<p>ಆನೇಕಲ್: ತಾಲ್ಲೂಕಿನ ಸರ್ಜಾಪುರದ ತ್ಯಾವಕನಹಳ್ಳಿ ಬಳಿಯ ಅಶೋಕ ನಗರದ ದಮ್ಮಗಿರಿಯಲ್ಲಿ ಇತ್ತೀಚೆಗೆ ಬುದ್ಧನ ಪ್ರತಿಮೆ ವಿರೂಪಗೊಳಿಸಿದ ಘಟನೆ ಖಂಡಿಸಿ ಬೌದ್ಧ ಮಹಾಸಭಾ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಸರ್ಜಾಪುರದಿಂದ ದಮ್ಮಗಿರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.<br /> <br /> ಬೌದ್ಧ ಅನುಯಾಯಿಗಳು, ಉಪಾಸಕರು, ಉಪಾಸಕಿಯರು, ಪ್ರಗತಿಪರ ಸಂಘಟನೆಗಳ ಮುಖಂಡರು ಬುದ್ಧನ ಉಪದೇಶಗಳನ್ನು ಪಠಿಸುತ್ತ ದಮ್ಮಗಿರಿಯ ವಿಹಾರದವರೆಗೆ ಸುಮಾರು 5 ಕಿ.ಮೀ ದೂರ ಶಾಂತಿಯುತ ಜಾಥಾ ನಡೆಸಿದರು.<br /> <br /> ದಮ್ಮಗಿರಿಗೆ ಕಾಲ್ನಡಿಯಲ್ಲಿ ಬಂದ ಬುದ್ಧನ ಅನುಯಾಯಿಗಳನ್ನು ಉದ್ದೇಶಿಸಿ ಬೆಂಗಳೂರು ಮಹಾಬೋಧಿ ಸೊಸೈಟಿಯ ಆನಂದ ಬಂತೇಜಿ ಮಾತನಾಡಿ, `ಶಾಂತಿಯಿಂದ ಮಾತ್ರ ಪ್ರಪಂಚವನ್ನು ಗೆಲ್ಲಬಹುದು. <br /> <br /> ಅಹಿಂಸೆಯೇ ಜೀವನ ತತ್ವವಾಗಬೇಕು. ಬುದ್ಧನ ಪ್ರತಿಮೆಯನ್ನು ವಿರೂಪಗೊಳಿಸಿದವರಿಗೆ ಸದ್ಬುದ್ಧಿ ದೊರೆಯಲಿ. ಅವರಲ್ಲಿರುವ ಹಿಂಸಾ ಗುಣಗಳು ನಾಶವಾಗಿ ಶಾಂತಿ, ಸಹನೆ, ಕರುಣೆ ಮೂಡಲಿ~ ಎಂದು ನುಡಿದರು.<br /> <br /> ಮಹಾಬೋಧಿ ಸೊಸೈಟಿಯ ದಮ್ಮ ರಕ್ಕಿತ, ಬುದ್ದ ಪ್ರಕಾಶ್, ಡಿಎಸ್ಎಸ್ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಬೌದ್ಧ ಉಪಾಸಕ ಎಸ್.ನರಸಿಂಹಯ್ಯ, ಮುಖಂಡರಾದ ರಾವಣ, ಸಿ.ಕೆ.ರಾಮು, ಕೆ.ಕುಮಾರ್, ಎಂ.ಗೋವಿಂದರಾಜು, ಗೌತಮ್ ವೆಂಕಿ, ಸುರೇಶ್ ಪೋತ, ಕಲ್ಲಹಳ್ಳಿ ಶ್ರೀನಿವಾಸ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ತಾಲ್ಲೂಕಿನ ಸರ್ಜಾಪುರದ ತ್ಯಾವಕನಹಳ್ಳಿ ಬಳಿಯ ಅಶೋಕ ನಗರದ ದಮ್ಮಗಿರಿಯಲ್ಲಿ ಇತ್ತೀಚೆಗೆ ಬುದ್ಧನ ಪ್ರತಿಮೆ ವಿರೂಪಗೊಳಿಸಿದ ಘಟನೆ ಖಂಡಿಸಿ ಬೌದ್ಧ ಮಹಾಸಭಾ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಸರ್ಜಾಪುರದಿಂದ ದಮ್ಮಗಿರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.<br /> <br /> ಬೌದ್ಧ ಅನುಯಾಯಿಗಳು, ಉಪಾಸಕರು, ಉಪಾಸಕಿಯರು, ಪ್ರಗತಿಪರ ಸಂಘಟನೆಗಳ ಮುಖಂಡರು ಬುದ್ಧನ ಉಪದೇಶಗಳನ್ನು ಪಠಿಸುತ್ತ ದಮ್ಮಗಿರಿಯ ವಿಹಾರದವರೆಗೆ ಸುಮಾರು 5 ಕಿ.ಮೀ ದೂರ ಶಾಂತಿಯುತ ಜಾಥಾ ನಡೆಸಿದರು.<br /> <br /> ದಮ್ಮಗಿರಿಗೆ ಕಾಲ್ನಡಿಯಲ್ಲಿ ಬಂದ ಬುದ್ಧನ ಅನುಯಾಯಿಗಳನ್ನು ಉದ್ದೇಶಿಸಿ ಬೆಂಗಳೂರು ಮಹಾಬೋಧಿ ಸೊಸೈಟಿಯ ಆನಂದ ಬಂತೇಜಿ ಮಾತನಾಡಿ, `ಶಾಂತಿಯಿಂದ ಮಾತ್ರ ಪ್ರಪಂಚವನ್ನು ಗೆಲ್ಲಬಹುದು. <br /> <br /> ಅಹಿಂಸೆಯೇ ಜೀವನ ತತ್ವವಾಗಬೇಕು. ಬುದ್ಧನ ಪ್ರತಿಮೆಯನ್ನು ವಿರೂಪಗೊಳಿಸಿದವರಿಗೆ ಸದ್ಬುದ್ಧಿ ದೊರೆಯಲಿ. ಅವರಲ್ಲಿರುವ ಹಿಂಸಾ ಗುಣಗಳು ನಾಶವಾಗಿ ಶಾಂತಿ, ಸಹನೆ, ಕರುಣೆ ಮೂಡಲಿ~ ಎಂದು ನುಡಿದರು.<br /> <br /> ಮಹಾಬೋಧಿ ಸೊಸೈಟಿಯ ದಮ್ಮ ರಕ್ಕಿತ, ಬುದ್ದ ಪ್ರಕಾಶ್, ಡಿಎಸ್ಎಸ್ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಬೌದ್ಧ ಉಪಾಸಕ ಎಸ್.ನರಸಿಂಹಯ್ಯ, ಮುಖಂಡರಾದ ರಾವಣ, ಸಿ.ಕೆ.ರಾಮು, ಕೆ.ಕುಮಾರ್, ಎಂ.ಗೋವಿಂದರಾಜು, ಗೌತಮ್ ವೆಂಕಿ, ಸುರೇಶ್ ಪೋತ, ಕಲ್ಲಹಳ್ಳಿ ಶ್ರೀನಿವಾಸ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>