<p><strong>ಆಹಾರ ವಸ್ತುಗಳ ಬೆಲೆ ಏರದು</strong><br /> ನವದೆಹಲಿ, ಜೂನ್ 1 - ಸರ್ಕಾರದ ಬಳಿ ಅಕ್ಕಿ, ಗೋಧಿ ಮತ್ತು ಸಕ್ಕರೆ ಸಾಕಷ್ಟು ದಾಸ್ತಾನಿದೆಯೆಂದೂ ಆದಕಾರಣ ಆ ವಸ್ತುಗಳ ಬೆಲೆ ಏರುವುದೆಂಬ ಇಲ್ಲವೆ ಅವುಗಳ ಬಗ್ಗೆ ಪಡಿತರ ಪದ್ಧತಿಯನ್ನು ಜಾರಿಗೆ ತರಲಾಗುವುದೆಂಬ ಶಂಕೆ ಅನಗತ್ಯವೆಂದೂ ಯೋಜನಾ ಮಂಡಲಿ ಸದಸ್ಯ ಶ್ರೀ ಶ್ರೀಮನ್ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.<br /> <br /> ಅಕ್ಕಿಯ ಉತ್ಪಾದನೆಯಲ್ಲಿ ಕೇವಲ ಹತ್ತು ಲಕ್ಷ ಟನ್ಗಳಷ್ಟು ಮಾತ್ರ ಇಳುವರಿ ಉಂಟಾಗಿದೆಯೆಂದೂ, ದಕ್ಷಿಣ ಭಾರತದ ಜನರು ಸ್ವಲ್ಪ ಸಂಯಮದಿಂದ ಅಕ್ಕಿಯನ್ನು ಬಳಸಿದರೆ ಗಾಬರಿಗೆ ಕಾರಣವೇ ಇರುವುದಿಲ್ಲವೆಂದೂ ಅವರು ಹೇಳಿದರು.</p>.<p><strong>ಗಡಿಯಲ್ಲಿ ಮುನ್ನೆಚ್ಚರಿಕೆ</strong><br /> ಡಾರ್ಜಿಲಿಂಗ್, ಜೂನ್ 1 - ನಮ್ಮ ಗಡಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಚೀಣಿ ಸೇನಾ ಜಮಾವಣೆ ನಡೆದಿರುವುದು ಸರ್ಕಾರಕ್ಕೆ ತಿಳಿದಿದೆಯೆಂದು ರಕ್ಷಣಾ ಸಚಿವ ಶ್ರೀ ವೈ. ಬಿ. ಚವಾನರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿ `ಆದರೆ ನಾವು ಜಾಗರೂಕತೆಯಿಂದಿದ್ದೇವೆ' ಎಂದರು. `ಚೀಣೀಯರನ್ನು ನಾವು ನಂಬುವಂತಿಲ್ಲ; ಅಪಾಯವು ಸದಾ ಇದ್ದೇ ಇರುತ್ತದೆ' ಎಂದೂ ಅವರು ಹೇಳಿದರು.</p>.<p><strong>ಪೋಪರಿಗೆ ಮತ್ತೆ ಪ್ರಜ್ಞಾಹೀನತೆ</strong><br /> ವ್ಯಾಟಿಕನ್ ನಗರ, ಜೂನ್ 1 - ಇಂದು ಬೆಳಿಗ್ಗೆ ಸ್ವಲ್ಪ ವೇಳೆ ಪ್ರಜ್ಞೆಯಿಂದಿದ್ದ ಪೋಪ್ಜಾನ್ ಅವರಿಗೆ ಮಧ್ಯಾಹ್ನ 4-41ರಲ್ಲಿ ಪುನಃ ಪ್ರಜ್ಞೆ ತಪ್ಪಿತೆಂದು ವಕ್ತಾರರೊಬ್ಬರು ತಿಳಿಸಿದರು. ಈ ಸಂಜೆ ಅವರ ಅಂಗಾಂಗಗಳು ಉಡುಗುತ್ತಿದ್ದು ಬಲಹೀನರಾಗುತ್ತಿದ್ದರೆಂದೂ ವ್ಯಾಟಿಕನ್ ರೇಡಿಯೊ ಈ ರಾತ್ರಿ ತಿಳಿಸಿತು.<br /> ಬೆಳಿಗ್ಗೆ ಪ್ರಜ್ಞೆ ಬಂದು ಎಚ್ಚೆತ್ತಿದ್ದಾಗ ಪೋಪರು ಎದ್ದು ಕುಳಿತು ಸ್ವಲ್ಪ ಕಾಫಿ ಕುಡಿದು ಕೊಠಡಿಯಲ್ಲಿ ಸೇರಿದ್ದ ತಮ್ಮ ಸಹೋದರರೊಡನೆ ಸಂಭಾಷಿಸಿದರು.