<p><strong>ಶಿಡ್ಲಘಟ್ಟ:</strong> ಮನೆಯೊಂದರಲ್ಲಿ ಪತಿ ಮತ್ತು ಪತ್ನಿ ಮಲಗಿರುತ್ತಾರೆ. ನಸುಕಿನಲ್ಲಿ ಒಮ್ಮಿಂದೊಮ್ಮೆಲೇ ಭೂಕಂಪವಾಗುತ್ತದೆ. ಇದರಿಂದ ಆತಂಕಗೊಳ್ಳುವ ಪತ್ನಿ ತಕ್ಷಣವೇ ತನ್ನ ಪತಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾಳೆ. `ರೀ..ಭೂಕಂಪ ಆಗ್ತಾ ಇದೆ. ಬೇಗ ಎದ್ದೇಳಿ...ನನಗೆ ಭಯವಾಗುತ್ತಿದೆ~ ಎಂದಳು. ಕಣ್ಣುಮುಚ್ಚಿಕೊಂಡೇ ನಿರಾತಂಕವಾಗಿ ಪತಿ ಉತ್ತರಿಸಿದ: ಇದು ನಮ್ಮ ಸ್ವಂತ ಮನೆಯಲ್ಲ. ಬಾಡಿಗೆ ಮನೆ. ಯಾಕೆ ಸುಮ್ಮನೆ ಭಯಪಡ್ತಿಯಾ?<br /> ***<br /> ಯಾರಾದರೂ ಅಸ್ವಸ್ಥಗೊಂಡಿದ್ದರೆ, ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ನೀವು 108 ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತೀರಿ. ನೀವು 108 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ ನೇರವಾಗಿಯೇ ಮನೆಗೆ ಬರುತ್ತದೆ. ಒಂದು ವೇಳೆ ನೀವು 801 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ `ರಿವರ್ಸ್~ ಆಗಿ ಬರುತ್ತದೆ !<br /> ***<br /> ಹೀಗೆ ಹತ್ತು ಹಲವು ಹಾಸ್ಯ ಚಟಾಕಿಗಳನ್ನು ಹೇಳಿ ನಗೆಗಡಲಲ್ಲಿ ತೇಲಿಸಿದವರು ಹಾಸ್ಯ ಕಲಾವಿದರಾದ ಗಂಗಾವತಿಯ ಪ್ರಾಣೇಶ್ `ಬೀಚಿ~, ನರಸಿಂಹ ಜೋಷಿ ಮತ್ತು ಬಸವರಾಜ್ ಮಹಾಮನಿ. ಸಂಸ್ಕಾರ ಭಾರತಿ ಸಂಘಟನೆಯ ಬುಧವಾರ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹಾಸ್ಯೋತ್ಸವದಲ್ಲಿ ಜನರನ್ನು ನಕ್ಕು ನಲಿಸಿದರು. <br /> <br /> ಸಂಸ್ಕಾರ ಭಾರತಿ ಸಂಸ್ಥೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಮಾತನಾಡಿ, `ಸದಾ ಕಾಲ ನಗುವುದರಿಂದ ಉತ್ತಮ ಆರೋಗ್ಯ ಕಾಯ್ದು ಕೊಳ್ಳಬಹುದು. <br /> <br /> ದೀರ್ಘಯುಷಿಗಳಾಗಿ ಬಾಳಬಹುದು. ಈ ಕಾರಣದಿಂದಲೇ ಹಾಸ್ಯೋತ್ಸವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತಿವೆ~ ಎಂದರು.</p>.<p>ಸಂಸ್ಕಾರ ಭಾರತಿ ಸಂಘಟನೆಯ ಸಂಚಾಲಕರಾದ ಬಿ.ಸಿ.ನಂದೀಶ್, ಶ್ರೀಕಾಂತ್, ಕರುಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ಮನೆಯೊಂದರಲ್ಲಿ ಪತಿ ಮತ್ತು ಪತ್ನಿ ಮಲಗಿರುತ್ತಾರೆ. ನಸುಕಿನಲ್ಲಿ ಒಮ್ಮಿಂದೊಮ್ಮೆಲೇ ಭೂಕಂಪವಾಗುತ್ತದೆ. ಇದರಿಂದ ಆತಂಕಗೊಳ್ಳುವ ಪತ್ನಿ ತಕ್ಷಣವೇ ತನ್ನ ಪತಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾಳೆ. `ರೀ..ಭೂಕಂಪ ಆಗ್ತಾ ಇದೆ. ಬೇಗ ಎದ್ದೇಳಿ...ನನಗೆ ಭಯವಾಗುತ್ತಿದೆ~ ಎಂದಳು. ಕಣ್ಣುಮುಚ್ಚಿಕೊಂಡೇ ನಿರಾತಂಕವಾಗಿ ಪತಿ ಉತ್ತರಿಸಿದ: ಇದು ನಮ್ಮ ಸ್ವಂತ ಮನೆಯಲ್ಲ. ಬಾಡಿಗೆ ಮನೆ. ಯಾಕೆ ಸುಮ್ಮನೆ ಭಯಪಡ್ತಿಯಾ?<br /> ***<br /> ಯಾರಾದರೂ ಅಸ್ವಸ್ಥಗೊಂಡಿದ್ದರೆ, ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ನೀವು 108 ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತೀರಿ. ನೀವು 108 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ ನೇರವಾಗಿಯೇ ಮನೆಗೆ ಬರುತ್ತದೆ. ಒಂದು ವೇಳೆ ನೀವು 801 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ `ರಿವರ್ಸ್~ ಆಗಿ ಬರುತ್ತದೆ !<br /> ***<br /> ಹೀಗೆ ಹತ್ತು ಹಲವು ಹಾಸ್ಯ ಚಟಾಕಿಗಳನ್ನು ಹೇಳಿ ನಗೆಗಡಲಲ್ಲಿ ತೇಲಿಸಿದವರು ಹಾಸ್ಯ ಕಲಾವಿದರಾದ ಗಂಗಾವತಿಯ ಪ್ರಾಣೇಶ್ `ಬೀಚಿ~, ನರಸಿಂಹ ಜೋಷಿ ಮತ್ತು ಬಸವರಾಜ್ ಮಹಾಮನಿ. ಸಂಸ್ಕಾರ ಭಾರತಿ ಸಂಘಟನೆಯ ಬುಧವಾರ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹಾಸ್ಯೋತ್ಸವದಲ್ಲಿ ಜನರನ್ನು ನಕ್ಕು ನಲಿಸಿದರು. <br /> <br /> ಸಂಸ್ಕಾರ ಭಾರತಿ ಸಂಸ್ಥೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಮಾತನಾಡಿ, `ಸದಾ ಕಾಲ ನಗುವುದರಿಂದ ಉತ್ತಮ ಆರೋಗ್ಯ ಕಾಯ್ದು ಕೊಳ್ಳಬಹುದು. <br /> <br /> ದೀರ್ಘಯುಷಿಗಳಾಗಿ ಬಾಳಬಹುದು. ಈ ಕಾರಣದಿಂದಲೇ ಹಾಸ್ಯೋತ್ಸವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತಿವೆ~ ಎಂದರು.</p>.<p>ಸಂಸ್ಕಾರ ಭಾರತಿ ಸಂಘಟನೆಯ ಸಂಚಾಲಕರಾದ ಬಿ.ಸಿ.ನಂದೀಶ್, ಶ್ರೀಕಾಂತ್, ಕರುಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>