಕೊಂಡ ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲಾ ಪಂಚಾಯಿತಿಗೆ ₨ 7 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ₨ 1 ಕೋಟಿಯನ್ನು ವರ್ಗಾಯಿಸುವಂತೆ ಸೂಚಿಸಿತ್ತು. ಆ ಪ್ರಕಾರ ವರ್ಗಾವಣೆ ಮಾಡಲಾಗಿದೆ.<br /> <br /> ಶೌಚಾಲಯವಿಲ್ಲದ ಗೋಳು:<br /> 2012ರಲ್ಲಿ ನಡೆದ ಸರ್ವೆ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿಲ್ಲದ 3,74,445 ಕುಟುಂಬಗಳಿವೆ. 2005ರಿಂದ ಇಲ್ಲಿಯವರೆಗೆ 1.23 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2,51,445 ಕುಟುಂಬಗಳು ಶೌಚಾಲಯವನ್ನೇ ಹೊಂದಿಲ್ಲ.<br /> <br /> ಜಿಲ್ಲೆಯಲ್ಲಿರುವ 1,631 ಶಾಲೆಗಳಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 914 ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, 204 ಅಂಗನವಾಡಿಗಳಲ್ಲಿ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.<br /> <br /> ಸಮುದಾಯ ಶೌಚಾಲಯಗಳಿಗೆ ₨ 2 ಲಕ್ಷದವರೆಗೂ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶೇ 10ರಷ್ಟನ್ನು ಮಾತ್ರ ಸಾರ್ವಜನಿಕರು ವಂತಿಗೆ ಮೂಲಕ ಭರಿಸಿಕೊಳ್ಳಬೇಕು. ಇಲ್ಲಿಯವರೆಗೆ 25 ಸಮುದಾಯ ಶೌಚಾಲಯಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗಿದೆ.<br /> <br /> ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿಕೊಳ್ಳಲು ₨ 4,700 ನೀಡಲಾಗುತ್ತಿದೆ. ನರೇಗಾದಿಂದ ₨ 4,500 ನೀಡಲಾಗುತ್ತಿದೆ. ಜತೆಗೆ ಫಲಾನುಭವಿಯ ₨ 800 ಸೇರಿಸಿಕೊಂಡು ಹತ್ತು ಸಾವಿರ ರೂಪಾಯಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕಾಗಿದೆ. ಪ್ರಚಾರದ ಕೊರತೆ, ಸಾರ್ವಜನಿಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಜಾಗದ ಕೊರತೆಯಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.<br /> <br /> ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆಯ ನಾಲ್ಕು ಯೋಜನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅವುಗಳನ್ನು ಸರ್ಕಾರ ತಿರಸ್ಕರಿಸಿದ್ದು, ಪರಿಷ್ಕರಿಸಿ ಮತ್ತೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.<br /> <br /> ಜಿಲ್ಲೆಯ 29 ಗ್ರಾಮಗಳು ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿವೆ. ಶೌಚಾಲಯ ಹಾಗೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸಾಕಷ್ಟು ಅನುದಾನ ಲಭ್ಯವಿದೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಪರಿಣಾಮ ಅನುದಾನ ಬೇರೆ ಜಿಲ್ಲೆಗಳ ಪಾಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>