<br /> <br /> <strong>ಚಂಡಮಾರುತದಲ್ಲಿ ಸತ್ತವರ ಸಂಖ್ಯೆ ಹದಿನೈದು ಸಾವಿರ</strong><br /> ಢಾಕ, ಜೂನ್ 1 - ಚಂಡಮಾರುತಕ್ಕೆ ಗುರಿಯಾಗಿರುವ ಚಿತ್ತಗಾಂಗ್ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ ಏಳುಸಾವಿರಕ್ಕೇರಿದೆಯೆಂದು ಇಂದು ಇಲ್ಲಿ ದೊರೆತ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ.<br /> <br /> ಕಾಕ್ಸ್ಬಜಾರ್ ಸಬ್ಡಿವಿಷನ್ನಿನಲ್ಲಿ ಸತ್ತ ಮೂರುಸಾವಿರ ಜನರು ಇವರಲ್ಲಿ ಸೇರಿದ್ದಾರೆ. ಸಮುದ್ರ ದಂಡೆಗಳಿಂದ, ನದಿಗಳಿಂದ ಮತ್ತು ಭಗ್ನಾವಶೇಷಗಳಿಂದ ಇನ್ನೂ ಶವಗಳನ್ನು ಎತ್ತಿಹಾಕುತ್ತಿರುವ ಕಾರಣ ಸತ್ತವರ ಸಂಖ್ಯೆ ಇನ್ನೂ ಏರುವ ಸಂಭವವಿದೆ.<br /> <br /> ಚಿತ್ತಗಾಂಗ್, ನೌಖಾಲಿ ಮತ್ತಿತರ ತೀರಪ್ರದೇಶಗಳ ಜಿಲ್ಲೆಗಳಲ್ಲಿ ಚಂಡಮಾರುತದ ಕಾರಣ ಸತ್ತವರ ಸಂಖ್ಯೆ ಹದಿನೈದು ಸಾವಿರಕ್ಕೂ ಮೀರಬಹುದೆಂದು ಅನಧಿಕೃತ ಅಂದಾಜುಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಹಾರ ವಸ್ತುಗಳ ಬೆಲೆ ಏರದು</strong><br /> ನವದೆಹಲಿ, ಜೂನ್ 1 - ಸರ್ಕಾರದ ಬಳಿ ಅಕ್ಕಿ, ಗೋಧಿ ಮತ್ತು ಸಕ್ಕರೆ ಸಾಕಷ್ಟು ದಾಸ್ತಾನಿದೆಯೆಂದೂ ಆದಕಾರಣ ಆ ವಸ್ತುಗಳ ಬೆಲೆ ಏರುವುದೆಂಬ ಇಲ್ಲವೆ ಅವುಗಳ ಬಗ್ಗೆ ಪಡಿತರ ಪದ್ಧತಿಯನ್ನು ಜಾರಿಗೆ ತರಲಾಗುವುದೆಂಬ ಶಂಕೆ ಅನಗತ್ಯವೆಂದೂ ಯೋಜನಾ ಮಂಡಲಿ ಸದಸ್ಯ ಶ್ರೀ ಶ್ರೀಮನ್ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.<br /> <br /> ಅಕ್ಕಿಯ ಉತ್ಪಾದನೆಯಲ್ಲಿ ಕೇವಲ ಹತ್ತು ಲಕ್ಷ ಟನ್ಗಳಷ್ಟು ಮಾತ್ರ ಇಳುವರಿ ಉಂಟಾಗಿದೆಯೆಂದೂ, ದಕ್ಷಿಣ ಭಾರತದ ಜನರು ಸ್ವಲ್ಪ ಸಂಯಮದಿಂದ ಅಕ್ಕಿಯನ್ನು ಬಳಸಿದರೆ ಗಾಬರಿಗೆ ಕಾರಣವೇ ಇರುವುದಿಲ್ಲವೆಂದೂ ಅವರು ಹೇಳಿದರು.</p>.