<p>ಬೀದರ್: ಶಾಸಕರು ಮತ್ತು ನಗರಸಭೆ ವತಿಯಿಂದ ನಗರದಲ್ಲಿ ಕೊರೆಸಲಾಗಿರುವ ಬೋರ್ವೆಲ್ಗಳ ಕುರಿತು ನಗರದ ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.<br /> <br /> ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸುವುದಕ್ಕಾಗಿ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ರೀತಿಯ ಮಹತ್ವದ ನಿರ್ಣಯ ಕೈಗೊಳ್ಳಲಿಲ್ಲ. ಆದರೆ, ಬೋರ್ವೆಲ್ ಮತ್ತು ಅನುದಾನದ ಚರ್ಚೆಯಷ್ಟೆ ಪ್ರಮುಖ ವಿಷಯವಾಯಿತು.<br /> <br /> ಕಳೆದ ಮೂರು ವರ್ಷಗಳಲ್ಲಿ ತಾವು ಕ್ಷೇತ್ರದಲ್ಲಿ 300 ಬೋರ್ವೆಲ್ಗಳನ್ನು ಕೊರೆಸಿದ್ದಾಗಿ ಶಾಸಕ ರಹೀಮ್ಖಾನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ನಾಗಶೆಟ್ಟಿ ವಗದಾಳೆ ಅವರು, ನೀವು ಬೋರ್ವೆಲ್ ಕೊರೆಸಿದ್ದಾಗಿ ಹೇಳುತ್ತಿದ್ದೀರಿ. ಆದರೆ, ಅದಕ್ಕಾಗಿ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ ಎಂದು ಆಪಾದಿಸಿದರು.<br /> <br /> ಕಳೆದ ವರ್ಷ 21 ಬೋರ್ವೆಲ್ಗಳನ್ನು ತೋಡಿಸಲಾಗಿದೆ ಎನ್ನುತ್ತಿದ್ದೀರಿ. ಇವುಗಳಿಗೆ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ. ಹಾಗಾದರೆ ಒಂದೇ ಬೋರ್ವೆಲ್ಗೆ ಎರಡೆರಡು ಅನುದಾನ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಈ ಕುರಿತು ನಗರಸಭೆ ಅಧಿಕಾರಿಗೆ ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ನೀಡಲಿಲ್ಲ. ಆಗ ಶಾಸಕರು ತಮ್ಮ ಅವಧಿಯಲ್ಲಿ ತೋಡಿಸಲಾದ ಬೋರ್ವೆಲ್ಗಳ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು. <br /> <br /> ವಾರ್ಡ್ ಸಂಖ್ಯೆ 28 ರ ವ್ಯಾಪ್ತಿಯ ಭವಾನಿ ಮಂದಿರದ ಬಳಿ ಬೋರ್ವೆಲ್ ತೋಡಿಸಿದ್ದಾಗಿ ಶಾಸಕರು ಹೇಳಿದರು. ಅದಕ್ಕೂ ಆ ವಾರ್ಡ್ನ ಸದಸ್ಯ ಶಿವಕುಮಾರ ಭಾವಿಕಟ್ಟಿ ತಕರಾರು ಎತ್ತಿದರು. ಇಲ್ಲಿ ನಗರಸಭೆಯ ಅನುದಾನದಿಂದ ಬೋರ್ವೆಲ್ ಕೊರೆಸಲಾಗಿದೆ ಎಂದರು. <br /> <br /> ಸದಸ್ಯರ ಸಂಬಂಧಿಕರು ಸಭೆಗೆ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಸದಸ್ಯ ಫರ್ನಾಂಡಿಸ್ ಹಿಪ್ಪಳಗಾಂವ್ ಮತ್ತಿತರರು `ಜಿರಾಕ್ಸ್ ಹಟಾವೋ ಸಿ.ಎಂ.