<p>ತಾಂಬಾ (ತಾ.ಇಂಡಿ): ಇದೊಂದು ಭಾವೈಕ್ಯದ ಅಪರೂಪದ ಹಬ್ಬ. ಒಂದು ತಿಂಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ದೇವಸ್ಥಾನದ ಆವರಣದಲ್ಲಿ ಒಟ್ಟಾಗಿ ಸೇರಿ ಸಹಭೋಜನ ಸವಿದರು. ಜಾತಿ-ಮತ-ಪಂತ ಎಂಬ ತಾರತಮ್ಯ ಇಲ್ಲಿ ಇರಲಿಲ್ಲ. ಇದ್ದದ್ದು ಪ್ರಾಂಜಲ ಮನಸ್ಸು ಮತ್ತು ಪವಿತ್ರ ಭಕ್ತಿ ಮಾತ್ರ.<br /> <br /> ಈ ಅಪರೂಪದ ಕಾರ್ಯಕ್ರಮ ನಡೆದಿದ್ದು ಇಲ್ಲಿಯ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ. ದೀಪಾವಳಿಯ ನರಕ ಚತುರ್ದಶಿ ಸಮಯದಲ್ಲಿ. ಮುಸ್ಲಿಂ ಬಾಂಧವರು ಪವಿತ್ರ ರಮ್ಜಾನ್ ಮಾಸದಲ್ಲಿ ಉಪವಾಸ ವ್ರತ ಆಚರಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.<br /> <br /> ತಾಂಬಾ ಗ್ರಾಮದ ಗವಿಸಿದ್ದೇಶ್ವರ ದೇವರ ಭಕ್ತರು ದೀಪಾವಳಿಗೂ ಮುನ್ನ ಒಂದು ತಿಂಗಳಿನಿಂದ ಉಪವಾಸ ವ್ರತ ಕೈಗೊಂಡಿದ್ದರು. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಪ್ರತಿ ವರ್ಷವೂ ಹೀಗೆ ಹರಕೆ ಹೊತ್ತು ಉಪವಾಸ ವ್ರತ ಆಚರಿಸುವುದು ಸಂಪ್ರದಾಯ.<br /> <br /> ಹಿಂದೂ ಮತ್ತು ಮುಸ್ಲಿಂ ಬಾಂಧವರು ಮಹಾನವಮಿ ಅಮಾವಾಸ್ಯೆಯಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತವನ್ನು ನರಕಚತುರ್ದಶಿಯ ದಿನವಾದ ಸೋಮವಾರ ಕೊನೆ ಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಈ ಭಕ್ತರು ಒಂದೇ ಹೊತ್ತು ಊಟ ಮಾಡುತ್ತಿದ್ದರು.<br /> <br /> ತಾಂಬಾ, ತೆನಿಹಳ್ಳಿ, ಗಂಗನಳ್ಳಿ, ಮೆಟಗುಡ್ಡ, ಬತಗುಣಕಿ, ಹೊನ್ನಳ್ಳಿ, ಇಂಗಳೇಶ್ವರ, ದಿಂಡವಾರ, ಕಡ್ಲೇವಾಡ, ದೇವರ ಹಿಪ್ಪರಗಿ, ಮನಗೂಳಿ, ಚಿಕ್ಕರೂಗಿ, ಅಫಜಲಪೂರ ಸೇರಿದಂತೆ ಹಲವಾರು ಗ್ರಾಮಗಳ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. <br /> <br /> ತಮ್ಮ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬಾಳೆಹಣ್ಣು, ಕಡಬು, ಜಿಲೇಬಿ, ಫೇಡಾ, ಖರ್ಜೂರ, ತುಪ್ಪ, ಅಂಬಲಿ ಮತ್ತಿತರ ಸಿಹಿ ತಿನಿಸುಗಳನ್ನು ಒಂದೆಡೆ ಸೇರಿಸಿ ದೇವರಿಗೆ ಅರ್ಪಿಸಿದರು. ಆ ನಂತರ ಎಲ್ಲರೂ ಸಹಭೋಜನ ಸವಿದು ತಿಂಗಳ ಪರ್ಯಂತ ನಡೆಸಿಕೊಂಡು ಬಂದಿದ್ದ ಉಪವಾಸ ವ್ರತ ಕೊನೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಂಬಾ (ತಾ.