<p>ಯಮಕನಮರಡಿ: `ಆಧುನಿಕ ಯುಗದಲ್ಲಿ ಗ್ರಾಮೀಣ ವಲಯದ ಪ್ರತಿಯೊಬ್ಬರಿಗೂ ಬ್ಯಾಂಕಿನ ವ್ಯವಹಾರ ಜ್ಞಾನದ ಜೊತೆಗೆ ಖಾತೆ ತೆರೆಯುವುದು ಅವಶ್ಯವಾಗಿದೆ~ ಎಂದು ಯಮಕನಮರಡಿ ಸಿಂಡಿಕೇಟ್ ಬ್ಯಾಂಕಿನ ಶಾಖಾ ಪ್ರಬಂಧಕರಾದ ವೈ.ಪಿ. ಗಡಿನಾಯಿಕ ಹೇಳಿದರು. <br /> <br /> ಗ್ರಾಮದ ಸಿಂಡಿಕೇಟ್ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಹಕರ ಮೇಳದಲ್ಲಿ ಅವರು ಮಾತನಾಡಿದರ. ಒಬ್ಬ ಒಂದು ಖಾತೆಯನ್ನು ತೆರೆದರೆ ಸುಮಾರು 7 ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರಲ್ಲದೇ, ಅವುಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸಿ ಹೇಳಿದರು.<br /> <br /> ರೈತರು, ವಿದ್ಯಾರ್ಥಿಗಳು, ನೇಕಾರರು, ವ್ಯಾಪಸ್ಥರಿಗೆ ಹಲವಾರು ಸಾಲ ಸೌಲಭ್ಯ ಜೊತೆಗೆ ಸಿಂದ್ ಸುರಕ್ಷಾ ವಿಮಾ ಯೋಜನೆಯನ್ನು ಕೊಡಲು ಸಿಂಡಿಕೇಟ್ ಬ್ಯಾಂಕ್ ಮುಂದಾಗಿದೆ. ಅದರ ಸದುಪಯೋಗ ಪಡೆದು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು. <br /> <br /> ಅತಿಥಿಗಳಾಗಿ ಆಗಮಿಸಿದ್ದ ಯಮಕನಮರಡಿ ಗ್ರಾಮ ಅಭಿವೃದ್ಧಿ ಅಧಿಕಾರಿ ಅನೀತಾ ಕ್ಯಾಥರಿನ್ ಮಾತನಾಡಿ ಈ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ ಜನರು ಸಹಾಯ ಸಹಕಾರ ನೀಡಿ ತಮ್ಮ ವ್ಯವಹಾರವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.<br /> <br /> ವೈವಿಎಸ್ ಸಂಘದ ಕಾರ್ಯದರ್ಶಿ ಜೆ.ಎನ್. ಅವಾಡೆ ಅಧ್ಯಕ್ಷತೆ ವಹಿಸಿದ್ದರು. ವಿ.ಎನ್. ರಘುನಾಥ, ಮಹೇಶ ತುಬಚಿ, ಬಸವಣ್ಣಿ ಕೇದನೂರಿ, ಮಹಾವೀರ ಕುರಣಿ, ಎನ್.ಎಂ. ಹೊನ್ನಾಳಿ, ಯು.ಎಂ. ಅಂಬಿ ಮುಂತಾದವರು ಉಪಸ್ಥಿತರಿದ್ದರು. ಎಂ.ಬಿ. ಜಿರಳಿ ಸ್ವಾಗತಿಸಿದರು. ಪ್ರಭಾಕರ ಪ್ರಭು ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಮಕನಮರಡಿ: `ಆಧುನಿಕ ಯುಗದಲ್ಲಿ ಗ್ರಾಮೀಣ ವಲಯದ ಪ್ರತಿಯೊಬ್ಬರಿಗೂ ಬ್ಯಾಂಕಿನ ವ್ಯವಹಾರ ಜ್ಞಾನದ ಜೊತೆಗೆ ಖಾತೆ ತೆರೆಯುವುದು ಅವಶ್ಯವಾಗಿದೆ~ ಎಂದು ಯಮಕನಮರಡಿ ಸಿಂಡಿಕೇಟ್ ಬ್ಯಾಂಕಿನ ಶಾಖಾ ಪ್ರಬಂಧಕರಾದ ವೈ.ಪಿ. ಗಡಿನಾಯಿಕ ಹೇಳಿದರು. <br /> <br /> ಗ್ರಾಮದ ಸಿಂಡಿಕೇಟ್ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಹಕರ ಮೇಳದಲ್ಲಿ ಅವರು ಮಾತನಾಡಿದರ. ಒಬ್ಬ ಒಂದು ಖಾತೆಯನ್ನು ತೆರೆದರೆ ಸುಮಾರು 7 ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರಲ್ಲದೇ, ಅವುಗಳನ್ನು ಹೇಗೆ ಬಳಕೆ ಮಾಡಬಹುದು ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸಿ ಹೇಳಿದರು.<br /> <br /> ರೈತರು, ವಿದ್ಯಾರ್ಥಿಗಳು, ನೇಕಾರರು, ವ್ಯಾಪಸ್ಥರಿಗೆ ಹಲವಾರು ಸಾಲ ಸೌಲಭ್ಯ ಜೊತೆಗೆ ಸಿಂದ್ ಸುರಕ್ಷಾ ವಿಮಾ ಯೋಜನೆಯನ್ನು ಕೊಡಲು ಸಿಂಡಿಕೇಟ್ ಬ್ಯಾಂಕ್ ಮುಂದಾಗಿದೆ. ಅದರ ಸದುಪಯೋಗ ಪಡೆದು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು. <br /> <br /> ಅತಿಥಿಗಳಾಗಿ ಆಗಮಿಸಿದ್ದ ಯಮಕನಮರಡಿ ಗ್ರಾಮ ಅಭಿವೃದ್ಧಿ ಅಧಿಕಾರಿ ಅನೀತಾ ಕ್ಯಾಥರಿನ್ ಮಾತನಾಡಿ ಈ ಬ್ಯಾಂಕಿನಿಂದ ಗ್ರಾಮೀಣ ಪ್ರದೇಶದ ಜನರು ಸಹಾಯ ಸಹಕಾರ ನೀಡಿ ತಮ್ಮ ವ್ಯವಹಾರವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.<br /> <br /> ವೈವಿಎಸ್ ಸಂಘದ ಕಾರ್ಯದರ್ಶಿ ಜೆ.ಎನ್. ಅವಾಡೆ ಅಧ್ಯಕ್ಷತೆ ವಹಿಸಿದ್ದರು. ವಿ.ಎನ್. ರಘುನಾಥ, ಮಹೇಶ ತುಬಚಿ, ಬಸವಣ್ಣಿ ಕೇದನೂರಿ, ಮಹಾವೀರ ಕುರಣಿ, ಎನ್.ಎಂ. ಹೊನ್ನಾಳಿ, ಯು.ಎಂ. ಅಂಬಿ ಮುಂತಾದವರು ಉಪಸ್ಥಿತರಿದ್ದರು. ಎಂ.ಬಿ. ಜಿರಳಿ ಸ್ವಾಗತಿಸಿದರು. ಪ್ರಭಾಕರ ಪ್ರಭು ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>