ಸಿ. ಬಚಾವೋ~ ಎಂಬ ಘೋಷಣೆಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಶಾಸಕರು ಮತ್ತು ನಗರಸಭೆ ವತಿಯಿಂದ ನಗರದಲ್ಲಿ ಕೊರೆಸಲಾಗಿರುವ ಬೋರ್ವೆಲ್ಗಳ ಕುರಿತು ನಗರದ ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು.<br /> <br /> ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸುವುದಕ್ಕಾಗಿ ಕರೆಯಲಾಗಿದ್ದ ಸಭೆಯಲ್ಲಿ ಯಾವುದೇ ರೀತಿಯ ಮಹತ್ವದ ನಿರ್ಣಯ ಕೈಗೊಳ್ಳಲಿಲ್ಲ. ಆದರೆ, ಬೋರ್ವೆಲ್ ಮತ್ತು ಅನುದಾನದ ಚರ್ಚೆಯಷ್ಟೆ ಪ್ರಮುಖ ವಿಷಯವಾಯಿತು.<br /> <br /> ಕಳೆದ ಮೂರು ವರ್ಷಗಳಲ್ಲಿ ತಾವು ಕ್ಷೇತ್ರದಲ್ಲಿ 300 ಬೋರ್ವೆಲ್ಗಳನ್ನು ಕೊರೆಸಿದ್ದಾಗಿ ಶಾಸಕ ರಹೀಮ್ಖಾನ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸದಸ್ಯ ನಾಗಶೆಟ್ಟಿ ವಗದಾಳೆ ಅವರು, ನೀವು ಬೋರ್ವೆಲ್ ಕೊರೆಸಿದ್ದಾಗಿ ಹೇಳುತ್ತಿದ್ದೀರಿ. ಆದರೆ, ಅದಕ್ಕಾಗಿ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ ಎಂದು ಆಪಾದಿಸಿದರು.<br /> <br /> ಕಳೆದ ವರ್ಷ 21 ಬೋರ್ವೆಲ್ಗಳನ್ನು ತೋಡಿಸಲಾಗಿದೆ ಎನ್ನುತ್ತಿದ್ದೀರಿ. ಇವುಗಳಿಗೆ ನಗರಸಭೆಯಿಂದಲೂ ಅನುದಾನ ಪಡೆಯಲಾಗಿದೆ. ಹಾಗಾದರೆ ಒಂದೇ ಬೋರ್ವೆಲ್ಗೆ ಎರಡೆರಡು ಅನುದಾನ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಈ ಕುರಿತು ನಗರಸಭೆ ಅಧಿಕಾರಿಗೆ ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ನೀಡಲಿಲ್ಲ. ಆಗ ಶಾಸಕರು ತಮ್ಮ ಅವಧಿಯಲ್ಲಿ ತೋಡಿಸಲಾದ ಬೋರ್ವೆಲ್ಗಳ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು. <br /> <br /> ವಾರ್ಡ್ ಸಂಖ್ಯೆ 28 ರ ವ್ಯಾಪ್ತಿಯ ಭವಾನಿ ಮಂದಿರದ ಬಳಿ ಬೋರ್ವೆಲ್ ತೋಡಿಸಿದ್ದಾಗಿ ಶಾಸಕರು ಹೇಳಿದರು. ಅದಕ್ಕೂ ಆ ವಾರ್ಡ್ನ ಸದಸ್ಯ ಶಿವಕುಮಾರ ಭಾವಿಕಟ್ಟಿ ತಕರಾರು ಎತ್ತಿದರು. ಇಲ್ಲಿ ನಗರಸಭೆಯ ಅನುದಾನದಿಂದ ಬೋರ್ವೆಲ್ ಕೊರೆಸಲಾಗಿದೆ ಎಂದರು. <br /> <br /> ಸದಸ್ಯರ ಸಂಬಂಧಿಕರು ಸಭೆಗೆ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಸದಸ್ಯ ಫರ್ನಾಂಡಿಸ್ ಹಿಪ್ಪಳಗಾಂವ್ ಮತ್ತಿತರರು `ಜಿರಾಕ್ಸ್ ಹಟಾವೋ ಸಿ.ಎಂ.ಸಿ. ಬಚಾವೋ~ ಎಂಬ ಘೋಷಣೆಗಳನ್ನು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>