ಇಂಡಿ): ಇದೊಂದು ಭಾವೈಕ್ಯದ ಅಪರೂಪದ ಹಬ್ಬ. ಒಂದು ತಿಂಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ದೇವಸ್ಥಾನದ ಆವರಣದಲ್ಲಿ ಒಟ್ಟಾಗಿ ಸೇರಿ ಸಹಭೋಜನ ಸವಿದರು. ಜಾತಿ-ಮತ-ಪಂತ ಎಂಬ ತಾರತಮ್ಯ ಇಲ್ಲಿ ಇರಲಿಲ್ಲ. ಇದ್ದದ್ದು ಪ್ರಾಂಜಲ ಮನಸ್ಸು ಮತ್ತು ಪವಿತ್ರ ಭಕ್ತಿ ಮಾತ್ರ.<br /> <br /> ಈ ಅಪರೂಪದ ಕಾರ್ಯಕ್ರಮ ನಡೆದಿದ್ದು ಇಲ್ಲಿಯ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ. ದೀಪಾವಳಿಯ ನರಕ ಚತುರ್ದಶಿ ಸಮಯದಲ್ಲಿ. ಮುಸ್ಲಿಂ ಬಾಂಧವರು ಪವಿತ್ರ ರಮ್ಜಾನ್ ಮಾಸದಲ್ಲಿ ಉಪವಾಸ ವ್ರತ ಆಚರಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.<br /> <br /> ತಾಂಬಾ ಗ್ರಾಮದ ಗವಿಸಿದ್ದೇಶ್ವರ ದೇವರ ಭಕ್ತರು ದೀಪಾವಳಿಗೂ ಮುನ್ನ ಒಂದು ತಿಂಗಳಿನಿಂದ ಉಪವಾಸ ವ್ರತ ಕೈಗೊಂಡಿದ್ದರು. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಪ್ರತಿ ವರ್ಷವೂ ಹೀಗೆ ಹರಕೆ ಹೊತ್ತು ಉಪವಾಸ ವ್ರತ ಆಚರಿಸುವುದು ಸಂಪ್ರದಾಯ.<br /> <br /> ಹಿಂದೂ ಮತ್ತು ಮುಸ್ಲಿಂ ಬಾಂಧವರು ಮಹಾನವಮಿ ಅಮಾವಾಸ್ಯೆಯಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತವನ್ನು ನರಕಚತುರ್ದಶಿಯ ದಿನವಾದ ಸೋಮವಾರ ಕೊನೆ ಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಈ ಭಕ್ತರು ಒಂದೇ ಹೊತ್ತು ಊಟ ಮಾಡುತ್ತಿದ್ದರು.<br /> <br /> ತಾಂಬಾ, ತೆನಿಹಳ್ಳಿ, ಗಂಗನಳ್ಳಿ, ಮೆಟಗುಡ್ಡ, ಬತಗುಣಕಿ, ಹೊನ್ನಳ್ಳಿ, ಇಂಗಳೇಶ್ವರ, ದಿಂಡವಾರ, ಕಡ್ಲೇವಾಡ, ದೇವರ ಹಿಪ್ಪರಗಿ, ಮನಗೂಳಿ, ಚಿಕ್ಕರೂಗಿ, ಅಫಜಲಪೂರ ಸೇರಿದಂತೆ ಹಲವಾರು ಗ್ರಾಮಗಳ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. <br /> <br /> ತಮ್ಮ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬಾಳೆಹಣ್ಣು, ಕಡಬು, ಜಿಲೇಬಿ, ಫೇಡಾ, ಖರ್ಜೂರ, ತುಪ್ಪ, ಅಂಬಲಿ ಮತ್ತಿತರ ಸಿಹಿ ತಿನಿಸುಗಳನ್ನು ಒಂದೆಡೆ ಸೇರಿಸಿ ದೇವರಿಗೆ ಅರ್ಪಿಸಿದರು. ಆ ನಂತರ ಎಲ್ಲರೂ ಸಹಭೋಜನ ಸವಿದು ತಿಂಗಳ ಪರ್ಯಂತ ನಡೆಸಿಕೊಂಡು ಬಂದಿದ್ದ ಉಪವಾಸ ವ್ರತ ಕೊನೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>