<p><strong>ಆರಾಧನಾ ಸ್ಕೂಲ್ ಆಫ್ ಡಾನ್ಸ್:</strong> ಶುಕ್ರವಾರ ಸೌಮ್ಯ ಆರ್. ಪುರೋಹಿತ್ ಅವರ ಭರತನಾಟ್ಯ ರಂಗಪ್ರವೇಶ, ಅತಿಥಿಗಳು: ಎಚ್. ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಡಾ. ಮಹೇಶ ಜೋಶಿ, ಎಸ್. ಐ. ಭಾವಿಕಟ್ಟಿ, ಡಾ. ಎಂ. ಸೂರ್ಯ ಪ್ರಸಾದ್.<br /> ಸೌಮ್ಯ 5ರ ಎಳವೆಯಲ್ಲೇ ಭರತನಾಟ್ಯ ಕಲಿಯಲಾರಂಭಿಸಿದವರು. <br /> <br /> 13 ವರ್ಷದಿಂದ ಸಂಜಯ್ ನಗರದ ಆರಾಧನಾ ನೃತ್ಯ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತ್ದ್ದಿದು, ಮಹಾಬಲಿಪುರಂ ಉತ್ಸವ, ತಂಜಾವೂರಿನ ಭಾರತೀಯ ನೃತ್ಯ ಉತ್ಸವ, ಹಂಪಿ ಉತ್ಸವ, ಪಣಜಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಮುಂಬೈನಲ್ಲಿ ನಡೆದ ಅಖಿಲ ಭಾರತ ಗಮಕ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ<br /> <br /> ಭರತನಾಟ್ಯದ ಜೊತೆ 6ನೇ ವರ್ಷದಲ್ಲೇ ಸಂಗೀತಾಭ್ಯಾಸವನ್ನು ಆರಂಭಿಸ್ದ್ದಿದವರು. ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ, ಮೀರಜ್ನ ಗಂಧರ್ವ ಮಹಾವಿದ್ಯಾಲಯದ ಸಂಗೀತ ಪರೀಕ್ಷೆಯಲ್ಲೂ ಉತ್ತಮ ಗ್ರೇಡ್ ಪಡೆದು ತೇರ್ಗಡೆಯಾಗಿದ್ದಾರೆ. <br /> <br /> ಪ್ರತಿಭಾ ಹೆಗ್ಡೆ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಪಂಡಿತ್ ವಿಶ್ವನಾಥ ನಾಕೋಡ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. <br /> <br /> ಶಾಸ್ತ್ರೀಯ ನೃತ್ಯದಲ್ಲಿ ಪರಿಪೂರ್ಣತೆ ಮತ್ತು ಪರಿಶುದ್ಧತೆ ಇರಬೇಕೆಂದು ಬಯಸುವ ಸೌಮ್ಯ ಜ್ಞಾನದಾಹಿ. ಆಕೆಯ ಅಭಿನಯ ನೋಡುಗರ ಮೇಲೆ ಮಾಂತ್ರಿಕ ಜಾಲ ಬೀಸುತ್ತದೆ. <br /> <br /> ನೃತ್ಯ, ಸಂಗೀತದ ಜೊತೆ ಪಠ್ಯದಲ್ಲೂ ಮುಂದಿದ್ದು ಪಿಯುಸಿ ಪೂರ್ಣಗೊಳಿಸಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ.ಸೌಮ್ಯಳ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಇದ್ದಾರೆ. <br /> <br /> ಚೆನ್ನೈ ಕಲಾಕ್ಷೇತ್ರ ಮಾದರಿಯ ನೃತ್ಯಕ್ಕೆ ಹೆಸರಾದ ಉಷಾ ದಾತಾರ್ ಮತ್ತು ವಿದುಷಿ ಗೀತಾ ಅನಂತ್ನಾರಾಯಣನ್ ಅವರ ಶಿಷ್ಯರು. ಅವರ ಆರಾಧನಾ ನೃತ್ಯ ಶಾಲೆ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿದೆ. <br /> <br /> <strong>ಸ್ಥಳ: </strong>ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆರಾಧನಾ ಸ್ಕೂಲ್ ಆಫ್ ಡಾನ್ಸ್:</strong> ಶುಕ್ರವಾರ ಸೌಮ್ಯ ಆರ್. ಪುರೋಹಿತ್ ಅವರ ಭರತನಾಟ್ಯ ರಂಗಪ್ರವೇಶ, ಅತಿಥಿಗಳು: ಎಚ್. ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಡಾ. ಮಹೇಶ ಜೋಶಿ, ಎಸ್. ಐ. ಭಾವಿಕಟ್ಟಿ, ಡಾ. ಎಂ. ಸೂರ್ಯ ಪ್ರಸಾದ್.<br /> ಸೌಮ್ಯ 5ರ ಎಳವೆಯಲ್ಲೇ ಭರತನಾಟ್ಯ ಕಲಿಯಲಾರಂಭಿಸಿದವರು. <br /> <br /> 13 ವರ್ಷದಿಂದ ಸಂಜಯ್ ನಗರದ ಆರಾಧನಾ ನೃತ್ಯ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತ್ದ್ದಿದು, ಮಹಾಬಲಿಪುರಂ ಉತ್ಸವ, ತಂಜಾವೂರಿನ ಭಾರತೀಯ ನೃತ್ಯ ಉತ್ಸವ, ಹಂಪಿ ಉತ್ಸವ, ಪಣಜಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಮುಂಬೈನಲ್ಲಿ ನಡೆದ ಅಖಿಲ ಭಾರತ ಗಮಕ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ<br /> <br /> ಭರತನಾಟ್ಯದ ಜೊತೆ 6ನೇ ವರ್ಷದಲ್ಲೇ ಸಂಗೀತಾಭ್ಯಾಸವನ್ನು ಆರಂಭಿಸ್ದ್ದಿದವರು. ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ, ಮೀರಜ್ನ ಗಂಧರ್ವ ಮಹಾವಿದ್ಯಾಲಯದ ಸಂಗೀತ ಪರೀಕ್ಷೆಯಲ್ಲೂ ಉತ್ತಮ ಗ್ರೇಡ್ ಪಡೆದು ತೇರ್ಗಡೆಯಾಗಿದ್ದಾರೆ. <br /> <br /> ಪ್ರತಿಭಾ ಹೆಗ್ಡೆ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಪಂಡಿತ್ ವಿಶ್ವನಾಥ ನಾಕೋಡ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. <br /> <br /> ಶಾಸ್ತ್ರೀಯ ನೃತ್ಯದಲ್ಲಿ ಪರಿಪೂರ್ಣತೆ ಮತ್ತು ಪರಿಶುದ್ಧತೆ ಇರಬೇಕೆಂದು ಬಯಸುವ ಸೌಮ್ಯ ಜ್ಞಾನದಾಹಿ. ಆಕೆಯ ಅಭಿನಯ ನೋಡುಗರ ಮೇಲೆ ಮಾಂತ್ರಿಕ ಜಾಲ ಬೀಸುತ್ತದೆ. <br /> <br /> ನೃತ್ಯ, ಸಂಗೀತದ ಜೊತೆ ಪಠ್ಯದಲ್ಲೂ ಮುಂದಿದ್ದು ಪಿಯುಸಿ ಪೂರ್ಣಗೊಳಿಸಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ.ಸೌಮ್ಯಳ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಇದ್ದಾರೆ. <br /> <br /> ಚೆನ್ನೈ ಕಲಾಕ್ಷೇತ್ರ ಮಾದರಿಯ ನೃತ್ಯಕ್ಕೆ ಹೆಸರಾದ ಉಷಾ ದಾತಾರ್ ಮತ್ತು ವಿದುಷಿ ಗೀತಾ ಅನಂತ್ನಾರಾಯಣನ್ ಅವರ ಶಿಷ್ಯರು. ಅವರ ಆರಾಧನಾ ನೃತ್ಯ ಶಾಲೆ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿದೆ. <br /> <br /> <strong>ಸ್ಥಳ: </strong>ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>