<p><strong>ಬಸವಕಲ್ಯಾಣ: </strong>ಭಕ್ತಿಯ ಸುನಾಮಿ ಅಲೆ ಎಲ್ಲೆಡೆ ಏಳಬೇಕು. ಸಮಾಜದ ಪ್ರತಿಯೊಬ್ಬರೂ ನೈತಿಕ, ಅಧ್ಯಾತ್ಮಿಕ ಮೌಲ್ಯಗಳನ್ನು ಪಾಲಿಸುವಂತಾಗಬೇಕು ಎಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಶ್ರೀರವಿಶಂಕರ ಗುರೂಜಿ ನುಡಿದರು.<br /> <br /> ಇಲ್ಲಿನ ರಥ ಮೈದಾನದಲ್ಲಿ ಸೋಮವಾರ `ಮಹಾಸತ್ಸಂಗ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ- ಮಹಾತ್ಮರು, ಶರಣರು ನಮಗೆ ಸಾಕಷ್ಟು ಜ್ಞಾನ ಕೊಟ್ಟಿದ್ದಾರೆ. ಹೊಸದೇನನ್ನೂ ಕೊಡಬೇಕಾಗಿಲ್ಲ. ಅವರು ಹೇಳಿರುವುದು ಮರೆತು ಹೋಗಿದ್ದು, ಜ್ಞಾಪಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.<br /> <br /> 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರು, ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರ, ತುಕಾರಾಮರು ಭಕ್ತಿಯ ಅಲೆ ಎಬ್ಬಿಸಿದ್ದರು. ಅಂದು ಭಾರತ ಪುಣ್ಯಭೂಮಿ ಎನಿಸಿತ್ತು. ಆ ದಿನಗಳು ಪುನರಾವರ್ತನೆ ಆಗಬೇಕಾಗಿದೆ. ಎಂದರು.<br /> <br /> ಬೇಡಿಕೆಗಳ ಭಾರ ಹೆಚ್ಚಾಗಬಾರದು. ಎಂಥ ಕಷ್ಟ ಬಂದರೂ ಸಹಿಸುವ ಶಕ್ತಿ, ಸಹನೆ ಎಲ್ಲರಲ್ಲಿ ಬೆಳೆಯಬೇಕು. ಎಲ್ಲರ ಮನಸ್ಸು ಸ್ವಚ್ಛವಾಗಬೇಕು. ಆಗ ಮಾತ್ರ ಆಶೀರ್ವಾದ ಕೊಡುವ ತಾಕತ್ತು ಬರುತ್ತದೆ ಎಂದರು.<br /> <br /> ಮುಚಳಂಬ ಪ್ರಣವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಹುಲಸೂರ ಶಿವಾನಂದ ಸ್ವಾಮೀಜಿ, ಹಾರಕೂಡ ಚೆನ್ನವೀರ ಶಿವಾಚಾರ್ಯರು, ತಾಂಬೋಳಾ ವಿಜಯಕುಮಾರ ದೇವರು, ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು, ಸ್ವಾಗತ ಸಮಿತಿ ಅಧ್ಯಕ್ಷ ಸುನಿಲ ಪಾಟೀಲ, ಪ್ರಮುಖರಾದ ಸಂಜೀವ ಕಾಳೇಕರ್, ಡಾ.ವಿ.ಬಿ.ಮಂಡಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ಭಕ್ತಿಯ ಸುನಾಮಿ ಅಲೆ ಎಲ್ಲೆಡೆ ಏಳಬೇಕು. ಸಮಾಜದ ಪ್ರತಿಯೊಬ್ಬರೂ ನೈತಿಕ, ಅಧ್ಯಾತ್ಮಿಕ ಮೌಲ್ಯಗಳನ್ನು ಪಾಲಿಸುವಂತಾಗಬೇಕು ಎಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಶ್ರೀರವಿಶಂಕರ ಗುರೂಜಿ ನುಡಿದರು.<br /> <br /> ಇಲ್ಲಿನ ರಥ ಮೈದಾನದಲ್ಲಿ ಸೋಮವಾರ `ಮಹಾಸತ್ಸಂಗ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ- ಮಹಾತ್ಮರು, ಶರಣರು ನಮಗೆ ಸಾಕಷ್ಟು ಜ್ಞಾನ ಕೊಟ್ಟಿದ್ದಾರೆ. ಹೊಸದೇನನ್ನೂ ಕೊಡಬೇಕಾಗಿಲ್ಲ. ಅವರು ಹೇಳಿರುವುದು ಮರೆತು ಹೋಗಿದ್ದು, ಜ್ಞಾಪಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.<br /> <br /> 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರು, ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರ, ತುಕಾರಾಮರು ಭಕ್ತಿಯ ಅಲೆ ಎಬ್ಬಿಸಿದ್ದರು. ಅಂದು ಭಾರತ ಪುಣ್ಯಭೂಮಿ ಎನಿಸಿತ್ತು. ಆ ದಿನಗಳು ಪುನರಾವರ್ತನೆ ಆಗಬೇಕಾಗಿದೆ. ಎಂದರು.<br /> <br /> ಬೇಡಿಕೆಗಳ ಭಾರ ಹೆಚ್ಚಾಗಬಾರದು. ಎಂಥ ಕಷ್ಟ ಬಂದರೂ ಸಹಿಸುವ ಶಕ್ತಿ, ಸಹನೆ ಎಲ್ಲರಲ್ಲಿ ಬೆಳೆಯಬೇಕು. ಎಲ್ಲರ ಮನಸ್ಸು ಸ್ವಚ್ಛವಾಗಬೇಕು. ಆಗ ಮಾತ್ರ ಆಶೀರ್ವಾದ ಕೊಡುವ ತಾಕತ್ತು ಬರುತ್ತದೆ ಎಂದರು.<br /> <br /> ಮುಚಳಂಬ ಪ್ರಣವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಹುಲಸೂರ ಶಿವಾನಂದ ಸ್ವಾಮೀಜಿ, ಹಾರಕೂಡ ಚೆನ್ನವೀರ ಶಿವಾಚಾರ್ಯರು, ತಾಂಬೋಳಾ ವಿಜಯಕುಮಾರ ದೇವರು, ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು, ಸ್ವಾಗತ ಸಮಿತಿ ಅಧ್ಯಕ್ಷ ಸುನಿಲ ಪಾಟೀಲ, ಪ್ರಮುಖರಾದ ಸಂಜೀವ ಕಾಳೇಕರ್, ಡಾ.ವಿ.ಬಿ.ಮಂಡಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>