<p>ಮಂಗಳೂರು: ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ್ದು, ರೂ 35 ಲಕ್ಷ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.<br /> <br /> ಮುಳುಗುತಿದ್ದ ದೋಣಿಯಲ್ಲಿದ್ದ ವಿಪಿನ್ ಸಮುದ್ರಕ್ಕೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿಯ ಅವಶೇಷಗಳು ಬೊಕ್ಕಪಟ್ಣ ಸಮುದ್ರ ಕಿನಾರೆಗೆ ಬಂದು ಬಿದ್ದಿದೆ. <br /> <br /> ಸಮುದ್ರದಲ್ಲಿ ಭಾರಿ ತೂಫಾನಿನ ಹಿನ್ನೆಲೆಯಲ್ಲಿ ಮೇ 27ರಂದೇ ಶೈಲೇಜ್ ಅವರಿಗೆ ಸೇರಿದ ‘ಅಯ್ಯಪ್ಪ’ ದೋಣಿ ಮೀನುಗಾರಿಕೆ ಕೊನೆಗೊಳಿಸಿತ್ತು. ಧಕ್ಕೆಯಲ್ಲಿ ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಬೆಂಗ್ರೆಯಲ್ಲಿ ಲಂಗರು ಹಾಕಿತ್ತು. <br /> <br /> ದೋಣಿಯನ್ನು ಗುರುವಾರ ದಡಕ್ಕೆತ್ತಲು ಮಾಲೀಕರು ನಿರ್ಧರಿಸಿದ್ದರಾದರೂ, ಮಂಗಳವಾರ ರಾತ್ರಿಯೇ ಗಾಳಿ ಮಳೆಗೆ ದೋಣಿಯ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸಮುದ್ರಪಾಲಾಯಿತು ಎಂದು ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಮಂಗಳೂರಿನಲ್ಲಿ ಮೂರು ಸಾವಿರಕ್ಕೂ ಅಧಿಕ ದೋಣಿಗಳಿದ್ದು, ಅವುಗಳನ್ನು ಮಳೆಗಾಲದಲ್ಲಿ ಲಂಗರು ಹಾಕಲು ಸ್ಥಳಾವಕಾಶ ಸಾಲದು. ಹಾಗಾಗಿ ಅನೇಕ ದೋಣಿಗಳನ್ನು ಧಕ್ಕೆಯಿಂದ ಹೊರಗಡೆಯೇ ನಿಲ್ಲಿಸಬೇಕಾಗುತ್ತದೆ. ಸೂಕ್ತ ರಕ್ಷಣೆ ಇಲ್ಲದ ಕಾರಣ, ಅವು ಗಾಳಿ ಮಳೆಗೆ ಹಾನಿಗೊಳಗಾಗುತ್ತವೆ. ಪ್ರತಿವರ್ಷ ಕನಿಷ್ಠ 2-3 ದೋಣಿಗಳು ಸಮುದ್ರಪಾಲಾಗುತ್ತಿವೆ. ಈ ಸಮಸ್ಯೆ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನಸೆಳೆದರೂ ಪ್ರಯೋಜನವಾಗಿಲ್ಲ ಎಂದು ಮೀನುಗಾರರೊಬ್ಬರು ಅಳಲು ತೋಡಿಕೊಂಡರು. <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ್ದು, ರೂ 35 ಲಕ್ಷ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.<br /> <br /> ಮುಳುಗುತಿದ್ದ ದೋಣಿಯಲ್ಲಿದ್ದ ವಿಪಿನ್ ಸಮುದ್ರಕ್ಕೆ ಹಾರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೋಣಿಯ ಅವಶೇಷಗಳು ಬೊಕ್ಕಪಟ್ಣ ಸಮುದ್ರ ಕಿನಾರೆಗೆ ಬಂದು ಬಿದ್ದಿದೆ. <br /> <br /> ಸಮುದ್ರದಲ್ಲಿ ಭಾರಿ ತೂಫಾನಿನ ಹಿನ್ನೆಲೆಯಲ್ಲಿ ಮೇ 27ರಂದೇ ಶೈಲೇಜ್ ಅವರಿಗೆ ಸೇರಿದ ‘ಅಯ್ಯಪ್ಪ’ ದೋಣಿ ಮೀನುಗಾರಿಕೆ ಕೊನೆಗೊಳಿಸಿತ್ತು. ಧಕ್ಕೆಯಲ್ಲಿ ಸ್ಥಳಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಬೆಂಗ್ರೆಯಲ್ಲಿ ಲಂಗರು ಹಾಕಿತ್ತು. <br /> <br /> ದೋಣಿಯನ್ನು ಗುರುವಾರ ದಡಕ್ಕೆತ್ತಲು ಮಾಲೀಕರು ನಿರ್ಧರಿಸಿದ್ದರಾದರೂ, ಮಂಗಳವಾರ ರಾತ್ರಿಯೇ ಗಾಳಿ ಮಳೆಗೆ ದೋಣಿಯ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸಮುದ್ರಪಾಲಾಯಿತು ಎಂದು ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಮಂಗಳೂರಿನಲ್ಲಿ ಮೂರು ಸಾವಿರಕ್ಕೂ ಅಧಿಕ ದೋಣಿಗಳಿದ್ದು, ಅವುಗಳನ್ನು ಮಳೆಗಾಲದಲ್ಲಿ ಲಂಗರು ಹಾಕಲು ಸ್ಥಳಾವಕಾಶ ಸಾಲದು. ಹಾಗಾಗಿ ಅನೇಕ ದೋಣಿಗಳನ್ನು ಧಕ್ಕೆಯಿಂದ ಹೊರಗಡೆಯೇ ನಿಲ್ಲಿಸಬೇಕಾಗುತ್ತದೆ. ಸೂಕ್ತ ರಕ್ಷಣೆ ಇಲ್ಲದ ಕಾರಣ, ಅವು ಗಾಳಿ ಮಳೆಗೆ ಹಾನಿಗೊಳಗಾಗುತ್ತವೆ. ಪ್ರತಿವರ್ಷ ಕನಿಷ್ಠ 2-3 ದೋಣಿಗಳು ಸಮುದ್ರಪಾಲಾಗುತ್ತಿವೆ. ಈ ಸಮಸ್ಯೆ ಬಗ್ಗೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಸರ್ಕಾರದ ಗಮನಸೆಳೆದರೂ ಪ್ರಯೋಜನವಾಗಿಲ್ಲ ಎಂದು ಮೀನುಗಾರರೊಬ್ಬರು ಅಳಲು ತೋಡಿಕೊಂಡರು. <br /> <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>