<p><strong>ಗಡಿಯಲ್ಲಿ ಮುನ್ನೆಚ್ಚರಿಕೆ</strong><br /> ಡಾರ್ಜಿಲಿಂಗ್, ಜೂನ್ 1 - ನಮ್ಮ ಗಡಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಚೀಣಿ ಸೇನಾ ಜಮಾವಣೆ ನಡೆದಿರುವುದು ಸರ್ಕಾರಕ್ಕೆ ತಿಳಿದಿದೆಯೆಂದು ರಕ್ಷಣಾ ಸಚಿವ ಶ್ರೀ ವೈ. ಬಿ. ಚವಾನರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿ `ಆದರೆ ನಾವು ಜಾಗರೂಕತೆಯಿಂದಿದ್ದೇವೆ' ಎಂದರು. `ಚೀಣೀಯರನ್ನು ನಾವು ನಂಬುವಂತಿಲ್ಲ; ಅಪಾಯವು ಸದಾ ಇದ್ದೇ ಇರುತ್ತದೆ' ಎಂದೂ ಅವರು ಹೇಳಿದರು.</p>.<p><strong>ಪೋಪರಿಗೆ ಮತ್ತೆ ಪ್ರಜ್ಞಾಹೀನತೆ</strong><br /> ವ್ಯಾಟಿಕನ್ ನಗರ, ಜೂನ್ 1 - ಇಂದು ಬೆಳಿಗ್ಗೆ ಸ್ವಲ್ಪ ವೇಳೆ ಪ್ರಜ್ಞೆಯಿಂದಿದ್ದ ಪೋಪ್ಜಾನ್ ಅವರಿಗೆ ಮಧ್ಯಾಹ್ನ 4-41ರಲ್ಲಿ ಪುನಃ ಪ್ರಜ್ಞೆ ತಪ್ಪಿತೆಂದು ವಕ್ತಾರರೊಬ್ಬರು ತಿಳಿಸಿದರು. ಈ ಸಂಜೆ ಅವರ ಅಂಗಾಂಗಗಳು ಉಡುಗುತ್ತಿದ್ದು ಬಲಹೀನರಾಗುತ್ತಿದ್ದರೆಂದೂ ವ್ಯಾಟಿಕನ್ ರೇಡಿಯೊ ಈ ರಾತ್ರಿ ತಿಳಿಸಿತು.<br /> ಬೆಳಿಗ್ಗೆ ಪ್ರಜ್ಞೆ ಬಂದು ಎಚ್ಚೆತ್ತಿದ್ದಾಗ ಪೋಪರು ಎದ್ದು ಕುಳಿತು ಸ್ವಲ್ಪ ಕಾಫಿ ಕುಡಿದು ಕೊಠಡಿಯಲ್ಲಿ ಸೇರಿದ್ದ ತಮ್ಮ ಸಹೋದರರೊಡನೆ ಸಂಭಾಷಿಸಿದರು.<br /> <br /> <strong>ಚಂಡಮಾರುತದಲ್ಲಿ ಸತ್ತವರ ಸಂಖ್ಯೆ ಹದಿನೈದು ಸಾವಿರ</strong><br /> ಢಾಕ, ಜೂನ್ 1 - ಚಂಡಮಾರುತಕ್ಕೆ ಗುರಿಯಾಗಿರುವ ಚಿತ್ತಗಾಂಗ್ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ ಏಳುಸಾವಿರಕ್ಕೇರಿದೆಯೆಂದು ಇಂದು ಇಲ್ಲಿ ದೊರೆತ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ.<br /> <br /> ಕಾಕ್ಸ್ಬಜಾರ್ ಸಬ್ಡಿವಿಷನ್ನಿನಲ್ಲಿ ಸತ್ತ ಮೂರುಸಾವಿರ ಜನರು ಇವರಲ್ಲಿ ಸೇರಿದ್ದಾರೆ. ಸಮುದ್ರ ದಂಡೆಗಳಿಂದ, ನದಿಗಳಿಂದ ಮತ್ತು ಭಗ್ನಾವಶೇಷಗಳಿಂದ ಇನ್ನೂ ಶವಗಳನ್ನು ಎತ್ತಿಹಾಕುತ್ತಿರುವ ಕಾರಣ ಸತ್ತವರ ಸಂಖ್ಯೆ ಇನ್ನೂ ಏರುವ ಸಂಭವವಿದೆ.<br /> <br /> ಚಿತ್ತಗಾಂಗ್, ನೌಖಾಲಿ ಮತ್ತಿತರ ತೀರಪ್ರದೇಶಗಳ ಜಿಲ್ಲೆಗಳಲ್ಲಿ ಚಂಡಮಾರುತದ ಕಾರಣ ಸತ್ತವರ ಸಂಖ್ಯೆ ಹದಿನೈದು ಸಾವಿರಕ್ಕೂ ಮೀರಬಹುದೆಂದು ಅನಧಿಕೃತ ಅಂದಾಜುಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>