<p>ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ ಪಿ.ಸಿ. ತುಳಸಿ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಅವರ ಸವಾಲೂ ಅಂತ್ಯಗೊಂಡಿದೆ.<br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಸೋಮವಾರ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾದವು. ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿಎಸ್ಪಿಬಿಯ ಪಿ.ವಿ. ಸಿಂಧು 19-21, 21-11, 21-12 ರಲ್ಲಿ ತುಳಸಿಗೆ ಆಘಾತ ನೀಡಿದರು. ಅದಿತಿ ಮುಟತ್ಕರ್, ಸಯಾಲಿ ಗೋಖಲೆ ಮತ್ತು ನೇಹಾ ಪಂಡಿತ್ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆದರು. <br /> <br /> ಪಿಎಸ್ಪಿಬಿಯ ಅದಿತಿ 21-7, 21-7 ರಲ್ಲಿ ಸಹದೇವ್ ಮೋಹಿತಾ ಮೇಲೂ, ಏರ್ ಇಂಡಿಯಾದ ಸಯಾಲಿ 21-14, 21-9 ರಲ್ಲಿ ಕೇರಳದ ದಯಾ ಎಲ್ಸಾ ಎದುರೂ, ನೇಹಾ 21-15, 21-13 ರಲ್ಲಿ ಪಿಎಸ್ಪಿಬಿಯ ತೃಪ್ತಿ ಮುರ್ಗುಂಡೆ ವಿರುದ್ಧವೂ ಜಯ ಸಾಧಿಸಿದರು.<br /> <br /> ಶ್ರೇಯಾಂಕ ರಹಿತ ಆಟಗಾರ ಆನಂದ್ ಪವಾರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಬ್ಬರು ಪ್ರಮುಖರಿಗೆ ಸೋಲುಣಿಸಿದರು. ಬೆಳಿಗ್ಗೆ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21-9, 21-19 ರಲ್ಲಿ ಪಿಎಸ್ಪಿಬಿಯ ಅರವಿಂದ್ ಭಟ್ ವಿರುದ್ಧ ಗೆದ್ದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಸಾಕಷ್ಟು ತಪ್ಪುಗಳನ್ನೆಸಗುವ ಮೂಲಕ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.<br /> <br /> ಸಂಜೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪವಾರ್ 13-21, 21-12, 21-16 ರಲ್ಲಿ ಆರನೇ ಶ್ರೇಯಾಂಕದ ಆರ್ಎಂವಿ ಗುರುಸಾಯಿದತ್ ಅವರನ್ನು ಮಣಿಸಿದರು. ಅಗ್ರಶ್ರೇಯಾಂಕದ ಸೌರಭ್ ವರ್ಮಾ 21-19, 21-15 ರಲ್ಲಿ ಅಕ್ಷಿತ್ ಮಹಾಜನ್ ಅವರನ್ನು ಮಣಿಸಿದರು. <br /> <br /> ಕರ್ನಾಟಕದ ಆದಿತ್ಯ ಪ್ರಕಾಶ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ 22-20, 12-21, 20-22 ರಲ್ಲಿ ನಂದಗೋಪಾಲ್ ಎದುರು ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ್ತಿ ಪಿ.ಸಿ. ತುಳಸಿ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಅವರ ಸವಾಲೂ ಅಂತ್ಯಗೊಂಡಿದೆ.<br /> <br /> ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಸೋಮವಾರ ಹಲವು ಅಚ್ಚರಿಯ ಫಲಿತಾಂಶಗಳು ದಾಖಲಾದವು. ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿಎಸ್ಪಿಬಿಯ ಪಿ.ವಿ. ಸಿಂಧು 19-21, 21-11, 21-12 ರಲ್ಲಿ ತುಳಸಿಗೆ ಆಘಾತ ನೀಡಿದರು. ಅದಿತಿ ಮುಟತ್ಕರ್, ಸಯಾಲಿ ಗೋಖಲೆ ಮತ್ತು ನೇಹಾ ಪಂಡಿತ್ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆದರು. <br /> <br /> ಪಿಎಸ್ಪಿಬಿಯ ಅದಿತಿ 21-7, 21-7 ರಲ್ಲಿ ಸಹದೇವ್ ಮೋಹಿತಾ ಮೇಲೂ, ಏರ್ ಇಂಡಿಯಾದ ಸಯಾಲಿ 21-14, 21-9 ರಲ್ಲಿ ಕೇರಳದ ದಯಾ ಎಲ್ಸಾ ಎದುರೂ, ನೇಹಾ 21-15, 21-13 ರಲ್ಲಿ ಪಿಎಸ್ಪಿಬಿಯ ತೃಪ್ತಿ ಮುರ್ಗುಂಡೆ ವಿರುದ್ಧವೂ ಜಯ ಸಾಧಿಸಿದರು.<br /> <br /> ಶ್ರೇಯಾಂಕ ರಹಿತ ಆಟಗಾರ ಆನಂದ್ ಪವಾರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಬ್ಬರು ಪ್ರಮುಖರಿಗೆ ಸೋಲುಣಿಸಿದರು. ಬೆಳಿಗ್ಗೆ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21-9, 21-19 ರಲ್ಲಿ ಪಿಎಸ್ಪಿಬಿಯ ಅರವಿಂದ್ ಭಟ್ ವಿರುದ್ಧ ಗೆದ್ದರು. ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಸಾಕಷ್ಟು ತಪ್ಪುಗಳನ್ನೆಸಗುವ ಮೂಲಕ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.<br /> <br /> ಸಂಜೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪವಾರ್ 13-21, 21-12, 21-16 ರಲ್ಲಿ ಆರನೇ ಶ್ರೇಯಾಂಕದ ಆರ್ಎಂವಿ ಗುರುಸಾಯಿದತ್ ಅವರನ್ನು ಮಣಿಸಿದರು. ಅಗ್ರಶ್ರೇಯಾಂಕದ ಸೌರಭ್ ವರ್ಮಾ 21-19, 21-15 ರಲ್ಲಿ ಅಕ್ಷಿತ್ ಮಹಾಜನ್ ಅವರನ್ನು ಮಣಿಸಿದರು. <br /> <br /> ಕರ್ನಾಟಕದ ಆದಿತ್ಯ ಪ್ರಕಾಶ್ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ 22-20, 12-21, 20-22 ರಲ್ಲಿ ನಂದಗೋಪಾಲ್ ಎದುರು ಸೋಲು ಕಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>